ಆ್ಯಪ್ನಗರ

ಸದ್ದಿಲ್ಲದೇ ಲಂಡನ್‌ ಸೇರಿಕೊಂಡ ನಟ ನೀನಾಸಂ ಸತೀಶ್‌!

ಸಾಕಷ್ಟು ಸಿನಿಮಾಗಳು ಕೈಯಲ್ಲಿರುವಾಗಲೇ ನಟ ಸತೀಶ್‌ ನೀನಾಸಂ ಲಂಡನ್ ಸೇರಿಕೊಂಡಿದ್ದಾರೆ. ಅಷ್ಟಕ್ಕೂ ಹೀಗೆ ಏಕಾಏಕಿ ಅವರು ಲಂಡನ್‌ ಫ್ಲೈಟ್ ಹತ್ತಿದ್ದೇಕೆ? ಇದರ ಹಿಂದಿನ ಉದ್ದೇಶವೇನು? ಇಲ್ಲಿದೆ ಮಾಹಿತಿ.

Vijaya Karnataka Web 18 Nov 2019, 6:42 pm
ನಟ ಸತೀಶ್ 'ನೀನಾಸಂ' ಸದ್ಯ 'ಬ್ರಹ್ಮಚಾರಿ'ಯಾಗಿದ್ಧಾರೆ. ಅರ್ಥಾತ್, ಅವರ ನಟನೆಯ 'ಬ್ರಹ್ಮಚಾರಿ' ಸಿನಿಮಾ ತೆರೆಗೆ ಸಿದ್ಧವಾಗಿದೆ. ಚಿತ್ರದ ಟೀಸರ್ ಸಖತ್ ಸೌಂಡು ಮಾಡಿದೆ. ಹಾಡುಗಳು ಒಂದೊಂದಾಗಿ ರಿಲೀಸ್‌ ಆಗುತ್ತಿವೆ. ಸಿನಿಮಾ ಕೂಡ ಆದಷ್ಟು ಬೇಗ ತೆರೆಗೆ ಬರುತ್ತಿದೆ. ಆದರೆ, ಇಷ್ಟೆಲ್ಲ ಬ್ಯುಸಿ ಇರುವಾಗ ಅವರು ಏಕಾಏಕಿ ಲಂಡನ್ ಫ್ಲೈಟ್ ಹತ್ತಿದ್ದಾರೆ!
Vijaya Karnataka Web ಸತೀಶ್_ ನೀನಾಸಂ


ದೇಶ ಸುತ್ತಿಕೊಂಡು ಬಂದ ಸತೀಶ್ ನೀನಾಸಂ!

ಸತೀಶ್ ಲಂಡನ್‌ಗೆ ಹೋಗಿರುವುದು ಪ್ರವಾಸಕ್ಕಲ್ಲ! ಬದಲಿಗೆ, ಶೂಟಿಂಗ್ ಸಲುವಾಗಿ. ಹೌದು, ಶರ್ಮಿಳಾ ಮಾಂಡ್ರೆ ನಟಿಸಿ, ನಿರ್ಮಿಸುತ್ತಿರುವ ಹೊಸ ಸಿನಿಮಾದಲ್ಲಿ ಸತೀಶ್ ಹೀರೋ. ಅದರ ಶೂಟಿಂಗ್ ಲಂಡನ್‌ನಲ್ಲಿ ಶುರುವಾಗಿದೆ. ಈ ಹಿಂದೆ 'ಕಹಿ' ಹಾಗೂ 'ಅಳಿದು ಉಳಿದವರು' ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ಅರವಿಂದ್ ಶಾಸ್ತ್ರೀ ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು, ಚಿತ್ರಕ್ಕೆ 'ವೈತರಣಿ' ಅನ್ನೋ ಟೈಟಲ್ ಫಿಕ್ಸ್ ಮಾಡಲಾಗಿದೆ. ಅತೀ ಶೀಘ್ರದಲ್ಲೇ ಆ ಬಗ್ಗೆ ಅಧಿಕೃತ ಮಾಹಿತಿ ನೀಡಲಿದೆಯಂತೆ ಚಿತ್ರತಂಡ. ಸತೀಶ್‌-ಶರ್ಮಿಳಾ ಇದೇ ಮೊದಲ ಬಾರಿಗೆ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌