ಇತ್ತೀಚೆಗೆ ಇಟಲಿಯಲ್ಲಿ ನಡೆದ ಓನಿರೋಸ್ ಚಿತ್ರೋತ್ಸವದಲ್ಲಿ 'ರುದ್ರಿ' ಚಿತ್ರದ ನಟನೆಗಾಗಿ ಪಾವನಾ ಗೌಡ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. ಹಾಗೆಯೇ ಈ ಚಿತ್ರದ ಅತ್ಯಂತ ಕ್ರಿಯಾಶೀಲ ಪೋಸ್ಟರ್ಗೆ 'ಅತ್ಯುತ್ತಮ ಪೋಸ್ಟರ್ ವಿನ್ಯಾಸ' ಪ್ರಶಸ್ತಿ ಅರಸಿ ಬಂದಿದೆ. ಈ ಒನಿರೋಸ್ ಚಿತ್ರೋತ್ಸವದಲ್ಲಿ 'ರುದ್ರಿ' ಇನ್ನಿತರ ನಾಲ್ಕು ವಿಭಾಗಗಳಲ್ಲಿಯೂ ನಾಮನಿರ್ದೇಶನಗೊಂಡಿತ್ತು. ಅಂತಿಮವಾಗಿ 45 ಚಿತ್ರಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗಿತ್ತು. ಆ ಪೈಪೋಟಿಯಲ್ಲಿ 'ರುದ್ರಿ' ಚಿತ್ರ ಪ್ರಶಸ್ತಿ ಗೆದ್ದು ಬೀಗುತ್ತಿದೆ. ಅಂತಾರಾಷ್ಟ್ರೀಯ ಪ್ರಶಸ್ತಿ ಬಾಚಿಕೊಂಡಿದ್ದರ ಕುರಿತು ಸಂತಸ ವ್ಯಕ್ತಪಡಿಸಿದ ನಟಿ ಪಾವನಾ, 'ಇದು ನನ್ನ ಪಾಲಿಗೆ ಕೇವಲ ಒಂದು ಸಿನಿಮಾ ಅಥವಾ ಪಾತ್ರವಾಗಿರಲಿಲ್ಲ. ಇಡೀ ಸ್ತ್ರೀ ಸಂಕುಲದ ಧ್ವನಿಯೇ ಈ ಕಥೆಯಲ್ಲಿತ್ತು. ನನಗೆ ಎಲ್ಲ ರೀತಿಯಲ್ಲಿಯೂ ಇದು ಸವಾಲೊಡ್ಡುವಂತಹ ಪಾತ್ರವಾಗಿತ್ತು. ಆದರೆ ಈಗ ಅದಕ್ಕೆ ಸಿಗುತ್ತಿರುವ ಮನ್ನಣೆ ನೋಡಿದಾಗ ಪಾತ್ರಕ್ಕೆ ನ್ಯಾಯ ಒದಗಿಸಿದ ತೃಪ್ತಿ ನನ್ನಲ್ಲು ಮೂಡುತ್ತಿದೆ. ಇಡೀ ಚಿತ್ರತಂಡದ ಸಂಪೂರ್ಣ ಶ್ರಮದ ಫಲದಿಂದಾಗಿ ಸಿನಿಮಾ ಎಲ್ಲೆಡೆಯೂ ಗಮನ ಸೆಳೆಯುತ್ತಿದೆ. ಹೀಗಾಗಿ ಈ ಪ್ರಶಸ್ತಿಯ ಪಾಲು ಕೂಡ ಎಲ್ಲರಿಗೂ ಸಲ್ಲಬೇಕು' ಎಂದರು.
ಈ ಕುರಿತು ಮಾತನಾಡಿದ ನಿರ್ದೇಶಕ ಬಡಿಗೇರ ದೇವೇಂದ್ರ, "ಚಿತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿರುವುದು ನಿಜಕ್ಕೂ ನಮಗೆ ಹೆಮ್ಮೆಯ ಸಂಗತಿಯೇ. ಅದು ಡಬಲ್ ಧಮಾಕಾ. ಈ ಚಿತ್ರದ ಮೇಲೆ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದೇವೆ. ಪ್ರಶಸ್ತಿಗಳ ಜೊತೆಗೆ ಜನ ಮನ್ನಣೆಯೂ ಸಿಕ್ಕರೆ ನಮ್ಮೆಲರ ಶ್ರಮ ಸಾರ್ಥಕ" ಎಂದರು.
ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲೂ 'ಚಾಲೆಂಜಿಂಗ್ ಸ್ಟಾರ್' ಹವಾ!
"ಈ ಚಿತ್ರವನ್ನ ಸಾಮಾಜಿಕ ಹೊಣೆಗಾರಿಕೆಯ ದೃಷ್ಟಿಯಿಂದ ನಿರ್ಮಾಣ ಮಾಡಿದ್ದೇವೆ. ಇಂದಿನ ಸಾಮಾಜಿಕ ಸನ್ನಿವೇಶದಲ್ಲಿ ರುದ್ರಿ ಚಿತ್ರ ಹೆಚ್ಚು ಪ್ರಸ್ತುತತೆಯನ್ನ ಹೊಂದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಸಿನಿಮಾವನ್ನು ಗುರುತಿಸಿ ಪ್ರಶಸ್ತಿ ನೀಡಿದ್ದು, ನಮ್ಮ ಭರವಸೆಯನ್ನ ಹೆಚ್ಚಿಸಿದೆ. ಸದ್ಯದಲ್ಲೇ ಚಿತ್ರ ಬಿಡುಗಡೆ ಮಾಡುವ ಯೋಚನೆಯಿದೆ. ಪ್ರೇಕ್ಷಕರಿಗೆ ಖಂಡಿತಾ ಈ ಚಿತ್ರ ಇಷ್ಟವಾಗುತ್ತೆ ಎಂಬ ವಿಶ್ವಾಸವಿದೆ" ಎಂದಿದ್ದಾರೆ ಚಿತ್ರದ ನಿರ್ಮಾಪಕ ಸಿ.ಆರ್. ಮಂಜುನಾಥ.
'ರುದ್ರಿ' ಫಸ್ಟ್ ಲುಕ್ ಅನಾವರಣಗೊಳಿಸಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್
ನಟಿ ಪಾವನಾಗೌಡ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ರುದ್ರಿ ಚಿತ್ರಕ್ಕೆ ಸಾಧು ಕೋಕಿಲ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿ.ಆರ್. ಮಂಜುನಾಥ ನಿರ್ಮಾಣ ಮಾಡಿದ್ದು, ಬಡಿಗೇರ ದೇವೇಂದ್ರ ಅವರ ನಿರ್ದೇಶನವಿದೆ. ದಿಟ್ಟ ಹೆಣ್ಣು ಸಮಾಜ ಘಾತುಕ ಶಕ್ತಿಗಳನ್ನ ಹೇಗೆ ಮಟ್ಟ ಹಾಕುತ್ತಾಳೆ ಎಂಬುದನ್ನ ಚಿತ್ರದಲ್ಲಿ ಬಿಂಬಿಸಲಾಗಿದೆ. ಹೆಣ್ಣು ತನಗೆ ಅನ್ಯಾಯವಾದಾಗ ಅದನ್ನು ಸಹಿಸಿಕೊಳ್ಳದೆ ಅದಕ್ಕೆ ಪ್ರತಿರೋಧಿಸುವ, ಅಗತ್ಯ ಬಿದ್ದರೆ ಪ್ರತೀಕಾರ ತೆಗೆದುಕೊಳ್ಳುವುದು ಚಿತ್ರದ ಕಥಾವಸ್ತು. ರಂಗಭೂಮಿಯ ಅನೇಕ ಪ್ರತಿಭಾವಂತ ನಟರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಈ ಕುರಿತು ಮಾತನಾಡಿದ ನಿರ್ದೇಶಕ ಬಡಿಗೇರ ದೇವೇಂದ್ರ, "ಚಿತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿರುವುದು ನಿಜಕ್ಕೂ ನಮಗೆ ಹೆಮ್ಮೆಯ ಸಂಗತಿಯೇ. ಅದು ಡಬಲ್ ಧಮಾಕಾ. ಈ ಚಿತ್ರದ ಮೇಲೆ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದೇವೆ. ಪ್ರಶಸ್ತಿಗಳ ಜೊತೆಗೆ ಜನ ಮನ್ನಣೆಯೂ ಸಿಕ್ಕರೆ ನಮ್ಮೆಲರ ಶ್ರಮ ಸಾರ್ಥಕ" ಎಂದರು.
ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲೂ 'ಚಾಲೆಂಜಿಂಗ್ ಸ್ಟಾರ್' ಹವಾ!
"ಈ ಚಿತ್ರವನ್ನ ಸಾಮಾಜಿಕ ಹೊಣೆಗಾರಿಕೆಯ ದೃಷ್ಟಿಯಿಂದ ನಿರ್ಮಾಣ ಮಾಡಿದ್ದೇವೆ. ಇಂದಿನ ಸಾಮಾಜಿಕ ಸನ್ನಿವೇಶದಲ್ಲಿ ರುದ್ರಿ ಚಿತ್ರ ಹೆಚ್ಚು ಪ್ರಸ್ತುತತೆಯನ್ನ ಹೊಂದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಸಿನಿಮಾವನ್ನು ಗುರುತಿಸಿ ಪ್ರಶಸ್ತಿ ನೀಡಿದ್ದು, ನಮ್ಮ ಭರವಸೆಯನ್ನ ಹೆಚ್ಚಿಸಿದೆ. ಸದ್ಯದಲ್ಲೇ ಚಿತ್ರ ಬಿಡುಗಡೆ ಮಾಡುವ ಯೋಚನೆಯಿದೆ. ಪ್ರೇಕ್ಷಕರಿಗೆ ಖಂಡಿತಾ ಈ ಚಿತ್ರ ಇಷ್ಟವಾಗುತ್ತೆ ಎಂಬ ವಿಶ್ವಾಸವಿದೆ" ಎಂದಿದ್ದಾರೆ ಚಿತ್ರದ ನಿರ್ಮಾಪಕ ಸಿ.ಆರ್. ಮಂಜುನಾಥ.
'ರುದ್ರಿ' ಫಸ್ಟ್ ಲುಕ್ ಅನಾವರಣಗೊಳಿಸಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್
ನಟಿ ಪಾವನಾಗೌಡ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ರುದ್ರಿ ಚಿತ್ರಕ್ಕೆ ಸಾಧು ಕೋಕಿಲ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿ.ಆರ್. ಮಂಜುನಾಥ ನಿರ್ಮಾಣ ಮಾಡಿದ್ದು, ಬಡಿಗೇರ ದೇವೇಂದ್ರ ಅವರ ನಿರ್ದೇಶನವಿದೆ. ದಿಟ್ಟ ಹೆಣ್ಣು ಸಮಾಜ ಘಾತುಕ ಶಕ್ತಿಗಳನ್ನ ಹೇಗೆ ಮಟ್ಟ ಹಾಕುತ್ತಾಳೆ ಎಂಬುದನ್ನ ಚಿತ್ರದಲ್ಲಿ ಬಿಂಬಿಸಲಾಗಿದೆ. ಹೆಣ್ಣು ತನಗೆ ಅನ್ಯಾಯವಾದಾಗ ಅದನ್ನು ಸಹಿಸಿಕೊಳ್ಳದೆ ಅದಕ್ಕೆ ಪ್ರತಿರೋಧಿಸುವ, ಅಗತ್ಯ ಬಿದ್ದರೆ ಪ್ರತೀಕಾರ ತೆಗೆದುಕೊಳ್ಳುವುದು ಚಿತ್ರದ ಕಥಾವಸ್ತು. ರಂಗಭೂಮಿಯ ಅನೇಕ ಪ್ರತಿಭಾವಂತ ನಟರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.