ಆ್ಯಪ್ನಗರ

'ಪುಷ್ಪ' ಚಿತ್ರದಲ್ಲಿ ಅಲ್ಲು ಅರ್ಜುನ್‌ ರಗಡ್‌ ಲುಕ್‌ ನೋಡಿ ಫ್ಯಾನ್ಸ್ ಫಿದಾ! ಶೂಟಿಂಗ್ ಫೋಟೋ ಲೀಕ್!

'ಸ್ಟೈಲಿಶ್ ಸ್ಟಾರ್' ಅಲ್ಲು ಅರ್ಜುನ್ ನಟನೆಯ 'ಅಲಾ ವೈಕುಂಠಪುರಮುಲೋ' ಸಿನಿಮಾ ದೊಡ್ಡ ಯಶಸ್ಸು ಕಂಡಿದ್ದು, ಇದೀಗ ಅವರ ಗಮನ 'ಪುಷ್ಪ' ಸಿನಿಮಾದ ಮೇಲಿದೆ. ಸದ್ಯ ಅಲ್ಲು ಅರ್ಜುನ್ ಅವರ ಒಂದು ಫೋಟೋ ವೈರಲ್ ಆಗಿದೆ.

Vijaya Karnataka Web 21 Nov 2020, 12:26 pm
ಬಹುಶಃ ಕೊರೊನಾ ಎಂಬ ಮಹಾಮಾರಿ ಇಲ್ಲದೇ ಹೋಗಿದ್ದರೆ, ಇಷ್ಟೊತ್ತಿಗೆ ಅಲ್ಲು ಅರ್ಜುನ್- ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ' ಚಿತ್ರದ ಬಹುತೇಕ ಶೂಟಿಂಗ್ ಮುಕ್ತಾಯಗೊಂಡಿರಬೇಕಿತ್ತು. ಆದರೆ, ಏಪ್ರಿಲ್‌ನಲ್ಲಿ ಶುರುವಾಗಬೇಕಿದ್ದ ಶೂಟಿಂಗ್ ಲಾಕ್‌ಡೌನ್‌ನಿಂದಾಗಿ ನವೆಂಬರ್‌ನಲ್ಲಿ ಆರಂಭಗೊಂಡಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್ ಲಾರಿ ಡ್ರೈವರ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಈ ಹಿಂದೆಯೇ ಹೇಳಲಾಗಿತ್ತು. ಇದೀಗ ಅವರ ಲುಕ್ ಯಾವ ರೀತಿ ಇರಲಿದೆ ಎಂಬುದು ಬಹಿರಂಗಗೊಂಡಿದೆ.
Vijaya Karnataka Web allu arjun


ರಗಡ್‌ ಲುಕ್‌ನಲ್ಲಿ ಅಲ್ಲು ಅರ್ಜುನ್
ಏಪ್ರಿಲ್‌ನಲ್ಲಿ ರಿಲೀಸ್ ಆಗಿದ್ದ 'ಪುಷ್ಪ' ಚಿತ್ರದ ಫಸ್ಟ್‌ ಲುಕ್‌ನಲ್ಲೇ ಅಲ್ಲು ಅರ್ಜುನ್‌ಗೆ ಇಲ್ಲಿ ಸಖತ್ ರಗಡ್ ಆಗಿರುವ ರೋಲ್ ಇದೆ ಎಂಬುದು ಗೊತ್ತಾಗಿತ್ತು. ಈಗ ಶೂಟಿಂಗ್ ಆರಂಭಗೊಂಡಿದ್ದು, ಸೆಟ್‌ನಲ್ಲಿ ಅರ್ಜುನ್ ಇರುವ ಫೋಟೋವೊಂದು ವೈರಲ್ ಆಗಿದೆ. ಸ್ಟೈಲಿಶ್ ಸ್ಟಾರ್ ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ಅರ್ಜುನ್, ಈ ಬಾರಿ ಸಖತ್ ರಗಡ್ ಹಾಗೂ ಡಿಗ್ಲಾಮರ್‌ ಲುಕ್‌ನಿಂದ ಗಮನಸೆಳೆಯಲಿದ್ದಾರೆ. ಕೆದರಿದ ಕೂದಲು, ಮಾಸಲು ಬಟ್ಟೆ ತೊಟ್ಟು, ಕಾಡಿನಲ್ಲಿ ನಡೆಯುತ್ತಿರುವ ಶೂಟಿಂಗ್‌ನಲ್ಲಿ ಅವರು ಪಾಲ್ಗೊಂಡಿದ್ದಾರೆ.

ಫೋಟೋ ನೋಡಿ ಫ್ಯಾನ್ಸ್ ಥ್ರಿಲ್
ಇನ್ನು, ತಮ್ಮ ನೆಚ್ಚಿನ ಸ್ಟಾರ್ ಇದೇ ಮೊದಲ ಬಾರಿಗೆ ಡಿಫರೆಂಟ್ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವುದಕ್ಕೆ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ. ಇದೊಂದು ರಕ್ತ ಚಂದನ ಕಳ್ಳಸಾಗಾಣಿಕೆ ಸುತ್ತ ಸುತ್ತುವ ಕಥೆಯನ್ನು ಹೊಂದಿರುವ ಸಿನಿಮಾವಾಗಿದ್ದು, ರಕ್ತ ಚಂದನ ಕಳ್ಳ ಸಾಗಾಣಿಕೆ ಮಾಡುವ ಲಾರಿ ಡ್ರೈವರ್ ಪುಷ್ಪ ರಾಜ್‌ ಪಾತ್ರದಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಳ್ಳಲಿದ್ದಾರೆ. ತಿರುಪತಿ ಸಮೀಪದ ಶೇಷಾಚಲಂ ಕಾಡಿನಲ್ಲಿ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಸುಕುಮಾರ್ ಇದರ ನಿರ್ದೆಶಕರು. ನವೆಂಬರ್ 12ರಿಂದ ಶೂಟಿಂಗ್ ಆರಂಭಗೊಂಡಿದೆ.

ಊರಿಗೆಲ್ಲ ಕೊರೊನಾ ಚಿಂತೆ; ಆದರೆ ಅಲ್ಲು ಅರ್ಜುನ್‌ ತಮ್ಮನಿಗೆ ಇನ್ನೇನೋ ಚಿಂತೆ!

ರಶ್ಮಿಕಾಗೆ ಡಿಗ್ಲಾಮ್ ಪಾತ್ರ
ನಟಿ ರಶ್ಮಿಕಾ ಮಂದಣ್ಣ ಸಿನಿಮಾದಲ್ಲಿ ಡಿಗ್ಲಾಮ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಚಿತ್ತೂರು ಪ್ರಾಂತ್ಯದ ಗ್ರಾಮೀಣ ಭಾಗದ ಯುವತಿಯಾಗಿ ನಟಿಸಲಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ನಿರ್ಮಾಣದ ಈ ಸಿನಿಮಾದ ಹಾಡುಗಳಿಗೆ ದೇವಿ ಶ್ರೀಪ್ರಸಾದ್ ಸಂಗೀತ ನೀಡುತ್ತಿದ್ದಾರೆ. ಉಳಿದಂತೆ ಜಗಪತಿ ಬಾಬು, ಪ್ರಕಾಶ್ ರೈ, ವೆನ್ನೆಲಾ ಕಿಶೋರ್, ಹರೀಶ್ ಉತ್ತಮನ್, ಅನೀಶ್ ಕುರುವಿಲ್ಲಾ, ಅನಸೂಯಾ ಭಾರದ್ವಾಜ್ ಚಿತ್ರದಲ್ಲಿ ಇದ್ದಾರೆ. ಕನ್ನಡದ ನಟ ಧನಂಜಯ ಈ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡುವ ಸಾಧ್ಯತೆ ಇದೆ.

ಅಲ್ಲು ಅರ್ಜುನ್‌ ಹೊಸ ಸಿನಿಮಾದ ನಿರ್ದೇಶಕನಿಗೆ 13 ಕೋಟಿ ರೂ. ಸಂಭಾವನೆ! ಯಾರು ಆ ಪ್ರತಿಭಾವಂತ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌