ಆ್ಯಪ್ನಗರ

'ಅವರು ನಮ್ಮ ದೇಶದಲ್ಲೇ ಬ್ರಿಲಿಯಂಟ್ ನಟ'; ಶಿವಣ್ಣ ಹೀಗೆ ಹೊಗಳಿದ್ದು ಯಾರಿಗೆ?

ನಟ ಶಿವರಾಜ್‌ಕುಮಾರ್ ನಟನೆಯ 'ಆಯುಷ್ಮಾನ್‌ಭವ' ಚಿತ್ರ ತೆರೆಗೆ ಸಿದ್ಧವಾಗಿದೆ. ಇದು ದ್ವಾರಕೀಶ್ ನಿರ್ಮಾಣದ ಚಿತ್ರವಾಗಿದ್ದು, ಇದರಲ್ಲಿ ನಟಿಸಿದ ಒಬ್ಬ ಕಲಾವಿದರ ಬಗ್ಗೆ ಶಿವಣ್ಣ ಮನತುಂಬಿ ಹೊಗಳಿದ್ಧಾರೆ.

Vijaya Karnataka Web 22 Oct 2019, 1:22 pm
ನಟ ಶಿವರಾಜ್‌ಕುಮಾರ್ ಅವರಿಗೆ ಯಾವುದಾದರೂ ಸಿನಿಮಾ, ಕಲಾವಿದರು ಇಷ್ಟವಾಗಿಬಿಟ್ಟರೆ, ಮುಕ್ತಮನಸ್ಸಿನಿಂದ ಹೋಗಳುತ್ತಾರೆ. ಅಂಥ ಕಲಾವಿದರೊಂದಿಗೆ ಕೆಲಸ ಮಾಡಿದ ಅನುಭವಗಳನ್ನು ಪ್ರೀತಿಯಿಂದ ಹಂಚಿಕೊಳ್ಳುತ್ತಾರೆ. ಈಗ ಕನ್ನಡದ ಖ್ಯಾತ ನಟರೊಬ್ಬರ ಬಗ್ಗೆ ಅದೇ ಥರ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅಂದಹಾಗೆ, ಆ ಕಲಾವಿದರು ಯಾರು? ಇಲ್ಲಿದೆ ಮಾಹಿತಿ.
Vijaya Karnataka Web Shvianna

ಕಾರು ನಿಲ್ಲಿಸಿ ವೃದ್ಧನಿಗೆ ಸಹಾಯ ಮಾಡಿದ ಸೆಂಚುರಿ ಸ್ಟಾರ್ ಶಿವಣ್ಣ
ಶಿವಣ್ಣ ಸದ್ಯ 'ಆಯುಷ್ಮಾನ್‌ಭವ' ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ದ್ವಾರಕೀಶ್‌ ಬ್ಯಾನರ್‌ನಲ್ಲಿ ಸಿದ್ಧಗೊಂಡಿರುವ 52ನೇ ಚಿತ್ರ ಇದಾಗಿದ್ದು, ಇತ್ತೀಚೆಗಷ್ಟೇ ಅದರ ಆಡಿಯೋ ಬಿಡುಗಡೆ ಕೂಡ ಅದ್ದೂರಿಯಾಗಿ ನೆರವೇರಿದೆ. ಈ ಚಿತ್ರದಲ್ಲಿ ಶಿವರಾಜ್‌ಕುಮಾರ್ ಜತೆಗೆ ಹಿರಿಯ ನಟ ಅನಂತ ನಾಗ್ ಅವರು ಕೂಡ ಬಣ್ಣ ಹಚ್ಚಿದ್ದಾರೆ.
'ಆಯುಷ್ಮಾನ್‌ಭವ' ಸೆಟ್‌ನಲ್ಲಿ ತುಂಬ ಸಲ ಶಿವಣ್ಣಂಗೆ ಬೈಯ್ದುಕೊಂಡಿದ್ದೆ: ರಚಿತಾ ರಾಮ್‌
ಅನಂತ ನಾಗ್ ಅವರೊಂದಿಗೆ ಕೆಲಸ ಮಾಡಿದ ಅನುಭವಗಳನ್ನು ಹಂಚಿಕೊಳ್ಳುವ ಶಿವಣ್ಣ, 'ಅನಂತ ನಾಗ್ ಅವರ ಜತೆ ಈ ಹಿಂದೆ 'ವಿಶ್ವ', 'ಪ್ರೀತ್ಸೆ', 'ಚಿಗುರಿದ ಕನಸು' ಸಿನಿಮಾಗಳನ್ನು ಮಾಡಿದ್ದೆ. ಅವರ ಜತೆ ಪ್ರತಿ ಸಿನಿಮಾಗಳಲ್ಲಿ ನಟಿಸುವಾಗಲೂ ಒಂದೊಂದು ಹೊಸ ಅನುಭವ ಆಗುತ್ತಿತ್ತು. 'ವಿಶ್ವ' ಚಿತ್ರದ ಚಿತ್ರೀಕರಣ ಬಹುತೇಕ ರಾತ್ರಿ ಹೊತ್ತು ನಡೆಯುತ್ತಿತ್ತು. ಆಗ ಶಂಕರ್ ನಾಗ್ ಅವರ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು. ಅಪ್ಪಾಜಿ ಬಗ್ಗೆಯೂ ಹೇಳುತ್ತಿದ್ದರು. ಅದನ್ನು ಕೇಳುವಾಗಲೇ ನಮಗೆಲ್ಲ ಖುಷಿ ಆಗುತ್ತಿತ್ತು. ನಾನು ಅನಂತ ನಾಗ್ ಅವರ ಅಭಿಮಾನಿ. ಅವರು ನಟಿಸಿದ ಹಿಂದಿ ಸಿನಿಮಾಗಳಿಂದ ಹಿಡಿದು ಕನ್ನಡ ಸಿನಿಮಾಗಳವರೆಗೆ ಎಲ್ಲವನ್ನು ನೋಡಿದ್ದೇನೆ. ನಮ್ಮ ದೇಶದಲ್ಲೇ ಅವರೊಬ್ಬ ಬ್ರಿಲಿಯಂಟ್ ನಟ ಎಂದರೆ ತಪ್ಪಲ್ಲ. ಅನಂತ ನಾಗ್ ಅವರೊಂದಿಗೆ ತೆರೆಹಂಚಿಕೊಳ್ಳುವುದೇ ಪುಣ್ಯ' ಎನ್ನುತ್ತಾರೆ.
ಸ್ಯಾಂಡಲ್‌ವುಡ್‌ನಲ್ಲಿ ಹೊಸ ಮೈಲುಗಲ್ಲು ಮುಟ್ಟಿದ ಶಿವಣ್ಣ
'ಆಯುಷ್ಮಾನ್‌ಭವ' ಚಿತ್ರದಲ್ಲಿ ಶಿವರಾಜ್‌ಕುಮಾರ್ ಮತ್ತು ಅನಂತ ನಾಗ್‌ ಅವರ ನಡುವೆ ಸಾಕಷ್ಟು ಒಳ್ಳೊಳ್ಳೆಯ ದೃಶ್ಯಗಳು ಇವೆಯಂತೆ. 'ಅನಂತ ನಾಗ್ ಅವರ ಜೊತೆಯಲ್ಲಿ ನಿಂತುಕೊಂಡರೆ ನಮಗೂ ನಟಿಸಬೇಕು ಎಂಬ ಆಸೆ ಹುಟ್ಟಿಕೊಳ್ಳುತ್ತದೆ. 'ಆಯುಷ್ಮಾನ್‌ಭವ'ದಿಂದಾಗಿ ನಮ್ಮ ನಡುವೆ ಒಳ್ಳೆಯ ಅನುಭವಗಳಿವೆ. 'ಚಿಗುರಿದ ಕನಸು' ಮಾಡಿದಾಗ ಇಬ್ಬರ ಆತ್ಮೀಯತೆ ಜಾಸ್ತಿಯಾಗಿತ್ತು. ಈ ಸಿನಿಮಾದಿಂದ ಅದು ಇನ್ನಷ್ಟು ಹೆಚ್ಚಾಗಿದೆ' ಎಂದು ಸಂತೋಷ ವ್ಯಕ್ತಪಡಿಸುತ್ತಾರೆ ಶಿವಣ್ಣ.
ದರ್ಶನ್, ಯಶ್, ಸುದೀಪ್ ಇವರಷ್ಟೇ ಹೀರೋಗಳಲ್ಲ: ಶಿವರಾಜ್‌ಕುಮಾರ್
'ಆಯುಷ್ಮಾನ್‌ಭವ' ದ್ವಾರಕೀಶ್‌ ನಿರ್ಮಾಣದ ಚಿತ್ರವಾಗಿದ್ದು, ಇತ್ತೀಚೆಗಷ್ಟೇ ಚಿತ್ರದ ಟೀಸರ್ ರಿಲೀಸ್ ಆಗಿ ಸದ್ದು ಮಾಡಿತ್ತು. 'ಆಯುಷ್ಮಾನ್‌ಭವ' ಸಿನಿಮಾಕ್ಕೆ ಪಿ. ವಾಸು ನಿರ್ದೇಶನ ಮಾಡಿದ್ದು, ರಚಿತಾ ರಾಮ್‌ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಗುರುಕಿರಣ್ ಸಂಗೀತ ನೀಡಿದ್ದು, ಇದು ಅವರ ನೂರನೇ ಸಿನಿಮಾವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌