ಆ್ಯಪ್ನಗರ

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಅರ್ಜುನ್ ಜನ್ಯಾ; ರಿಯಾಲಿಟಿ ಶೋಗಳಲ್ಲಿ ಇನ್ಮುಂದೆ ಭಾಗವಹಿಸುತ್ತಾರಾ?

ಕಳೆದ ಒಂದು ದಿನದಿಂದ ಅರ್ಜುನ್ ಜನ್ಯಾ ಅವರಿಗೆ ಹೃದಯಾಘಾತವಾಗಿರುವ ವಿಚಾರ ಸಾಕಷ್ಟು ಚರ್ಚೆಯಾಗಿತ್ತು. ಈಗ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹಾಗಾದರೆ ಅವರು ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಾರಾ ಎಂಬ ಬಗ್ಗೆ ಇಲ್ಲಿದೆ ಉತ್ತರ.

Vijaya Karnataka Web 28 Feb 2020, 7:29 pm
ಕಳೆದೆರಡು ದಿನಗಳ ಕೆಳಗೆ ಲಘು ಹೃದಯಾಘಾತದಿಂದ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇಂದು ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
Vijaya Karnataka Web arjun janya health updates arjun janya discharged from apollo hospital
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಅರ್ಜುನ್ ಜನ್ಯಾ; ರಿಯಾಲಿಟಿ ಶೋಗಳಲ್ಲಿ ಇನ್ಮುಂದೆ ಭಾಗವಹಿಸುತ್ತಾರಾ?


ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಇದೇ ಮಂಗಳವಾರ ಅತಿಯಾದ ಗ್ಯಾಸ್ಟ್ರಿಕ್ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ಬಂದಿದ್ದರು. ಆಗ ಹೃದಯ ಪರೀಕ್ಷೆ ನಡೆಸಿದ್ದಾಗ ಹೃದಯಾಘಾತವಾಗಿರುವುದು ಸ್ಪಷ್ಟವಾಗಿತ್ತು. ಅವರ ಹೃದಯ ಶೇಕಡಾ 99 ರಷ್ಟು ಬ್ಲಾಕ್ ಇತ್ತು. ಹೀಗಾಗಿ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಸ್ಟಂಟ್ ಅಳವಡಿಸಿದ್ದರು. ಅಲ್ಲದೇ ಇನ್ನೆರಡು ಘಂಟೆ ತಡವಾಗಿದ್ದರೂ ಅಪಾಯ ಸಂಭವಿಸುವ ಸಾಧ್ಯತೆಯೂ ಇತ್ತು ಎಂದು ವೈದ್ಯರು ತಿಳಿಸಿದ್ದರು.

ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಹೃದಯಾಘಾತಕ್ಕೆ ಅಸಲಿ ಕಾರಣ ತಿಳಿಸಿದ ವೈದ್ಯರು!

ಹಾಗಾಗಿ ಸತತ ಮೂರು ದಿನಗಳ ಪರೀಕ್ಷೆ ನಂತರ ಅರ್ಜುನ್ ಜನ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈಗಾಗಲೇ ಕನಿಷ್ಟ 4 ವಾರ ವಿಶ್ರಾಂತಿ ಪಡೆಯುವಂತೆ ಅರ್ಜುನ್ ಜನ್ಯಗೆ ವೈದ್ಯರು ಸಲಹೆ ನೀಡಿದ್ದಾರೆ. ಹೀಗಾಗಿ ಅರ್ಜುನ್ ಜನ್ಯ ಆರೋಗ್ಯ ದೃಷ್ಟಿಯಿಂದ ಸಿನಿಮಾ, ರಿಯಾಲಿಟಿ ಶೋಗಳಿಂದ ದೂರ ಉಳಿಯಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಅರ್ಜುನ್‌ ಜನ್ಯ ಶಿಸ್ತಿನ ಜೀವನಶೈಲಿ ರೂಢಿಸಿಕೊಂಡಿದ್ದರು. ಆದರೂ ಹೃದಯಾಘಾತ ಸಂಭವಿಸಿರುವುದು ಎಲ್ಲರನ್ನು ಚಕಿತಗೊಳಿಸಿದೆ.

ಕೇವಲ ಎರಡು ಗಂಟೆ ತಡವಾಗಿದ್ದರೂ ಅರ್ಜುನ್‌ ಜನ್ಯ ಜೀವಕ್ಕೆ ಕಾದಿರುತ್ತಿತ್ತು ಕುತ್ತು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌