'ಸೂಪರ್ ಸ್ಟಾರ್' ರಜನಿಕಾಂತ್ ಹಿರಿಯ ಪುತ್ರಿ ಐಶ್ವರ್ಯಾ ಹಾಗೂ ನಟ ಧನುಷ್ ಅವರ ದಾಂಪತ್ಯ ಜೀವನ ಅಂತ್ಯಗೊಂಡಿದೆ. ಹೌದು, ಸೋಮವಾರ ರಾತ್ರಿ ತಮ್ಮ ಟ್ವಿಟರ್ ಖಾತೆ ಮೂಲಕ ಈ ವಿಚಾರವನ್ನು ಸ್ವತಃ ಧನುಷ್ ತಿಳಿಸಿದ್ದಾರೆ. 18 ವರ್ಷಗಳ ದಾಂಪತ್ಯ ಜೀವನವನ್ನು ಅಂತ್ಯಗೊಳಿಸಿ, ನಾವಿಬ್ಬರು ಬೇರೆಯಾಗುತ್ತಿದ್ದೇವೆ ಎಂದು ಟ್ವೀಟ್ ಮಾಡಿರುವ ಅವರು, ನಮ್ಮ ಖಾಸಗಿತನಕ್ಕೆ ಗೌರವ ನೀಡಿ ಎಂದಿದ್ದಾರೆ. ಇದು ಧನುಷ್ ಮತ್ತು ರಜನಿಕಾಂತ್ ಅಭಿಮಾನಿಗಳಿಗೆ ಅಚ್ಚರಿಯನ್ನು ಉಂಟು ಮಾಡಿದೆ. ಧನುಷ್ ಟ್ವೀಟ್ನಲ್ಲಿ ಹೇಳಿದ್ದೇನು?
'18 ವರ್ಷಗಳ ಕಾಲ ಸ್ನೇಹಿತರಂತೆ, ದಂಪತಿಗಳಂತೆ, ಪೋಷಕರಂತೆ ಮತ್ತು ಪರಸ್ಪರ ಹಿತೈಷಿಗಳಾಗಿದ್ದೆವು. ನಮ್ಮ ಪ್ರಯಾಣವು ಬೆಳವಣಿಗೆ, ತಿಳುವಳಿಕೆ, ಹೊಂದಾಣಿಕೆ ಮತ್ತು ಹೊಂದಿಕೊಳ್ಳುವಿಕೆಯಿಂದ ಕೂಡಿದೆ. ಇಂದು ನಾವು ನಮ್ಮ ಮಾರ್ಗಗಳನ್ನು ಪ್ರತ್ಯೇಕಗೊಳಿಸುವಿಕೆಯ ಜಾಗದಲ್ಲಿ ಬಂದು ನಿಂತಿದ್ದೇವೆ. ಜೋಡಿಯಾಗಿದ್ದ ನಾವು ಬೇರೆಯಾಗಲು ಮತ್ತು ನಮ್ಮನ್ನು ನಾವು ಇನ್ನಷ್ಟು ಚೆನ್ನಾಗಿ ಅರ್ಥೈಸಿಕೊಳ್ಳಲು, ಸಮಯ ಕೊಡಲು ನಾನು ಮತ್ತು ಐಶ್ವರ್ಯ ನಿರ್ಧರಿಸಿದ್ದೇವೆ. ದಯವಿಟ್ಟು ನಮ್ಮ ನಿರ್ಧಾರವನ್ನು ಗೌರವಿಸಿ ಮತ್ತು ಇದನ್ನು ನಿಭಾಯಿಸಲು ನಮಗೆ ಬೇಕಿರುವ ಗೌಪ್ಯತೆಯನ್ನು ನೀಡಿ. ಓಂ ನಮಃ ಶಿವಾಯ' ಎಂದು ಬರೆದುಕೊಂಡಿದ್ದಾರೆ ಧನುಷ್.
ಧನುಷ್ & ಐಶ್ವರ್ಯಾಗೆ ಇಬ್ಬರು ಮಕ್ಕಳಿದ್ದಾರೆ
ಧನುಷ್ ಮತ್ತು ಐಶ್ವರ್ಯಾ ಪ್ರೀತಿಸಿ ಮದುವೆಯಾಗಿದ್ದರು. ವಯಸ್ಸಿನಲ್ಲಿ ತಮಗಿಂತಲೂ ಎರಡು ವರ್ಷ ಹಿರಿಯರಾಗಿದ್ದ ರಜನಿಕಾಂತ್ ಪುತ್ರಿ ಐಶ್ವರ್ಯಾರನ್ನು 2004ರ ನವೆಂಬರ್ನಲ್ಲಿ ವಿವಾಹವಾಗಿದ್ದರು. ಆಗಿನ್ನೂ ಧನುಷ್ಗೆ ಕೇವಲ 21 ವರ್ಷ ವಯಸ್ಸು. ಈ ದಂಪತಿಗೆ ಯಾತ್ರ ರಾಜ ಮತ್ತು ಲಿಂಗ ರಾಜ ಎಂಬಿಬ್ಬರು ಮಕ್ಕಳಿದ್ದಾರೆ. ಇನ್ನು, ಐಶ್ವರ್ಯಾ ಕೂಡ ಧನುಷ್ ಟ್ವೀಟ್ ಮಾಡಿರುವ ಪೋಸ್ಟ್ ಅನ್ನೇ ಶೇರ್ ಮಾಡಿಕೊಂಡಿದ್ದಾರೆ. 'ಇದಕ್ಕೆ ಯಾವುದೇ ಕ್ಯಾಪ್ಷನ್ ಬೇಕಿಲ್ಲ. ನಿಮ್ಮ ತಿಳುವಳಿಕೆ ಮತ್ತು ಪ್ರೀತಿ ಮಾತ್ರ ಅಗತ್ಯ' ಎಂದು ಬರೆದುಕೊಂಡಿದ್ದಾರೆ.
ನಾಗ ಚೈತನ್ಯ ಹಾಗೂ ಸಮಂತಾ ವಿಚ್ಛೇದನ ಪಡೆಯಲು ಕಾರಣ ಏನು? ಏನು ಹೇಳುತ್ತವೆ ಮೂಲಗಳು?
ರಜನಿಕಾಂತ್ ಮಕ್ಕಳ ವಿಚ್ಚೇದನ
ರಜನಿಕಾಂತ್ ಅವರ ಮಕ್ಕಳಾದ ಐಶ್ವರ್ಯಾ ಮತ್ತು ಸೌಂದರ್ಯಾ ಇಬ್ಬರಿಗೂ ವಿಚ್ಛೇದನವಾದಂತಾಗಿದೆ. ರಜನಿಕಾಂತ್ ಅವರ ಕಿರಿಯ ಪುತ್ರಿ ಸೌಂದರ್ಯಾ ಅವರು 2010ರಲ್ಲಿ ಅಶ್ವಿನ್ ರಾಮ್ಕುಮಾರ್ ಎಂಬುವವರನ್ನು ಮದುವೆಯಾಗಿದ್ದರು. ಆ ದಂಪತಿಗೆ ವೇದ್ ಕೃಷ್ಣ ಎಂಬ ಗಂಡು ಜನಿಸಿತ್ತು. ಆದರೆ, ಹೊಂದಾಣಿಕೆಯ ಕೊರತೆಯಿಂದ 2017ರಲ್ಲಿ ಸೌಂದರ್ಯಾ ಮತ್ತು ಅಶ್ವಿನ್ ದೂರ ಆದರು. ಆ ಬಳಿಕ ವಿಶ್ಗನ್ ವನಂಗಮುಡಿ ಅವರನ್ನು 2019ರಲ್ಲಿ ಸೌಂದರ್ಯಾ ಮದುವೆ ಆಗಿದ್ದಾರೆ. ಇದೀಗ ಐಶ್ವರ್ಯಾ ಕೂಡ ಧನುಷ್ ಅವರಿಂದ ದೂರ ಆಗಿದ್ದಾರೆ.
ಆಮೀರ್ ಖಾನ್-ಕಿರಣ್ ರಾವ್ ದಾಂಪತ್ಯದಲ್ಲಿ ಬಿರುಕು: ವಿಚ್ಛೇದನ ಘೋಷಿಸಿದ ದಂಪತಿ!
'18 ವರ್ಷಗಳ ಕಾಲ ಸ್ನೇಹಿತರಂತೆ, ದಂಪತಿಗಳಂತೆ, ಪೋಷಕರಂತೆ ಮತ್ತು ಪರಸ್ಪರ ಹಿತೈಷಿಗಳಾಗಿದ್ದೆವು. ನಮ್ಮ ಪ್ರಯಾಣವು ಬೆಳವಣಿಗೆ, ತಿಳುವಳಿಕೆ, ಹೊಂದಾಣಿಕೆ ಮತ್ತು ಹೊಂದಿಕೊಳ್ಳುವಿಕೆಯಿಂದ ಕೂಡಿದೆ. ಇಂದು ನಾವು ನಮ್ಮ ಮಾರ್ಗಗಳನ್ನು ಪ್ರತ್ಯೇಕಗೊಳಿಸುವಿಕೆಯ ಜಾಗದಲ್ಲಿ ಬಂದು ನಿಂತಿದ್ದೇವೆ. ಜೋಡಿಯಾಗಿದ್ದ ನಾವು ಬೇರೆಯಾಗಲು ಮತ್ತು ನಮ್ಮನ್ನು ನಾವು ಇನ್ನಷ್ಟು ಚೆನ್ನಾಗಿ ಅರ್ಥೈಸಿಕೊಳ್ಳಲು, ಸಮಯ ಕೊಡಲು ನಾನು ಮತ್ತು ಐಶ್ವರ್ಯ ನಿರ್ಧರಿಸಿದ್ದೇವೆ. ದಯವಿಟ್ಟು ನಮ್ಮ ನಿರ್ಧಾರವನ್ನು ಗೌರವಿಸಿ ಮತ್ತು ಇದನ್ನು ನಿಭಾಯಿಸಲು ನಮಗೆ ಬೇಕಿರುವ ಗೌಪ್ಯತೆಯನ್ನು ನೀಡಿ. ಓಂ ನಮಃ ಶಿವಾಯ' ಎಂದು ಬರೆದುಕೊಂಡಿದ್ದಾರೆ ಧನುಷ್.
ಧನುಷ್ & ಐಶ್ವರ್ಯಾಗೆ ಇಬ್ಬರು ಮಕ್ಕಳಿದ್ದಾರೆ
ಧನುಷ್ ಮತ್ತು ಐಶ್ವರ್ಯಾ ಪ್ರೀತಿಸಿ ಮದುವೆಯಾಗಿದ್ದರು. ವಯಸ್ಸಿನಲ್ಲಿ ತಮಗಿಂತಲೂ ಎರಡು ವರ್ಷ ಹಿರಿಯರಾಗಿದ್ದ ರಜನಿಕಾಂತ್ ಪುತ್ರಿ ಐಶ್ವರ್ಯಾರನ್ನು 2004ರ ನವೆಂಬರ್ನಲ್ಲಿ ವಿವಾಹವಾಗಿದ್ದರು. ಆಗಿನ್ನೂ ಧನುಷ್ಗೆ ಕೇವಲ 21 ವರ್ಷ ವಯಸ್ಸು. ಈ ದಂಪತಿಗೆ ಯಾತ್ರ ರಾಜ ಮತ್ತು ಲಿಂಗ ರಾಜ ಎಂಬಿಬ್ಬರು ಮಕ್ಕಳಿದ್ದಾರೆ. ಇನ್ನು, ಐಶ್ವರ್ಯಾ ಕೂಡ ಧನುಷ್ ಟ್ವೀಟ್ ಮಾಡಿರುವ ಪೋಸ್ಟ್ ಅನ್ನೇ ಶೇರ್ ಮಾಡಿಕೊಂಡಿದ್ದಾರೆ. 'ಇದಕ್ಕೆ ಯಾವುದೇ ಕ್ಯಾಪ್ಷನ್ ಬೇಕಿಲ್ಲ. ನಿಮ್ಮ ತಿಳುವಳಿಕೆ ಮತ್ತು ಪ್ರೀತಿ ಮಾತ್ರ ಅಗತ್ಯ' ಎಂದು ಬರೆದುಕೊಂಡಿದ್ದಾರೆ.
ನಾಗ ಚೈತನ್ಯ ಹಾಗೂ ಸಮಂತಾ ವಿಚ್ಛೇದನ ಪಡೆಯಲು ಕಾರಣ ಏನು? ಏನು ಹೇಳುತ್ತವೆ ಮೂಲಗಳು?
ರಜನಿಕಾಂತ್ ಮಕ್ಕಳ ವಿಚ್ಚೇದನ
ರಜನಿಕಾಂತ್ ಅವರ ಮಕ್ಕಳಾದ ಐಶ್ವರ್ಯಾ ಮತ್ತು ಸೌಂದರ್ಯಾ ಇಬ್ಬರಿಗೂ ವಿಚ್ಛೇದನವಾದಂತಾಗಿದೆ. ರಜನಿಕಾಂತ್ ಅವರ ಕಿರಿಯ ಪುತ್ರಿ ಸೌಂದರ್ಯಾ ಅವರು 2010ರಲ್ಲಿ ಅಶ್ವಿನ್ ರಾಮ್ಕುಮಾರ್ ಎಂಬುವವರನ್ನು ಮದುವೆಯಾಗಿದ್ದರು. ಆ ದಂಪತಿಗೆ ವೇದ್ ಕೃಷ್ಣ ಎಂಬ ಗಂಡು ಜನಿಸಿತ್ತು. ಆದರೆ, ಹೊಂದಾಣಿಕೆಯ ಕೊರತೆಯಿಂದ 2017ರಲ್ಲಿ ಸೌಂದರ್ಯಾ ಮತ್ತು ಅಶ್ವಿನ್ ದೂರ ಆದರು. ಆ ಬಳಿಕ ವಿಶ್ಗನ್ ವನಂಗಮುಡಿ ಅವರನ್ನು 2019ರಲ್ಲಿ ಸೌಂದರ್ಯಾ ಮದುವೆ ಆಗಿದ್ದಾರೆ. ಇದೀಗ ಐಶ್ವರ್ಯಾ ಕೂಡ ಧನುಷ್ ಅವರಿಂದ ದೂರ ಆಗಿದ್ದಾರೆ.
ಆಮೀರ್ ಖಾನ್-ಕಿರಣ್ ರಾವ್ ದಾಂಪತ್ಯದಲ್ಲಿ ಬಿರುಕು: ವಿಚ್ಛೇದನ ಘೋಷಿಸಿದ ದಂಪತಿ!