ಆ್ಯಪ್ನಗರ

ರೆಕಾರ್ಡ್ ಮೇಲೆ ರೆಕಾರ್ಡ್ ಬರೆದ ನಟ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ; ಕಾರಣ ಏನು ಗೊತ್ತಾ?

'ಜೊತೆ ಜೊತೆಯಲಿ' ಧಾರಾವಾಹಿ ಟಿಆರ್‌ಪಿಯಲ್ಲಿ ಇತಿಹಾಸ ಸೃಷ್ಟಿಸಿ ದಾಖಲೆ ಬರೆದಿದೆ. ಈಗ ಇದರ ಹೀರೋ ರಿಯಲ್ ಲೈಫ್‌ಲ್ಲಿ ಒಟ್ಟಾರೆ 5 ರೆಕಾರ್ಡ್ ಮಾಡಿ ದಾಖಲೆ ಬರೆದಿದ್ದಾರೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Vijaya Karnataka Web 19 Nov 2019, 7:46 pm
‘ಜೊತೆ ಜೊತೆಯಲಿ’ ಧಾರಾವಾಹಿ ಕಿರುತೆರೆಯಲ್ಲಿ ಭಾರಿ ಜನಪ್ರಿಯತೆ ಗಳಿಸಿದೆ. ಧಾರಾವಾಹಿ ಆರಂಭವಾದಾಗಿನಿಂದಲೂ ಈ ಧಾರಾವಾಹಿ ನಂಬರ್ 1 ಸ್ಥಾನದಲ್ಲಿದೆ. ಈ ಧಾರಾವಾಹಿ ನಟ ಅನಿರುದ್ಧ್ ಇದೀಗ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ನಲ್ಲೂ ಟಾಪ್-100ನಲ್ಲಿದ್ದಾರೆ. ಅಂದರೆ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ 2019ರ 100 ರೆಕಾರ್ಡ್ ಹೋಲ್ಡರ್ಸ್ ಪೈಕಿ ಅನಿರುದ್ಧ್ ಕೂಡ ಒಬ್ಬರು. ಇದಕ್ಕೆ ಕಾರಣ ಅವರ ಕಿರುಚಿತ್ರಗಳು. ಅಷ್ಟು ಮಾತ್ರವಲ್ಲದೆ ಅವರು ರೆಕಾರ್ಡ್ ಮೇಲೆ ರೆಕಾರ್ಡ್ ಮಾಡಿದ್ದಾರೆ.
Vijaya Karnataka Web aniruddha jatkar produced short film and got place in record holders
ರೆಕಾರ್ಡ್ ಮೇಲೆ ರೆಕಾರ್ಡ್ ಬರೆದ ನಟ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ; ಕಾರಣ ಏನು ಗೊತ್ತಾ?


'ಜೊತೆ ಜೊತೆಯಲಿ' ಧಾರಾವಾಹಿ ತಂಡ ಏಕಾಏಕಿ ಮೆಟ್ರೋದಲ್ಲಿ ಪ್ರಯಾಣಿಸಿದ್ದೇಕೆ ಗೊತ್ತಾ?

ಈ ಹಿಂದೆ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ನ ನಾಲ್ಕು ಪ್ರಶಸ್ತಿಗೆ ಪಾತ್ರರಾಗಿದ್ದ ಅನಿರುದ್ಧ್, ಒಟ್ಟು ಐದು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಕಿರುಚಿತ್ರಗಳಿಗೆ ಇವರೇ ನಿರ್ದೇಶನ ಮಾಡಿ, ಸಂಭಾಷಣೆ ಬರೆದಿದ್ದರು. ಜೊತೆಗೆ ‘ಕಲಾಂ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಲ್ಲೂ ಐದು ದಾಖಲೆ ಮಾಡಿರುವ ಅವರು, ಅದೇ ಕಾರಣಕ್ಕೆ ‘ಕಲಾಮ್ಸ್ ಗೋಲ್ಡನ್ ಅವಾರ್ಡ್’ ಕೂಡ ಪಡೆದಿದ್ದಾರೆ. ಇನ್ನು ‘ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ಈಗಾಗಲೇ ನಾಲ್ಕು ಅವಾರ್ಡ್‌ಗಳನ್ನ ಪಡೆದಿರುವ ಅವರು, ಇದೀಗ ‘ಗ್ರಾೃಂಡ್ ಮಾಸ್ಟರ್’ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇವೆಲ್ಲವೂ ಅವರ ‘ಕೀರ್ತಿ ಇನ್ನೋವೇಷನ್ಸ್’ ಮೂಲಕ ನಿರ್ಮಾಣಗೊಂಡ 6 ಕಿರುಚಿತ್ರಗಳಿಂದಾಗಿ ಲಭಿಸಿದೆ.

ಕನ್ನಡದಲ್ಲಿ ಇತಿಹಾಸ ನಿರ್ಮಿಸಿದ ವಿಷ್ಣುವರ್ಧನ್ ಅಳಿಯ ಅನಿರುದ್ಧ್

ಈ ಆರೂ ಕಿರುಚಿತ್ರಗಳನ್ನು ಅವರು 2018ರಲ್ಲಿ ವಿಷ್ಣುವರ್ಧನ್ ಅವರ ಜನ್ಮದಿನವಾದ ಸೆ. 18ರಂದು ಬಿಡುಗಡೆ ಮಾಡಿದ್ದರು. ವಿಷ್ಣುವರ್ಧನ್ ಅವರ ಆಶೀರ್ವಾದ, ಕುಟುಂಬದ ಸಹಕಾರ, ಜನರ ಪ್ರೀತಿಯಿಂದಾಗಿ ಇವೆಲ್ಲವೂ ಸಾಧ್ಯವಾಗಿದೆ ಎಂದು ಅವರು ಸಂತೋಷ ಹಂಚಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌