ಆ್ಯಪ್ನಗರ

ಕನ್ನಡತಿ ಅನುಷ್ಕಾ ಶೆಟ್ಟಿ ಬಗ್ಗೆ ಹಬ್ಬಿದೆ ಹೊಸ ಗಾಸಿಪ್‌!

'ಭಾಗಮತಿ' ಚಿತ್ರದ ನಂತರ ತೂಕ ಇಳಿಸುವ ಸಲುವಾಗಿ ನಟಿ ಅನುಷ್ಕಾ ಶೆಟ್ಟಿ ವಿದೇಶಕ್ಕೆ ತೆರೆಳಿದ್ದರು. ಇದೀಗ ಅವರು ಸಿನಿಮಾಗಳಲ್ಲಿ ಸಕ್ರೀಯರಾಗಿದ್ದಾರೆ. ಆದರೆ, ವದಂತಿಗಳು ಮಾತ್ರ ಅವರನ್ನು ಬಿಡುತ್ತಿಲ್ಲ!!

Vijaya Karnataka Web 22 Oct 2019, 6:26 pm
'ಬಾಹುಬಲಿ' ನಂತರ ಚಿತ್ರದ ನಂತರ ನಟಿ ಅನುಷ್ಕಾ ಶೆಟ್ಟಿ ಅವರ ಖ್ಯಾತಿ ಮತ್ತಷ್ಟು ಹೆಚ್ಚಾಯಿತು. ಆ ಬಳಿಕ ತೂಕ ಇಳಿಸಿಕೊಳ್ಳುವ ಸಲುವಾಗಿ ಅವರು ಸುಧೀರ್ಘ ಸಮಯ ಚಿತ್ರರಂಗದಿಂದ ಅಂತರ ಕಾಯ್ದುಕೊಂಡು ವಿದೇಶದಲ್ಲಿ ನೆಲೆಸಿದ್ದರು. ಇದೀಗ ಅವರು 'ನಿಶ್ಯಬ್ದಂ' ಚಿತ್ರದ ಮೂಲಕ ಮತ್ತೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿದ್ದಾರೆ. ಅದರೆ, ಅವರ ಬಗ್ಗೆ ಹಬ್ಬಿರುವ ವದಂತಿಯೊಂದು ಸಖತ್ ಸದ್ದು ಮಾಡುತ್ತಿದೆ.
Vijaya Karnataka Web Anushka.

ಕೋಟ್ಯಂತರ ಕನ್ನಡಿಗರ ಮನಗೆದ್ದ ಅನುಷ್ಕಾ ಶೆಟ್ಟಿ ಪೋಸ್ಟ್
ಅಷ್ಟಕ್ಕೂ ಆಗಿದ್ದೇನೆಂದರೆ, ಇತ್ತೀಚೆಗೆ ತೆರೆಕಂಡ 'ಸೈ ರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಪಾತ್ರ ಮಾಡಿದ್ದರು ಅನುಷ್ಕಾ. ಸಿನಿಮಾದ ಆರಂಭ ಮತ್ತು ಅಂತ್ಯದಲ್ಲಿ ಬರುವ ಈ ಪಾತ್ರಕ್ಕೆ ಪ್ರೇಕ್ಷಕರಿಂದ ಸಿಕ್ಕಾಪಟ್ಟೆ ರೆಸ್ಪಾನ್ಸ್ ಸಿಕ್ಕಿತ್ತು. ಬಹಳ ದಿನಗಳ ತೆರೆಮೇಲೆ ಅನುಷ್ಕಾರನ್ನು ಕಂಡ ಅಭಿಮಾನಿಗಳು ಫುಲ್‌ ಖುಷಿಯಾಗಿದ್ದರು. ಬಹುಶಃ ಇದೇ ಈಗ ಹೊಸದೊಂದು ಗಾಸಿಪ್‌ ಹುಟ್ಟಿಕೊಳ್ಳಲು ಕಾರಣವಾಗಿದೆ ಎಂಬ ಮಾತು ಕೇಳಿಬಂದಿದೆ.
ಅಣ್ಣಾವ್ರು ಲೆಜೆಂಡ್‌ ಎಂದ ಅನುಷ್ಕಾ
ಅಷ್ಟಕ್ಕೂ ಹಬ್ಬಿರುವ ಗಾಸಿಪ್ ಏನೆಂದರೆ, ರಾಜಮೌಳಿ ನಿರ್ದೇಶನದ 'ಆರ್‌ಆರ್‌ಆರ್‌' ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ನಟಿಸಲಿದ್ದಾರೆ ಎಂಬುದು. ಭಾರೀ ಬಜೆಟ್‌ನ ಈ ಸಿನಿಮಾದಲ್ಲಿ ರಾಮ್‌ ಚರಣ್ ಮತ್ತು ಜೂ. ಎನ್‌ಟಿಆರ್ ಪ್ರಮುಖ ಪಾತ್ರದಲ್ಲಿದ್ದಾರೆ. ಆಲಿಯಾ ಭಟ್‌ ಈ ಚಿತ್ರದ ನಾಯಕಿ. ಇನ್ನು, ಅಜಯ್‌ ದೇವ್‌ಗನ್‌ ಕೂಡ ಈ ಸಿನಿಮಾದಲ್ಲಿದ್ದಾರೆ. ಈ ಸಿನಿಮಾಕ್ಕೀಗ ಅನುಷ್ಕಾ ಎಂಟ್ರಿ ಕೊಟ್ಟರೆ? ಸದ್ಯ ಅಂಥದ್ದೊಂದು ಸುದ್ದಿ ದೊಡ್ಡಮಟ್ಟದಲ್ಲಿ ಹಬ್ಬಿದೆ. ಅಲ್ಲದೆ, ರಾಜಮೌಳಿ ನಿರ್ದೇಶನದ 'ಬಾಹುಬಲಿ'ಯಲ್ಲಿ ಅನುಷ್ಕಾ ನಟಿಸಿದ್ದರಿಂದ, ಇಬ್ಬರ ನಡುವೆ ಒಳ್ಳೆಯ ಒಡನಾಟ ಇದೆ. ಹಾಗಾಗಿ, 'ಆರ್‌ಆರ್‌ಆರ್‌' ಸಿನಿಮಾದಲ್ಲಿ ಅನುಷ್ಕಾ ಇರಲಿದ್ದಾರೆ ಎನ್ನಲಾಗಿತ್ತು. ಆದರೆ, ಸ್ವೀಟಿ ಈ ಸಿನಿಮಾದಲ್ಲಿ ನಟಿಸಲು ಚಾನ್ಸೇ ಇಲ್ಲ ಎಂಬುದು ರಾಜಮೌಳಿ ಆಪ್ತಮೂಲಗಳು ನೀಡುವ ಮಾಹಿತಿ. ಅನುಷ್ಕಾ ಅವರಿಂದ 'ಆರ್‌ಆರ್‌ಆರ್‌' ಚಿತ್ರಕ್ಕಾಗಿ ಯಾವುದೇ ಯಾವುದೇ ಅತಿಥಿ ಪಾತ್ರ ಮಾಡಿಸುವ ಆಲೋಚನೆ ರಾಜಮೌಳಿಗೆ ಇಲ್ಲವಂತೆ. ಸದ್ಯ ಚಿತ್ರೀಕರಣದತ್ತ ಅವರ ಗಮನವೆಲ್ಲ ಇದೆಯಂತೆ. ಮುಂದಿನ ವಾರದಿಂದ ಸತತವಾಗಿ ಹೈದರಾಬಾದ್‌ನಲ್ಲಿ ಚಿತ್ರೀಕರಣ ನಡೆಯಲಿದಯಂತೆ. ಮುಂದಿನ ವರ್ಷ ಜುಲೈಗೆ ಸಿನಿಮಾವನ್ನು ತೆರೆಗೆ ತರುವ ಯೋಜನೆ ನಿರ್ಮಾಪಕರದ್ದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌