ಆ್ಯಪ್ನಗರ

ಅಶ್ಲೀಲವಾಗಿ ಕಾಮೆಂಟ್‌ ಮಾಡುವ ಮುನ್ನ ಯೋಚಿಸಿ! ನಿಮಗೂ ಹೀಗೇ ಆಗಬಹುದು ಹುಷಾರ್‌...!

ಸೋಶಿಯಲ್‌ ಮೀಡಿಯಾದಲ್ಲಿ ಕೆಟ್ಟದಾಗಿ ಕಾಮೆಂಟ್‌ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ತಮ್ಮ ಬಗ್ಗೆ ಅಶ್ಲೀಲವಾಗಿ ಕಾಮೆಂಟ್‌ ಮಾಡಿದ ಒಬ್ಬ ವ್ಯಕ್ತಿಗೆ ನಟಿ ಅಪರ್ಣಾ ನಾಯರ್‌ ನೇರವಾಗಿ ಗ್ರಹಚಾರ ಬಿಡಿಸಿದ್ದಾರೆ.

Vijaya Karnataka Web 18 Jun 2020, 10:21 pm
ಸೆಲೆಬ್ರಿಟಿಗಳಿಗೆ ಸೋಶಿಯಲ್‌ ಮೀಡಿಯಾದಲ್ಲಿ ಎಷ್ಟು ಅಭಿಮಾನಿಗಳು ಇರುತ್ತಾರೋ ಅಷ್ಟೇ ಪ್ರಮಾಣದಲ್ಲಿ ಕಿಡಿಗೇಡಿಗಳೂ ಇರುತ್ತಾರೆ. ಹಾಕುವ ಪೋಸ್ಟ್‌ಗಳಿಗೆ ಎಷ್ಟು ಮೆಚ್ಚುಗೆ ಸಿಗುತ್ತದೆಯೋ ಅಷ್ಟೇ ಕೆಟ್ಟ ಕಾಮೆಂಟ್‌ಗಳು ಕೂಡ ಬರುತ್ತವೆ. ಕೆಲವು ಸೆಲೆಬ್ರಿಟಿಗಳು ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಮತ್ತೆ ಕೆಲವರು ಗ್ರಹಚಾರ ಬಿಡಿಸದೇ ಸುಮ್ಮನಿರುವುದಿಲ್ಲ!
Vijaya Karnataka Web ಅಪರ್ಣಾ ನಾಯರ್‌


ಮಲಯಾಳಂ ನಟಿ ಅಪರ್ಣಾ ನಾಯರ್‌ ಅವರಿಗೆ ಇತ್ತೀಚೆಗೆ ಇಂಥ ಅನುಭವ ಆಗಿದೆ. ಅವರು ಹಾಕಿದ ಒಂದು ಪೋಸ್ಟ್‌ಗೆ ಅಜಿತ್‌ ಕುಮಾರ್‌ ಎಂಬ ವ್ಯಕ್ತಿಯೊಬ್ಬನು ಅಶ್ಲೀಲವಾಗಿ ಕಾಮೆಂಟ್‌ ಮಾಡಿದ್ದ. ತಾನು ಎಲ್ಲೋ ಕುಳಿತುಕೊಂಡು ಹೀಗೆ ಕಾಮೆಂಟ್‌ ಮಾಡುತ್ತಿದ್ದೇನೆ, ತನಗೆ ಯಾರೂ ಏನೂ ಮಾಡಲಾಗುವುದಿಲ್ಲ ಎಂದು ಆತ ಅಂದುಕೊಂಡಿರಬಹುದು. ಆದರೆ ಅವನ ಊಹೆ ಸುಳ್ಳಾಗಿದೆ. ಅಪರ್ಣಾ ನಾಯರ್‌ ನೇರವಾಗಿ ಅವನನ್ನು ಭೇಟಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಶ್ಲೀಲ ಕಾಮೆಂಟ್ ಬಂದ ಹಿನ್ನೆಲೆಯಲ್ಲಿ ಅಪರ್ಣಾ ಅವರು ಸೈಬರ್‌ ಪೊಲೀಸರಿಗೆ ದೂರು ನೀಡಿದ್ದರು. ಅದರ ಆಧಾರದ ಮೇಲೆ ಅಜಿತ್‌ ಕುಮಾರ್ ಎಂಬ ಆ ವ್ಯಕ್ತಿಯನ್ನು ಪೊಲೀಸರು ಹುಡುಕಿ ಠಾಣೆಗೆ ಎಳೆದುಕೊಂಡು ಬಂದಿದ್ದಾರೆ. ನಂತರ ಪೊಲೀಸ್‌ ಠಾಣೆಗೆ ತೆರಳಿದ ಅಪರ್ಣಾ ಅವರು ಆ ವ್ಯಕ್ತಿಯನ್ನು ಭೇಟಿ ಮಾಡಿದ್ದಾರೆ. 'ಏಕೆ ನನಗೆ ಈ ರೀತಿ ಕಾಮೆಂಟ್‌ ಮಾಡಿದ್ದೀಯಾ? ನಿನ್ನ ಉದ್ದೇಶ ಏನು' ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಆತ ಕೊಟ್ಟ ಉತ್ತರ ನಿಜಕ್ಕೂ ಸಿಲ್ಲಿ. 'ಸೆಲೆಬ್ರಿಟಿಗಳಿಗೆ ಮತ್ತು ರಾಜಕಾರಣಿಗಳಿಗೆ ನಾನು ಆಗಾಗ ಇದೇ ರೀತಿ ಕಾಮೆಂಟ್‌ ಮಾಡುತ್ತಿರುತ್ತೇನೆ. ನಿಮ್ಮ ವಿಚಾರದಲ್ಲೂ ಹಾಗೆಯೇ ಮಾಡಿದ್ದೇನೆ' ಎಂದು ಆತ ಹೇಳಿದ್ದಾನೆ!

also read: ಕೆಟ್ಟದಾಗಿ ಕಾಮೆಂಟ್‌ ಮಾಡಿದವನಿಗೆ ನಿರ್ದೇಶಕಿ ಸುಮನ್‌ ಕಿತ್ತೂರ್‌ ಕ್ಲಾಸ್‌!

ಅಚ್ಚರಿ ಎಂದರೆ ಅಜಿತ್‌ ಕುಮಾರ್‌ನನ್ನು ಭೇಟಿ ಮಾಡಿದ ನಂತರ ಆತನ ಮೇಲಿನ ದೂರನ್ನು ಅಪರ್ಣಾ ವಾಪಸ್‌ ಪಡೆದಿದ್ದಾರೆ. 'ಇನ್ಮುಂದೆ ಯಾರಿಗೂ ಈ ರೀತಿ ಕಾಮೆಂಟ್‌ ಮಾಡುವುದಿಲ್ಲ ಎಂದು ಆತನಿಂದ ಕ್ಷಮಾರ್ಪಣಾ ಪತ್ರ ಬರೆಸಿಕೊಂಡೆ. ಅವನ ಮನೆಯ ಆರ್ಥಿಕ ಸ್ಥಿತಿ ನೋಡಿ ದೂರು ವಾಪಸ್‌ ಪಡೆದೆ' ಎಂದಿರುವ ಅಪರ್ಣಾ, ಈ ಬಗ್ಗೆ ದೀರ್ಘವಾಗಿ ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

also read: ಅಶ್ಲೀಲ್‌ ಕಮೆಂಟ್‌ ಮಾಡಿದವರನ್ನು ಬಂಧಿಸಿ

ಸೋಶಿಯಲ್‌ ಮೀಡಿಯಾದಲ್ಲಿ ಸಕ್ರಿಯ ಆಗಿರುವ ಬಹುತೇಕ ಎಲ್ಲ ನಟಿಯರಿಗೂ ಕೆಟ್ಟ ಕಾಮೆಂಟ್‌ಗಳು ಬರುತ್ತಿರುತ್ತವೆ. ಈ ಹಿಂದೆ ನಟಿ ರಶ್ಮಿಕಾ ಮಂದಣ್ಣ ಅವರ ಬಾಲ್ಯದ ಫೋಟೋಗೆ ಕೆಲವರು ಅಶ್ಲೀಲವಾಗಿ ಕಾಮೆಂಟ್‌ ಮಾಡಿದ್ದರು. ಅದನ್ನು ಕಂಡು ರಶ್ಮಿಕಾ ಗರಂ ಆಗಿದ್ದರು. ಈಗ ಮಲಯಾಳಂ ನಟಿ ಅಪರ್ಣಾ ಸರಿಯಾಗಿ ಪಾಠ ಕಲಿಸಿದ್ದಾರೆ. ಎಲ್ಲ ನಟಿಯರೂ ಹೀಗೆ ಕಠಿಣ ನಿರ್ಧಾರ ತೆಗೆದುಕೊಂಡರೆ ಇನ್ಮುಂದೆ ಅಶ್ಲೀಲವಾಗಿ ಕಾಮೆಂಟ್‌ ಮಾಡುವವರು ಪರಿಣಾಮ ಎದುರಿಸಲು ರೆಡಿ ಆಗಿರಬೇಕು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌