ಆ್ಯಪ್ನಗರ

ಗೋಕರ್ಣ ದೇವಸ್ಥಾನದಲ್ಲಿ ನಟ ಪುನೀತ್ ರಾಜ್‌ಕುಮಾರ್ ಪೂಜೆ; ಅಪ್ಪು ನೋಡಲು ಮುಗಿಬಿದ್ದ ಅಭಿಮಾನಿಗಳು!

'ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್ ಅವರು ಇತ್ತೀಚೆಗೆ ಕುಮಟಾ-ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆ ವೇಳೆ ಪುನೀತ್ ನೋಡಲು ಜನಸಮೂಹ ಮುಗಿಬಿದ್ದಿತ್ತು. ಆ ಬಗ್ಗೆ ಮಾಹಿತಿ ಇಲ್ಲಿದೆ

Vijaya Karnataka Web 7 Jan 2021, 3:07 pm
ಕುಮಟಾ: 'ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಇನ್ನು ಸಿನಿಮಾ ಕೆಲಸದ ಜೊತೆಗೆ ಅವರು ಅನೇಕ ಕಡೆ ಭೇಟಿ ನೀಡುತ್ತಾರೆ. ಬೇರೆಯವರ ಸಿನಿಮಾಕ್ಕೆ ಸಂಬಂಧಪಟ್ಟ ಸಮಾರಂಭಗಳಲ್ಲಿ ಕೂಡ ಭಾಗಿಯಾಗುತ್ತಾರೆ. ಅಷ್ಟೇ ಅಲ್ಲದೆ ಆತ್ಮೀಯರ ಮದುವೆಗೂ ಕೂಡ ಹೋಗುತ್ತಾರೆ. ಅಂತೆಯೇ ನಿನ್ನೆ (ಜ 6) ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣಕ್ಕೆ ಪುನೀತ್ ಹೋಗಿದ್ದರು.
Vijaya Karnataka Web actor puneeth rajkumar visit kumta gokarna mahabaleshwar temple
ಗೋಕರ್ಣ ದೇವಸ್ಥಾನದಲ್ಲಿ ನಟ ಪುನೀತ್ ರಾಜ್‌ಕುಮಾರ್ ಪೂಜೆ; ಅಪ್ಪು ನೋಡಲು ಮುಗಿಬಿದ್ದ ಅಭಿಮಾನಿಗಳು!


ಅಪ್ಪು ನೋಡಲು ಜನಸಾಗರ
ಪುನೀತ್ ನೋಡಲು, ಸೆಲ್ಫಿ ತೆಗೆದುಕೊಳ್ಳಲು ಸಾಕಷ್ಟು ಜನರು ಮುಗಿಬಿದ್ದರು. ಆ ಜನಸಮೂಹವನ್ನು ನಿಭಾಯಿಸಲು ಪೊಲೀಸರು ಹರಸಾಹಸಪಟ್ಟರು. ಇದರ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ 'ಯುವರತ್ನ' ಸಿನಿಮಾ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಅವರು 'ಕಿಂಗ್ ಆಫ್ ಎಂಟರ್‌ಟೇನ್‌ಮೆಂಟ್' ಎಂದು ಹೇಳಿಕೊಂಡಿದ್ದಾರೆ.

ಗೋಕರ್ಣ ದೇವಸ್ಥಾನದಲ್ಲಿ ಪೂಜೆ
ಆತ್ಮೀಯರ ಮದುವೆಗೆ ಹಾಜರಾಗಿದ್ದ ಪುನೀತ್ ರಾಜ್‌ಕುಮಾರ್ ಅವರು ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೂ ಕೂಡ ಭೇಟಿ ನೀಡಿದ್ದರು. ಶ್ರೀ ಮಹಾಬಲೇಶ್ವರ ದೇವಾಲಯ ಶ್ರೀಕ್ಷೇತ್ರ ಗೋಕರ್ಣದಲ್ಲಿ ಆತ್ಮಲಿಂಗಕ್ಕೆ ಪುನೀತ್ ಪೂಜೆ ಸಲ್ಲಿಸಿದ್ದಾರೆ. ಅರ್ಚಕರಾದ ವೇ. ಪ್ರಶಾಂತ್ ಭಟ್ ಹಿರೇಗಂಗೆ ಪೂಜಾ ಕೈಂಕರ್ಯ ನೆರವೇರಿಸಿದರು. ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.ಶ್ರೀ ದೇವಾಲಯದ ಆಡಳಿತಾಧಿಕಾರಿ ಜಿ ಕೆ ಹೆಗಡೆ, ಪುನೀತ್‌ರಿಗೆ ಹಾರ ಹಾಕಿ ಸ್ವಾಗತಿಸಿದ್ದಾರೆ.

Also Read-ಸರ್ಕಾರಿ ಶಾಲೆಗಳ ಸಮಸ್ಯೆಗಳನ್ನು ಜನರ ಮುಂದಿಡುವ ಗೋಪಿ! ಈ ಪ್ರಯತ್ನಕ್ಕೆ ಪುನೀತ್ ಬೆಂಬಲ!

ಯುವರತ್ನ ರಿಲೀಸ್ ಯಾವಾಗ?
ಪುನೀತ್ ರಾಜ್‌ಕುಮಾರ್ ಅಭಿನಯದ 'ಯುವರತ್ನ' ಸಿನಿಮಾ ರಿಲೀಸ್ ಆಗಬೇಕಿದೆ. ಏಪ್ರಿಲ್ 1, 2021ರಂದು ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ. ಸಂತೋಷ್ ಆನಂದರಾಮ್ ಅವರು ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿದೆ. ಸಾಯೇಶಾ ಸೈಗಲ್, ಕುರಿ ಪ್ರತಾಪ್, ಧನಂಜಯ್, ಸೋನು ಗೌಡ, ಪ್ರಕಾಶ್ ರಾಜ್ ಅವರು ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

Also Read-ದರ್ಶನ್, ಸುದೀಪ್, ಧ್ರುವ ಸರ್ಜಾ, ಪುನೀತ್ ರಾಜ್‌ಕುಮಾರ್ ಸಿನಿಮಾ ರಿಲೀಸ್ ಡೇಟ್ ಬಹಿರಂಗ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌