ಪುಟ್ಟಣ್ಣ ನಿರ್ಮಾಣದ ಸಿನಿಮಾ
ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ ಅವರು ಇದೇ ಮೊದಲ ಬಾರಿಗೆ 'ಅಮೃತವತಿ' ಚಿತ್ರದ ಮೂಲಕ ನಿರ್ಮಾಪಕರಾಗಿದ್ದಾರೆ. ಇಂಚರ ಪುಟ್ಟಣ್ಣ ಪ್ರೊಡಕ್ಷನ್ಸ್ ಬ್ಯಾನರ್ನಡಿಯಲ್ಲಿ ಈ ಸಿನಿಮಾ ನಿರ್ಮಾಣಗೊಂಡಿದೆ.
ಜನ್ನಕವಿಯಿಂದ ರಚಿತ
ಹದಿಮೂರನೇ ಶತಮಾನದ ಜನ್ನ ಕವಿಯಿಂದ ರಚಿತವಾದ 'ಯಶೋಧರ ಚರಿತೆ' ಕಾವ್ಯವನ್ನು ಆಧರಿಸಿದ ಈ ಸಿನಿಮಾ ಇದಾಗಿದೆ.
ಬರಗೂರರ ನಿರ್ದೇಶನ
ಖ್ಯಾತ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ. ಈ ಹಿಂದೆ 'ಬಯಲಾಟದ ಭೀಮಣ್ಣ' ಸಿನಿಮಾವನ್ನು ರಾಮಚಂದ್ರಪ್ಪ ನಿರ್ದೇಶನ ಮಾಡಿದ್ದರು. ಆದಾದ ಮೇಲೆ 'ಅಮೃತಮತಿ' ಮಾಡಿದ್ದಾರೆ.
ಪೋಷಕ ಪಾತ್ರಗಳಲ್ಲಿ ಖ್ಯಾತ ಕಲಾವಿದರು
'ಅಮೃತಮತಿ' ಚಿತ್ರದ ಪೋಷಕ ಪಾತ್ರಗಳಲ್ಲಿ ತಿಲಕ್, ಪ್ರಮೀಳಾ ಜೋಷಾಯ್, ಸುಂದರರಾಜ್, ಸುಪ್ರಿಯಾ ರಾವ್, ಅಂಬರೀಷ್ ಸಾರಂಗಿ, ವತ್ಸಲಾ ಮೋಹನ್ ಮುಂತಾದವರು ನಟಿಸಿದ್ದಾರೆ. ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ಇದೇ ಮೊದಲ ಬಾರಿಗೆ ಹರಿಪ್ರಿಯಾ-ಕಿಶೋರ್ ಜೋಡಿ
ಈ ಸಿನಿಮಾದಲ್ಲಿ ಹರಿಪ್ರಿಯಾಗೆ ಜೋಡಿಯಾಗಿ ಕಿಶೋರ್ ನಟಿಸಿದ್ಧಾರೆ. ಚಿತ್ರದಲ್ಲಿ ಅಮೃತಮತಿಯಾಗಿ ಹರಿಪ್ರಿಯಾ ನಟಿಸಿದ್ದರೆ, ಕಿಶೋರ್ಗೆ ಯಶೋಧರ ಪಾತ್ರ ಸಿಕ್ಕಿದೆ.