ಆ್ಯಪ್ನಗರ

ವಿ.ಹರಿಕೃಷ್ಣ-ಅರ್ಜುನ್ ಜನ್ಯ ಅವರನ್ನು ಒಂದಾಗಿಸಿದ 'ಚಾಲೆಂಜಿಂಗ್ ಸ್ಟಾರ್' ದರ್ಶನ್!! ಏನಿದು ಹೊಸ ವಿಷ್ಯ??!

ಕನ್ನಡದ ಇಬ್ಬರು ಸ್ಟಾರ್ ಸಂಗೀತ ನಿರ್ದೇಶಕರಾದ ವಿ. ಹರಿಕೃಷ್ಣ- ಅರ್ಜುನ್ ಜನ್ಯ ಈಗ ಒಟ್ಟಿಗೆ ಕೆಲಸ ಮಾಡಲಿದ್ದಾರೆ. ಅದು ಸಾಧ್ಯವಾಗಿರುವುದು 'ಚಾಲೆಂಜಿಂಗ್ ಸ್ಟಾರ್' ದರ್ಶನ್ ಅವರಿಂದ. ಸದ್ಯ ಅಭಿಮಾನಿಗಳಿಗೆ ಈ ವಿಷಯ ಸಂಭ್ರಮ ತಂದಿದೆ.

Vijaya Karnataka Web 9 Oct 2019, 6:03 pm
ವಿ. ಹರಿಕೃಷ್ಣ ಮತ್ತು ಅರ್ಜುನ್ ಜನ್ಯ ಕನ್ನಡದ ಪ್ರತಿಭಾನ್ವಿತ ಹಾಗೂ ಬೇಡಿಕೆಯ ಸಂಗೀತ ನಿರ್ದೇಶಕರು. ಕನ್ನಡದ ಬಹುತೇಕ ಹೀರೋಗಳ ಸಿನಿಮಾಗಳಿಗೆ ಈ ಇಬ್ಬರು ಸಂಗೀತ ನಿರ್ದೇಶಕರು ಕೆಲಸ ಮಾಡಿದ್ದಾರೆ. ಆದರೆ, ಇಬ್ಬರು ಒಟ್ಟಿಗೆ ಕೆಲಸ ಮಾಡಿದ್ದಾರಾ? ಇಲ್ಲ. ಆದರೆ, ಅದನ್ನು ಸಾಧ್ಯವಾಗಿಸುವತ್ತ 'ಚಾಲೆಂಜಿಂಗ್ ಸ್ಟಾರ್' ದರ್ಶನ್ ಮುಂದಾಗಿದ್ದಾರೆ.
Vijaya Karnataka Web Darshan

ಕರುನಾಡ ಜನತೆಗೆ ಧನ್ಯವಾದ ತಿಳಿಸಿದ ದರ್ಶನ್! ಇದರ ಹಿಂದಿದೆ ಒಂದು ವಿಶೇಷ ಕಾರಣ

ಹೌದು, 50ಕ್ಕೂ ಅಧಿಕ ಸಿನಿಮಾಗಳಲ್ಲಿ ದರ್ಶನ್ ನಟಿಸಿದ್ದಾರೆ. ಅದರಲ್ಲಿ ಅರ್ಧದಷ್ಟು ಚಿತ್ರಗಳಿಗೆ ಸಂಗೀತ ನೀಡಿರುವುದು ವಿ. ಹರಿಕೃಷ್ಣ. ಇವರಿಬ್ಬರ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ ಹಾಡುಗಳು ಸಾಕಷ್ಟು ಹಿಟ್ ಆಗಿವೆ. ಹಾಗಾಗಿ, ಪ್ರತಿ ಸಿನಿಮಾದಲ್ಲೂ ಈ ಜೋಡಿಯನ್ನೇ ಅಭಿಮಾನಿಗಳು ಎದುರು ನೋಡುತ್ತಿದ್ದರು. ಆದರೆ, ಈಚೆಗೆ ಆ ಜಾಗಕ್ಕೆ ಅರ್ಜುನ್ ಜನ್ಯ ಎಂಟ್ರಿ ನೀಡಿದ್ದರು.



'ಚಕ್ರವರ್ತಿ' ಚಿತ್ರದ ಮೂಲಕ ಅರ್ಜುನ್ ಜನ್ಯ ಕೂಡ ದರ್ಶನ್ ಸಿನಿಮಾಗಳಿಗೆ ಸಂಗೀತ ನೀಡಲು ಆರಂಭಿಸಿದ್ದರು. ನಂತರ 'ತಾರಕ್'ಗೂ ಅವರದ್ದೇ ಸಂಗೀತ ಸಾರಥ್ಯವಿತ್ತು. ಇದೀಗ ತೆರೆಗೆ ಸಿದ್ಧವಾಗಿರುವ 'ಒಡೆಯ' ಚಿತ್ರಕ್ಕೂ ಅರ್ಜುನ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ಇನ್ನು, ಶೂಟಿಂಗ್ ಹಂತದಲ್ಲಿರುವ ತರುಣ್ ಸುಧೀರ್‌ ನಿರ್ದೇಶನದ 'ರಾಬರ್ಟ್' ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಅರ್ಜುನ್ ಜನ್ಯ ಆಯ್ಕೆ ಆಗಿದ್ದಾರೆ. ಆದರೆ, ಅನೇಕ ಅಭಿಮಾನಿಗಳು ಹರಿಕೃಷ್ಣ ಇದ್ದರೆ ಚೆನ್ನಾಗಿತ್ತು ಎಂಬ ಮಾತುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು.
ಮಾಧ್ಯಮದವರೊಂದಿಗೆ ಮಾತನಾಡದೆ ತರಾತುರಿಯಲ್ಲಿ ಕಾರು ಹತ್ತಿದ ದರ್ಶನ್‌

ಸದ್ಯ ದರ್ಶನ್ ಟ್ವಿಟರ್ ಮೂಲಕ ಹೊಸದೊಂದು ವಿಚಾರವನ್ನು ಹಂಚಿಕೊಂಡಿದ್ದು, 'ನನ್ನ ‘ಒಡೆಯ’ ಮತ್ತು ‘ರಾಬರ್ಟ್’ ಚಿತ್ರಗಳ ಹಾಡುಗಳ ಸಂಗೀತ ನಿರ್ದೇಶನ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ರವರದ್ದಾಗಿರುತ್ತದೆ. ಎರಡೂ ಚಿತ್ರಗಳಿಗೂ ಹಿನ್ನಲೆ ಸಂಗೀತವನ್ನು ನಮ್ಮ ರಿರೆಕಾರ್ಡಿಂಗ್ ಕಿಂಗ್ ವಿ. ಹರಿಕೃಷ್ಣ ರವರು ನೀಡಲಿದ್ದಾರೆ' ಎಂದು ಹೇಳಿದ್ದಾರೆ. ಈ ಮೂಲಕ ಈ ಪ್ರತಿಭೆಗಳನ್ನು ಒಟ್ಟಿಗೆ ಕೆಲಸ ಮಾಡುವಂತೆ ಮಾಡಿದ್ದಾರೆ ದರ್ಶನ್. ಜತೆಗೆ ಹರಿಕೃಷ್ಣ ಅವರಿಗೆ ರಿ-ರೆಕಾರ್ಡಿಂಗ್ ಕಿಂಗ್ ಎಂಬ ಹೊಸ ಬಿರುದನ್ನು ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌