ಆ್ಯಪ್ನಗರ

ಕೊರೊನಾ ವಾರಿಯರ್ಸ್‌ಗೆ ಅಭಿನಂದನೆ ತಿಳಿಸಿದ ನಟ 'ಕಿಚ್ಚ' ಸುದೀಪ್‌

ಕೊರೊನಾ ವೈರಸ್‌ ತಡೆಗಟ್ಟಲು ವೈದ್ಯಕೀಯ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಹಗಲಿರುಳೆನ್ನದೆ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಅವರಿಗೆಲ್ಲ ಧನ್ಯವಾದಗಳನ್ನು ತಿಳಿಸಿದ್ದಾರೆ ನಟ 'ಕಿಚ್ಚ' ಸುದೀಪ್.

Vijaya Karnataka Web 15 Jul 2020, 10:21 pm
ಇಡೀ ದೇಶವೇ ಕೊರೊನಾ ವೈರಸ್‌ ವಿರುದ್ಧ ಹೋರಾಡುತ್ತಿದೆ. ವೇಗವಾಗಿ ಕೊರೊನಾ ಹರಡುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 4ನೇ ಸ್ಥಾನಕ್ಕೆ ಬಂದಿದೆ. ಎಷ್ಟೇ ಅಗತ್ಯ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡರೂ, ದಿನಕಳೆದಂತೆ ಕೊರೊನಾ ಮಾತ್ರ ವ್ಯಾಪಕವಾಗಿ ಹಬ್ಬುತ್ತಲೇ ಇದೆ. ಆದರೂ, ವೈದ್ಯರು, ಪೊಲೀಸರು, ಪೌರಕಾರ್ಮಿಕರು ಕೊರೊನಾ ವಾರಿಯರ್‌ಗಳಾಗಿ ಹಗಲಿರುಳು ಎನ್ನದೇ, ಪ್ರಾಣವನ್ನು ಪಣಕ್ಕಿಟ್ಟು ನಮ್ಮೆಲ್ಲರಿಗಾಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ನಟ 'ಕಿಚ್ಚ' ಸುದೀಪ್ ಅವರೆಲ್ಲರಿಗೂ ಧನ್ಯವಾದ ಹೇಳಿದ್ದಾರೆ.
Vijaya Karnataka Web actor sudeep appreciates corona warriors
ಕೊರೊನಾ ವಾರಿಯರ್ಸ್‌ಗೆ ಅಭಿನಂದನೆ ತಿಳಿಸಿದ ನಟ 'ಕಿಚ್ಚ' ಸುದೀಪ್‌


ಸುದೀಪ್‌ ವಿಡಿಯೋ ಕಾನ್ಪರೆನ್ಸ್ ಮೂಲಕ ದೇಶ-ವಿದೇಶದಲ್ಲಿರುವ ಅಭಿಮಾನಿಗಳ ಜೊತೆಗೆ ಸಂವಹನ ಮಾಡುವುದಕ್ಕೆ ಆರಂಭಿಸಿದ್ದಾರೆ. ಈಚೆಗೆ ಒಂದಷ್ಟು ಜನರೊಂದಿಗೆ ಸುದೀಪ್‌ ಮಾತನಾಡಿದ್ದರು. 'ವೈದ್ಯರು, ಪೊಲೀಸರು ಕೊರೊನಾ ವಾರಿಯರ್ಸ್‌ ತಮ್ಮ ಪ್ರಾಣವನ್ನು ಪಣಕ್ಕಿಟ್ಟು, ಕುಟುಂಬಗಳನ್ನು ರಿಸ್ಕ್‌ನಲ್ಲಿಟ್ಟು ನಮಗಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆಲ್ಲ ಧನ್ಯವಾದಗಳು' ಎಂದಿದ್ದಾರೆ.

ಅಂದಹಾಗೆ, ಈ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮೈಸೂರಿನ ಡಿಸಿಪಿ ಡಾ. ಎ.ಎನ್. ಪ್ರಕಾಶ್ ಗೌಡ ಕೂಡ ಭಾಗವಹಿಸಿದ್ದರು. ಆಗ ಸುದೀಪ್ ಕೊರೊನಾ ವಾರಿಯರ್ಸ್‌ಗೆ ಧನ್ಯವಾದ ತಿಳಿಸಿದರು. ಇದೇ ವೇಳೆ ಪ್ರಕಾಶ್ ಅವರು ಮಾತನಾಡುತ್ತ, 'ಸಂಚಾರ ನಿಯಮಗಳನ್ನು ಪಾಲನೆ ಮಾಡಿದರೆ, ಅಪಘಾತಗಳನ್ನು ತಪ್ಪಿಸಬಹುದು. ಇದರಿಂದ ಸವಾರರು ಮಾತ್ರವಲ್ಲ, ಅವರ ಕುಟುಂಬದವರು ಸುರಕ್ಷಿತವಾಗಿರಬಹುದು. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು' ಎಂದು ಸುದೀಪ್‌ ಅವರಲ್ಲಿ ಕೇಳಿಕೊಂಡರು.

ಚಿತ್ರದುರ್ಗ ಜಿಲ್ಲೆಯ ನಾಲ್ಕು ಸರ್ಕಾರಿ ಶಾಲೆಗಳನ್ನು ದತ್ತು ಪಡೆದ 'ಕಿಚ್ಚ' ಸುದೀಪ್‌!

ಅದಕ್ಕೆ ಪ್ರತಿಕ್ರಿಯಿಸಿದ ಸುದೀಪ್‌, 'ಖಂಡಿತಾ ಮಾಡುತ್ತೇನೆ, ಈವರೆಗೂ ಮಾಡುತ್ತಲೇ ಬಂದಿದ್ದೇವೆ. ನಿಮ್ಮ ಸೇವೆಗೆ ಧನ್ಯವಾದಗಳು. ಸಂಚಾರಿ ನಿಯಮಗಳ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನದಾಗಿ ಮಾಡುತ್ತೇನೆ. ನನ್ನ ಸ್ನೇಹಿತರಿಗೂ ಈ ಬಗ್ಗೆ ತಿಳಿಸಿ, ಎಲ್ಲರೂ ಸೇರಿ ಜಾಗೃತಿ ಮೂಡಿಸುತ್ತೇವೆ' ಎಂದು ಸುದೀಪ್ ಹೇಳಿದರು. ಇನ್ನು, ಮಂಗಳವಾರವಷ್ಟೇ (ಜುಲೈ 14) ಸುದೀಪ್‌ ಅವರು ತಮ್ಮ ಚಾರಿಟೇಬಲ್‌ ಟ್ರಸ್ಟ್‌ ವತಿಯಿಂದ ಚಿತ್ರದುರ್ಗದ ನಾಲ್ಕು ಶಾಲೆಗಳನ್ನು ದತ್ತು ಪಡೆದಿದ್ದರು. 'ಕಿಚ್ಚ' ಮಾಡಿದ ಕೆಲಸಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಸಾಯುವ ಮುನ್ನ ಸುದೀಪ್ ಅವರನ್ನು ನೋಡಬೇಕೆಂದ ಅಭಿಮಾನಿಗೆ ಕಿಚ್ಚನಿಂದ ಸಿಕ್ತು ದೊಡ್ಡ ಭರವಸೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌