ಆ್ಯಪ್ನಗರ

'ನನ್ನ ಔರಕ್ಕೂ ಫ್ಲೈಟ್ ಟಿಕೆಟ್ ಕೊಡಿಸಿ' ಎಂದು ಬೇಡಿಕೆಯಿಟ್ರಾ ರಶ್ಮಿಕಾ ಮಂದಣ್ಣ? ಪ್ರತಿಕ್ರಿಯೆ ನೀಡಿದ ಕೊಡಗಿನ ಸುಂದರಿ

ಇಂದು ಭಾರತೀಯ ಚಿತ್ರರಂಗದ ಬಹು ಬೇಡಿಕೆಯ ನಟಿ ರಶ್ಮಿಕಾ ಮಂದಣ್ಣ ಅವರು ವಿಮಾನದಲ್ಲಿ ಪ್ರಯಾಣ ಮಾಡಲು ನನ್ನ ಜೊತೆಗೆ ನನ್ನ ಮುದ್ದಿನ ನಾಯಿ ಔರಗೂ ಕೂಡ ಟಿಕೆಟ್ ಕೊಡಿ ಎಂದು ಹೇಳಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ರಶ್ಮಿಕಾ ಪ್ರತಿಕ್ರಿಯೆ ನೀಡುವುದರ ಜೊತೆಗೆ ಸಿಕ್ಕಾಪಟ್ಟೆ ನಕ್ಕಿದ್ದಾರೆ. ಈ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

Authored byಪದ್ಮಶ್ರೀ ಭಟ್ | THE TIMES OF INDIA NEWS SERVICE 25 Jun 2022, 9:48 am

ಹೈಲೈಟ್ಸ್‌:


  • ರಶ್ಮಿಕಾ ಮಂದಣ್ಣ ನಟನೆಯ ಮುದ್ದಿನ ನಾಯಿ ಔರ
  • ವಿಮಾನದಲ್ಲಿ ಪ್ರಯಾಣ ಮಾಡಲು ಔರಗೂ ಟಿಕೆಟ್ ಕೊಡಿ ಎಂದು ಬೇಡಿಕೆಯಿಟ್ರಾ ರಶ್ಮಿಕಾ?
  • ಗಾಸಿಪ್‌ಗಳಿಗೆ ಪ್ರತಿಕ್ರಿಯೆ ನೀಡಿದ ನಟಿ ರಶ್ಮಿಕಾ ಮಂದಣ್ಣ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web rashmika mandanna
ರಕ್ಷಿತ್ ಶೆಟ್ಟಿ ( Rakshit Shetty ) ನಟನೆಯ '777 ಚಾರ್ಲಿ' ಸಿನಿಮಾವನ್ನು ನೋಡಲು ದಾವಣಗೆರೆಯಲ್ಲಿ ಪ್ರೇಕ್ಷಕರು ಅವರ ಮನೆಯ ಶ್ವಾನವನ್ನು ಥಿಯೇಟರ್‌ಗೆ ಕರೆದುಕೊಂಡು ಬಂದಿದ್ದರು. ಆ ವೇಳೆ ಶ್ವಾನಕ್ಕೆ ಚಿತ್ರಮಂದಿರದೊಳಗೆ ಎಂಟ್ರಿ ನೀಡಿಲ್ಲ ಎಂದು ಅವರು ಆರೋಪ ಮಾಡಿದ್ದರು. ಈ ವಿಚಾರವಾಗಿ ಪರ-ವಿರೋಧ ಚರ್ಚೆಯಾಗಿತ್ತು. 'ಗಂಧದ ಗುಡಿ' ಸಿನಿಮಾ ಮತ್ತೆ ರಿಲೀಸ್ ಆದರೆ ಥಿಯೇಟರ್‌ವೊಳಗೆ ನಾನು ಆನೆಯನ್ನು ಕರೆದುಕೊಂಡು ಬರಬೇಕು ಅಂತಿದ್ದೇನೆ ಎಂದು ಕೆಲವರು ಆಗ ಅಣಕಿಸಿದ್ದರು. ಅಂತೆಯೇ ರಶ್ಮಿಕಾ ಮಂದಣ್ಣ ( Rashmika Mandanna ) ಕೂಡ ವಿಮಾನದಲ್ಲಿ ಪ್ರಯಾಣಿಸಲು ಅವರ ಮುದ್ದಿನ ನಾಯಿ ಔರಗೆ ಟಿಕೆಟ್ ಬೇಕು ಎಂದು ಹೇಳಿದ್ದರಂತೆ.
ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ ಅವರು ಔರಗೆ ವಿಮಾನದಲ್ಲಿ ಪ್ರಯಾಣಿಸಲು ಟಿಕೆಟ್ ಕೊಡಿಸಿ ಎಂದು ನಿರ್ಮಾಪಕರಿಗೆ ಹೇಳಿದ್ದರಂತೆ. ಈ ಕುರಿತು ಒಂದಷ್ಟು ಗಾಸಿಪ್ ಹರಡಿಕೊಂಡಿತ್ತು. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಕೊಡಗಿನ ಬೆಡಗಿ, "ನೀವು ಔರ ನನ್ನ ಜೊತೆ ಟ್ರಾವೆಲ್ ಮಾಡಬೇಕು ಅಂತ ಬಯಸಿದರೂ ಕೂಡ ಔರ ನನ್ನ ಜೊತೆ ಬರೋದಿಲ್ಲ, ಅವಳು ಹೈದರಾಬಾದ್‌ನಲ್ಲಿ ಆರಾಮಾಗಿದ್ದಾಳೆ. ನಿಮ್ಮ ಕಾಳಜಿಗೆ ಧನ್ಯವಾದಗಳು" ಎಂದು ಹೇಳಿದ್ದಾರೆ.

"ದಯವಿಟ್ಟು ಕ್ಷಮಿಸಿ, ನನಗೆ ನಗು ತಡೆದುಕೊಳ್ಳಲಾಗುತ್ತಿಲ್ಲ. ಈ ರೀತಿ ಗಾಸಿಪ್ ಬಂದರೆ ನನಗೆ ಕಳಿಸಿ, ಓಹ್ ದೇವರೆ.." ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

No Entry: ಸಲ್ಮಾನ್ ಖಾನ್ ಸಿನಿಮಾದಲ್ಲಿ ಕನ್ನಡತಿ ನಟನೆ? ಇಬ್ಬರು ದಕ್ಷಿಣ ಭಾರತದ ನಟಿಯರಿಗೆ ಅವಕಾಶ ಕೊಡ್ತಾರಾ ಸಲ್ಲು?

ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ರಶ್ಮಿಕಾ ಆಗಾಗ ಔರ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆಗಾಗ ಅವರು ಔರ ಜೊತೆಗೆ ಆಡುತ್ತಿರುವ ವಿಡಿಯೋಗಳನ್ನು ಕೂಡ ಹಂಚಿಕೊಳ್ಳುತ್ತಿರುತ್ತಾರೆ.

ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ಬ್ಯುಸಿ
ತಮಿಳಿನ ದಳಪತಿ ವಿಜಯ್‌ ( Thalapathy Vijay ) ಜತೆ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದು, ಅದಕ್ಕೆ 'ವಾರಿಸು' ಎಂದು ಹೆಸರಿಟ್ಟಿದ್ದಾರೆ. ಬಾಲಿವುಡ್‌ನಲ್ಲಿ ಅಮಿತಾಭ್‌ ಬಚ್ಚನ್‌ ( Amitabh Bacchan ) ಜತೆಯೂ ನಟಿಸುತ್ತಿದ್ದು, ಅದಕ್ಕೆ 'ಗುಡ್‌ಬೈ' ಎಂದು ಹೆಸರಿಡಲಾಗಿದೆ. ಈ ಚಿತ್ರದ ಶೂಟಿಂಗ್ ಮುಕ್ತಾಯವಾಗಿದೆ. ಹಿಂದಿಯಲ್ಲಿ ಸಿದ್ದಾರ್ಥ್ ಮಲ್ಹೋತ್ರ ( Sidharth Malhotra ) ಜೊತೆಗೆ ‘ಮಿಷನ್‌ ಮಜ್ನು’ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

Rashmika Mandanna: 'ಪುಷ್ಪ 2' ಚಿತ್ರದಲ್ಲಿ ರಶ್ಮಿಕಾ ಮಂದಣ್ಣರ ಶ್ರೀವಲ್ಲಿ ಪಾತ್ರದ ಸುತ್ತ ಹಬ್ಬಿದ್ದ ಗಾಸಿಪ್‌ಗೆ ಪೂರ್ಣ ವಿರಾಮವಿಟ್ಟ ನಿರ್ಮಾಪಕ

ರಣಬೀರ್‌ ಕಪೂರ್‌ ಜತೆ ರಶ್ಮಿಕಾ ಅವರು 'ಆನಿಮಲ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ಮೊದಲ ಸಿನಿಮಾ ಬಿಡುಗಡೆಗೂ ಮೊದಲು ರಶ್ಮಿಕಾ ಅನೇಕ ಸಿನಿಮಾಗಳಿಗೆ ಸಹಿ ಮಾಡಿದ್ದಾರೆ. ‘ಪುಷ್ಪ 2’ ಚಿತ್ರದಲ್ಲಿಯೂ ಅವರು ನಟಿಸುತ್ತಿದ್ದಾರೆ. ದುಲ್ಕರ್‌ ಸಲ್ಮಾನ್‌ ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಅದಕ್ಕೆ 'ಸೀತಾ ರಾಮಂ' ಎಂದು ಹೆಸರಿಡಲಾಗಿದ್ದು, ರಶ್ಮಿಕಾ ಮುಸ್ಲಿಂ ಮಹಿಳೆಯ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅಫ್ರೀನ್‌ ಎಂಬ ಮುಸ್ಲಿಂ ಯುವತಿಯ ಪಾತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಆ ಹಿನ್ನೆಲೆಯ್ಲಲಿ ಹಿಜಾಬ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ರಶ್ಮಿಕಾ ಅವರ ಒಂದು ರಿಲೀಸ್ ಮಾಡಲಾಗಿತ್ತು.
ಲೇಖಕರ ಬಗ್ಗೆ
ಪದ್ಮಶ್ರೀ ಭಟ್
ವಿಜಯ ಕರ್ನಾಟಕ' ವೆಬ್‌ನಲ್ಲಿ ಸಿನಿಮಾ ಪತ್ರಕರ್ತೆಯಾಗಿ 2019ರಿಂದ ಪದ್ಮಶ್ರೀ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯಮಟ್ಟದಲ್ಲಿ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. 'ವಿಜಯ ಕರ್ನಾಟಕ' ವೆಬ್‌ನಲ್ಲಿ ಲೇಖನಗಳನ್ನು ಬರೆಯುವುದರ ಜೊತೆಗೆ ಸೆಲೆಬ್ರಿಟಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಪುಸ್ತಕ ಓದುವುದು, ಪ್ರವಾಸ ಪದ್ಮಶ್ರೀ ಅವರ ಇಷ್ಟದ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌