ಆ್ಯಪ್ನಗರ

'ನನ್ನನ್ನು ಸಹಿಸಿಕೊಂಡಿದ್ದಕ್ಕೆ ಧನ್ಯವಾದಗಳು' ಎಂದು ರಶ್ಮಿಕಾ ಮಂದಣ್ಣ ಹೇಳಿದ್ದು ಯಾರಿಗೆ?

ನಟಿ ರಶ್ಮಿಕಾ ಮಂದಣ್ಣ ಅವರ ಖ್ಯಾತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇಷ್ಟು ದಿನ ಕನ್ನಡ ಮತ್ತು ತೆಲುಗಿನಲ್ಲಿ ಮಿಂಚಿದ ಅವರು ಶೀಘ್ರವೇ ತಮಿಳಿನಲ್ಲಿಯೂ ಧೂಳೆಬ್ಬಿಸಲಿದ್ದಾರೆ. ಈ ನಡುವೆ ವಿಶೇಷ ವ್ಯಕ್ತಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.

Vijaya Karnataka Web 8 Oct 2020, 4:43 pm
ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ ಶೀಘ್ರದಲ್ಲೇ ಕಾಲಿವುಡ್‌ನಲ್ಲಿ ಕಮಾಲ್‌ ಮಾಡಲಿದ್ದಾರೆ. ಅವರ ಚೊಚ್ಚಲ ತಮಿಳು ಸಿನಿಮಾ 'ಸುಲ್ತಾನ್‌' ಬಗ್ಗೆ ಸಿನಿಪ್ರಿಯರಿಗೆ ಸಖತ್‌ ನಿರೀಕ್ಷೆ ಇದೆ. ಈ ಚಿತ್ರತಂಡದಿಂದ ಒಂದು ಖುಷಿಯ ನ್ಯೂಸ್‌ ಹೊರಬಿದ್ದಿದೆ. ಆ ಬಗ್ಗೆ ರಶ್ಮಿಕಾ ಮಾಹಿತಿ ನೀಡಿದ್ದಾರೆ.
Vijaya Karnataka Web ರಶ್ಮಿಕಾ ಮಂದಣ್ಣ


ಕಾರ್ತಿ ಮುಖ್ಯಭೂಮಿಕೆ ನಿಭಾಯಿಸುತ್ತಿರುವ 'ಸುಲ್ತಾನ್‌' ಸಿನಿಮಾದ ಶೂಟಿಂಗ್‌ ಮುಗಿದಿದೆ. ಕೊರೊನಾ ವೈರಸ್‌ ಲಾಕ್‌ಡೌನ್‌ ಕಾರಣದಿಂದಾಗಿ ಇಷ್ಟು ದಿನ ಬ್ರೇಕ್‌ ಪಡೆದುಕೊಂಡಿದ್ದ ಸಿನಿಮಾ ತಂಡ, ಇತ್ತೀಚೆಗೆ ಮತ್ತೆ ಶೂಟಿಂಗ್‌ ಆರಂಭಿಸಿತ್ತು. ಕೊನೇ ಹಂತದ ಚಿತ್ರೀಕರಣವನ್ನು ಮುಗಿಸಿಕೊಂಡು, ಗ್ರೂಪ್‌ ಫೋಟೋದೊಂದಿಗೆ ನಗು ಬೀರಿದೆ 'ಸುಲ್ತಾನ್‌' ಬಳಗ. ಆ ಫೋಟೋವನ್ನು ರಶ್ಮಿಕಾ ಕೂಡ ಹಂಚಿಕೊಂಡಿದ್ದಾರೆ.

'ನಾನು ಕೆಲಸ ಮಾಡಿದ ಒಳ್ಳೆಯ ತಂಡಗಳಲ್ಲಿ ಇದು ಕೂಡ ಒಂದು. ಕಠಿಣ ಲೊಕೇಷನ್‌ಗಳಲ್ಲಿ ಶೂಟಿಂಗ್‌ ಮಾಡಲಾಗುತ್ತಿತ್ತು. ನನಗೆ ಆಗಾಗ ಅನಾರೋಗ್ಯದ ಸಮಸ್ಯೆ ಆಗುತ್ತಿತ್ತು. ಆದರೂ ಈ ಸಿನಿಮಾ ಸೆಟ್‌ನಲ್ಲಿ ನಾನು ಎಂಜಾಯ್‌ ಮಾಡಿದ್ದೇನೆ. ನನ್ನನ್ನು ಸಹಿಸಿಕೊಂಡಿದ್ದಕ್ಕೆ ಧನ್ಯವಾದಗಳು. ಅಪಾರ ಪ್ರೀತಿಯೊಂದಿಗೆ ಇಡೀ ತಂಡಕ್ಕೆ ಶುಭಕೋರುತ್ತೇನೆ. #jaisulthan' ಎಂದು ರಶ್ಮಿಕಾ ಟ್ವೀಟ್‌ ಮಾಡಿದ್ದಾರೆ.

also read: ಸಮುದ್ರ ತೀರದಲ್ಲಿ ವರ್ಕೌಟ್ ಮಾಡಿ ಗಮನಸೆಳೆದ ನಟಿ ರಶ್ಮಿಕಾ ಮಂದಣ್ಣ! ವಿಡಿಯೋ ವೈರಲ್‌!

ಕಾಲಿವುಡ್‌ ನಟ ಕಾರ್ತಿ ಈ ಸಿನಿಮಾ ಮೇಲೆ ವಿಶೇಷ ಒಲವು ಇಟ್ಟುಕೊಂಡಿದ್ದಾರೆ. ಶೂಟಿಂಗ್‌ ಮುಗಿದ ಖುಷಿಗೆ ಅವರು ಕೂಡ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. 'ಶೂಟಿಂಗ್‌ ಮುಗಿಯಿತು. ಮೂರು ವರ್ಷಗಳ ಹಿಂದೆ ಈ ಸಿನಿಮಾದ ಕಥೆ ಕೇಳಿದಾಗಿನಿಂದ ಇಂದಿನವರೆಗೆ ನಮ್ಮನ್ನು ಇದು ಎಕ್ಸೈಟ್‌ ಮಾಡುತ್ತಲೇ ಇದೆ. ಈವರೆಗಿನ ಬಹುದೊಡ್ಡ ಸಿನಿಮಾಗಳಲ್ಲಿ ಇದೂ ಒಂದು. ಕಷ್ಟಪಟ್ಟು ಕೆಲಸ ಮಾಡಿದ ಇಡೀ ತಂಡಕ್ಕೆ ನಾನು ಧನ್ಯವಾದ ಹೇಳುತ್ತೇನೆ' ಎಂದಿದ್ದಾರೆ ಕಾರ್ತಿ.

also read: ನಾನು ನಿಮ್ಮ ಫೇವರಿಟ್ ನಟಿ ಆಗಬೇಕಿಲ್ಲ, ಯಾರ ಬಗ್ಗೆಯೂ ಯೋಚಿಸಲ್ಲ, : ರಶ್ಮಿಕಾ ಮಂದಣ್ಣ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌