ಆ್ಯಪ್ನಗರ

ಹೋಳಿ ನೆಪದಲ್ಲಿ ಎಲ್ಲೆಲ್ಲೋ ಮುಟ್ಟಬೇಡಿ! ಕಿಡಿಗೇಡಿಗಳಿಗೆ ನಟಿಯರ ವಾರ್ನಿಂಗ್‌!

ಕಿರುತೆರೆಯಲ್ಲಿ ಫೇಮಸ್‌ ಆಗಿರುವ ನಟಿ ನೇಹಾ ಗೌಡ ಹಾಗೂ ಚಂದನವನದಲ್ಲಿ ಮಿಂಚುತ್ತಿರುವ ಅವರ ಸಹೋದರಿ ಸೋನು ಗೌಡ ಸಾಮಾಜಿಕ ಜಾಲತಾಣದ ಮೂಲಕ ಅಂಥವರಿಗೆ ವಾರ್ನ್‌ ಮಾಡಿದ್ದಾರೆ. ಅದು ಕೂಡ ತುಂಬ ಡಿಫರೆಂಟ್‌ ಆಗಿ ಎಂಬುದು ವಿಶೇಷ! ಈ ಎಚ್ಚರಿಕೆ ಸಂದೇಶ ನೀಡಲು ಈ ಸಹೋದರಿಯರು ಫೋಟೋಶೂಟ್‌ ಮೊರೆ ಹೋಗಿದ್ದಾರೆ.

Vijaya Karnataka Web 10 Mar 2020, 6:35 pm
ದೇಶಾದ್ಯಂತ ಹೋಳಿ ಹಬ್ಬ ಆಚರಿಸಲಾಗುತ್ತಿದೆ. ಚಿಕ್ಕ ಮಕ್ಕಳಿಂದ ಹಿಡಿದು, ವೃದ್ಧರವರೆಗೆ ಎಲ್ಲರೂ ಇದರಲ್ಲಿ ಪಾಲ್ಗೊಳ್ಳುತ್ತಾರೆ. ಯಾವ ಭೇದವೂ ಇಲ್ಲದೇ ಸಂಭ್ರಮದಿಂದ ಬಣ್ಣ ಎರಚಿ ಜನರು ಖುಷಿ ಪಡುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಹೋಳಿ ಸಂಭ್ರಮ ತುಸು ಹೆಚ್ಚಾಗಿಯೇ ಇರುತ್ತದೆ. ಮಹಿಳೆಯರು ಕೂಡ ಈ ವಿಚಾರದಲ್ಲಿ ಹಿಂದೇಟು ಹಾಕುವುದಿಲ್ಲ. ಭಾರಿ ಉತ್ಸಾಹದೊಂದಿಗೆ ಓಕುಳಿಯಲ್ಲಿ ಮಿಂದೇಳುತ್ತಾರೆ. ಸೆಲೆಬ್ರಿಟಿಗಳು ಸಹ ಹೋಳಿ ಆಡಿ ಸಂಭ್ರಮಿಸುತ್ತಾರೆ. ಆದರೆ ಎಲ್ಲ ಸಂದರ್ಭದಲ್ಲಿಯೂ ವಾತಾವರಣ ಚೆನ್ನಾಗಿ ಇರುವುದಿಲ್ಲ. ಈ ಹಬ್ಬವನ್ನೇ ನೆಪ ಮಾಡಿಕೊಂಡು ಹೆಣ್ಣುಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸುವ ಕಿಡಿಗೇಡಿಗಳು ಕೂಡ ಇದ್ದಾರೆ! ಅಂಥ ಪ್ರಕರಣಗಳು ಈ ಹಿಂದೆ ಹಲವು ಬಾರಿ ನಡೆದಿವೆ. ಅಂಥವರಿಗೆಲ್ಲ ಸ್ಯಾಂಡಲ್‌ವುಡ್‌ ನಟಿಯರು ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಕಿರುತೆರೆಯಲ್ಲಿ ಫೇಮಸ್‌ ಆಗಿರುವ ನಟಿ ನೇಹಾ ಗೌಡ ಹಾಗೂ ಚಂದನವನದಲ್ಲಿ ಮಿಂಚುತ್ತಿರುವ ಅವರ ಸಹೋದರಿ ಸೋನು ಗೌಡ ಸಾಮಾಜಿಕ ಜಾಲತಾಣದ ಮೂಲಕ ಅಂಥವರಿಗೆ ವಾರ್ನ್‌ ಮಾಡಿದ್ದಾರೆ. ಅದು ಕೂಡ ತುಂಬ ಡಿಫರೆಂಟ್‌ ಆಗಿ ಎಂಬುದು ವಿಶೇಷ! ಈ ಎಚ್ಚರಿಕೆ ಸಂದೇಶ ನೀಡಲು ಈ ಸಹೋದರಿಯರು ಫೋಟೋಶೂಟ್‌ ಮೊರೆ ಹೋಗಿದ್ದಾರೆ.
Vijaya Karnataka Web actress sonu gowda and neha gowda holi awareness photoshoot
ಹೋಳಿ ನೆಪದಲ್ಲಿ ಎಲ್ಲೆಲ್ಲೋ ಮುಟ್ಟಬೇಡಿ! ಕಿಡಿಗೇಡಿಗಳಿಗೆ ನಟಿಯರ ವಾರ್ನಿಂಗ್‌!


​ಸೋನು ಗೌಡ ಹೇಳಿದ ಖಡಕ್‌ ಮಾತು

'ಇಂತಿ ನಿನ್ನ ಪ್ರೀತಿಯ', 'ಗುಳ್ಟು' ಮುಂತಾದ ಸಿನಿಮಾಗಳ ಮೂಲಕ ಜನಪ್ರಿಯತೆ ಪಡೆದ ನಟಿ ಸೋನು ಗೌಡ, ಈಗಲೂ ಬೇಡಿಕೆ ಉಳಿಸಿಕೊಂಡಿದ್ದಾರೆ. ರಂಗಭೂಮಿ ಹಿನ್ನೆಲೆಯಿಂದ ಬಂದ ಈ ಕಲಾವಿದೆ ಕೇವಲ ನಟನೆ ಮಾತ್ರವಲ್ಲದೆ, ಹಲವು ವಿಚಾರಗಳಲ್ಲಿ ಸಕ್ರಿಯವಾಗಿದ್ದಾರೆ. ಸಮಾಜದಲ್ಲಿ ನಡೆಯುವ ಕೆಲವು ಸಂಗತಿಗಳ ಬಗ್ಗೆ ಅವರು ಆಗಾಗ ಪ್ರತಿಕ್ರಿಯಿಸುತ್ತಾರೆ. ತಮ್ಮ ಅಭಿಪ್ರಾಯವನ್ನು ಧೈರ್ಯವಾಗಿ ವ್ಯಕ್ತ ಪಡಿಸುತ್ತಾರೆ. ಈಗ ಹೋಳಿ ಹಬ್ಬದ ಇನ್ನೊಂದು ಮುಖದ ಬಗ್ಗೆ ಅವರು ಮಾತನಾಡಿದ್ದಾರೆ. 'ಎಲ್ಲರೂ ಸೇರಿ ಆಚರಿಸುವ ಈ ಹಬ್ಬ ಒಗ್ಗಟ್ಟಿನ ಸಂಕೇತ. ಆದರೆ ಇದನ್ನು ಕೆಲವೊಮ್ಮೆ ಕಿಡಿಗೇಡಿಗಳು ದುರುಪಯೋಗ ಮಾಡಿಕೊಳ್ಳುತ್ತಾರೆ. ಒಪ್ಪಿಗೆ ಇಲ್ಲದೆ ಹೀಗೆ ಮುಟ್ಟುವುದು ಕೇವಲ ಚರ್ಮಕ್ಕೆ ಸಂಬಂಧಿಸಿದ್ದಲ್ಲ. ಅದು ಮನಸ್ಸಿನ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಈ ಬಾರಿ ಹೋಳಿ ಹಬ್ಬವನ್ನು ಒಳ್ಳೆಯ ಉದ್ದೇಶದಿಂದ ಆಚರಿಸಿ, ಎಲ್ಲರ ಹಕ್ಕನ್ನು ಗೌರವಿಸಿ' ಎಂದು ಸೋನು ಗೌಡ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

'ಯುವರತ್ನ' ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ನಟಿ ಸೋನು ಗೌಡ ಹೇಳಿದ್ದೇನು?

​ಅಕ್ಕನಿಗೆ ಸಾಥ್‌ ನೀಡಿದ ನೇಹಾ ಗೌಡ

ಸೋನು ಗೌಡ ರೀತಿಯೇ ಅವರ ತಂಗಿ ನೇಹಾ ಗೌಡ ಸಹ ಬರೆದುಕೊಂಡಿದ್ದಾರೆ. 'ಲಕ್ಷ್ಮೀ ಬಾರಮ್ಮ', 'ಮೂರು ಗಂಟು' ಮುಂತಾದ ಧಾರಾವಾಹಿಗಳಿಂದ ಮನೆ ಮಾತಾಗಿರುವ ಅವರು ಅಕ್ಕನ ಮಾತುಗಳಿಗೆ ಧ್ವನಿ ಗೂಡಿಸಿದ್ದಾರೆ. ಅಚ್ಚರಿ ಎಂದರೆ ಇಬ್ಬರೂ ಈ ವಿಚಾರವನ್ನು ಹೇಳಲು ಆಯ್ಕೆ ಮಾಡಿಕೊಂಡಿರುವುದು ಫೋಟೋಶೂಟ್‌ ಮಾರ್ಗವನ್ನು. ಹೋಳಿ ಥೀಮ್‌ನಲ್ಲಿ ಫೋಟೋಗಳು ಮೂಡಿಬಂದಿವೆ. ಅದರ ಮೂಲಕ ಈ ಸಂದೇಶ ರವಾನಿಸಿದ್ದಾರೆ. ಹತ್ತಾರು ಬಣ್ಣಗಳ ನಡುವೆ ಇರುವ ಯುವತಿಯ ಮುಖ, ಅವಳನ್ನು ಸ್ಪರ್ಶಿಸುತ್ತಿರುವ ಹಲವು ಕೈಗಳು, ಕೆಟ್ಟ ಸ್ಪರ್ಶಕ್ಕೆ ನಲುಗಿರುವ ಯುವತಿಯ ಮುಖದಲ್ಲಿಆತಂಕ ಮತ್ತು ಕಣ್ಣೀರು ಈ ಫೋಟೋದಲ್ಲಿ ಹೈಲೈಟ್‌ ಆಗಿವೆ. ಈ ಪ್ರಯತ್ನಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತ ಆಗಿದೆ.

'ಲಕ್ಷ್ಮೀ ಬಾರಮ್ಮ' ಧಾರಾವಾಹಿಯ ಗೊಂಬೆ ನೇಹಾ ಗೌಡ ಕೊಟ್ರು ಗುಡ್ ನ್ಯೂಸ್ !

​ಸಹೋದರಿಯರ ಪ್ರಯತ್ನಕ್ಕೆ ಮೆಚ್ಚುಗೆ

ಈ ಫೋಟೋಶೂಟ್‌ಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿರುವುದಕ್ಕೆ ಅಭಿಮಾನಿಗಳು ಧನ್ಯವಾದ ತಿಳಿಸಿದ್ದಾರೆ. 'ಸಾವಿರ ಪದಗಳಿಗಿಂತಲೂ ಈ ಫೋಟೋಗಳು ಹೆಚ್ಚು ಸಮರ್ಥವಾಗಿ ಮಾತನಾಡುತ್ತಿವೆ. ಈ ಕಾನ್ಸೆಪ್ಟ್‌ ತುಂಬ ಚೆನ್ನಾಗಿ ಇದೆ' ಎಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ. 'ಫೇಸ್‌ಬುಕ್‌ನಲ್ಲಿಯೂ ಕೆಲವು ವಿಡಿಯೋ ಹರಿದಾಡುತ್ತಿವೆ. ಜಸ್ಟ್‌ ಫಾರ್‌ ಫನ್‌ ಎಂಬ ನೆಪದಲ್ಲಿ ಯುವತಿಯರಿಗೆ ಕಿರುಕುಳ ನೀಡಲಾಗುತ್ತಿದೆ. ಬೇರೆಯವರಿಗೆ ಇದು ಫನ್‌ ಎನಿಸಬಹುದು. ಆದರೆ ಕಿರುಕುಳಕ್ಕೆ ಒಳಗಾದವರಿಗೆ ಇದು ಹಿಂಸೆ ನೀಡುತ್ತದೆ' ಎಂಬ ಅಭಿಪ್ರಾಯವನ್ನೂ ಜನರು ಕಾಮೆಂಟ್‌ ಮೂಲಕ ಹಂಚಿಕೊಂಡಿದ್ದಾರೆ. ಇದರ ಜೊತೆಗೆ 'ನಾವು ನಿಮ್ಮನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇವೆ. ದಯವಿಟ್ಟು ಮತ್ತೆ ಸೀರಿಯಲ್‌ಗೆ ಬನ್ನಿ' ಎಂದು ನೇಹಾ ಗೌಡ ಅಭಿಮಾನಿಗಳು ತಮ್ಮ ಮನದ ಆಸೆ ವ್ಯಕ್ತಪಡಿಸಿದ್ದಾರೆ.

ಹೋಳಿ ಹಬ್ಬದ ಸಂದರ್ಭದಲ್ಲಿ ಕಣ್ಣುಗಳ ರಕ್ಷಣೆಯ ಬಗ್ಗೆ ಇರಲಿ ಎಚ್ಚರ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌