ನಟಿ ರಾಗಿಣಿ ದ್ವಿವೇದಿ ಕಳೆದ ವರ್ಷ ಡ್ರಗ್ ಪ್ರಕರಣದಲ್ಲಿ ಜೈಲು ಸೇರಿದ್ದರು. ಇದೀಗ ಜಾಮೀನು ಪಡೆದುಕೊಂಡು ಹೊರಬಂದಿದ್ದಾರೆ. ಜೊತೆಗೆ 2021 ಅನ್ನು ತುಂಬ ಫ್ರೆಶ್ ಆಗಿ ಶುರು ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಆ ಸಿನಿಮಾದ ಕುರಿತು ಮತ್ತು ಮುಂದಿನ ಸಿನಿಮಾ ಪ್ರಯಾಣ, ಜೈಲಿನಲ್ಲಿ ಕಳೆದ ದಿನಗಳ ಬಗ್ಗೆ ಮಾತನಾಡಿದ್ದಾರೆ. ಇಲ್ಲಿದೆ ಆ ಬಗ್ಗೆ ವಿವರವಾದ ಮಾಹಿತಿ.
'ಕರ್ವ 3' ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿದೆ?
ತುಂಬಾ ವಿಶೇಷವಾಗಿದೆ. ಮಹಿಳಾ ಪ್ರಧಾನ ಚಿತ್ರ. ಇದುವರೆಗೆ ನಾನು ಇಂಥದ್ದೊಂದು ಪಾತ್ರದಲ್ಲಿ ನಟಿಸಿಲ್ಲ. ಈ ಪಾತ್ರದೊಂದಿಗೆ ಉಳಿದೆಲ್ಲ ಪಾತ್ರಗಳೂ ಕನೆಕ್ಟ್ ಆಗುತ್ತವೆ. ಕಥೆ ಈ ಪಾತ್ರದ ಮೇಲೇ ತುಂಬಾ ಡಿಪೆಂಡ್ ಆಗಿದೆ. ತುಂಬಾ ಶೇಡ್ಸ್ ಇರುವ ಚಾಲೆಂಜಿಂಗ್ ಪಾತ್ರ. ನನಗೆ ಬೇರೆ ಬೇರೆ ರೀತಿಯ ಪಾತ್ರಗಳಲ್ಲಿ ನಟಿಸಲು ಆಸೆ. ಚಾಲೆಂಜಿಂಗ್ ಆಗಿರುವ, ಪ್ರಯೋಗಾತ್ಮಕ ಚಿತ್ರಗಳಲ್ಲಿ ನಟಿಸುವಾಸೆ. ಈಗ ಸೆನ್ಸಿಬಲ್ ಆಗಿರುವ ಸಿನಿಮಾ ಸಿಕ್ಕಿದೆ. ಕೃಷ್ಣ ಚೈತನ್ಯ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ವಿಶಾಲ್ ಶೇಖರ್ ನಿರ್ದೇಶನ ಮಾಡುತ್ತಿದ್ದಾರೆ. ಕೃಷ್ಣ ಚೈತನ್ಯ ನಿರ್ಮಾಣದ 'ದಿಯಾ' ಸಕ್ಸಸ್ ಆಗಿದೆ. ಸೆನ್ಸಿಟಿವ್ ವಸ್ತುವಿರುವ ಸಿನಿಮಾಗಳನ್ನು ಅವರು ಮಾಡುತ್ತಾ ಬಂದಿದ್ದಾರೆ.
ಕಳೆದ 4 ತಿಂಗಳ ಕಾಲ ನಿಮ್ಮನ್ನು ನೀವು ಹೇಗೆ ನಿಭಾಯಿಸಿಕೊಂಡಿರಿ?
ಬಹಳ ಕಷ್ಟ ಇತ್ತು. ನನ್ನನ್ನು ನಾನು ಸ್ಟ್ರಾಂಗ್ ಅಗಿಟ್ಟುಕೊಳ್ಳಲೇಬೇಕಿತ್ತು. ತಾಳ್ಮೆ ಹೆಚ್ಚಿಸಿಕೊಳ್ಳಬೇಕಿತ್ತು. ಆದರೆ, ನನಗೆ ವಿಶ್ವಾಸವಿತ್ತು. ನಾನು ತಪ್ಪು ಮಾಡಿಲ್ಲ. ತಪ್ಪು ಮಾಡದೇ ಇರುವಾಗ ಯಾವ ಕಾರಣಕ್ಕೂ ಕುಗ್ಗಬೇಕಾಗಿರಲಿಲ್ಲ. ಇದರಿಂದ ಹೊರಬರುತ್ತೇನೆ ಎಂಬ ನಂಬಿಕೆಯಲ್ಲಿದ್ದೆ. ಅಲ್ಲಿನ ಲೈಬ್ರರಿಯಿಂದ ಪುಸ್ತಕಗಳನ್ನು ತರಿಸಿಕೊಂಡು ಓದುತ್ತಿದ್ದೆ. ಭಗವದ್ಗೀತೆ ನನ್ನ ಮೆಚ್ಚಿನ ಪುಸ್ತಕ. ಮತ್ತೆ ಮತ್ತೆ ಓದಿದೆ. ಪ್ರತಿಯೊಬ್ಬರೂ ಇದನ್ನು ಓದಬೇಕು. ಜೀವನಪಾಠ ಕಲಿಯಲು, ಶಕ್ತಿ ಪಡೆಯಲು ಇದು ಸಹಾಯಕ. ಇದು ನನಗೆ ತುಂಬಾ ಇಷ್ಟವಾಯಿತು. ಪ್ರತಿದಿನ ಮೆಡಿಟೇಷನ್, ಮಂತ್ರೋಚ್ಛಾರ, ಯೋಗ ಮಾಡುತ್ತಿದ್ದೆ. ಮೊದಲೂ ಮಾಡುತ್ತಾ ಬಂದಿದ್ದೆ. ಈಗ ಜಾಸ್ತಿ ಮಾಡಿದ್ದೇನೆ.
ಜೈಲಿನಲ್ಲಿ ನೀವು ಕಂಡ ಪ್ರಪಂಚ ಹೇಗಿತ್ತು?
ಪ್ರತಿಯೊಬ್ಬರದೂ ಒಂದೊಂದು ಕಥೆ ಇರುತ್ತೆ. ಪರಿಸ್ಥಿತಿ ಇರುತ್ತೆ. ನಾನು ಎಲ್ಲರಿಂದ ಏನಾದರೂ ಒಳ್ಳೆಯದು ಕಲಿಯಲು ಇರುತ್ತೆ ಎಂದು ನಂಬಿದ್ದೇನೆ. ಅದನ್ನು ಮಾತ್ರ ನೋಡುತ್ತೇನೆ. ಇದಕ್ಕಿಂತ ಹೆಚ್ಚೇನೂ ಹೇಳಲಾರೆ. ಈಗ ನನ್ನ ಕುಟುಂಬದವರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಬಗ್ಗೆ ಬಹಳ ಕಾಳಜಿ ವಹಿಸಿದ್ದೇನೆ. ಅಪ್ಪ ಅಮ್ಮ ಕಷ್ಟ ಪಡುವುದನ್ನು, ನೋವು ಅನುಭವಿಸೋದನ್ನು ನೋಡಲು ಮಕ್ಕಳಿಗೆ ಆಗಲ್ಲ. ನಮ್ಮ ಹಣೆಬರಹದಲ್ಲಿ ಬಂದಿದ್ದು ಇದು ಅಂತ ಅನುಭವಿಸಿಕೊಂಡು ಮುಂದೆ ಹೋಗಬೇಕು. ಅವರಿಗೆ ನನ್ನ ಬಗ್ಗೆ ನಂಬಿಕೆ ಇದೆ. ಅವರು ನನಗೆ ತುಂಬಾ ಶಕ್ತಿ ತುಂಬಿದ್ದಾರೆ.
ನಟಿ ರಾಗಿಣಿ ದ್ವಿವೇದಿ ಮುಖದಲ್ಲಿ ಮತ್ತೆ ಅರಳಿತು ನಗು! 'ತುಪ್ಪದ ಬೆಡಗಿ'ಯ ಮುಂದಿನ ನಡೆ ಏನು?
ನಿಮಗೆದುರಾದ ಕಷ್ಟದ ಬಗ್ಗೆ ಏನನ್ನಿಸುತ್ತಿದೆ?
ಎಲ್ಲರಿಗೂ ಕಷ್ಟ ಬರುತ್ತೆ. ಅದರಲ್ಲೂ2020ರಲ್ಲಿ ಎಲ್ಲರಿಗೂ ಒಂದಲ್ಲಒಂದು ರೀತಿ ಸಂಕಷ್ಟ ಎದುರಾಗಿದೆ. ನಷ್ಟ ಆಗಿದೆ. ನಮ್ಮನ್ನು ನಾವು ಸ್ಟ್ರಾಂಗ್ ಆಗಿಟ್ಟುಕೊಳ್ಳಲೇಬೇಕು. ನೀವು ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ನೆಗೆಟಿವ್ ಆಗಿ ಮಾತಾಡೋರು ಇದ್ದಾರೆ. ಅಂಥವರನ್ನು ಪಕ್ಕಕ್ಕಿಟ್ಟು ಮುಂದೆ ಹೋಗಬೇಕು. ನಾನು ಮೊದಲಿನಿಂದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದೇನೆ. ಮುಂದೆಯೂ ಮಾಡುತ್ತೇನೆ. ನೆಗೆಟಿವ್ ಎನರ್ಜಿ ಇರುವವರು ನಮಗೆ ಬೇಡ. ಪಾಸಿಟಿವಿಟಿ ಹರಡಬೇಕು ಎಂದುಕೊಂಡಿರುವವಳು ನಾನು. ನನ್ನ ಸ್ವಭಾವ ಎಂದೂ ಬದಲಾಗೋಲ್ಲ. ರಾಗಿಣಿ ಯಾರು ಎನ್ನುವುದು ಮೊದಲಿನಿಂದ ನೋಡಿದ್ದಾರೆ. ಈಗ ಅದನ್ನು ಮತ್ತೆ ಒಪ್ಪಿಸುವ ಅಗತ್ಯ ನನಗೆ ಇಲ್ಲ. ಉತ್ತರ ಕರ್ನಾಟಕದಿಂದ ನನ್ನ ಅಭಿಮಾನಿಗಳು 'ಹಸ್ಕಿ' ಎಂಬ ನಾಯಿ ಕಳಿಸುತ್ತಿದ್ದಾರೆ. ಅವರ ಪ್ರೀತಿಗೆ ನಾನು ಋಣಿ.
ನಟಿ ರಾಗಿಣಿ ಮನೆ ಮೇಲೆ ಸಿಸಿಬಿ ದಾಳಿ! ತುಪ್ಪದ ಬೆಡಗಿಯನ್ನು ವಶಕ್ಕೆ ಪಡೆದ ಅಧಿಕಾರಿಗಳು
ಈ ವರ್ಷ ನಿಮ್ಮ ಗುರಿ?
2021ರಲ್ಲಿಸಾಮಾಜಿಕ ಸಂದೇಶ ಇರುವ, ಸೆನ್ಸಿಬಲ್ ಕಥೆ ಇರುವ ಸಿನಿಮಾಗಳಲ್ಲಿ ನಟಿಸಬೇಕು ಎಂದುಕೊಂಡಿದ್ದೇನೆ. 'ಕರ್ವ 3' ಚಿತ್ರವನ್ನು ಪ್ರತಿಯೊಬ್ಬರೂ ನೋಡಬೇಕು. ಕಥೆ ಹಾಗಿದೆ. ಡಿಫರೆಂಟ್ ರೋಲ್ಗಳೂ ಇವೆ. ಈಗಾಗಲೇ 7-8 ಕಥೆಗಳನ್ನು ಕೇಳಿದ್ದೇನೆ. ಈ ವರ್ಷ ಒಳ್ಳೆಯದಾಗಿರುತ್ತೆ ಎಂಬ ನಂಬಿಕೆ ನನಗಿದೆ. ಪಾಸಿಟಿವಿಟಿ ಇದೆ. ನನ್ನ ಕುಟುಂಬದಿಂದ ನನಗೆ ಇದು ಸಿಕ್ಕಿದೆ. ಸ್ಟ್ರಾಂಗ್ ಇರುವವರಿಗೆ ದೇವರು ಪರೀಕ್ಷೆ ಮಾಡುವುದು ಅಂತ ಹೇಳ್ತಾರೆ. ಪರೀಕ್ಷೆಗೊಳಪಟ್ಟಾಗ ಇನ್ನಷ್ಟು ಸ್ಟ್ರಾಂಗ್ ಆಗ್ತೀವಿ.
ಇದೇ ಮೊದಲ ಬಾರಿಗೆ ಹಾರರ್ ಸಿನಿಮಾ ಸಹವಾಸ ಮಾಡುತ್ತಿರುವ ನಟಿ ಮೇಘನಾ ಗಾಂವ್ಕರ್!