ಆ್ಯಪ್ನಗರ

ಅಲ್ಲು ಅರ್ಜುನ್‌ರನ್ನು ನೋಡಲು 250 ಕಿಮೀ ಪಾದಯಾತ್ರೆ ಮಾಡುತ್ತಿರುವ ಅಭಿಮಾನಿ!

ನಟ ಅಲ್ಲು ಅರ್ಜುನ್‌ಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರನ್ನು ಒಮ್ಮೆಯಾದರೂ ಭೇಟಿ ಮಾಡಬೇಕು ಎಂಬ ಹಂಬಲ ಅನೇಕರದ್ದು. ಅದನ್ನು ಪೂರೈಸಿಕೊಳ್ಳಲು ಒಬ್ಬ ಅಭಿಮಾನಿ ಈಗೊಂದು ಸಾಹಸಕ್ಕೆ ಕೈ ಹಾಕಿದ್ದಾನೆ. ಏನದು?

Vijaya Karnataka Web 23 Sep 2020, 3:02 pm
ತಮ್ಮ ನೆಚ್ಚಿನ ಸ್ಟಾರ್‌ ನಟ-ನಟಿಯರಿಗಾಗಿ ಅಭಿಮಾನಿಗಳು ಮಾಡದ ಸಾಹಸಗಳೇ ಇಲ್ಲ. ನಟ ಅಲ್ಲು ಅರ್ಜುನ್ ಅವರ ಅಭಿಮಾನಿಯೊಬ್ಬ ಇಂಥದ್ದೇ ಕಾರಣಕ್ಕಾಗಿ ಸುದ್ದಿ ಆಗುತ್ತಿದ್ದಾನೆ. ಅಲ್ಲು ಅರ್ಜುನ್‌ರನ್ನು ನೋಡಬೇಕು ಎಂಬ ಉದ್ದೇಶದಿಂದ ಆತ ಪಾದಯಾತ್ರೆ ಆರಂಭಿಸಿದ್ದಾನೆ. ಅದು ಕೂಡ ಬರೋಬರಿ 250 ಕಿ.ಮೀ. ಎಂಬುದು ಅಚ್ಚರಿಯ ವಿಚಾರ.
Vijaya Karnataka Web ಅಲ್ಲು ಅರ್ಜುನ್‌


ಈ ಅಭಿಮಾನಿಯ ಹೆಸರು ಪಿ. ನಾಗೇಶ್ವರ್‌ ರಾವ್. ಈತನಿಗೆ ಟಾಲಿವುಡ್‌ ಸ್ಟಾರ್‌ ನಟ ಅಲ್ಲು ಅರ್ಜುನ್‌ ಎಂದರೆ ಪಂಚಪ್ರಾಣ. ಅನೇಕ ಬಾರಿ ಅವರನ್ನು ಭೇಟಿ ಮಾಡಬೇಕು ಎಂದು ಆಸೆ ಪಟ್ಟಿದ್ದನಂತೆ. ಆದರೆ ಒಮ್ಮೆಯೂ ಅದು ಈಡೇರಲಿಲ್ಲ. ಅದಕ್ಕಾಗಿ ಈಗ ಇಂಥ ಉಪಾಯ ಮಾಡಿದ್ದಾನೆ. ಕಾಲ್ನಡಿಗೆಯ ಮೂಲಕ ಒಟ್ಟು 250 ಕಿಮೀ ಪ್ರಯಾಣಿಸಿ, ತನ್ನ ನೆಚ್ಚಿನ ನಟನನ್ನು ಮೀಟ್‌ ಮಾಡಬೇಕು ಎಂಬ ಉದ್ದೇಶದೊಂದಿಗೆ ಈ ಕೆಲಸಕ್ಕೆ ಕೈ ಹಾಕಿದ್ದಾನೆ.

ಈಗ ಮೂಲತಃ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಮಾಚೆರ್ಲಾ ಪಟ್ಟಣದವನು. ಆತನ ಮನೆಯಿಂದ ಹೈದರಾಬಾದ್‌ಗೆ ಅಂದಾಜು 250 ಕಿ.ಮೀ. ಅಂತರ ಇದೆ. ಸೆ.17ರಂದು ಹೀಗೆ ಪಾದಯಾತ್ರೆ ಆರಂಭಿಸಿರುವ ಪಿ. ನಾಗೇಶ್ವರ್‌ ರಾವ್ ಸೆ.22ರಂದು ಬಂಜಾರಾ ಹಿಲ್ಸ್ ತಲುಪಿದ್ದಾನೆ. ಇನ್ನೇನು ಕೆಲವೇ ದಿನಗಳಲ್ಲಿ ಅಲ್ಲು ಅರ್ಜುನ್‌ ನಿವಾಸವನ್ನು ಅವನು ತಲುಪಲಿದ್ದಾನೆ.

also read: ಮಹೇಶ್‌ ಬಾಬು, ಪ್ರಭಾಸ್‌ರನ್ನು ಹಿಂದಿಕ್ಕಿ ಸಾಧನೆ ಮಾಡಿದ ಅಲ್ಲು ಅರ್ಜುನ್‌! ಯಾವ ವಿಚಾರದಲ್ಲಿ?

ಪಿ. ನಾಗೇಶ್ವರ್‌ ರಾವ್ ಪಾದಯಾತ್ರೆ ಮಾಡುವುದರ ಜೊತೆಗೆ ಒಂದು ಬ್ಯಾನರ್‌ ಕೂಡ ಹಿಡಿದು ಸಾಗುತ್ತಿದ್ದಾನೆ. ಅದರಲ್ಲಿ ಅಲ್ಲು ಅರ್ಜುನ್‌ರ ಫೋಟೋ ಇದೆ. ಈಗಾಗಲೇ ಆತನ ವಿಡಿಯೋ ವೈರಲ್‌ ಆಗುತ್ತಿದೆ. ಅದು ಖಂಡಿತವಾಗಿಯೂ ಅಲ್ಲು ಅರ್ಜುನ್‌ ಗಮನಕ್ಕೆ ಬಂದಿರುತ್ತದೆ ಎಂಬ ನಂಬಿಕೆ ಹಲವರಿಗಿದೆ. ಹಾಗಾಗಿ ಆತನನ್ನು ಅವರು ಭೇಟಿ ಮಾಡುತ್ತಾರೋ ಇಲ್ಲವೋ ಎಂಬ ಕೌತುಕ ಈಗ ಮನೆ ಮಾಡಿದೆ.

also read: ನಟಿ ರಶ್ಮಿಕಾ ಮಂದಣ್ಣಗೆ ಈಗ ಆನ್‌ಲೈನ್‌ ಕ್ಲಾಸ್‌! ಇದರಲ್ಲಿ ಅಲ್ಲು ಅರ್ಜುನ್ ಕೂಡ ಇರ್ತಾರೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌