ಆ್ಯಪ್ನಗರ

ನಿಮ್ಮ ಮುಂದೆ ಸಾವು ಬಂದು ನಿಂತಿದ್ದರೆ ನಿಮ್ಮ ಪ್ಯಾಂಟ್ ಒದ್ದೆ ಆಗ್ತಿತ್ತು: ನಟಿ ಖುಷ್ಬೂ ಸುಂದರ್

'ರಣಧೀರ' ಸಿನಿಮಾ ನಟಿ ಖುಷ್ಬೂ ಸುಂದರ್ ಅವರ ಕಾರ್ ಇತ್ತೀಚೆಗಷ್ಟೇ ಅಪಘಾತಕ್ಕೀಡಾಗಿತ್ತು. ಈ ಬಗ್ಗೆ ಮಿಶ್ರ ಪ್ರತಿಕ್ರಿಯೆ ಬಂದಿದೆ. ನೆಟ್ಟಿಗರೊಬ್ಬರ ಕಾಮೆಂಟ್‌ಗೆ ಖುಷ್ಬೂ ಬಹಳ ಖಾರವಾಗಿ ಉತ್ತರ ನೀಡಿದ್ದಾರೆ.

Authored byಟೀನಾ | Vijaya Karnataka Web 26 Nov 2020, 7:31 pm
ನಟಿ, ರಾಜಕಾರಣಿ ಆಗಿರುವ ಖುಷ್ಬೂ ಸುಂದರ್ ಅವರ ಕಾರ್ ಇತ್ತೀಚೆಗಷ್ಟೇ ಅಪಘಾತವಾಗಿತ್ತು. ಈ ಬಗ್ಗೆ ನಟಿಯೇ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿ ಯಾರಿಗೂ ಏನೂ ಆಗಿಲ್ಲ ಎಂದಿದ್ದರು. ಆದರೆ ಈ ಘಟನೆ ಕುರಿತು ಬೇರೆಯದೇ ಮಾತನಾಡಿದವರಿಗೆ ಖುಷ್ಬೂ ಖಾರವಾಗಿ ಉತ್ತರ ನೀಡಿದ್ದಾರೆ.
Vijaya Karnataka Web actress khushbu sundar replies to negative comments about the car issue
ನಿಮ್ಮ ಮುಂದೆ ಸಾವು ಬಂದು ನಿಂತಿದ್ದರೆ ನಿಮ್ಮ ಪ್ಯಾಂಟ್ ಒದ್ದೆ ಆಗ್ತಿತ್ತು: ನಟಿ ಖುಷ್ಬೂ ಸುಂದರ್


ಖುಷ್ಬೂ ಕಾರ್ ಅಪಘಾತದ ಬಗ್ಗೆ ನೆಟ್ಟಿಗ ಹೇಳಿದ್ದೇನು?

ತಮಿಳಿನಲ್ಲಿ ಖುಷ್ಬೂ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರೊಬ್ಬರು, 'ಖಷ್ಬೂ ಸುಂದರ ನಟಿ ಅನ್ನೋದಕ್ಕೆ ಈ ಫೋಟೋವೇ ಸಾಕ್ಷಿ. ಒಳ್ಳೆಯ ಚಿತ್ರಕಥೆ ಮಾಡಿ. ಇದರಲ್ಲಿ ಹಲವು ಲೋಪದೋಷಗಳಿವೆ. ಕೆಲ ಫೋಟೋಗಳಲ್ಲಿ ಖುಷ್ಬೂ ಮುಂದಿನ ಸೀಟ್‌ನಲ್ಲಿ ಕುಳಿತಿದ್ದಾರೆ, ಹಿಂದಿನ ಸೀಟ್‌ನಲ್ಲಿ ಉಳಿದವರು ಕೂತಿದ್ದಾರೆ' ಎಂದು ಹೇಳಿದ್ದಾರೆ.

ಪ್ಯಾಂಟ್ ಒದ್ದಾಯಾಗುತ್ತದೆ ಎಂದ ಖುಷ್ಬೂ ಸುಂದರ್!
'ನಾನು ಹೋರಾಡಿದ ಭಾಷೆಯವರಾದವರು ನನ್ನ ಬಗ್ಗೆ ಮಾತನಾಡುತ್ತಾರೆಂದರೆ ನಾಚಿಕೆಯಾಗುತ್ತದೆ. ನಿಮಗೆ ಧೈರ್ಯವಿದ್ದರೆ ನಕಲಿ ಅಪಘಾತ ಮಾಡಿ. ನಿಮ್ಮ ಮುಂದೆ ಸಾವು ಬಂದು ನಿಂತರೆ ನಿಮ್ಮ ಪ್ಯಾಂಟ್ ಒದ್ದೆಯಾಗುತ್ತದೆ ಎಂದು ನನಗೆ ಖಾತರಿಯಿದೆ, ಏಕೆಂದರೆ ನೀವು ನನ್ನಷ್ಟು ಶಕ್ತಿಶಾಲಿಗಳಲ್ಲ. ಹೇಡಿಗಳ ಭಾಷೆಯಲ್ಲಿ ಮಾತನಾಡುತ್ತಿದ್ದೀರಿ. ಬೇಗ ಹುಷಾರಾಗಿ' ಎಂದು ಖುಷ್ಬೂ ಸುಂದರ್ ಅವರು ಉತ್ತರ ನೀಡಿದ್ದಾರೆ.

ನನ್ನ ಸಾವನ್ನು ಬಯಸಿದ್ದರು: ಖುಷ್ಬೂ

'ಕೆಲವರು ನನ್ನ ಮರಣದ ಕುರಿತು ಬರೆಯಲು ರೆಡಿಯಾಗಿದ್ದರು. ಈಗ ನಾನು ಹೀಗಿರೋದನ್ನು ನೋಡಿ ಅವರೆಲ್ಲರೂ ಆಶ್ವರ್ಯಚಕಿತರಾಗಿದ್ದಾರೆ. ಅನೇಕ ಜನರ ಪ್ರೀತಿಯಿಂದಾಗಿ ನಾನು ಬದುಕುಳಿದೆ. ಸ್ನೇಹಿತರು, ಕುಟುಂಬದವರು ನನ್ನ ಜೊತೆಗಿದ್ದಾರೆ. ದೇವರ ಆಶೀರ್ವಾದ ನನ್ನ ಮೇಲಿದೆ. ಮುಂದಿನ ಬಾರಿ ನಿಮ್ಮ ಪ್ರಯತ್ನಕ್ಕೆ ಒಳ್ಳೆಯದಾಗಲಿ' ಎಂದು ಖುಷ್ಬೂ ಟ್ವೀಟ್ ಮಾಡಿದ್ದಾರೆ.

Also Read-ತಮಿಳುನಾಡು: ಬಿಜೆಪಿಯ ಸಮಾವೇಶಕ್ಕೆ ತೆರಳುವ ವೇಳೆ ಖುಷ್ಬೂ ಸುಂದರ್‌ ಕಾರು ಅಪಘಾತ, ನುಜ್ಜುಗುಜ್ಜಾದ ಕಾರು!

ಏನಿದು ಘಟನೆ?

ಬಿಜೆಪಿ ಆಯೋಜಿಸಿರುವ ವೇಲ್‌ ಯಾತ್ರೆಗೆ ತೆರಳುತ್ತಿರುವಾಗ ಏಕಾಏಕಿ ಬಂದ ಟ್ರಕ್‌ವೊಂದು ಖುಷ್ಬೂ ಕಾರಿಗೆ ಡಿಕ್ಕಿ ಹೊಡೆದಿತ್ತು. ಸರಿಯಾದ ದಾರಿಯಲ್ಲಿ ಹೋಗುತ್ತಿದ್ದ ವೇಳೆ ಲಾರಿ ಬಂದು ಡಿಕ್ಕಿ ಹೊಡೆದಿತ್ತು. ಚೆನ್ನೈನ ಮೆಲ್ಮರುವಾತೂರ್ ಪಟ್ಟಣದ ಬಳಿ ಈ ಘಟನೆ ನಡೆದಿತ್ತು. ಹೀಗಾಗಿ ಖುಷ್ಬೂ ಈ ಘಟನೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಈಗಾಗಲೇ ತನಿಖೆ ನಡೆಯುತ್ತಿದೆ.

Also Read-'ರಣಧೀರ' ಸಿನಿಮಾ ನಟಿ ಖುಷ್ಬೂ ಸುಂದರ್ ಮತ್ತೆ ರವಿಚಂದ್ರನ್ ಜೊತೆ ಸಿನಿಮಾ ಮಾಡುತ್ತಾರಾ? ಅವರು ಹೇಳೋದೇನು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌