ಚಿರು-ಮೇಘನಾ ಪುತ್ರನ ನಾಮಕರಣಕ್ಕೂ ಮುನ್ನ ಮುದ್ದಾದ ಹೆಸರಿನಿಂದ ಕರೆಯುತ್ತಿರುವ ಸುಂದರ್ ರಾಜ್! ಏನದು?
ಸರ್ಜಾ ಮತ್ತು ಸುಂದರ್ ರಾಜ್ ಕುಟುಂಬದಲ್ಲಿ ಮಗುವಿನ ಆಗಮನದಿಂದ ನಗು ಪಸರಿಸಿದೆ. ಈಗ ಎಲ್ಲರ ಗಮನವೂ ಆ ಕೂಸಿನ ಮೇಲಿದೆ. ಈಗಾಗಲೇ ಮೊಮ್ಮಗನನ್ನು ತಾತ ಸುಂದರ್ ರಾಜ್ ಅವರು ಒಂದು ಮುದ್ದಾದ ಹೆಸರಿನಿಂದ ಕರೆಯಲು ಆರಂಭಿಸಿದ್ದಾರೆ.
Vijaya Karnataka Web 30 Oct 2020, 9:43 am
ನಟಿ ಮೇಘನಾ ರಾಜ್ ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಅವರ ಫ್ಯಾಮಿಲಿಯಲ್ಲಿ ಹೊಸ ಬೆಳಕು ಮೂಡಿದಂತಾಗಿದೆ. ಸರ್ಜಾ ಕುಟುಂಬದ ಎಲ್ಲರ ಮೊಗದಲ್ಲಿ ನಗು ಮೂಡಿದೆ. ಮೇಘನಾ ತವರು ಮನೆಯಲ್ಲೂ ಖುಷಿಯ ವಾತಾವರಣ ನಿರ್ಮಾಣ ಆಗಿದೆ. ಮಗುವಿಗೆ ಏನು ಹೆಸರು ಇಡಬಹುದು ಎಂಬ ಕೌತುಕ ಅಭಿಮಾನಿಗಳಲ್ಲಿ ಮನೆಮಾಡಿದೆ.
ಮಗುವಿನ ಆಗಮನದ ಬಳಿಕ ನಟ ಧ್ರುವ ಸರ್ಜಾ, ಅರ್ಜುನ್ ಸರ್ಜಾ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಆದರೆ ನಾಮಕರಣದ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಡಲಿಲ್ಲ. ಆದರೆ ಮೇಘನಾ ತಂದೆ ಸುಂದರ್ ರಾಜ್ ಅವರು ತಮ್ಮ ಮೊಮ್ಮಗನಿಗೆ ಈಗಾಗಲೇ ಚಿಂಟು ಎಂದು ಕರೆಯಲು ಆರಂಭಿಸಿದ್ದಾರೆ! ಮಾಧ್ಯಮಗಳ ಜೊತೆ ಮಾತನಾಡುವಾಗ ಅವರು ಈ ವಿಚಾರ ಹಂಚಿಕೊಂಡಿದ್ದಾರೆ.
'ನಾನು ಅವನನ್ನು ಚಿಂಟು ಎಂದು ಕರೆಯುತ್ತೇನೆ. ಯಾಕೆಂದರೆ ಅವನು ನಮ್ಮೆಲ್ಲರ ಚಿಂತೆ ದೂರ ಮಾಡಲು ಬಂದವನು. ಅವನ ಆಗಮನದಿಂದ ನಮಗೆಲ್ಲ ಖುಷಿ ಆಗಿದೆ' ಎಂದು ಅವರು ಹೇಳಿದ್ದಾರೆ. ನಾಮಕರಣದ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಲಿದೆ. ಆ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಹೊರಬೀಳಲಿದೆ. ಚಿರಂಜೀವಿ ಸರ್ಜಾ ಪುತ್ರನಿಗೆ ಕುಟುಂಬದರು ಏನು ಹೆಸರು ಇಡಲಿದ್ದಾರೆ ಎಂದು ತಿಳಿದುಕೊಳ್ಳಲು ಅಭಿಮಾನಿಗಳು ಕಾದಿದ್ದಾರೆ.
also read: ಮೇಘನಾ-ಚಿರು ಮಗು ಬಗ್ಗೆ ಜಗ್ಗೇಶ್ ಮೊದಲ ಮಾತು! ರಾಯರ ಪ್ರಾರ್ಥನೆ ಮಾಡಿದ ನವರಸ ನಾಯಕ!
'ಗೋಧೂಳಿ ಮುಹೂರ್ತದಲ್ಲಿ ಮೊಮ್ಮಗನನ್ನು ಮನೆಗೆ ಕರೆದುಕೊಂಡು ಬಂದೆವು. ಹೊಸ ರೂಪದಲ್ಲಿ ನಮ್ಮ ಅಳಿಯ ಮನೆಗೆ ಮರಳಿದ್ದಾನೆ ಎಂಬುದರ ಸಂಕೇತ ಅದು. ಮಗುವಿನ ಆಗಮನದಿಂದ ದೇವರಲ್ಲಿ ಮತ್ತೆ ನಂಬಿಕೆ ಮೂಡುವಂತಾಗಿದೆ. ಈ ಮಗುವಿನಲ್ಲಿ ನಾವು ಚಿರುವನ್ನೇ ಕಾಣುತ್ತೇವೆ' ಎಂದಿದ್ದಾರೆ ಸುಂದರ್ ರಾಜ್. ಮಗುವಿನ ಫೋಟೋಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಎಲ್ಲರಿಂದಲೂ ಶುಭ ಹಾರೈಕೆಗಳು ಕೇಳಿಬರುತ್ತಿವೆ.
also read: ಕಳೆದ ನಾಲ್ಕು ತಿಂಗಳು 40 ವರ್ಷದ ರೀತಿ ಆಗೋಗಿತ್ತು: ಮೇಘನಾ ರಾಜ್ ತಂದೆ ಸುಂದರ್ ರಾಜ್!
ಮಗುವಿನ ಆಗಮನದ ಬಳಿಕ ನಟ ಧ್ರುವ ಸರ್ಜಾ, ಅರ್ಜುನ್ ಸರ್ಜಾ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಆದರೆ ನಾಮಕರಣದ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಡಲಿಲ್ಲ. ಆದರೆ ಮೇಘನಾ ತಂದೆ ಸುಂದರ್ ರಾಜ್ ಅವರು ತಮ್ಮ ಮೊಮ್ಮಗನಿಗೆ ಈಗಾಗಲೇ ಚಿಂಟು ಎಂದು ಕರೆಯಲು ಆರಂಭಿಸಿದ್ದಾರೆ! ಮಾಧ್ಯಮಗಳ ಜೊತೆ ಮಾತನಾಡುವಾಗ ಅವರು ಈ ವಿಚಾರ ಹಂಚಿಕೊಂಡಿದ್ದಾರೆ.
'ನಾನು ಅವನನ್ನು ಚಿಂಟು ಎಂದು ಕರೆಯುತ್ತೇನೆ. ಯಾಕೆಂದರೆ ಅವನು ನಮ್ಮೆಲ್ಲರ ಚಿಂತೆ ದೂರ ಮಾಡಲು ಬಂದವನು. ಅವನ ಆಗಮನದಿಂದ ನಮಗೆಲ್ಲ ಖುಷಿ ಆಗಿದೆ' ಎಂದು ಅವರು ಹೇಳಿದ್ದಾರೆ. ನಾಮಕರಣದ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಲಿದೆ. ಆ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಹೊರಬೀಳಲಿದೆ. ಚಿರಂಜೀವಿ ಸರ್ಜಾ ಪುತ್ರನಿಗೆ ಕುಟುಂಬದರು ಏನು ಹೆಸರು ಇಡಲಿದ್ದಾರೆ ಎಂದು ತಿಳಿದುಕೊಳ್ಳಲು ಅಭಿಮಾನಿಗಳು ಕಾದಿದ್ದಾರೆ.
also read: ಮೇಘನಾ-ಚಿರು ಮಗು ಬಗ್ಗೆ ಜಗ್ಗೇಶ್ ಮೊದಲ ಮಾತು! ರಾಯರ ಪ್ರಾರ್ಥನೆ ಮಾಡಿದ ನವರಸ ನಾಯಕ!
'ಗೋಧೂಳಿ ಮುಹೂರ್ತದಲ್ಲಿ ಮೊಮ್ಮಗನನ್ನು ಮನೆಗೆ ಕರೆದುಕೊಂಡು ಬಂದೆವು. ಹೊಸ ರೂಪದಲ್ಲಿ ನಮ್ಮ ಅಳಿಯ ಮನೆಗೆ ಮರಳಿದ್ದಾನೆ ಎಂಬುದರ ಸಂಕೇತ ಅದು. ಮಗುವಿನ ಆಗಮನದಿಂದ ದೇವರಲ್ಲಿ ಮತ್ತೆ ನಂಬಿಕೆ ಮೂಡುವಂತಾಗಿದೆ. ಈ ಮಗುವಿನಲ್ಲಿ ನಾವು ಚಿರುವನ್ನೇ ಕಾಣುತ್ತೇವೆ' ಎಂದಿದ್ದಾರೆ ಸುಂದರ್ ರಾಜ್. ಮಗುವಿನ ಫೋಟೋಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಎಲ್ಲರಿಂದಲೂ ಶುಭ ಹಾರೈಕೆಗಳು ಕೇಳಿಬರುತ್ತಿವೆ.
also read: ಕಳೆದ ನಾಲ್ಕು ತಿಂಗಳು 40 ವರ್ಷದ ರೀತಿ ಆಗೋಗಿತ್ತು: ಮೇಘನಾ ರಾಜ್ ತಂದೆ ಸುಂದರ್ ರಾಜ್!