ಆ್ಯಪ್ನಗರ

ಈ ಆರ್ಮಿ ಆಫೀಸರ್ ಮಗಳು ಕಾಡು ಕಾಯಲು ಹೊರಟಿದ್ದೇಕೆ?

ನಟಿ ಶ್ರದ್ಧಾ ಶ್ರೀನಾಥ್ ಅವರ ತಂದೆ ಗಡಿಯಲ್ಲಿ ದೇಶ ಕಾಯುವ ಆರ್ಮಿ ಆಫೀಸರ್ ಆಗಿದ್ದವರು. ಇದೀಗ ಅವರ ಪುತ್ರಿ ಕಾಡು ಕಾಯುವ ಕೆಲಸಕ್ಕೆ ಹೊರಟಿದ್ದಾರೆ. ಅರೇ, ನಟನೆ ಬಿಟ್ಟು ಇದೇನು ಮಾಡೋಕೆ ಹೊರಟಿದ್ದಾರೆ ಶ್ರದ್ಧಾ?

Vijaya Karnataka Web 14 Oct 2019, 7:01 pm
ನಟಿ ಶ್ರದ್ಧಾ ಶ್ರೀನಾಥ್‌ ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಭಾಷೆಗಳ ಸಿನಿಮಾಗಳಲ್ಲಿ ಸಕ್ರೀಯರಾಗಿದ್ದಾರೆ. ತೆಲುಗಿನಲ್ಲಿ 'ಜೆರ್ಸಿ'ಯಂತಹ ಹಿಟ್ ಸಿನಿಮಾ ನೀಡಿದ್ದಾರೆ ಈ ವರ್ಷ. ಬಾಲಿವುಡ್‌ಗೂ ಹೋಗಿ ಬಂದಿದ್ದಾರೆ. ತಮಿಳಿನಲ್ಲಿ ಅವರು ನಟಿಸಿದ್ದ 'ನೇರ್ಕೋಂಡ ಪಾರವೈ' ಚಿತ್ರ ಸೂಪರ್ ಹಿಟ್‌ ಆಗಿದೆ,. ಇಷ್ಟೆಲ್ಲ ಬಿಜಿ ಇರುವಾಗಲೇ ಅವರು ಕಾಡು ಕಾಯಲು ಹೊರಟಿದ್ದಾರೆ ಅನ್ನೋ ನ್ಯೂಸ್ ಕೇಳಿಬಂದಿದೆ.
Vijaya Karnataka Web Shradda srinath

ಕಾಲಿವುಡ್‌ನಿಂದ ಯೂ ಟರ್ನ್ ತೆಗೆದುಕೊಂಡು 'ರುದ್ರ ಪ್ರಯಾಗ'ಕ್ಕೆ ಬಂದ ಶ್ರದ್ಧಾ ಶ್ರೀನಾಥ್
ಶ್ರದ್ಧಾ ತಂದೆ ಆರ್ಮಿ ಆಫೀಸರ್ ಆಗಿದ್ದವರು. ಅವರಿಗೆ ದೇಶದ ಗಡಿ ಕಾದಿರುವ ಅನುಭವ ಇದೆ. ಈಗ ಅವರು ಮಗಳು ಶ್ರದ್ಧಾ ಅರಣ್ಯ ರಕ್ಷಣೆಗೆ ಮುಂದಾಗಿದ್ದಾರೆ. ಅಷ್ಟಕ್ಕೂ ಇದು ಸಾಧ್ಯವಾಗುತ್ತಿರುವುದು ನಿಜಜೀವನದಲ್ಲಿ ಅಲ್ಲ. ಬದಲಾಗಿ, ಸಿನಿಮಾದಲ್ಲಿ! ಹೌದು, ರಿಷಬ್ ಶೆಟ್ಟಿ ನಿರ್ದೇಶನ ಮಾಡಲಿರುವ ಮುಂದಿನ 'ರುದ್ರ ಪ್ರಯಾಗ' ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್‌ಗೆ ಅರಣ್ಯ ಅಧಿಕಾರಿ ಪಾತ್ರ. ಕಾಡಿನ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಆರ್‌ಎಫ್‌ಓ ಆಗಿ ಶ್ರದ್ಧಾ ಕಾಣಿಸಿಕೊಳ್ಳಲಿದ್ದಾರಂತೆ.
ರಿಷಬ್ ಶೆಟ್ಟಿ ಯಾಕೆ 'ಅಂಟಗೋನಿ ಶೆಟ್ಟಿ'ಯಾಗಿ ಬದಲಾಗಿದ್ದು ಗೊತ್ತೆ?
'ಕಿರಿಕ್ ಪಾರ್ಟಿ', 'ಸ.ಹಿ.ಪ್ರಾ. ಶಾಲೆ, ಕಾಸರಗೋಡು' ಥರದ ಹಿಟ್ ಸಿನಿಮಾಗಳನ್ನು ನೀಡಿರುವ ರಿಷಬ್ ಶೆಟ್ಟಿ, ಈಗ 'ರುದ್ರಪ್ರಯಾಗ'ದ ಮೂಲಕ ಮತ್ತೊಂದು ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಡಿಸೆಂಬರ್‌ನಲ್ಲಿ ಶೂಟಿಂಗ್ ಆರಂಭಗೊಳ್ಳಲಿದ್ದು, ಶ್ರದ್ಧಾ ಅರಣ್ಯಾಧಿಕಾರಿ ಪಾತ್ರ ಮಾಡಿದರೆ, ಹಿರಿಯ ನಟ ಅನಂತ ನಾಗ್ ಮಹತ್ವದ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ.
ದರ್ಶನ್ 'ಒಡೆಯ' ಶೂಟಿಂಗ್ ಸ್ಪಾಟ್‌ಗೆ ಬಂದ ಶ್ರದ್ಧಾ ಶ್ರೀನಾಥ್ ಮಾಡಿದ್ದೇನು!
ಶ್ರದ್ಧಾ ಪಾತ್ರದ ಬಗ್ಗೆ ಮಾಹಿತಿ ನೀಡುವ ರಿಷಬ್, 'ಶ್ರದ್ಧಾಗೆ ಚಿತ್ರದಲ್ಲಿ ಕಾಡಿನ ಬಗ್ಗೆ ಅತೀವ ಕಾಳಜಿ ಹೊಂದಿರುವ ದಕ್ಷ ಮಹಿಳಾ ಅಧಿಕಾರಿ ಪಾತ್ರವಿದೆ. ತುಂಬ ಪ್ರಾಮುಖ್ಯತೆ ಇರುವತಹ ಪಾತ್ರ ಅವರದ್ದು. ಇಂತಹ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು. ಅರಣ್ಯಕ್ಕೂ ಈ ಪಾತ್ರಕ್ಕೂ ತುಂಬ ಸಂಬಂಧವಿದೆ' ಎನ್ನುತ್ತಾರೆ. ಈ ಚಿತ್ರಕ್ಕೆ ಜಯಣ್ಣ ಮತ್ತು ಭೋಗೇಂದ್ರ ಬಂಡವಾಳ ಹೂಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌