ಆ್ಯಪ್ನಗರ

Sharan: ಶೂಟಿಂಗ್ ಸೆಟ್‌ನಲ್ಲೇ ಅನಾರೋಗ್ಯಕ್ಕೀಡಾದ ನಟ ಶರಣ್‌! ಖಾಸಗಿ ಆಸ್ಪತ್ರೆಗೆ ದಾಖಲು!

ನಟ ಶರಣ್ ಅವರು ಸಿನಿಮಾದ ಶೂಟಿಂಗ್ ವೇಳೆಯೇ ಇಂದು ಅನಾರೋಗ್ಯಕ್ಕೀಡಾದ ಘಟನೆ ನಡೆದಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ. ಆಸ್ಪತ್ರೆಗೆ ಅವರ ಸಹೋದರಿ, ನಟಿ ಶ್ರುತಿ ಆಗಮಿಸಿದ್ದಾರೆ.

Vijaya Karnataka Web 26 Sep 2020, 5:05 pm
ನಟ ಶರಣ್ ಅವರು ಶೂಟಿಂಗ್ ಸೆಟ್‌ನಲ್ಲೇ ಅನಾರೋಗ್ಯಕ್ಕೀಡಾದ ಘಟನೆ ಶನಿವಾರ ನಡೆದಿದೆ. ಬೆಂಗಳೂರಿನಲ್ಲಿ ನಡೆಯುತ್ತಿದ್ದ 'ಅವತಾರ ಪುರುಷ' ಸಿನಿಮಾದ ಚಿತ್ರೀಕರಣದಲ್ಲಿ ಶರಣ್‌ ಭಾಗವಹಿಸಿದ್ದರು. ಈ ವೇಳೆ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಅವರನ್ನು ಚಿತ್ರತಂಡವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ, ಆಸ್ಪತ್ರೆಗೆ ಶರಣ್ ಸಹೋದರಿ, ನಟಿ ಶ್ರುತಿ ಧಾವಿಸಿದ್ದಾರೆ. ಸದ್ಯ ಅವರು ಆರಾಮಾಗಿದ್ದು, ಶೀಘ್ರದಲ್ಲೇ ಡಿಸ್‌ಚಾರ್ಜ್‌ ಆಗುವ ಸಾಧ್ಯತೆಗಳಿವೆ. ಶರಣ್ ಆರೋಗ್ಯದ ಕುರಿತು ಶ್ರುತಿ ಮಾಹಿತಿ ನೀಡಿದ್ದಾರೆ.
Vijaya Karnataka Web Sharan


'ಈಗ ಅಣ್ಣ ಹುಷಾರಾಗಿದ್ದಾನೆ. ಏನೂ ತೊಂದರೆ ಇಲ್ಲ. ಶರಣ್ 'ಅವತಾರ ಪುರುಷ' ಚಿತ್ರದ ಫೈಟಿಂಗ್ ಸೀನ್‌ ಶೂಟಿಂಗ್ ಮಾಡುತ್ತಿದ್ದರು. ಅದಕ್ಕೂ ಇದಕ್ಕೂ ಏನು ಸಂಬಂಧ ಇಲ್ಲ. ಅಣ್ಣನಿಗೆ ಎರಡು ದಿನಗಳಿಂದಲೂ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತು. ಶೂಟಿಂಗ್‌ ಇರುವ ಕಾರಣ, ಅವನು ಅದನ್ನು ಹೇಳಿಕೊಂಡಿಲ್ಲ. ಕೊರೊನಾದಿಂದಾಗಿ ಸಾಕಷ್ಟು ಸಿನಿಮಾಗಳ ಶೂಟಿಂಗ್‌ ಮುಂದೂಡಿಕೆ ಆಗಿದ್ದವು. ಈಗ ನನ್ನ ಕಾರಣದಿಂದ ಮತ್ತೆ ಈ ಸಿನಿಮಾದ ಮುಂದೂಡಿಕೆ ಆಗೋದು ಬೇಡ ಎಂದು ಅವನು ಹೇಳಿಲ್ಲ. ಆದರೆ, ಇವತ್ತು ನೋವು ಜಾಸ್ತಿ ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇವೆ. ವೈದ್ಯರು ಸ್ಕ್ಯಾನಿಂಗ್ ಮಾಡಿದ್ದಾರೆ. ಕಿಡ್ನಿ ಸ್ಟೋನ್ ಇದೆ ಅಂತ ಹೇಳುತ್ತಿದ್ದಾರೆ' ಎಂದು ಶರಣ್ ಸಹೋದರಿ, ನಟಿ ಶ್ರುತಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

'ಇವತ್ತು ಅಡ್ಮಿಟ್ ಮಾಡಿಕೊಂಡು, ನಾಳೆ ಏನೂ ತೊಂದರೆ ಇಲ್ಲ ಅಂದರೆ ಡಿಸ್‌ಚಾರ್ಜ್‌ ಮಾಡಬಹುದು. ಅವಾಗಲೇ ತುಂಬ ನೋವು ಇತ್ತು. ಈಗ ಅಣ್ಣ ಆರಾಮಾಗಿದ್ದಾನೆ. ಹೊಟ್ಟೆ ನೋವಿಗಿಂತ ನನ್ನ ಕಾರಣದಿಂದ ಶೂಟಿಂಗ್ ನಿಂತು ಹೋಯ್ತಲ್ಲ ಅಂತ ಅಣ್ಣನಿಗೆ ತುಂಬ ಬೇಸರ ಆಗ್ತಿದೆ. ಮೊದಲು ಆರೋಗ್ಯ ಸರಿಯಾಗಲಿ, ನೀವು ಅಡ್ಮಿಟ್ ಆಗಿ ಅಂತ 'ಅವತಾರ ಪುರುಷ' ತಂಡ ಅಣ್ಣನಿಗೆ ಹೇಳಿದೆ' ಎಂದು ಶ್ರುತಿ ಮಾಹಿತಿ ನೀಡಿದ್ದಾರೆ.

'ರ‍್ಯಾಂಬೋ' ಚಿತ್ರದ ಪಾರ್ಟ್ 3 ಬರಲಿದೆಯೇ? ಈ ಬಗ್ಗೆ ನಟ ಶರಣ್ ಏನಂತಾರೆ?

ಸುನಿ ನಿರ್ದೇಶನ ಮಾಡುತ್ತಿರುವ 'ಅವತಾರ ಪುರುಷ' ಸಿನಿಮಾದಲ್ಲಿ ಶರಣ್ ನಾಯಕರಾಗಿ ನಟಿಸುತ್ತಿದ್ದು, ಆಶಿಕಾ ರಂಗನಾಥ್ ನಾಯಕಿ. ಪುಷ್ಕರ್ ಮಲ್ಲಿಕಾಜುನಯ್ಯ ನಿರ್ಮಾಣ ಮಾಡುತ್ತಿದ್ದಾರೆ. ಲಾಕ್‌ಡೌನ್ ಕಾರಣದಿಂದ ನಿಂತುಹೋಗಿದ್ದ ಚಿತ್ರೀಕರಣ ಈಗ ಮತ್ತೆ ಪ್ರಾರಂಭಗೊಂಡಿದೆ.

ಲಾಕ್ ಡೌನ್ ಟೈಮ್‌ನಲ್ಲಿ ಮನೆಯವರ ನಂಬಿಕೆ ಗಿಟ್ಟಿಸಿಕೊಂಡರಂತೆ ನಟ ಶರಣ್!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌