ಆ್ಯಪ್ನಗರ

ರಾಮಾಯಣ ಧಾರಾವಾಹಿ ನೋಡಿ ಬಾಲ್ಯದ ದಿನಗಳಿಗೆ ಹೊರಳಿದ ನಟಿ ಕಾಜಲ್ ಅಗರವಾಲ್

ಲಾಕ್‍ಡೌನ್ ಹಿನ್ನೆಲೆಯಲ್ಲಿ ಹಲವಾರು ಸೆಲೆಬ್ರಿಟಿಗಳು ಸ್ವಯಂ ನಿರ್ಬಂಧ ವಿಧಿಸಿಕೊಂಡು ಮನೆಯಲ್ಲೇ ಇದ್ದಾರೆ. ಇದೇ ಸಂದರ್ಭದಲ್ಲಿ ರಾಮಾಯಣ ಹಾಗೂ ಮಹಾಭಾರತ ಧಾರಾವಾಹಿಗಳು ಮರು ಪ್ರಸಾರ ಆಗುತ್ತಿವೆ. ಇದನ್ನು ಎಂಜಾಯ್ ಮಾಡುತ್ತಿದ್ದೇನೆ ಎಂದಿದ್ದಾರೆ ನಟಿ ಕಾಜಲ್ ಅಗರವಾಲ್.

Vijaya Karnataka Web 28 Mar 2020, 2:22 pm

ಲಾಕ್‍‍ಡೌನ್ ಸಂದರ್ಭದಲ್ಲಿ ಕೇಂದ್ರ ಸರಕಾರ ಮಾಡಿದ ಒಂದು ಕೆಲಸ ನನಗೆ ಬಾಲ್ಯದ ದಿನಗಳು ನೆನಪಿಸಿವೆ ಎಂದಿದ್ದಾರೆ ನಟಿ ಕಾಜಲ್ ಅಗರವಾಲ್. ಕೊರೊನಾ ವೈರಸ್ ಕರಾಳ ನರ್ತನದ ಹಿನ್ನೆಲೆಯಲ್ಲಿ ದೇಶದಾದ್ಯಂತ 21 ದಿನ ಲಾಕ್ ಡೌನ್ ಘೋಷಣೆಯಾಗಿದೆ.
Vijaya Karnataka Web ಕಾಜಲ್ ಅಗರವಾಲ್


ಈ ಹಿನ್ನೆಲೆಯಲ್ಲಿ ಮನೆಯಲ್ಲೇ ಸ್ವಯಂ ನಿರ್ಬಂಧದಲ್ಲಿರುವವರು 1987ರಲ್ಲಿ ಪ್ರಸಾರವಾದ ಜನಪ್ರಿಯ ಪೌರಾಣಿಕ ಧಾರಾವಾಹಿಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಈ ಧಾರಾವಾಹಿಯನ್ನು ಮರು ಪ್ರಸಾರ ಮಾಡುತ್ತಿರುವುದಾಗಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಟ್ವಿಟರ್‌ನಲಿ ತಿಳಿಸಿದ್ದರು. ಹಾಗಾಗಿ ಶನಿವಾರದಿಂದಲೇ ರಾಮಾಯಣ ಧಾರಾವಾಹಿ ಮರು ಪ್ರಸಾರ ಆರಂಭವಾಗಿದೆ.

"ಕುಟುಂಬ ಸದಸ್ಯರ ಜೊತೆಗೆ ಕುಳಿತು ದೂರದರ್ಶನದಲ್ಲಿ ಪ್ರಸಾರವಾಗುವ ರಾಮಾಯಣ, ಮಹಾಭಾರತ ಧಾರಾವಾಹಿಯನ್ನು ನೋಡುತ್ತಿದ್ದರೆ ನನ್ನ ಬಾಲ್ಯದ ದಿನಗಳು ನೆನಪಾಗುತ್ತಿವೆ. ಆಗ ನಮ್ಮ ವಾರಾಂತ್ಯಗಳು ಇವುಗಳ ಮೂಲಕವೇ ಕಳೆಯುತ್ತಿದ್ದವು. ಅಂದಿನ ಆಣಿಮುತ್ಯಗಳು ಮರು ಪ್ರಸಾರವಾಗುತ್ತಿರುವುದು ನನಗೆ ತುಂಬಾ ಸಂತೋಷವಾಗಿದೆ. ಪುರಾಣಗಳ ಬಗ್ಗೆ ಚಿಕ್ಕಮಕ್ಕಳು ತಿಳಿದುಕೊಳ್ಳಲು ಇದೊಂದು ಉತ್ತಮ ಮಾರ್ಗ' ಎಂದು ಕಾಜಲ್ ಟ್ವೀಟ್ ಮಾಡಿದ್ದಾರೆ.

ಆ ಘಟನೆ ಬಳಿಕ ನಟಿ ಕಾಜಲ್ ಅಗರವಾಲ್ ಮನೆಯಿಂದಲೇ ಹೊರಬರುತ್ತಿಲ್ಲವಂತೆ!

ರಮಾನಂದ ಸಾಗರ್ ನಿರ್ದೇಶನದಲ್ಲಿ ಮೂಡಿಬಂದ ಜನಪ್ರಿಯ ಧಾರಾವಾಹಿ ರಾಮಾಯಣ ಎಂಬತ್ತರ ದಶಕದಲ್ಲಿ ಪ್ರಸಾರವಾಗಿತ್ತು. ಅರುಣ್ ಗೋವಿಲ್ ರಾಮನಾಗಿ, ಸೀತೆಯಾಗಿ ದೀಪಿಕಾ ಚಿಕಾಲಿಯಾ, ಲಕ್ಷ್ಮಣನಾಗಿ ಸುನಿಲ್ ಲಹರಿ, ಹನುಮಂತನಾಗಿ ದಾರಾ ಸಿಂಗ್, ರಾವಣನಾಗಿ ಅರವಿಂದ್ ತ್ರಿವೇದಿ ಅಭಿನಯಿಸಿದ್ದಾರೆ. ಜನವರಿ 25, 1987ರಿಂದ ಜುಲೈ 31, 1988ರವೆಗೆ ರಾಮಾಯಣ ಧಾರವಾಹಿ ಪ್ರಸಾರವಾಗಿತ್ತು.

ಪ್ರಭಾಸ್‍ರನ್ನು ಮದುವೆಯಾಗುತ್ತೇನೆ ಎಂದ ನಟಿ ಕಾಜಲ್ ಅಗರವಾಲ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌