ಆ್ಯಪ್ನಗರ

ಮದುವೆಯಲ್ಲಿ ಒಳ್ಳೆಯ ಅಂಶ ಇದ್ದಿದ್ದರೆ ಜೀಸಸ್ 10 ಮದುವೆ ಆಗಿರುತ್ತಿದ್ದರು: ಪುರಿ ಜಗನ್ನಾಥ್!

ಭಾರತ ದೇಶದಲ್ಲಿ ಮದುವೆಗೆ ಅದರದ್ದೇ ಆದ ಬೆಲೆ, ಗೌರವವಿದೆ. ಪುನೀತ್ ರಾಜ್‌ಕುಮಾರ್ ಅವರ 'ಅಪ್ಪು' ಸಿನಿಮಾದ ನಿರ್ದೇಶಕ ಪುರಿ ಜಗನ್ನಾಥ್ ಮದುವೆ ಬಗ್ಗೆ ವಿವಾದಾತ್ಮಕ ಮಾತುಗಳನ್ನಾಡಿದ್ದಾರೆ. ಇದೀಗ ಸಾಕಷ್ಟು ಚರ್ಚೆಯಾಗುತ್ತಿದೆ.

Vijaya Karnataka Web 29 Sep 2020, 7:21 pm
'ಪೊಕಿರಿ', 'ಬ್ಯುಸಿನೆಸ್‌ಮ್ಯಾನ್' ಮುಂತಾದ ಸಿನಿಮಾಗಳ ಮೂಲಕ ಪ್ರಖ್ಯಾತಿ ಪಡೆದಿರುವ ನಿರ್ದೇಶಕ ಪುರಿ ಜಗನ್ನಾಥ್ ಮದುವೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮದುವೆ ಔಟ್‌ಡೇಟೆಡ್ ಎಂದಿದ್ದಾರೆ. ಪ್ರೇಕ್ಷಕರ ಮಧ್ಯೆ ಮದುವೆಯಾದ ನಟಿಯರಿಗೆ ಯಾವುದೇ ಬೆಲೆ ಇಲ್ಲ ಎಂದಿದ್ದಾರೆ.
Vijaya Karnataka Web appu movie director puri jagannath gave controversial statement about marriage
ಮದುವೆಯಲ್ಲಿ ಒಳ್ಳೆಯ ಅಂಶ ಇದ್ದಿದ್ದರೆ ಜೀಸಸ್ 10 ಮದುವೆ ಆಗಿರುತ್ತಿದ್ದರು: ಪುರಿ ಜಗನ್ನಾಥ್!


podcastನಲ್ಲಿ ಪುರಿ ಜಗನ್ನಾಥ್ ಮಾತು!

podcast ಎಪಿಸೋಡ್‌ನಲ್ಲಿ ಮಾತನಾಡಿರುವ ಜಗನ್ನಾಥ್, ಮದುವೆ ಎಂಬ ವ್ಯವಸ್ಥೆ ಬಗ್ಗೆ ಒಂದಷ್ಟು ವಿಷಯ ಹೇಳಿಕೊಂಡಿದ್ದಾರೆ. ಕೆಲಸದ ಕುರಿತು ಒಲವು ಹೊಂದಿರುವವರು ಮದುವೆಯಾಗಲೇಬಾರದು. ಈ ಹಿಂದೆ ಟ್ವಿಟರ್‌ನಲ್ಲಿ ಈ ಎಪಿಸೋಡ್‌ನ ತುಣಕನ್ನು ಜಗನ್ನಾಥ್ ಶೇರ್ ಮಾಡಿದ್ದರು. ಇದೀಗ ಟ್ರೆಂಡಿಂಗ್‌ನಲ್ಲಿದೆ.

ಮದುವೆ ಬಗ್ಗೆ ಜಗನ್ನಾಥ್ ಹೇಳೋದೇನು?

'ಮದುವೆ ಎನ್ನುವುದು ಹಳೆಯದು. ವಿವಾಹ ಎನ್ನುವ ಕಾನ್ಸೆಪ್ಟ್ ಒಳ್ಳೆಯದಾಗಿದ್ದರೆ ಜೀಸಸ್ 10 ಮದುವೆಯಾಗಿರುತ್ತಿದ್ದರು. ಹೆಂಡತಿ ಬಿಟ್ಟಮೇಲೆ ರಾಜಕುಮಾರ ಸಿದ್ದಾರ್ಥ್ ಬುದ್ಧನಾದನು. ನಿಮ್ಮ ಕೆಲಸದ ಬಗ್ಗೆ ನಿಮಗೇನಾದರೂ ತುಡಿತವಿದ್ದರೆ ಮದುವೆಯಾಗಬೇಡಿ. ನಿಮಗೆ ದೊಡ್ಡ ಆಲೋಚನೆಯಿದ್ದರೆ ಮದುವೆಯಾಗಬೇಡಿ. ನಿಮಗೆ ಗಂಡ, ಕುಟುಂಬ ಬೇಕು ಎಂದಿದ್ದರೆ ಮದುವೆಯಾಗಿ' ಎಂದು ಪುರಿ ಜಗನ್ನಾಥ್ ಹೇಳಿದ್ದಾರೆ.

ಜೀಸಸ್ 10 ಮದುವೆಯಾಗಿರುತ್ತಿದ್ದ: ಪುರಿ ಜಗನ್ನಾಥ್
'ಎವರೇಜ್ ಆಗಿರುವವರು ಮದುವೆಯಾಗುತ್ತಾರೆಯೇ ವಿನಃ ಜೀನಿಯಸ್ ಮದುವೆಯಾಗೋದಿಲ್ಲ. ಮದುವೆಯಾಗೋದು ತಪ್ಪು ಅಂತ ಯಾವ ಧರ್ಮವೂ ಹೇಳೋದಿಲ್ಲ. ಹೀಗೆ ಏನಾದರೂ ಹೇಳಿದ್ದರೆ ಯಾರೂ ಧರ್ಮವನ್ನು ನಂಬೋದಿಲ್ಲ. ಕೆಲ ಧರ್ಮಗಳು ಮದುವೆಯನ್ನು ವ್ಯವಹಾರದ ರೀತಿಯಿಂದ ನೋಡುತ್ತಾರೆ, ಪುರೋಹಿತರು ಮದುವೆ ಮಾಡಿಸಿ ದುಡ್ಡು ಮಾಡಿಕೊಳ್ಳುತ್ತಾರೆ. ಮದುವೆಯಾಗದಿರುವವರಿಗೆ ಸಮಾಜದಲ್ಲಿ ಯಾವುದೇ ಬೆಲೆ ಇರುವುದಿಲ್ಲ. ಮದುವೆಯಾಗದಿರುವವರಿಗೆ ಸಿಗುವಷ್ಟು ಸ್ಟಾರ್‌ಡಂ ಮದುವೆಯಾದ ನಟಿಯರಿಗೆ ಇರೋದಿಲ್ಲ. ಹೀಗಾಗಿಯೇ ತಾಳಿಯಿಲ್ಲದೆ ಕೆಲವರು ಹಾಗೆ ತಿರುಗುತ್ತಾರೆ. ಮದುವೆಯಾಗಿ ಸಮಸ್ಯೆ ಎದುರಿಸುವವರು ಅವಿವಾಹಿತ ಬಾಬಾಗಳ ಮುಂದೆ ಬಂದು ಸಮಸ್ಯೆ ಪರಿಹರಿಸಿಕೊಂಡಿ ಎಂದು ಕೇಳಿಕೊಳ್ಳುತ್ತಾರೆ. ಸ್ವಾತಂತ್ರ್ಯಕ್ಕೆ ಬೆಲೆಯಿದೆ. ಮನೆಯಲ್ಲಿ ಒಳ್ಳೆಯ ಸಂಬಂಧ ಇದೆ, ಮದುವೆಯಾಗು ಅಂದರೆ ನೀವು ಮದುವೆಯಾಗಬೇಡಿ' ಎಂದು ಹೇಳಿದ್ದಾರೆ.

Also Read-ಪುರಿ ಜಗನ್ನಾಥ ದೇವಾಲಯದಲ್ಲಿ ನಡೆಯುವ ಅಚ್ಚರಿಯ ಸಂಗತಿಗಳೇನು ಗೊತ್ತಾ?

'ಅಪ್ಪು' ಸಿನಿಮಾ ನಿರ್ದೇಶಕ ಪುರಿ ಜಗನ್ನಾಥ್!

2011ರಲ್ಲಿ ನಟ ಪುನೀತ್ ರಾಜ್‌ಕುಮಾರ್ ಅವರನ್ನು ಪೂರ್ಣ ಪ್ರಮಾಣದ ನಟನಾಗಿ 'ಅಪ್ಪು' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಖ್ಯಾತಿಗೆ ಜಗನ್ನಾಥ್ ಅವರಿಗೆ ಸಲ್ಲುತ್ತದೆ. 2000ರಿಂದ ಇಲ್ಲಿಯವರೆಗೆ ಅನೇಕ ಸಿನಿಮಾಗಳನ್ನು ಜಗನ್ನಾಥ್ ನಿರ್ದೇಶನ ಮಾಡಿದ್ದಾರೆ. ತೆಲುಗು ಚಿತ್ರರಂಗದ ಸ್ಟಾರ್ ನಟರಿಗೆ ನಿರ್ದೇಶನ ಮಾಡಿರುವ ಜಗನ್ನಾಥ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌