ಆ್ಯಪ್ನಗರ

ಮಕರ ಸಂಕ್ರಾಂತಿ: ಕನ್ನಡದ ಹೊಸ ಸಿನಿಮಾಗಳ ಘೋಷಣೆಗೆ ಸುಗ್ಗಿ ಕಾಲ

ಸದ್ಯಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ಬಿಡುಗಡೆಯ ಸಂಭ್ರಮವಿಲ್ಲ. ಆದರೆ ಹೊಸ ಸಿನಿಮಾಗಳು ಮಾತ್ರ ಒಂದರ ಹಿಂದೆ ಒಂದರಂತೆ ಅನೌನ್ಸ್‌ ಆಗಿ ಸುಗ್ಗಿ ಹಬ್ಬದ ಸಡಗರಕ್ಕೆ ಸಾಥ್‌ ನೀಡಿವೆ.

Vijaya Karnataka Web 15 Jan 2022, 9:02 am
ಹರೀಶ್‌ ಬಸವರಾಜ್‌
Vijaya Karnataka Web amidst night curfew and weekend lockdown new kannada movies are getting announced on the occasion of sankranthi
ಮಕರ ಸಂಕ್ರಾಂತಿ: ಕನ್ನಡದ ಹೊಸ ಸಿನಿಮಾಗಳ ಘೋಷಣೆಗೆ ಸುಗ್ಗಿ ಕಾಲ

ವೀಕೆಂಡ್‌ ಕರ್ಫ್ಯೂ, ನೈಟ್‌ ಕರ್ಫ್ಯೂ ಮತ್ತು ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಿಂದ ಚಿತ್ರರಂಗಕ್ಕೆ ಬಲವಾದ ಹೊಡೆತ ಬಿದ್ದಿದೆ. ಸದ್ಯಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ಬಿಡುಗಡೆಯ ಸಂಭ್ರಮವಿಲ್ಲ. ಆದರೆ ಹೊಸ ಸಿನಿಮಾಗಳು ಮಾತ್ರ ಒಂದರ ಹಿಂದೆ ಒಂದರಂತೆ ಅನೌನ್ಸ್‌ ಆಗಿ ಸುಗ್ಗಿ ಹಬ್ಬದ ಸಡಗರಕ್ಕೆ ಸಾಥ್‌ ನೀಡಿವೆ.

ಭಾರತೀಯ ಚಿತ್ರರಂಗವನ್ನು ಕೊರೊನಾ ಮೂರನೇ ಅಲೆ ಇನ್ನಿಲ್ಲದಂತೆ ಕಾಡುತ್ತಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ನೈಟ್‌ ಕರ್ಫ್ಯೂ, ವೀಕೆಂಡ್‌ ಕರ್ಫ್ಯೂ, ಚಿತ್ರಮಂದಿರದಲ್ಲಿ ಶೇ.50 ಸೀಟಿಂಗ್‌ ಮುಂತಾದ ಅನೇಕ ನಿಯಮಗಳು ಜಾರಿಯಲ್ಲಿವೆ. ಈ ಪರಿಣಾಮ ಸಿನಿಮಾಗಳು ನಿರೀಕ್ಷಿತ ಮಟ್ಟದಲ್ಲಿ ಬಿಡುಗಡೆಯಾಗುತ್ತಿಲ್ಲ. ಆದರೆ ಹೊಸ ಸಿನಿಮಾ ನಿರ್ಮಾಣಗಳ ಘೋಷಣೆ ಮಾತ್ರ ಮುಂದುವರಿದಿದೆ. ಒಂದರ ಹಿಂದೆ ಒಂದರಂತೆ ಹೊಸ ಸಿನಿಮಾಗಳ ಅನೌನ್ಸ್‌ ಆಗುತ್ತಲೇ ಇದೆ. ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಅನೌನ್ಸ್‌ ಆಗಿರುವ ಕೆಲವು ಸಿನಿಮಾಗಳು ಹೀಗಿವೆ.

ಹೊಯ್ಸಳ: ‘ಬಡವ ರಾಸ್ಕಲ್‌’ ಸಿನಿಮಾದ ಯಶಸ್ಸಿನಲ್ಲಿರುವ ಡಾಲಿ ಧನಂಜಯ ತಮ್ಮ 25ನೇ ಸಿನಿಮಾ ‘ಹೊಯ್ಸಳ’ವನ್ನು ಸಂಕ್ರಾಂತಿ ಹಬ್ಬದ ಪ್ರಯುಕ್ತ ಅನೌನ್ಸ್‌ ಮಾಡಿದ್ದಾರೆ. ‘ಗೀತಾ’ ಸಿನಿಮಾ ನಿರ್ದೇಶನ ಮಾಡಿದ್ದ ವಿಜಯ್‌ ನಾಗೇಂದ್ರ ಈಗ ವಿಜಯ್‌ ಎನ್‌. ಎಂಬ ಹೆಸರಿನಲ್ಲಿ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಥಮನ್‌.ಎಸ್‌ ಸಂಗೀತ ಸಂಯೋಜನೆ ಮಾಡುತ್ತಿರುವ ಈ ಸಿನಿಮಾದಲ್ಲಿ ಧನಂಜಯ ಪೊಲೀಸ್‌ ಅಧಿಕಾರಿಯಾಗಿ ನಟಿಸುತ್ತಿದ್ದು, ಅದರ ಫಸ್ಟ್‌ ಲುಕ್‌ನಲ್ಲಿ ಖಡಕ್‌ ಆಗಿ ಕಾಣಿಸಿಕೊಂಡಿದ್ದಾರೆ. ನವೆಂಬರ್‌ ತಿಂಗಳಿನಲ್ಲಿ ‘ಹೊಯ್ಸಳ’ ಸಿನಿಮಾವನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಅನೌನ್ಸ್‌ ಮಾಡಿದೆ. ಇದರ ಮಾಸ್‌ ಟೈಟಲ್‌ ಮತ್ತು ಧನಂಜಯ ಅವರು ‘ಸಲಗ’ ಸಿನಿಮಾದ ನಂತರ ಇದರಲ್ಲಿ ಮತ್ತೊಮ್ಮೆ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಈ ಸಿನಿಮಾದ ಮೇಲೆ ಡಾಲಿ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಸೃಷ್ಟಿಯಾಗಿದೆ.

ಧನಂಜಯ ಹೇಳಿದ್ದೇನು?

'ಪೊಲೀಸ್‌ ಆಫೀಸರ್‌ ಸಬ್ಜೆಕ್ಟ್‌ನ ಸಿನಿಮಾವಾಗಿರುವ ಕಾರಣ ಮಾಸ್‌ ಟೈಟಲ್‌ಗಾಗಿ ಹುಡುಕಾಟ ನಡೆಸಿ ಈ ‘ಹೊಯ್ಸಳ’ ಎಂಬ ಟೈಟಲ್‌ ಇಟ್ಟಿದ್ದೇವೆ. ಏಪ್ರಿಲ್‌ನಿಂದ ಇದರ ಚಿತ್ರೀಕರಣ ಆರಂಭವಾಗಲಿದೆ. ಇದರ ಹೊಸ ರೀತಿಯ ಕಥೆ ಎಲ್ಲರಿಗೂ ಇಷ್ಟವಾಗಲಿದೆ' ಎಂದು ನಟ ಧನಂಜಯ ತಿಳಿಸಿದ್ದಾರೆ.

ಡಾಲಿ ಧನಂಜಯ ನಟನೆಯ 25ನೇ ಸಿನಿಮಾ 'ಹೊಯ್ಸಳ'; ಚಿತ್ರದ ಕಥೆಯೇನು?

ಭೈರವ

ರಾಮ್‌ ತೇಜ ಎಂಬ ಹೊಸ ನಿರ್ದೇಶಕರು ನಿರ್ದೇಶನ ಮಾಡುತ್ತಿರುವ ‘ಭೈರವ’ ಸಿನಿಮಾದ ಮುಹೂರ್ತ ಕೂಡ ಸಂಕ್ರಾಂತಿ ಹಬ್ಬದಂದು ನಡೆಯಿತು. ಉತ್ತರ ಪ್ರದೇಶದ ಗೋವಿಂದಪುರಿ ನಗರದ ಹನುಮಾನ್‌ ದೇವಸ್ಥಾನದಲ್ಲಿ ಮುಹೂರ್ತ ನಡೆದಿದ್ದು, ಉತ್ತರ ಪ್ರದೇಶದ ಬಿಜೆಪಿ ಮುಖಂಡರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ‘ಕಮರೊಟ್ಟು ಚೆಕ್‌ ಪೋಸ್ಟ್‌’ ಸಿನಿಮಾ ಖ್ಯಾತಿಯ ನಟ ಸನತ್‌ ಮತ್ತು ‘ಒಂದು ಮೊಟ್ಟೆಯ ಕಥೆ’ ಸಿನಿಮಾ ಖ್ಯಾತಿಯ ಶೈಲಶ್ರೀ ಮುಲ್ಕಿ ಅವರು ಈ ಸಿನಿಮಾಗೆ ನಾಯಕ, ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದರಲ್ಲಿ ಖಳನಾಯಕನಾಗಿ ಉಮೇಶ ಸಕ್ಕರೆನಾಡು ನಟಿಸುತ್ತಿದ್ದಾರೆ.

ಬೆಂಕಿ

ಅನೀಶ್‌ ತೇಜೇಶ್ವರ್‌ ನಾಯಕರಾಗಿ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ಕೆಲವು ದಿನಗಳ ಹಿಂದೆ ಅನೌನ್ಸ್‌ ಆಗಿತ್ತು. ಈಗ ಅದರ ಟೈಟಲ್‌ ರಿವೀಲ್‌ ಆಗಿದ್ದು, ಅದಕ್ಕೆ ‘ಬೆಂಕಿ’ ಎಂಬ ಮಾಸ್‌ ಟೈಟಲ್‌ ಇಡಲಾಗಿದೆ. ಈ ಸಿನಿಮಾವನ್ನು ‘ಹಲೋ ಯಮ’ ಸಿನಿಮಾ ಖ್ಯಾತಿಯ ಎ.ಆರ್‌.ಬಾಬು ಪುತ್ರ ಶಾನ್‌ ನಿರ್ದೇಶನ ಮಾಡುತ್ತಿದ್ದಾರೆ. ಹಳ್ಳಿ ಬ್ಯಾಕ್‌ಗ್ರೌಂಡ್‌ನ ಸಿನಿಮಾ ಇದಾಗಿದ್ದು, ಅನೀಶ್‌ ಇದೇ ಮೊದಲ ಬಾರಿಗೆ ಹಳ್ಳಿ ಸಬ್ಜೆಕ್ಟ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ವಾಮನ ಅವತಾರ ತಾಳಿದ 'ಬಜಾರ್' ಸಿನಿಮಾ ನಟ ಧನ್ವೀರ್ ಗೌಡ

ವಾಮನ

‘ಬಜಾರ್‌’ ಸಿನಿಮಾ ಖ್ಯಾತಿಯ ಧನ್ವೀರ್‌ ನಟನೆಯ ಮೂರನೇ ಸಿನಿಮಾ ಸಹ ಸಂಕ್ರಾಂತಿಯಂದು ಅನೌನ್ಸ್‌ ಆಗಿದ್ದು, ಇದಕ್ಕೆ ‘ವಾಮನ’ ಎಂಬ ಟೈಟಲ್‌ ಇಡಲಾಗಿದೆ. ಈ ಸಿನಿಮಾವನ್ನು ಶಂಕರ್‌ ರಾಮನ್‌ ನಿರ್ದೇಶನ ಮಾಡುತ್ತಿದ್ದಾರೆ. ಇದರ ಸಿನಿಮಾಟೋಗ್ರಾಫಿ ಕೆಲಸವನ್ನು ಮಹೇನ್‌ ಸಿಂಹ ಮಾಡಲಿದ್ದು, ಅಜನೀಶ್‌ ಲೋಕನಾಥ್‌ ಸಂಗೀತ ನೀಡುತ್ತಿದ್ದಾರೆ. ಸದ್ಯದಲ್ಲೇ ಈ ಸಿನಿಮಾದ ಚಿತ್ರೀಕರಣ ಆರಂಭವಾಗಲಿದ್ದು, ಇದರಲ್ಲಿವಧನ್ವೀರ್‌ ಮಾಸ್‌ ಲುಕ್‌ನಲ್ಲಿವಕಂಗೊಳಿಸಲಿದ್ದಾರೆ. ಶಂಕರ್‌ ರಾಮನ್‌ ‘ಕೋಟಿಗೊಬ್ಬ-2’, ‘ರಿಲ್ಯಾಕ್ಸ್‌ ಸತ್ಯ’, ‘ದಿ ವಿಲನ್‌’ ಮುಂತಾದ ಸಿನಿಮಾಗಳಿಗೆ ಬರಹಗಾರರಾಗಿ ಕೆಲಸ ಮಾಡಿದ್ದಾರೆ.

ಮಾಸ್ ಸಿನಿಮಾದಲ್ಲಿ ಧನ್ವೀರ್: ಸಂಕ್ರಾಂತಿ ಪ್ರಯುಕ್ತ ಹೊಸ ಚಿತ್ರ ಅನೌನ್ಸ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌