ಆ್ಯಪ್ನಗರ

'ಕೃಷ್ಣನ್ ಲವ್ ಸ್ಟೋರಿ' ಸಿನಿಮಾ ಶೂಟಿಂಗ್‌ನಲ್ಲಿ ರಾಧಿಕಾ ಪಂಡಿತ್‌ಗೆ ಮರೆಯಲಾಗದ ಕಹಿ ಘಟನೆ ನಡೆದಿತ್ತು!

'ಕೃಷ್ಣನ್ ಲವ್ ಸ್ಟೋರಿ' ಸಿನಿಮಾ ಶೂಟಿಂಗ್ ವೇಳೆ ನಟಿ ರಾಧಿಕಾ ಪಂಡಿತ್ ಪ್ರಾಣಕ್ಕೆ ಅಪಾಯವಾಗುವ ಪರಿಸ್ಥಿತಿ ಬಂದಿತ್ತು. ಏನದು? ಏನಾಯ್ತು?

Vijaya Karnataka Web 3 Aug 2020, 3:02 pm
ಸಿನಿಮಾದಲ್ಲಿ ರೊಮ್ಯಾನ್ಸ್, ಕಾಮಿಡಿ, ಡಾನ್ಸ್, ಸಂಗೀತ ಎಲ್ಲವೂ ಇರುತ್ತದೆ. ಆದರೆ ಇದರಲ್ಲಿ ಸಾಹಸ ಮಾಡೋದು ಅಷ್ಟು ಸುಲಭವಲ್ಲ. ಒಮ್ಮೊಮ್ಮೆ ಜೀವದ ಹಂಗು ತೊರೆದು ನಟಿಸಬೇಕಾಗುತ್ತದೆ. ಇಂದು ಭಾರತೀಯ ಸಿನಿಮಾ ಇತಿಹಾಸದಲ್ಲಿ ಇಂತಹ ಸನ್ನಿವೇಶ ಮಾಡುವಾಗ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕನ್ನಡ ಚಿತ್ರರಂಗ ನಟ ಉದಯ್ ಮತ್ತು ಅನಿಲ್ 'ಮಾಸ್ತಿಗುಡಿ' ಸಿನಿಮಾ ಚಿತ್ರೀಕರಣದ ವೇಳೆ ದುರಂತ ಅಂತ್ಯ ಕಂಡಿದ್ದರು. ನಟಿ ರಾಧಿಕಾ ಪಂಡಿತ್ ಅವರು 'ಕೃಷ್ಣನ್ ಲವ್ ಸ್ಟೋರಿ' ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ಅಜಯ್ ರಾವ್ ನಾಯಕ. ಈ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಮರೆಯಲಾಗದ ಕಹಿ ಘಟನೆಯೊಂದು ನಡೆದಿತ್ತು.
Vijaya Karnataka Web ajay rao and radhika pandit krishnan love story movie climax shooting was horrible
'ಕೃಷ್ಣನ್ ಲವ್ ಸ್ಟೋರಿ' ಸಿನಿಮಾ ಶೂಟಿಂಗ್‌ನಲ್ಲಿ ರಾಧಿಕಾ ಪಂಡಿತ್‌ಗೆ ಮರೆಯಲಾಗದ ಕಹಿ ಘಟನೆ ನಡೆದಿತ್ತು!


'ಕೃಷ್ಣನ್ ಲವ್ ಸ್ಟೋರಿ' ಸಿನಿಮಾ 2010ರಲ್ಲಿ ತೆರೆಕಂಡಿತ್ತು. ಶಶಾಂಕ್ ಈ ಚಿತ್ರದ ಕಥೆ-ಚಿತ್ರಕತೇ ಬರೆದು ನಿರ್ದೇಶನ ಮಾಡಿದ್ದರು. ಉಮಾಶ್ರೀ, ಅಚ್ಯುತ್‌ಕುಮಾರ್, ಶರಣ್, ಪಿ ಎನ್ ಸತ್ಯ, ಪವನ್ ಬೆನಕ, ಪದ್ಮಜಾ ರಾವ್, ಯೋಗೇಶ್, ನೀನಾಸಂ ಅಶ್ವತ್ಥ್, ಲಕ್ಷ್ಮೀ ಹೆಗಡೆ, ಯೋಗೇಶ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. 2018ರಲ್ಲಿ ಬಂಗಾಳಿ ಭಾಷೆಯಲ್ಲಿ ಈ ಚಿತ್ರವನ್ನು ಮಾಡಲಾಗಿತ್ತು. ಸೋಹಂ ಚಕ್ರವರ್ತಿ ಅಲ್ಲಿ ಈ ಸಿನಿಮಾದ ನಾಯಕ ಆಗಿದ್ದರು.

ಶಿವನಸಮುದ್ರದ ಭರಚುಕ್ಕಿಯಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿತ್ತು!

ರಾಧಿಕಾ ಪಂಡಿತ್ ಅವರಿಗೆ 'ಕೃಷ್ಣನ್ ಲವ್ ಸ್ಟೋರಿ' ಸಿನಿಮಾದಲ್ಲಿ ಮಾನಸಿಕ, ದೈಹಿಕವಾಗಿ ಸುಸ್ತಾಗಿತ್ತು. ಯಾಕೆಂದರೆ ಈ ಸಿನಿಮಾದಲ್ಲಿ ಅವರ ಕ್ಯಾರೆಕ್ಟರ್ ಹಾಗಿತ್ತು. ಈ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಆ ಸಿನಿಮಾದಲ್ಲಿ ತೆಪ್ಪದ ಮೂಲಕ ಫಾಲ್ಸ್‌ನಿಂದ ಕೆಳಗಡೆ ಬೀಳಬೇಕಿತ್ತು. ರಾಧಿಕಾ ಪಂಡಿತ್ ತೆಪ್ಪ ಓಡಿಸೋದನ್ನು ಕಲಿಯಬೇಕಿತ್ತು. ಹೀಗಾಗಿ ಅವರು ಮೂರು ನಾಲ್ಕು ದಿನಗಳ ಕಾಲ ಅವರು ತೆಪ್ಪ ಓಡಿಸೋದನ್ನು ಕಲಿತರು. ಈ ಚಿತ್ರದ ನಿರ್ದೇಶಕ ತೆಪ್ಪ ನಡೆಸೋದನ್ನು ಕಲಿಬೇಕು ಎಂದು ಹೇಳಿದ್ದರು. ಹೇಗೆ ತೆಪ್ಪದ ಕೋಲು ಹಿಡಿಯಬೇಕು ಅನ್ನೋದನ್ನೆಲ್ಲ ಅವರು ಕಲಿತರು. ಶಿವನಸಮುದ್ರದ ಭರಚುಕ್ಕಿಯಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಆಗ ಕರೆಂಟ್ ತೀವ್ರತೆ ಕೂಡ ಜಾಸ್ತಿ ಇತ್ತು.

Also Read-ಅಂದು ಅಮ್ಮ ರಾಧಿಕಾ ಪಂಡಿತ್ ತಪ್ಪು ಮಾಡಿದ ಹಾಗೆ ಮಾಡ್ತಿಲ್ಲವಂತೆ ಮಗಳು ಆಯ್ರಾ ಯಶ್!

5 ಜನ ರಾಧಿಕಾರನ್ನು ಕಾಪಾಡಲು ನೀರಿಗೆ ಇಳಿದಿದ್ದರು!

ತೆಪ್ಪ ನಡೆಸುತ್ತ ರಾಧಿಕಾ ಹೋದರು. ತೆಪ್ಪದ ಒಳಗಡೆ ತೂತು ಇತ್ತೋ ಅಥವಾ ಬೇರೆ ಯಾವ ಕಾರಣದಿಂದಲೋ ತೆಪ್ಪದ ಒಳಗಡೆ ನೀರು ಬಂದು ತೆಪ್ಪ ಭಾರ ಆಗಿ ಅದು ಉಲ್ಟಾ ಆಯ್ತು. ರಾಧಿಕಾ ಬಚಾವ್ ಮಾಡಿ ಎಂದು ಕೂಗುತ್ತಿದ್ದರು. ರಾಧಿಕಾ ತೆಪ್ಪ ಓಡಿಸೋದನ್ನು ಕಲಿತಿದ್ದು ನಿಂ ನೀರಿನಲ್ಲಿ. ಆದರೆ ಹರಿಯುವ ನೀರಲ್ಲಿ ರಾಧಿಕಾ ಪಂಡಿತ್ ತೆಪ್ಪ ಓಡಿಸಿದ್ದರು. ಹರಿಯುವ ನೀರಿನ ತೀವ್ರತೆ ತುಂಬ ಇತ್ತು. ಶೂಟಿಂಗ್ ಮಾಡುತ್ತಿದ್ದಾಗ ಅಲ್ಲಿದ್ದ 5 ಜನರು ಹಿಂದೆ-ಮುಂದೆ ಯೋಚಿಸದೆ ರಾಧಿಕಾರನ್ನು ಕಾಪಾಡಲು ನೀರಿಗೆ ಇಳಿದಿದ್ದರು. ರವಿವರ್ಮಾ ಅವರು ಈ ಸಿನಿಮಾಕ್ಕೆ ಸಾಹಸ ನಿರ್ದೇಶನ ಮಾಡಿದ್ದರು.

Also Read-ಪ್ರಸ್ತುತ ಎದುರಿಸುತ್ತಿರುವ ಬೇಸರದ ಬಗ್ಗೆ ಬಾಯಿಬಿಟ್ಟ ನಟಿ ರಾಧಿಕಾ ಪಂಡಿತ್!

ನಿಜವಾದ ಹೀರೋಗಳು ಅಂದರೆ ಸ್ಟಂಟ್‌ಮ್ಯಾನ್‌ಗಳು ಎಂದ ರಾಧಿಕಾ ಪಂಡಿತ್

ಈ ಘಟನೆ ನಡೆದಾಗ ಎಲ್ಲರೂ ಕ್ಯಾಮರಾ ಆಫ್ ಮಾಡಿಕೊಂಡು ಏನು ಮಾಡಬೇಕು ಎಂದು ತಿಳಿಯದೆ ಸುಮ್ಮನೆ ನಿಂತಿದ್ದರು. ರಾಧಿಕಾ ಹಾಗೆ ಸುಮ್ಮನೇ ಜಂಪ್ ಮಾಡಲಾಗುತ್ತಿರಲಿಲ್ಲ. ಅವರ ಅಮ್ಮ ಅಳುತ್ತ ನಿಂತಿದ್ದರು. ರಾಧಿಕಾರನ್ನು ನೋಡಿದಾಗ ಇಂದು ಕೂಡ ರವಿವರ್ಮ ಅವರು 'ರಾಧಿಕಾ ನಮಗೆ ಸಿಗುತ್ತಿರಲಿಲ್ಲ, ಕಾವೇರಿ ಕೊಚ್ಚಿಕೊಂಡು ಹೋಗುತ್ತಿತ್ತು' ಎಂದು ನೆನಪಿಸಿಕೊಂಡು ಹೇಳುತ್ತಾರಂತೆ. 'ಅಂದು ನನಗೆ ನಿಜವಾದ ಹೀರೋಗಳು ಅಂದರೆ ಸ್ಟಂಟ್‌ಮ್ಯಾನ್‌ಗಳು ಎಂದು ಅರ್ಥ ಆಯ್ತು. ಪ್ರಾಣದ ಹಂಗನ್ನು ತೊರೆದು ನಮ್ಮನ್ನು ಅವರು ಕಾಪಾಡ್ತಾರೆ. ಈ ಘಟನೆ ನನಗೆ ಇಂದು ಕೂಡ ಕಾಡುತ್ತಿರುತ್ತದೆ' ಎಂದು ನಟಿ ರಾಧಿಕಾ ಪಂಡಿತ್ ಈ ಹಿಂದೆಯೇ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದರು.

150 ದಿನ ಪೂರೈಸಿದ್ದ 'ಕೃಷ್ಣನ್ ಲವ್ ಸ್ಟೋರಿ' ಸಿನಿಮಾ!

'ಕೃಷ್ಣನ್ ಲವ್ ಸ್ಟೋರಿ' ಸಿನಿಮಾ ಒಳ್ಳೆಯ ಪ್ರತಿಕ್ರಿಯೆ ಪಡೆದು ಕರ್ನಾಟಕದಲ್ಲಿ 150 ದಿನಗಳನ್ನು ಪೂರೈಸಿತ್ತು. ಶ್ರೀಧರ್ ವಿ ಸಂಭ್ರಮ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದರು. ಉದಯ್ ಕೆ ಮೆಹ್ತಾ, ಮೋಹನ್ ಜಿ ನಾಯಕ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಈ ಸಿನಿಮಾದಲ್ಲಿ 8 ಹಾಡುಗಳಿದ್ದವು. ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಶಶಾಂಕ್ ಈ ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದಿದ್ದರು. ಈ ಚಿತ್ರದ ನಟನೆಗೆ 58ನೇ ಫಿಲ್ಮ್‌ಫೇರ್ ಅವಾರ್ಡ್ಸ್ ವೇಳೆ ನಟಿ ರಾಧಿಕಾ ಪಂಡಿತ್ ಅವರಿಗೆ ಉತ್ತಮ ನಟಿ, ಉಮಾಶ್ರೀ ಅವರಿಗೆ ಉತ್ತಮ ಪೋಷಕ ನಟಿ ಎಂಬ ಪ್ರಶಸ್ತಿ ಸಂದಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌