ಆ್ಯಪ್ನಗರ

ವೃದ್ಧಾಶ್ರಮವಾಗುತ್ತಿರುವ ಮಲೆನಾಡಿನ ಹಳ್ಳಿಗಳ ಬಗ್ಗೆ ಹೇಳುತ್ತೆ ಈ ವಡ್ಡಾರಾಧಕ!

ವಿಕ ಕಿರುಚಿತ್ರೋತ್ಸವ ಪ್ರಶಸ್ತಿ ಪಡೆದ 'ವಡ್ಡಾರಾಧಕ' ಕಿರುಚಿತ್ರವು ರಿಲೀಸ್‌ ಆಗಿದೆ, ಈ ಬಾರಿ ವಿಕ ಕಿರುಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದ್ದ 'ವಡ್ಡಾರಾಧಕ' ಅತ್ಯುತ್ತಮ ಸಿನಿಮಾ ಮತ್ತು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದ

Vijaya Karnataka Web 15 Oct 2019, 3:24 pm
ಈ ಬಾರಿ ವಿಕ ಕಿರುಚಿತ್ರೋತ್ಸವದಲ್ಲಿಭಾಗವಹಿಸಿ ಅತ್ಯುತ್ತಮ ಸಿನಿಮಾ ಮತ್ತು ಅತ್ಯುತ್ತಮ ನಿರ್ದೇಶಕ ಎರಡು ಬಹುಮಾನಗಳನ್ನು ಪಡೆದಿರುವ 'ವಡ್ಡಾರಾಧಕ' ಕಿರುಚಿತ್ರ ಸೋಮವಾರ ಬಿಡುಗಡೆ ಆಗಿದೆ.
Vijaya Karnataka Web Vaddaradhak

ಕಿರುಚಿತ್ರೋತ್ಸವದಲ್ಲಿ ಸಂಭ್ರಮಿಸಿದ ಪ್ರತಿಭೆಗಳು
ಈ ಚಿತ್ರವನ್ನು ನಟ ಸತೀಶ್‌ ನೀನಾಸಂ ನಮ್ಮ ಯೂ ಟ್ಯೂಬ್‌ ಚಾನೆಲ್‌ನಲ್ಲಿಬಿಡುಗಡೆ ಮಾಡಿದ್ದಾರೆ. ಈಗಾಗಲೇ ಎರಡು ಕಿರುಚಿತ್ರಗಳನ್ನು ಸ್ವತಃ ನಿರ್ಮಾಣ ಮಾಡಿರುವ ಸತೀಶ್‌, ಈ ಬಾರಿ ಹೊಸಬರ ಕಿರುಚಿತ್ರಕ್ಕೆ ಪ್ರೋತ್ಸಾಹ ನೀಡಿದ್ದಾರೆ. 'ವಡ್ಡಾರಾಧಕ' ಕಿರುಚಿತ್ರ ನೋಡಿ ಥ್ರಿಲ್‌ ಆದೆ. ಹೊಸ ಬಗೆಯ ನಿರೂಪಣೆ ಮತ್ತು ಆಯ್ದುಗೊಂಡಿರುವ ವಸ್ತುವಿನ ಕಾರಣದಿಂದಾಗಿ ಗಮನ ಸೆಳೆಯಿತು. ಈ ಕಿರುಚಿತ್ರವನ್ನು ಮತ್ತಷ್ಟು ಜನರಿಗೆ ತಲುಪಿಸುವ ಕಾರಣದಿಂದಾಗಿ ರಿಲೀಸ್‌ ಮಾಡಿದ್ದೇನೆ ಎನ್ನುತ್ತಾರೆ ಸತೀಶ್‌.
ಕರ್ನೂಲಿನಲ್ಲಿ ನೀನಾಸಂ ಸತೀಶ್, ಶ್ರದ್ಧಾ ಜೋಡಿ
ಅನಿಷ್‌ ನಿರ್ದೇಶನದಲ್ಲಿಈ ಕಿರುಚಿತ್ರ ಮೂಡಿ ಬಂದಿದ್ದು, ಹಳ್ಳಿಗಳು ಹೇಗೆ ವೃದ್ಧಾಶ್ರಮದಂತೆ ಭಾಸವಾಗುತ್ತವೆ ಎನ್ನುವ ಕುರಿತಾದ ಕಥೆ ಇಲ್ಲಿದೆ. ಹಳ್ಳಿಗಳಲ್ಲಿ ಈಗ ಯುವಕರ ಸಂಖ್ಯೆ ಕಮ್ಮಿ ಆಗುತ್ತಿದೆ. ಎಲ್ಲರು ನಗರಪ್ರದೇಶಗಳತ್ತ ವಲಸೆ ಹೋಗುತ್ತಿದ್ದಾರೆ. ಇದರಿಂದ ಸಂಬಂಧಗಳು ಹೇಗೆ ಸಡಿಲಗೊಳ್ಳುತ್ತಿವೆ ಎಂಬುದನ್ನು ಬಹಳ ಅಪ್ತವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌