ಆ್ಯಪ್ನಗರ

ಬಾಲಿವುಡ್‌ಗೆ ಹಾರಿದ ಕನ್ನಡತಿಯರಾದ ಅನುಪಮಾ ಗೌಡ, ಮಯೂರಿ !

ಕನ್ನಡಿಗರೆಲ್ಲ ಸೇರಿಕೊಂಡು ಹಿಂದಿ ಸಿನಿಮಾ ಮಾಡಿ ಬಾಲಿವುಡ್‌ಗೆ ಎಂಟ್ರಿ ಕೊಡಲು ಸಿದ್ಧರಾಗಿದ್ದಾರೆ. ನಿರ್ದೇಶಕ ಪ್ರದೀಪ್‌ ವರ್ಮಾ ಇಂಥದ್ದೊಂದು ಪ್ರಯತ್ನ ಮಾಡಿದ್ದು, ನಟಿ ಅನುಪಮಾ ಗೌಡ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಡುತ್ತಿದ್ದಾರೆ. ಇಂಗ್ಲಿಷ್‌ ಹೆಸರಿನ ಚಿತ್ರ, ಇದರ ಭಾಷೆ ಹಿಂದಿ, ಈ ಸಿನಿಮಾ ಮಾಡಿದವರು ಕನ್ನಡಿಗರು. ಕನ್ನಡ ಚಿತ್ರರಂಗದಲ್ಲಿಈಗಾಗಲೇ ಸಿನಿಮಾ ಮಾಡಿರುವ ನಿರ್ದೇಶಕ ಪ್ರದೀಪ್‌ ವರ್ಮಾ ಈಗ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

Vijaya Karnataka Web 31 Jan 2020, 12:04 pm
ಕನ್ನಡಿಗರೆಲ್ಲ ಸೇರಿಕೊಂಡು ಹಿಂದಿ ಸಿನಿಮಾ ಮಾಡಿ ಬಾಲಿವುಡ್‌ಗೆ ಎಂಟ್ರಿ ಕೊಡಲು ಸಿದ್ಧರಾಗಿದ್ದಾರೆ. ನಿರ್ದೇಶಕ ಪ್ರದೀಪ್‌ ವರ್ಮಾ ಇಂಥದ್ದೊಂದು ಪ್ರಯತ್ನ ಮಾಡಿದ್ದು, ನಟಿ ಅನುಪಮಾ ಗೌಡ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಡುತ್ತಿದ್ದಾರೆ. ಇಂಗ್ಲಿಷ್‌ ಹೆಸರಿನ ಚಿತ್ರ, ಇದರ ಭಾಷೆ ಹಿಂದಿ, ಈ ಸಿನಿಮಾ ಮಾಡಿದವರು ಕನ್ನಡಿಗರು. ಕನ್ನಡ ಚಿತ್ರರಂಗದಲ್ಲಿಈಗಾಗಲೇ ಸಿನಿಮಾ ಮಾಡಿರುವ ನಿರ್ದೇಶಕ ಪ್ರದೀಪ್‌ ವರ್ಮಾ ಈಗ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
Vijaya Karnataka Web anupama gowda and mayuri new film is the fallen
ಬಾಲಿವುಡ್‌ಗೆ ಹಾರಿದ ಕನ್ನಡತಿಯರಾದ ಅನುಪಮಾ ಗೌಡ, ಮಯೂರಿ !


ಪ್ರಕೃತಿಯ ಮಹತ್ವ ಸಾರುವ ಸಿನಿಮಾವಿದು

ನಿರ್ದೇಶಕ ಪ್ರದೀಪ್‌ ವರ್ಮಾ 'ದಿ ಫಾಲನ್‌' ಎಂಬ ವಿಭಿನ್ನ ಕತೆಯ ಸಿನಿಮಾ ಮಾಡಿದ್ದಾರೆ. ಅನುಪಮಾ ಗೌಡ, ಭವಾನಿ ಪ್ರಕಾಶ್‌, ಸತ್ಯ ಮತ್ತು ಮಯೂರಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಪೋಸ್ಟರ್‌ ರಿಲೀಸ್‌ ಆಗಿದ್ದು ಕುತೂಹಲ ಕೆರಳಿಸಿದೆ. ಈ ಹಿಂದೆ ಊರ್ವಿ ಚಿತ್ರ ನಿರ್ದೇಶನ ಮಾಡಿದ್ದ ಪ್ರದೀಪ್‌ ವರ್ಮಾ ಹಾಲಿವುಡ್‌ನಲ್ಲಿ ಕಾಣಬಹುದಾದ ರೀತಿಯ ಕಥಾ ವಸ್ತುವನ್ನು ತಮ್ಮ ಸಿನಿಮಾಗೆ ಆಯ್ಕೆ ಮಾಡಿರುವುದು ವಿಶೇಷ. ಪ್ರಕೃತಿಯ ಮಹತ್ವವನ್ನು ಸಾರುವ ಈ ಸಿನಿಮಾದಲ್ಲಿ ಮನು ಕುಲವೇ ನಾಶದ ಅಂಚಿಗೆ ಬಂದಾಗ ಕುಟುಂಬವೊಂದು ಹೇಗೆ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನಿಸುತ್ತದೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡಿದ್ದಾರೆ. ಮಾನವ ಜಗತ್ತು ನಾಶವಾದಾಗ ಉಳಿದುಕೊಳ್ಳುವ ಕುಟುಂಬ ಕಥೆ ಚಿತ್ರದಲ್ಲಿದೆ.

'5 ಸಾವಿರ ವರ್ಷಗಳ ನಂತರ ಏನಾಗಬಹುದು ಎನ್ನುವುದು ಈ ಚಿತ್ರದಲ್ಲಿದೆ

ಹಾಲಿವುಡ್‌ ಸಿನಿಮಾಗಳಲ್ಲಿಇಂಥದ್ದೊಂದು ಪ್ರಯೋಗಾತ್ಮಕ ಸಿನಿಮಾಗಳನ್ನು ನೋಡಬಹುದಾಗಿದೆ. ಬಾಲಿವುಡ್‌ನಲ್ಲೂ ಇದುವರೆಗೆ ಇಂಥ ಪ್ರಯತ್ನ ನಡೆದಿಲ್ಲ ಎನ್ನಬಹುದು. ಕಾಲ್ಪನಿಕ ಕಥೆಯೊಂದನ್ನು ಹೆಣೆದಿರುವ ಪ್ರದೀಪ್‌ ವರ್ಮಾ ಪುರಾಣ ಕಥೆಗಳ ಹಲವು ವಿಷಯಗಳನ್ನೂ ಸಾಂಕೇತಿಕವಾಗಿ ಬಳಸಿದ್ದಾರೆ. '5 ಸಾವಿರ ವರ್ಷಗಳ ನಂತರ ಏನಾಗಬಹುದು ಎನ್ನುವುದು ಚಿತ್ರದಲ್ಲಿದೆ. ಇದುವರೆಗಿನ ಎಲ್ಲಾನಾಗರಿಕ ಲಕ್ಷಣಗಳೂ ಅಳಿಸಿಹೋಗಿರುತ್ತೆ. ಎಲ್ಲಾ ರೀತಿಯ ತಾಂತ್ರಿಕ ಸೌಲಭ್ಯಗಳು, ವ್ಯವಸ್ಥೆ ನಾಶಗೊಂಡಿರುತ್ತದೆ. ಇಂಥ ಪರಿಸ್ಥಿತಿಯಲ್ಲಿನಾಲ್ಕೈದು ಮಂದಿ ಮಾತ್ರ ಬದುಕುಳಿದಿರುತ್ತಾರೆ. ಅವರು ಉಳಿದುಕೊಳ್ಳಲು ಹೇಗೆ ಪ್ರಯತ್ನಿಸುತ್ತಾರೆ ಎನ್ನುವುದು ಸಿನಿಮಾದಲ್ಲಿ ಹೇಳಿದ್ದೇವೆ' ಎಂದಿದ್ದಾರೆ ಪ್ರದೀಪ್‌. ದ್ವಯಾ ಎಂಬುವವಳು ಏಕ್ವಾನನ್ನು ಪ್ರೀತಿಸುತ್ತಿರುತ್ತಾಳೆ. ಅನುಪಮಾ ಗೌಡ ದ್ವಯಾ ಪಾತ್ರದಲ್ಲಿ ನಟಿಸಿದ್ದರೆ, ಸತ್ಯ ಬಿ.ಜಿ. ಏಕ್ವಾ ಪಾತ್ರದಲ್ಲಿ ನಟಿಸಿದ್ದಾರೆ. ಟ್ರಿನಿನಿ ಎಂಬ ಪಾತ್ರದಲ್ಲಿ ಮಯೂರಿ ನಟಿಸಿದ್ದಾರೆ. ಪೋಸ್ಟರ್‌ ಈಗಾಗಲೇ ಭಾರೀ ಕುತೂಹಲ ಕೆರಳಿಸಿದೆ. ಆನಂದ್‌ ಸುರೇಶ್‌ ಛಾಯಾಗ್ರಹಣ ಮಾಡಿದ್ದಾರೆ. ಜಾರ್ಜಿಯಾ ದೇಶದವರಾದ ಲೂಕಾ ಲೋರಿ ಸಂಗೀತ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌