ಆ್ಯಪ್ನಗರ

ದುರಹಂಕಾರದಿಂದ ಕೂಡಿದ, ಸೂಟುಬೂಟಿನ ನರೇಂದ್ರ ಮೋದಿ ಸರ್ಕಾರ ಎಂದ ನಟಿ ರಮ್ಯಾ ಊಟ ಬಿಟ್ರು!

ನಟಿ / ರಾಜಕಾರಣದಲ್ಲಿ ಸಕ್ರಿಯವಾಗಿದ್ದ ರಮ್ಯಾ ಅವರು ಇಂದು ರೈತರ ದಿನದ ಪ್ರಯುಕ್ತ ವಿಶೇಷವಾಗಿ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ. ಅಷ್ಟೇ ಅಲ್ಲದೆ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Vijaya Karnataka Web 23 Dec 2020, 1:47 pm
ಇಂದು ದೇಶದಾದ್ಯಂತ 'ಕಿಸಾನ್ ದಿವಸ್' ಆಚರಿಸಲಾಗುತ್ತಿದೆ. ಇನ್ನೊಂದು ಕಡೆ ಕೆಲವು ದಿನಗಳಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಸಮಾಜದಲ್ಲಿ ನಡೆಯುವ ಘಟನೆಗಳ ಬಗ್ಗೆ ಸದಾ ಅಭಿಪ್ರಾಯ ಹೊರಹಾಕುವ ನಟಿ ರಮ್ಯಾ ಅವರು ಇಂದು ಒಂದು ಹೊತ್ತಿನ ಊಟ ತ್ಯಾಗ ಮಾಡಲಿದ್ದಾರಂತೆ. ಅದರ ಜೊತೆ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ವಿರೋಧ ಮಾಡಿದ್ದಾರೆ.
Vijaya Karnataka Web actress ramya divya spandana speaks about farmers day narendra modi and farmers bill protest
ದುರಹಂಕಾರದಿಂದ ಕೂಡಿದ, ಸೂಟುಬೂಟಿನ ನರೇಂದ್ರ ಮೋದಿ ಸರ್ಕಾರ ಎಂದ ನಟಿ ರಮ್ಯಾ ಊಟ ಬಿಟ್ರು!


ಸೂಟುಬೂಟಿನ ಸರ್ಕಾರವಿದು!

'ಇಂದು ರೈತರ ದಿನ. ರೈತರಿಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ನಾನು ಊಟ ಮಾಡುತ್ತಿಲ್ಲ. ಅಂದರೆ ಮಧ್ಯಾಹ್ನದ ಊಟ ಮಾಡುತ್ತಿಲ್ಲ. 2020 ಆಗಸ್ಟ್ 9ರಿಂದ ರೈತರ ಕಾನೂನುಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆ ಕಾನೂನು ರದ್ದು ಮಾಡುವಲ್ಲಿ ನರೇಂದ್ರ ಮೋದಿ ಸರ್ಕಾರ ದುರಂಹಕಾರ, ನಿರ್ದಾಕ್ಷಿಣ್ಯದಿಂದ ಕೂಡಿದೆ. ಕಾರ್ಪೋರೇಟ್ ಸ್ನೇಹಿತರಿಗೆ ಮಾತ್ರ ಅದು ಉಪಕಾರಿಯಾಗಿ ನಡೆದುಕೊಳ್ಳುತ್ತದೆ. ಸೂಟ್‌ಬೂಟ್ ಸರ್ಕಾರದಂತೆ ನರೇಂದ್ರ ಮೋದಿ ಸರ್ಕಾರ ಕೆಲಸ ಮಾಡುತ್ತದೆ' ಎಂದು ನಟಿ ರಮ್ಯಾ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿಸ್ ಹಾಕಿಕೊಂಡಿದ್ದಾರೆ.

ಇಂದು ಅಡುಗೆ ಮಾಡಬೇಡಿ: ರಾಕೇಶ್ ಟಿಕಾಯತ್

'ಭಾರತೀಯ ಕಿಸಾನ್ ಟಿಕಾಯತ್ ಅಧ್ಯಕ್ಷ ರಾಕೇಶ್ ಟಿಕಾಯತ್ ಅವರು ದೇಶದಾದ್ಯಂತ ಉತ್ತರ ಪ್ರದೇಶದಲ್ಲಿ ಒಂದು ದಿನ ಊಟ ಬಿಡುವಂತೆ ಹೇಳಿದ್ದಾರೆ. ರಾಷ್ಟ್ರಕ್ಕೆ ಊಟ ನೀಡುವವರು ಸರ್ಕಾರದ ಈ ನೀತಿಯಿಂದಾಗಿ ಹಸಿವಿನಿಂದ ಇದ್ದಾರೆ. ರೈತರ ದಿನ ಮನೆಯಲ್ಲಿ ಅಡುಗೆ ಮಾಡಬೇಡಿ, ರೈತರನ್ನು ಬೆಂಬಲಿಸಿ ಅಂತ ಹೇಳಿದ್ದಾರೆ' ಎಂದು ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.
Also Read-'ಸ್ಯಾಂಡಲ್‌ವುಡ್ ಕ್ವೀನ್' ನಟಿ ರಮ್ಯಾಗೆ ಹುಟ್ಟುಹಬ್ಬದ ಸಂಭ್ರಮ: ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆ!

ಎಲ್ಲೆಡೆ ಪ್ರತಿಭಟನೆ!

ಕೇಂದ್ರ ಸರ್ಕಾರ ರೂಪಿಸಿರುವ ಮೂರು ಹೊಸ ಕೃಷಿ ಕಾಯಿದೆಗಳು ರದ್ದಾಗಬೇಕು ಎಂದು ರೈತ ಸಂಘಟನೆಗಳು ಪ್ರತಿಭಟನೆ ಮಾಡುತ್ತಿವೆ. ಪಂಜಾಬ್‌ ಮತ್ತು ಉತ್ತರ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ದಿಲ್ಲಿಯ ಗಡಿಗಳಲ್ಲಿ 26 ದಿನಗಳಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ತಲಾ 11 ಜನರ ತಂಡಗಳಲ್ಲಿ ಸಿಂಘು, ಟಿಕ್ರಿ, ಘಾಜಿಪುರ, ಪಂಜಾಬ್‌, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ ಮೊದಲಾದ ರಾಜ್ಯಗಳಲ್ಲಿಯೂ ಮೊದಲಾದ ಕಡೆ ರೈತರು ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌