ಆ್ಯಪ್ನಗರ

'ಸೈ ರಾ ನರಸಿಂಹ ರೆಡ್ಡಿ' ಬಗ್ಗೆ ಕಿಂಚಿತ್ತೂ ಮಾತನಾಡದ ಅಲ್ಲು ಅರ್ಜುನ್, ಸಕ್ಸಸ್ ಪಾರ್ಟಿಗೆ ಬಂದ್ರು!!!

'ಸೈ ರಾ ನರಸಿಂಹ ರೆಡ್ಡಿ' ಸಿನಿಮಾ ರಿಲೀಸ್ ಆಗಿದ್ದು ಭರ್ಜರಿ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡ್ತಿದೆ. ಈ ಸಿನಿಮಾಕ್ಕೆ ಹಲವರು ಶುಭಾಶಯ ಕೋರಿದ್ದರು. ಆದರೆ ಚಿರಂಜೀವಿ ಸೋದರಳಿಯ ಮಾತ್ರ ಈ ಬಗ್ಗೆ ಒಂದೂ ಟ್ವೀಟ್ ಮಾಡಿರಲಿಲ್ಲ. ಆದರೆ ಈಗ ಒಂದು ಇನ್‌ಸ್ಟಾಗ್ರಾಮ್ ಪೋಸ್ಟ್ ಮಾಡಿ ಗಮನಸೆಳೆದಿದ್ದಾರೆ.

Vijaya Karnataka Web 6 Oct 2019, 2:56 pm
ಬಹು ನಿರೀಕ್ಷಿತ 'ಸೈ ರಾ ನರಸಿಂಹ ರೆಡ್ಡಿ' ಸಿನಿಮಾ ಅಕ್ಟೋಬರ್ 2ರಂದು ಬೆಂಗಳೂರಿನಲ್ಲಿಯೇ ಬಿಡುಗಡೆಯಾಗಿತ್ತು. ಮೆಗಾಸ್ಟಾರ್ ಚಿರಂಜೀವಿ, ಅಮಿತಾಬ್ ಬಚ್ಚನ್, ಕಿಚ್ಚ ಸುದೀಪ್, ತಮನ್ನಾ ಭಾಟಿಯಾ ,ಅನುಷ್ಕಾ ಶೆಟ್ಟಿ, ವಿಜಯ್ ಸೇತುಪತಿ, ನಿಹಾರಿಕಾ, ತ್ರಿವೇಣಿ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ವಿಶ್ವದಾದ್ಯಂತ 3500 ಸಾವಿರ ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು. ಹಲವು ಸೆಲೆಬ್ರಿಟಿಗಳು ಈ ಸಿನಿಮಾಕ್ಕೆ ಬೆಂಬಲ ನೀಡಿದ್ದರು. ಆದರೆ ಅಲ್ಲು ಅರ್ಜುನ್ ಒಬ್ಬರನ್ನು ಬಿಟ್ಟು.
Vijaya Karnataka Web sye ra narasimha reddy


ಹೈದರಾಬಾದ್‌ನಲ್ಲಿ 'ಸೈ ರಾ ನರಸಿಂಹ ರೆಡ್ಡಿ' ಸಿನಿಮಾದ ಪ್ರಿ-ರಿಲೀಸ್ ಕಾರ್ಯಕ್ರಮಕ್ಕೆ ಅಲ್ಲು ಆಗಮಿಸಬೇಕಿತ್ತು. ಆದರೆ ಆಗಮಿಸಿರಲಿಲ್ಲ. ಹೀಗಾಗಿ ಅಭಿಮಾನಿಗಳು ಕೂಡ ಈ ಬಗ್ಗೆ ಸಿಟ್ಟಾಗಿದ್ದರು. ಅಲ್ಲು ಅರ್ಜುನ್ ಚಿರಂಜೀವಿ ಅವರ ಸೋದರಳಿಯ. ಅಷ್ಟೇ ಅಲ್ಲದೆ ಅಂದಿನ ಕಾರ್ಯಕ್ರಮ ಆಯೋಜಿಸಿದ್ದು ಅಲ್ಲು ಕುಟುಂಬದವರೇ. ಹೀಗಿದ್ದಾಗ್ಯೂ 'ಬನ್ನಿ' ಹೀರೋ ಈ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಆ ಕಾರ್ಯಕ್ರಮಕ್ಕೆ 'ಪವರ್ ಸ್ಟಾರ್' ಪವನ್‌ ಕಲ್ಯಾಣ್‌ ಮುಖ್ಯ ಅತಿಥಿಯಾಗಿ ಆಗಮಿಸಿದ್ದು ಮೆಗಾ ಅಭಿಮಾನಿಗಳಿಗೆ ಸಂತಸ ನೀಡಿತ್ತು. ಜತೆಗೆ ಎಸ್‌.ಎಸ್‌. ರಾಜಮೌಳಿ, ವರುಣ್‌ ತೇಜ್, ಸಾಯಿ ತೇಜ್, ರಾಮ್‌ಚರಣ್ ತೇಜ, ಜಗಪತಿ ಬಾಬು ಸೇರಿದಂತೆ ಅನೇಕರು ಆಗಮಿಸಿದ್ದರು.
View this post on Instagram It’s was a pleasure for the entire Allu family to host a success party for Syeraa unit . So happy to host this for our MEGASTAR garu along with many other Stars & Directors . The pleasure was totally ours . I Thank everyone for joining us on behalf of the Allu Family . A post shared by Allu Arjun (@alluarjunonline) on Oct 5, 2019 at 8:12am PDT

ಸೈ ರಾ ನರಸಿಂಹ ರೆಡ್ಡಿ ಸಿನಿಮಾದ ಫಸ್ಟ್ ಡೇ ಕಲೆಕ್ಷನ್ ಎಷ್ಟು? ಗಗನಕ್ಕೇರಿತ್ತು ಸೈರಾ ಮೊದಲ ಶೋದ ಟಿಕೆಟ್ ರೇಟ್!!!

ಮೆಗಾ ಕುಟುಂಬದ ಎಲ್ಲ ಹೀರೋಗಳು ಅಲ್ಲಿದ್ದರು. ಟ್ರೇಲರ್ ರಿಲೀಸ್ ಆದಾಗ ಒಂದು ಟ್ವೀಟ್ ಕೂಡ ಅಲ್ಲು ಅರ್ಜುನ್ ಮಾಡಿರಲಿಲ್ಲ. ಚಿರು ಬರ್ತ್ ಡೇಗೆ ವಿಷ್ ಮಾಡಿದ್ದ ಟ್ವೀಟ್ ಬಿಟ್ಟರೆ, ಇದುವರೆಗೂ 'ಸೈ ರಾ...' ಕುರಿತು ಒಂದೇ ಒಂದು ಟ್ವೀಟ್ ಕೂಡ ಮಾಡಿಲ್ಲ ಅಲ್ಲು ಅರ್ಜುನ್‌. ಸೆಪ್ಟೆಂಬರ್ 29ರಂದು ಗೋಪಿಚಂದ್ ಅಭಿನಯದ 'ಚಾಣಕ್ಯ' ಚಿತ್ರದ ಬಿಡುಗಡೆಪೂರ್ವ ಕಾರ್ಯಕ್ರಮಕ್ಕೆ ಅತಿಥಿಯಾಗಿ ಅಲ್ಲು ಆಗಮಿಸಬೇಕಿತ್ತು, ಆದರೆ ಅಲ್ಲು ಆಗಮಿಸಿರಲಿಲ್ಲ.

ಕನ್ನಡ ಸಿನಿಮಾಗಳಿಗೆ ಭಾರೀ ಪೆಟ್ಟು ನೀಡಿದ ಸೈ ರಾ ನರಸಿಂಹ ರೆಡ್ಡಿ ಸಿನಿಮಾ!! ಯಾಕೆ?

ಈಗ ಸೈ ರಾ ಸಿನಿಮಾದ ಸಕ್ಸಸ್ ಪಾರ್ಟಿಗೆ ಅಲ್ಲು ಅರ್ಜುನ್ ಆಗಮಿಸಿದ್ದು, ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಶ್ರೀಕಾಂತ್, ವರುಣ್ ತೇಜ, ರಾಮ್‌ಚರಣ್ ತೇಜ, ಚಿರಂಜೀವಿ, ಅಲ್ಲು ಅರ್ಜುನ್, ಅಲ್ಲು ಸಿರೀಶ್ ಅಕ್ಕಿನೇನಿ ಅಖಿಲ್ ಮುಂತಾದವರು ಈ ಸಕ್ಸಸ್ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ.
ಸುದೀಪ್ ಚಿತ್ರದ ಮೇಲೆ ಮತ್ತೆ ಬಿತ್ತು ಕಿರಾತಕರ ಕಣ್ಣು; ಇವರನ್ನು ಮಟ್ಟ ಹಾಕೋದು ಹೇಗೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌