ಆ್ಯಪ್ನಗರ

ಐದು ದಿನ ನೀರು ಕುಡಿದಿರಲಿಲ್ಲ ಟಾಲಿವುಡ್‌ ನಟ ನಾಗ ಶೌರ್ಯ! ಅದಕ್ಕೆ ಕಾರಣವೇನು?

'ಛಲೋ' ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಜೊತೆ ನಟಿಸಿದ್ದ ಟಾಲಿವುಡ್‌ ನಟ ನಾಗ ಶೌರ್ಯ ಈಗ ಹೊಸ ಸಿನಿಮಾಗಾಗಿ ಭಾರಿ ಕಸರತ್ತು ಆರಂಭಿಸಿದ್ದಾರೆ. ಆ ಸಿನಿಮಾಗಾಗಿ ಅವರು ಹನಿ ನೀರನ್ನು ಕುಡಿಯುತ್ತಿಲ್ಲ!

Vijaya Karnataka Web 20 Sep 2020, 6:53 pm
ತೆಲುಗು ನಟ ನಾಗ ಶೌರ್ಯ ಟಾಲಿವುಡ್‌ನಲ್ಲಿ ಜನಪ್ರಿಯರಾಗಿದ್ದಾರೆ. ಈಚೆಗೆ ಅವರು ಫಿಟ್‌ನೆಸ್‌ನಿಂದಲೇ ಹೆಚ್ಚು ಗಮನಸೆಳೆಯುತ್ತಿದ್ದಾರೆ. ಸದ್ಯ ಅವರ ಕುರಿತು ಒಂದು ಮಾಹಿತಿ ಕೇಳಿಬಂದಿದೆ. ಅದೇನೆಂದರೆ, ಅವರು ಐದು ದಿನ ಒಂದು ಹನಿ ನೀರನ್ನು ಕುಡಿದಿರಲಿಲ್ಲವಂತೆ! ನೀರನ್ನು ಜೀವಜಲ ಅಂತಾರೆ. ದಿನಕ್ಕೆ ಮೂರ್ನಾಲ್ಕು ಲೀಟರ್ ಕುಡಿಯಲೇಬೇಕು ಅಂತ ವೈದ್ಯರೇ ಹೇಳುತ್ತಾರೆ. ಆದರೆ, ನಾಗ ಶೌರ್ಯ ಮಾತ್ರ ಐದು ದಿನ ನೀರು ಕುಡಿದಿರಲಿಲ್ಲ! ಅದಕ್ಕೆ ಕಾರಣ ಇಲ್ಲಿದೆ.
Vijaya Karnataka Web ಐದು ದಿನ ನೀರು ಕುಡಿದಿರಲಿಲ್ಲ ಟಾಲಿವುಡ್‌ ನಟ ನಾಗ ಶೌರ್ಯ! ಅದಕ್ಕೆ ಕಾರಣವೇನು?


ಮುಂದಿನ ಸಿನಿಮಾಗಾಗಿ ಭರ್ಜರಿ ತಯಾರಿ
ಮುಂದಿನ ಸಿನಿಮಾಗಾಗಿ ನಾಗ ಶೌರ್ಯ ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಿದ್ದಾರೆ. ದೇಹವನ್ನು ದಂಡಿಸಿ, 8 ಪ್ಯಾಕ್ ಮಾಡಿಕೊಂಡಿದ್ದಾರೆ. ಅದಕ್ಕಾಗಿ ತುಂಬ ಡಯೆಟ್ ಫಾಲೋ ಮಾಡುತ್ತಿದ್ದಾರೆ. ಅದಕ್ಕೋಸ್ಕರ ನೀರು ಕುಡಿಯದೇ ವರ್ಕೌಟ್ ಮಾಡಿದ್ದಾರೆ. ಶೂಟಿಂಗ್‌ ಇರುವ ಕೆಲವು ದಿನ ಮುಂಚೆ ಈ ರೀತಿ ಡಯೆಟ್ ಪಾಲನೆ ಮಾಡುವುದು ಅನಿವಾರ್ಯವಂತೆ. ಸದ್ಯ ಆ ಸಿನಿಮಾಕ್ಕಿನ್ನೂ ಟೈಟಲ್ ಇಟ್ಟಿಲ್ಲ. ಇದು ನಾಗ ಶೌರ್ಯ ನಟನೆಯ 20ನೇ ಸಿನಿಮಾ. ಸಂತೋಷ್ ಜಗರ್ಲಾಪುಡಿ ನಿರ್ದೇಶನ ಮಾಡುತ್ತಿದ್ದಾರೆ. ಲಾಕ್‌ಡೌನ್‌ ನಂತರ ಮತ್ತೆ ಶೂಟಿಂಗ್ ಶುರು ಮಾಡಿದ್ದಾರೆ.

8 ಪ್ಯಾಕ್‌ಗಾಗಿ ಇಷ್ಟೆಲ್ಲ ಕಸರತ್ತು
ಸಿನಿಮಾಕ್ಕಾಗಿ ನಾಗ ಶೌರ್ಯ 8 ಪ್ಯಾಕ್ ಮಾಡಿಕೊಂಡಿದ್ದು, ಅದನ್ನು ಹಾಗೇ ಕಂಟಿನ್ಯೂ ಮಾಡಬೇಕೆಂದರೆ, ದಿನನಿತ್ಯ ಕಸರತ್ತು ಮಾಡಲೇಬೇಕು. ಈಗ ಪುನಃ ಶೂಟಿಂಗ್ ಶುರುವಾಗಿದ್ದು, ಒಂದಷ್ಟು ಶರ್ಟ್‌ಲೆಸ್‌ ದೃಶ್ಯಗಳಲ್ಲಿ ಅವರು ಕಾಣಿಸಿಕೊಳ್ಳಬೇಕಿದ್ದರಿಂದ ಈ ವರ್ಕೌಟ್ ಮಾಡಲಾಗುತ್ತಿದೆ. 8 ಪ್ಯಾಕ್‌ ಮಾಡಿಕೊಂಡು, ನಂತರ ಅದನ್ನು ಮೆಂಟೇನ್ ಮಾಡುವುದು ಸಾಮಾನ್ಯದ ಮಾತಲ್ಲ ಎನ್ನುತ್ತವೆ ಅವರ ಆಪ್ತಮೂಲಗಳು. ಈ ಚಿತ್ರದಲ್ಲಿ ನಾಯಕಿಯಾಗಿ ಕೇತಿಕಾ ಶರ್ಮಾ ನಟಿಸುತ್ತಿದ್ದಾರೆ.

Photos: ಶರ್ಟ್‌ಲೆಸ್‌ ಲುಕ್‌ನಲ್ಲಿ ಸಖತ್ ಆಗಿ ಮಿಂಚುತ್ತಿದ್ದಾರೆ ಕನ್ನಡದ ಈ ನಟರು!

ತೆಲುಗಿಗೆ ರಶ್ಮಿಕಾರನ್ನು ಪರಿಚಯಿಸಿದ ನಟ
2011ರಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಾಗ ಶೌರ್ಯ, 'ಚಂದಮಾಮಾ ಕಥಲು' ಸಿನಿಮಾದಿಂದ ಬ್ರೇಕ್ ಪಡೆದುಕೊಂಡರು. 2018ರಲ್ಲಿ ತೆರೆಕಂಡ 'ಛಲೋ' ಸಿನಿಮಾದಲ್ಲಿ ಹೀರೋ ಆಗಿದ್ದ ಅವರು, ಅದರ ನಿರ್ಮಾಪಕರೂ ಕೂಡ. ಆ ಸಿನಿಮಾ ಮೂಲಕವೇ 'ಕಿರಿಕ್ ಪಾರ್ಟಿ' ನಟಿ ರಶ್ಮಿಕಾ ಮಂದಣ್ಣ ತೆಲುಗಿಗೆ ಎಂಟ್ರಿ ನೀಡಿದರು. ಆನಂತರ 'ಓಹ್ ಬೇಬಿ' ಸಿನಿಮಾದಲ್ಲಿ ಸಮಂತಾ ಅಕ್ಕಿನೇನಿ ಜೊತೆಗೆ ಕಾಣಿಸಿಕೊಂಡಿದ್ದರು ನಾಗ ಶೌರ್ಯ. ಈ ವರ್ಷದ ಆರಂಭದಲ್ಲಿ ಬಂದ 'ಅಶ್ವತ್ಥಾಮ' ಚಿತ್ರವನ್ನು ನಿರ್ಮಿಸಿದ್ದ ನಾಗ ಶೌರ್ಯ, ಈಗ ಹೊಸ ಸಿನಿಮಾದ ತಯಾರಿಯಲ್ಲಿದ್ದಾರೆ.

Video: ಇಲ್ಲಿದೆ ನೋಡಿ ನಟ ಸತೀಶ್ 'ನೀನಾಸಂ' ಫಿಟ್‌ನೆಸ್‌ ಸೀಕ್ರೆಟ್‌!

View this post on Instagram His mind, his soul are together now. The target is just a mere thing. @northstarentertainmentofficial #SVCLLP @Santossh1 @ketikasharma @bhairavudu @junaid.editor @antony.arnoldfitnessgym @prem_morea_photgraphy ‪#NS20Firstlook #IndiasFirstFilmonArchery #Archery A post shared by Naga Shaurya (@actorshaurya) on Jul 26, 2020 at 8:29pm PDT

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌