ಆ್ಯಪ್ನಗರ

ಒಂಬತ್ತನೇ ದಿಕ್ಕಿನಲ್ಲಿ ವೃದ್ಧರಾದ ಯೋಗಿ ಮತ್ತು ಅದಿತಿ ಪ್ರಭುದೇವ

ದಯಾಳ್‌ ಪದ್ಮನಾಭನ್‌ ನಿರ್ದೇಶನದ 'ಒಂಬತ್ತನೇ ದಿಕ್ಕು' ಸಿನಿಮಾದಲ್ಲಿ ಅದಿತಿ ಪ್ರಭುದೇವ ಮತ್ತು ಯೋಗಿ ಡಿಫರೆಂಟ್‌ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೆ ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು ರಿಲೀಸ್ ಡೇಟ್ ಆದಷ್ಟು ಬೇಗ ಅನೌನ್ಸ್ ಮಾಡುತ್ತೇವೆ ಎಂದಿದ್ದಾರೆ ನಿರ್ದೇಶಕರು.

Harish Basavarajaiah | Vijaya Karnataka 7 Apr 2020, 11:07 pm
ಸ್ಯಾಂಡಲ್‌ವುಡ್‌ನ ಸದ್ಯದ ಬಿಝಿ ನಟಿ ಅದಿತಿ ಪ್ರಭುದೇವ ಮತ್ತು ನಟ ಲೂಸ್‌ ಮಾದ ಯೋಗಿಗೆ ಈಗ ವಯಸ್ಸಾಗಿದೆ. ಸದಾ ಯಂಗ್‌ ಲುಕ್‌ನಲ್ಲಿ ಮಿಂಚುವ ಇವರು ಈಗ ವೃದ್ಧರಾಗಿದ್ದಾರೆ. ಹೌದು. ಇದೆಲ್ಲಾ ಸಾಧ್ಯವಾಗಿದ್ದು ದಯಾಳ್‌ ಪದ್ಮನಾಭನ್‌ ನಿರ್ದೇಶನದ 'ಒಂಬತ್ತನೇ ದಿಕ್ಕು' ಸಿನಿಮಾದಲ್ಲಿ. ಇದರಲ್ಲಿ ಇವರಿಬ್ಬರೂ ವಯೋವೃದ್ಧರ ಪಾತ್ರಗಳಲ್ಲಿನಟಿಸಿದ್ದಾರೆ.
Vijaya Karnataka Web ಒಂಬತ್ತನೇ ದಿಕ್ಕು


ಇದರ ದೃಶ್ಯವೊಂದರಲ್ಲಿ ಇವರಿಗೆ ಮಕ್ಕಳು, ಮೊಮ್ಮಕ್ಕಳು ಕೂಡ ಇರಲಿದ್ದಾರಂತೆ. ಅವರ ಈ ಓಲ್ಡ್‌ ಲುಕ್‌ನ ಫೋಟೋಗಳು ಆ ಚಿತ್ರದ ಕುರಿತು ಕುತೂಹಲ ಮೂಡಿಸಿವೆ. ಈ ಬಗ್ಗೆ ಮಾತನಾಡಿರುವ ನಿರ್ದೇಶಕ ದಯಾಳ್‌ ಪದ್ಮನಾಭನ್‌ 'ಈ ಚಿತ್ರದ ಲವ್‌ ಎಪಿಸೋಡ್‌ನಲ್ಲಿ ಬರುವ ದೃಶ್ಯಗಳಿವು. ನಾವೆಲ್ಲರೂ ಎಂಜಾಯ್‌ ಮಾಡಿಕೊಂಡು ಶೂಟ್‌ ಮಾಡಿದೆವು. ಯೋಗಿ ಮತ್ತು ಅದಿತಿ ಅಂತೂ ತಾವು ವಯೋವೃದ್ಧರ ಮೇಕಪ್‌ನಲ್ಲಿ ಹೇಗೆ ಕಾಣುತ್ತೇವೆ ಎಂದು ಬಹಳ ಕುತೂಹಲದಿಂದ ಮೇಕಪ್‌ ಮಾಡಿಸಿಕೊಂಡರು. ಪ್ರೇಕ್ಷಕರು ಕೂಡಾ ಈ ಎಪಿಸೋಡ್‌ ಅನ್ನು ಎಂಜಾಯ್‌ ಮಾಡುತ್ತಾರೆ' ಎಂದಿದ್ದಾರೆ.

'ಈ ದೃಶ್ಯಗಳನ್ನು ಹೆಚ್ಚು ಬ್ಲೂಮ್ಯಾಟ್‌ ಹಾಕಿ ಚಿತ್ರೀಕರಣ ಮಾಡಿದ್ದೇನೆ. ಸಾಮಾನ್ಯವಾಗಿ ನಾಯಕ ನಾಯಕಿಯರು ವಯಸ್ಸಾದ ಪಾತ್ರಗಳು ಎಂದಾಗ ಕೊಂಚ ಹಿಂದೆ ಸರಿಯುತ್ತಾರೆ. ಆದರೆ ಇವರಿಬ್ಬರೂ ಹೇಳಿದ ತಕ್ಷಣ ಒಪ್ಪಿ ನಟಿಸಿದ್ರು. ಇಡೀ ಸಿನಿಮಾ ಶೂಟಿಂಗ್‌ ಕಂಪ್ಲೀಟ್‌ ಆದ ಮೇಲೆ ಕೊನೆಯಲ್ಲಿ ಇದನ್ನು ಶೂಟ್‌ ಮಾಡಿದೆವು. ಸದ್ಯಕ್ಕೆ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ. ಅದೆಲ್ಲ ಮುಗಿದ ಮೇಲೆ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡುತ್ತೇವೆ' ಎಂದು ಹೇಳಿದ್ದಾರೆ ದಯಾಳ್‌.
ನಿಖಿಲ್ ಕುಮಾರಸ್ವಾಮಿ ಮುಂದಿನ ಸಿನಿಮಾದ ಸ್ಪೆಷಲ್ ಏನು ಗೊತ್ತಾ?

ತಮ್ಮ ವಯೋವೃದ್ಧೆಯ ಲುಕ್‌ ಬಗ್ಗೆ ಹೇಳಿರುವ ಅದಿತಿ ಪ್ರಭುದೇವ 'ಈ ದೃಶ್ಯದ ಶೂಟಿಂಗ್‌ ಅನ್ನು ಎಂಜಾಯ್‌ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ನಾವು ಹೇಗೆ ಕಾಣುತ್ತೇವೆ ಎಂಬುದು ಈಗಲೇ ನಮಗೆ ತಿಳಿದುಕೊಳ್ಳಲು ಈ ದೃಶ್ಯ ಸಹಕಾರಿಯಾಗಿತ್ತು. ನಾನಂತೂ ಮೇಕಪ್‌ ಮುಗಿದ ಮೇಲೆ ಮೂರ್ನಾಲ್ಕು ಬಾರಿಯಾದರೂ ಕನ್ನಡಿ ನೋಡಿಕೊಂಡಿದ್ದೇನೆ. ಇದೊಂಥರ ಹೊಸ ಅನುಭವ' ಎಂದಿದ್ದಾರೆ.
ಸಾಲು ಸಾಲು ಅವಕಾಶಗಳನ್ನು ಬಾಚಿಕೊಳ್ಳುತ್ತಿರುವ ಅದಿತಿಸಾಲು ಸಾಲು ಅವಕಾಶಗಳನ್ನು ಬಾಚಿಕೊಳ್ಳುತ್ತಿರುವ ಅದಿತಿ
ಒಂಬತ್ತನೆ ದಿಕ್ಕು ಸಿನಿಮಾದಲ್ಲಿಬರುವ ಈ ವಿಶೇಷ ದೃಶ್ಯದಲ್ಲಿಅದಿತಿ ಪ್ರಭುದೇವ ಮತ್ತು ಯೋಗಿ ವಯೋವೃದ್ಧರ ಲುಕ್‌ನಲ್ಲಿಬಹಳ ಚೆನ್ನಾಗಿ ಕಾಣುತ್ತಿದ್ದರು.
-ದಯಾಳ್‌ ಪದ್ಮನಾಭನ್‌, ನಿರ್ದೇಶಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌