ಆ್ಯಪ್ನಗರ

ಸಿನಿಮಾ ಪ್ರದರ್ಶಿಸಲ್ಲ ಎಂದಿದ್ದಕ್ಕೆ ಬೆಂಕಿನೇ ಹಚ್ಚೋದಾ? ವಿಜಯ್ ಅಭಿಮಾನಿಗಳ ವರ್ತನೆಗೆ ಖಂಡನೆ!!

ಸ್ಟಾರ್ ನಟರ ಸಿನಿಮಾಗಳು ತೆರೆಕಾಣುವಾಗ ಚಿತ್ರಮಂದಿರಗಳ ಮುಂದೆ ಸಂಭ್ರಮ ಮುಗಿಲು ಮುಟ್ಟಿರುತ್ತದೆ. ಅಭಿಮಾನಿಗಳು ಕಟೌಟ್‌ಗೆ ಹಾರ ಹಾಕಿ, ಹಾಲಿನ ಅಭಿಷೇಕ ಮಾಡುವುದನ್ನು ನೋಡಿದ್ದೇವೆ. ಆದರೆ, ವಿಜಯ್‌ ಫ್ಯಾನ್ಸ್ ಬೆಂಕಿಯನ್ನೇ ಹಚ್ಚಿದ್ದಾರೆ!!!

Vijaya Karnataka Web 25 Oct 2019, 3:45 pm
ನೆಚ್ಚಿನ ಸ್ಟಾರ್ ನಟನ ಸಿನಿಮಾ ರಿಲೀಸ್‌ ಆಗುವಾಗ ಅಭಿಮಾನಿಗಳು ಸಂಭ್ರಮಿಸುವುದು ಮಾಮೂಲಿ. ಚಿತ್ರಮಂದಿರವನ್ನು ಸಿಂಗರಿಸಿ, ನಟರ ದೊಡ್ಡ ದೊಡ್ಡ ಕಟೌಟ್‌ ನಿಲ್ಲಿಸಿ, ಅದಕ್ಕೆ ಹಾಲಿನ ಅಭಿಷೇಕ ಮಾಡಿ, ನಂತರ ಹೂವಿನಿಂದ ಅದನ್ನು ಅಲಂಕರಿಸುವುದು ವಾಡಿಕೆ. ಆದರೆ, 'ಇಳೆಯ ದಳಪತಿ' ವಿಜಯ್‌ ಅವರ ಅಭಿಮಾನಿಗಳು ಮಾತ್ರ ಇದೆಲ್ಲದಕ್ಕಿಂತ ಭಿನ್ನ. ಚಿತ್ರಮಂದಿರದಲ್ಲಿ ಸಿನಿಮಾ ಹಾಕಲ್ಲ ಎಂದಿದ್ದಕ್ಕೆ ಬೆಂಕಿಯನ್ನೇ ಹಚ್ಚಿದ್ದಾರೆ.
Vijaya Karnataka Web Vijay

ವಿಜಯ್ ಅಭಿನಯದ 'ಬಿಗಿಲ್' ಚಿತ್ರದ ಬಜೆಟ್ ಎಷ್ಟು ಗೊತ್ತಾ?
ಇಂಥದ್ದೊಂದು ದುರಂತ ನಡೆದಿರುವುದು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ. ಅಷ್ಟಕ್ಕೂ ಆಗಿದ್ದೇನೆಂದರೆ, ಶುಕ್ರವಾರ ವಿಜಯ್ ಅಭಿನಯದ 'ಬಿಗಿಲ್‌' ತೆರೆಕಂಡಿದೆ. ದೇಶದ ಹಲವೆಡೆ ವಿಶೇಷ ಶೋಗಳು ಏರ್ಪಡಿಸಲಾಗಿತ್ತು. ಅಂತೆಯೇ ಕೃಷ್ಣಗಿರಿ ಜಿಲ್ಲೆಯ ಚಿತ್ರಮಂದಿರವೊಂದರಲ್ಲಿ ಗುರುವಾರ ಮಧ್ಯರಾತ್ರಿಯೇ ವಿಶೇಷ ಪ್ರದರ್ಶನ ಹಾಕಲಾಗಿತ್ತು. ಸಿನಿಮಾ ಶುರುವಾಗುತ್ತಿದ್ದಂತೆಯೇ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಅದು ಯಾವ ಮಟ್ಟಿಗೆಂದರೆ, ಚಿತ್ರಮಂದಿರದ ಒಳಗೆಯೇ ಫ್ಯಾನ್ಸ್ ಪಟಾಕಿ ಹಚ್ಚುವುದಕ್ಕೆ ಮುಂದಾಗಿದ್ದಾರೆ. ಇದರಿಂದ ಸಹಜವಾಗಿಯೇ ಚಿತ್ರಮಂದಿರದ ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದಾರೆ. ತಕ್ಷಣವೇ ಸಿನಿಮಾ ಪ್ರದರ್ಶನ ನಿಲ್ಲಿಸಿದ್ದಾರೆ.

ಯಾವಾಗ ಸಿನಿಮಾ ಪ್ರದರ್ಶನ ನಿಂತು ಹೋಯಿತೋ, ಅಭಿಮಾನಿಗಳ ಕೋಪ ಹೆಚ್ಚಾಗಿದೆ. ನೂರಕ್ಕೂ ಅಧಿಕ ಜನರ ಗುಂಪು ಘೋಷಣೆ ಕೂಗುತ್ತ, ದಾಂಧಲೆ ಮಾಡಿದ್ದಾರೆ. ಚಿತ್ರಮಂದಿರದ ಹೊರಗೆ ಇದ್ದ ಅಂಗಡಿಮುಂಗಟ್ಟುಗಳಿಗೆ ಬೆಂಕಿ ಇಟ್ಟಿದ್ದಾರೆ. ವಾಹನಗಳಿಗೆ ಹಾನಿ ಮಾಡಿದ್ದಲ್ಲದೆ, ಕುಡಿಯುವ ನೀರಿನ ಟ್ಯಾಂಕ್‌ಗಳನ್ನು ಒಡೆದು ಹಾಕಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಆಗಮಿಸಿ, ಕಿಡಿಗೇಡಿಗಳನ್ನು ಬಂಧಿಸಿದ್ದಾರೆ. ಈಗಾಗಲೇ 35ಕ್ಕೂ ಅಧಿಕ ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ಧಾರೆ. ಜತೆಗೆ ಕೃಷ್ಣಗಿರಿ ಜಿಲ್ಲೆಯ ಯಾವ್ಯಾವ ಚಿತ್ರಮಂದಿರಗಳಲ್ಲಿ 'ಬಿಗಿಲ್' ಪ್ರದರ್ಶನವಾಗುತ್ತಿದೆಯೋ, ಅಲ್ಲೆಲ್ಲ ಬಿಗಿಬಂದೋಬಸ್ತ್ ನೀಡಲಾಗಿದೆಯಂತೆ.
ಬರೀ ನಟಿಸೋದಷ್ಟೇ ನಯನತಾರಾ ಕೆಲಸವಂತೆ! ಸಿನಿಮಾ ಪ್ರಚಾರಕ್ಕೆ ಇವ್ರು ಬರೋದೇ ಇಲ್ಲ!!!
ಸುಮಾರು 100 ಕೋಟಿ ರೂ.ಗಳಿಗೂ ಅಧಿಕ ಬಂಡವಾಳದಲ್ಲಿ ನಿರ್ಮಾಣವಾಗಿರುವ 'ಬಿಗಿಲ್‌' ಚಿತ್ರದಲ್ಲಿ ವಿಜಯ್‌ಗೆ ನಾಯಕಿಯಾಗಿ ನಯನತಾರಾ ನಟಿಸಿದ್ದಾರೆ. ಜಾಕಿಶ್ರಾಫ್‌, ವಿವೇಕ್,‌ ಕದೀರ್ ಮುಂತಾದವರು ಪೋಷಕ ಪಾತ್ರಗಳಲ್ಲಿದ್ದಾರೆ. ಅಂದಹಾಗೆ, ವಿಜಯ್‌ಗೆ ಅಟ್ಲೀಕುಮಾರ್‌ ನಿರ್ದೇಶಿಸಿರುವ ಮೂರನೇ ಸಿನಿಮಾ ಇದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌