ಆ್ಯಪ್ನಗರ

ರಚಿತಾ ರಾಮ್‌ ಬಿಟ್ಟುಹೋದ ಚಿತ್ರಕ್ಕೆ 'ಮಾಸ್ಟರ್‌ಪೀಸ್‌' ಬೆಡಗಿ ಎಂಟ್ರಿ! ಶಾನ್ವಿಗೆ ಈ ಸಿನಿಮಾ ಸಖತ್ ಸ್ಪೆಷಲ್‌!

ಈಚೆಗಷ್ಟೆ ಸೆಟ್ಟೇರಿದ್ದ ದಿನೇಶ್‌ ಬಾಬು ಅವರ 'ಕಸ್ತೂರಿ ಮಹಲ್' ಸಿನಿಮಾದಿಂದ ನಟಿ ರಚಿತಾ ರಾಮ್ ಹೊರನಡೆದಿದ್ದರು. ಇದೀಗ ಆ ಜಾಗಕ್ಕೆ ಬೇರೆ ನಟಿಯ ಎಂಟ್ರಿಯಾಗಿದೆ. ಆ ಕುರಿತು ಮಾಹಿತಿ ಇಲ್ಲಿದೆ.

Vijaya Karnataka Web 26 Sep 2020, 2:07 pm
ದಿನೇಶ್ ಬಾಬು ಅವರ 50ನೇ ಸಿನಿಮಾ ಎಂಬ ಕಾರಣಕ್ಕೆ 'ಕಸ್ತೂರಿ ಮಹಲ್' ಸಿನಿಮಾಕ್ಕೆ ಸಾಕಷ್ಟು ಪ್ರಚಾರ ಸಿಕ್ಕಿತ್ತು. ಅವರು ಕೂಡ ಅಷ್ಟೇ ಅದ್ದೂರಿಯಾಗಿ ಸಿನಿಮಾ ಲಾಂಚ್ ಮಾಡಿದ್ದರು. ರಚಿತಾ ರಾಮ್, ಸ್ಕಂದ ಅಶೋಕ್‌, ಶ್ರುತಿ ಪ್ರಕಾಶ್ ಸೇರಿದಂತೆ ಅನೇಕ ಕಲಾವಿದರು ಈ ಸಿನಿಮಾದ ಭಾಗವಾಗಿದ್ದರು. ಆದರೆ, ಚಿತ್ರೀಕರಣ ಆರಂಭವಾಗುವುದಕ್ಕೂ ಮೊದಲೇ ರಚಿತಾ ಸಿನಿಮಾ ಹೊರನಡೆದಿದ್ದರು. ಇದು ಚಿತ್ರತಂಡಕ್ಕೆ ಮತ್ತು ಸಿನಿಪ್ರಿಯರಿಗೆ ದೊಡ್ಡ ಶಾಕ್ ನೀಡಿತ್ತು. ಸದ್ಯ ರಚಿತಾ ಬಿಟ್ಟು ಹೋದ ಪಾತ್ರಕ್ಕೆ ಹೊಸ ನಟಿಯ ಆಯ್ಕೆಯಾಗಿದ್ದು, ಆ ಪಾತ್ರವನ್ನು ಶಾನ್ವಿ ಶ್ರೀವಾಸ್ತವ ಮಾಡುತ್ತಿದ್ದಾರೆ.
Vijaya Karnataka Web ರಚಿತಾ ರಾಮ್‌ ಬಿಟ್ಟುಹೋದ ಪಾತ್ರಕ್ಕೆ ಮಾಸ್ಟರ್‌ಪೀಸ್‌ ಬೆಡಗಿ ಎಂಟ್ರಿ! ಶಾನ್ವಿಗೆ ಈ ಸಿನಿಮಾ ಸಖತ್ ಸ್ಪೆಷಲ್‌!


ಅಧಿಕೃತ ಮಾಹಿತಿ ನೀಡಿದ ಶಾನ್ವಿ

ಈ ಕುರಿತು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಶಾನ್ವಿ, 'ನನ್ನ ಮುಂದಿನ ಕನ್ನಡ ಚಿತ್ರ ಪ್ರಖ್ಯಾತ ನಿರ್ದೇಶಕರಾದ ದಿನೇಶ್ ಬಾಬು ಅವರ 'ಕಸ್ತೂರಿ ಮಹಲ್' ಎಂದು ನಿಮ್ಮೆಲ್ಲರಿಗೂ ತಿಳಿಸಲು ನನಗೆ ಸಂತೋಷವಾಗುತ್ತದೆ. ನನ್ನ ಕನ್ನಡದ ಮೊದಲ ಚಿತ್ರದ ನಂತರ ಮತ್ತೊಮ್ಮೆ ಹಾರರ್ ಚಿತ್ರ ಮಾಡುತ್ತಿದ್ದು, ಇನ್ನೂ ಅನೇಕ ಒಳ್ಳೆಯ ಅವಕಾಶದ ನಿರೀಕ್ಷೆಯಲ್ಲಿದ್ದೇನೆ. ನಿಮ್ಮೆಲ್ಲರ ಬೆಂಬಲ, ಪ್ರೋತ್ಸಾಹಕ್ಕೆ ಚಿರಋಣಿ' ಎಂದು ಕನ್ನಡದಲ್ಲಿ ಬರೆದುಕೊಂಡಿದ್ದಾರೆ. ಅಂದಹಾಗೆ, 2014ರಲ್ಲಿ ಚಿರಂಜೀವಿ ಸರ್ಜಾ ನಟಿಸಿದ್ದ 'ಚಂದ್ರಲೇಖಾ' ಸಿನಿಮಾದ ಮೂಲಕ ಶಾನ್ವಿ ಕನ್ನಡಕ್ಕೆ ಎಂಟ್ರಿ ನೀಡಿದ್ದರು. ಆ ಸಿನಿಮಾ ಹಾರರ್‌ ಮಾದರಿಯಾಗಿದ್ದಾಗಿತ್ತು. ಈಗ ದಿನೇಶ್ ಬಾಬು ಮಾಡುತ್ತಿರುವ ಈ ಸಿನಿಮಾ ಅದೇ ಮಾದರಿಯಲ್ಲಿದೆ. ಆದ್ದರಿಂದ ಇದು ಶಾನ್ವಿಗೆ ಸ್ಪೆಷಲ್ ಸಿನಿಮಾವಾಗಿದೆ.

ಕಾಲ್‌ಶೀಟ್‌ ಸಮಸ್ಯೆಯಿಂದ ಹೊರನಡೆದಿದ್ದ ರಚಿತಾ
ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಬೇಡಿಕೆ ಇರುವ ನಟಿ ಎಂದರೆ, ಅದು ರಚಿತಾ ರಾಮ್‌. ಯಾಕೆಂದರೆ, ಅವರ ಕೈಯಲ್ಲಿ ಈಗ ಸಿಕ್ಕಾಪಟ್ಟೆ ಸಿನಿಮಾಗಳಿವೆ. ಹಾಗಾಗಿ, 'ಕಸ್ತೂರಿ ಮಹಲ್‌'ಗೆ ಅವರಿಂದ ಡೇಟ್ಸ್ ಹೊಂದಿಸಿಕೊಳ್ಳಲು ಸಾಧ್ಯವಾಗಲಿಲ್ಲವಂತೆ. ಆ ಕಾರಣಕ್ಕೇ ಅವರು ಸಿನಿಮಾದಿಂದ ಹೊರನಡೆಯಬೇಕಾಯಿತು ಎಂದು ಮಾಹಿತಿ ಕೇಳಿಬಂದಿತ್ತು. ಅ.5ರಿಂದ ಶೂಟಿಂಗ್ ಆರಂಭಿಸುವುದಕ್ಕೆ ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿತ್ತು. ಅಷ್ಟರಲ್ಲಿ ನಾಯಕಿಯ ಆಯ್ಕೆ ಅಂತಿಮಗೊಂಡಿದೆ. ಅಂದಹಾಗೆ, ಶಾನ್ವಿಗೂ ಕನ್ನಡದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇದೆ. ಕಳೆದ ವರ್ಷ ಅವರ 'ಗೀತಾ' ಹಾಗೂ 'ಅವನೇ ಶ್ರೀಮನ್ನಾರಾಯಣ' ಸಿನಿಮಾಗಳು ತೆರೆಗೆ ಬಂದಿದ್ದವು. ಈ ವರ್ಷ ಉಪೇಂದ್ರ ಜೊತೆಗೆ 'ತ್ರಿಶೂಲಂ' ಸಿನಿಮಾ ಮಾಡುತ್ತಿದ್ದಾರೆ.

ನಟಿ ರಚಿತಾ ರಾಮ್‌ ಹೊಸ ಸಿನಿಮಾಕ್ಕಾಗಿ ಅಣ್ಣಾವ್ರ 'ಕಸ್ತೂರಿ ನಿವಾಸ' ಟೈಟಲ್‌ ಮರುಬಳಕೆ

ಕಸ್ತೂರಿ ಮಹಲ್ ಟೈಟಲ್‌ ವಿವಾದ
ರಚಿತಾ ರಾಮ್‌ ಸಿನಿಮಾದಿಂದ ಹೊರನಡೆಯುವುದಕ್ಕೂ ಮುನ್ನವೇ ಟೈಟಲ್‌ ವಿವಾದದಿಂದ ಸದ್ದು ಮಾಡಿತ್ತು 'ಕಸ್ತೂರಿ ಮಹಲ್‌'. ಆರಂಭದಲ್ಲಿ ಈ ಸಿನಿಮಾಕ್ಕೆ 'ಕಸ್ತೂರಿ ನಿವಾಸ' ಅಂತ ಟೈಟಲ್ ಇಡಲಾಗಿತ್ತು. ಆದರೆ, ಡಾ. ರಾಜ್‌ಕುಮಾರ್‌ ಅವರ ಈ ಮೆಗಾ ಹಿಟ್ ಸಿನಿಮಾದ ಟೈಟಲ್‌ ಅನ್ನು ಮರುಬಳಕೆ ಮಾಡಿದ್ದರಿಂದ ಅಣ್ಣಾವ್ರ ಅಭಿಮಾನಿಗಳು ಗರಂ ಆಗಿದ್ದರು. ಕೊನೆಗೆ ಚಿತ್ರತಂಡ ಸಿನಿಮಾದ ಶೀರ್ಷಿಕೆಯನ್ನು 'ಕಸ್ತೂರಿ ಮಹಲ್' ಅಂತ ಬದಲಾಯಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌