ನಟ ಝೈದ್ ಖಾನ್ ( Zaid Khan ) ನಟನೆಯ 'ಬನಾರಸ್' ಸಿನಿಮಾ ( Banaras Movie ) ಮೊದಲ ದಿನವೇ 3 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡ ಅಧಿಕೃತ ಹೇಳಿದೆ. ವೀಕೆಂಡ್ಗಳಲ್ಲಿ ಈ ಚಿತ್ರವನ್ನು ಹೆಚ್ಚು ಜನರು ನೋಡುತ್ತಾರೆ ಎಂಬ ನಿರೀಕ್ಷೆಯಿದೆ. ಈ ವೇಳೆ ಝೈದ್ ಖಾನ್ ಅವರು ಮುಸ್ಲಿಂ ಸಮಾಜಕ್ಕೆ ಒಂದು ಮನವಿ ಮಾಡಿದ್ದಾರೆ. ಝೈದ್ ಖಾನ್ ಹೇಳಿದ್ದಿಷ್ಟು..
ನಮ್ಮ ಮುಸ್ಲಿಂ ಸಮಾಜದವರು ಕನ್ನಡ ಚಿತ್ರಗಳನ್ನು ನೋಡುವುದು ಕಮ್ಮಿ. ನೀವು ಹಿಂದಿ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳನ್ನು ನೋಡಿ, ನಾನು ಅವುಗಳನ್ನು ನೋಡುವುದು ಬೇಡ ಎಂದು ಹೇಳೋದಿಲ್ಲ. ಆದರೆ ಮೊದಲ ಆದ್ಯತೆ ಕನ್ನಡಕ್ಕೆ ಕೊಡಿ.
ನಾವು ಮೊದಲು ಭಾರತೀಯರು, ಆಮೇಲೆ ಕನ್ನಡಿಗ, ಆಮೇಲೆ ಮುಸ್ಲಿಂ ಸಮಾಜದವರು. ಯಾರೂ ಅವರ ಭಾಷೆಯನ್ನು ಬಿಟ್ಟುಕೊಡೋದಿಲ್ಲ. ಆಂಧ್ರ, ತಮಿಳುನಾಡಿನವರು ಅವರ ಭಾಷೆಯನ್ನು ಬಿಟ್ಟುಕೊಡೋದಿಲ್ಲ. ಹಾಗಾಗಿ ನಾವು ನಮ್ಮ ಭಾಷೆಯನ್ನು ಬಿಟ್ಟುಕೊಡಬಾರದು
ಕೆಜಿಎಫ್ ಒಂದೇ ಸಿನಿಮಾವನ್ನು ಎಲ್ಲರೂ ಇವತ್ತು ಇಡೀ ಪ್ರಪಂಚ ಸುಮ್ಮನೆ ನೋಡುತ್ತಿಲ್ಲ, ತಿರುಗಿ ನೋಡಿ ಚಪ್ಪಾಳೆ ಹೊಡೆಯುತ್ತಿದೆ. ಕನ್ನಡ ಚಿತ್ರಗಳನ್ನು ನೋಡಿ, ಕನ್ನಡ ಭಾಷೆ ಬಳಸಿ ಎಂದು ಮನವಿ ಮಾಡುತ್ತೇನೆ. ನೀವು ನಮಗೆ ಧೈರ್ಯ ನೀಡಿದರೆ ನಾವು ಹಿಂದಿ ರೀತಿ ಬಿಗ್ ಬಜೆಟ್ ಸಿನಿಮಾ ಮಾಡಬಹುದು.
'ಕೆಜಿಎಫ್, ಕಾಂತಾರ ನಂತರ ಬನಾರಸ್ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ..'- ನಟ ಯಶಸ್ ಸೂರ್ಯ
ರಿಲೀಸ್ಗೂ ಮುನ್ನವೇ ಬಾಯ್ಕಾಟ್ ಕೂಗು
ಈ ಚಿತ್ರ ರಿಲೀಸ್ ಆಗುವ ಮುನ್ನವೇ ಬಾಯ್ಕಾಟ್ ಬನಾರಸ್ ಎಂಬ ಕೂಗು ಕೇಳಿಬಂದಿತ್ತು. ಆಗ ಪ್ರತಿಕ್ರಿಯೆ ನೀಡಿದ್ದ ಝೈದ್, "ನಾನು ಯಾವುದೇ ತಪ್ಪು ಮಾಡಿಲ್ಲ. ಜಾತಿ ಧರ್ಮ ಅಂತ ಈ ರೀತಿ ಮಾಡೋದು ತಪ್ಪು. ನಾನು ಕಷ್ಟಪಟ್ಟು ಸಿನಿಮಾ ಮಾಡಿದ್ದೇನೆ, ಜನರು ನಮ್ಮ ಸಿನಿಮಾವನ್ನು ನೋಡುತ್ತಾರೆ ಎಂಬ ನಂಬಿಕೆಯಿದೆ. ನಾನು ಬಾಯ್ಕಾಟ್ ಅಭಿಯಾನಕ್ಕೆಲ್ಲ ತಲೆ ಕೆಡಿಸಿಕೊಳ್ಳೋದಿಲ್ಲ. ಝೈದ್ ಖಾನ್ ಎಂದಕೂಡಲೇ ಒಂದಷ್ಟು ಜನರಿಂದ ನೆಗೆಟಿವ್ ಅಭಿಪ್ರಾಯ ವ್ಯಕ್ತವಾಗುತ್ತದೆ. ನಾನೊಬ್ಬ ಮುಸ್ಲಿಂ ಅಂತ ಈ ರೀತಿ ಹೇಳುತ್ತಾರೆ. ಇದನ್ನು ನಾನು ಸ್ವೀಕರಿಸಿದ್ದೇನೆ" ಎಂದು ಹೇಳಿದ್ದರು.
ಸಿಎಂ ಬಳಿ ಮನವಿ ಮಾಡಿದ್ದ ಝೈದ್ ಖಾನ್
ಇನ್ನು ಸಿನಿಮಾದಲ್ಲಿರುವುದು ಹಿಂದೂ ಪಾತ್ರ ಆಗಿರೋದರಿಂದ ಮುಸ್ಲಿಂ ಸ್ಲಾಂಗ್ ಬರಬಾರದು ಎನ್ನುವ ಕಾರಣಕ್ಕೆ ಝೈದ್ ಅವರು ಬೇರೆಯವರ ಬಳಿ ತಮ್ಮ ಪಾತ್ರಕ್ಕೆ ಡಬ್ ಮಾಡಿಸಿದ್ದರು. ಥಿಯೇಟರ್ನಲ್ಲಿ ನಾಡಗೀತೆ ಪ್ರದರ್ಶನವಾಗಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಬಳಿ ಝೈದ್ ಖಾನ್ ಮನವಿ ಮಾಡಿದ್ದರು. ಹಿಂದೂ ಶಾಲೆಯಲ್ಲಿ ಓದಿದ್ದ ಝೈದ್ ಖಾನ್ ಅವರಿಗೆ ಧರ್ಮ, ಜಾತಿ ಅಂತ ಯಾವುದೇ ಭೇದಭಾವವಿಲ್ಲವಂತೆ.
'ಟೈಮ್ ಟ್ರಾವೆಲ್ ಅನ್ನೋದು ಕ್ಲಿಷ್ಟಕರ ವಿಚಾರ.. ಅದನ್ನು ಸರಳವಾಗಿ ಹೇಳಿದ್ದಾರೆ..'- 777 ಚಾರ್ಲಿ ನಿರ್ದೇಶಕ ಕಿರಣ್ರಾಜ್
ಝೈದ್ ಖಾನ್, ಸೋನಲ್ ಮೊಂಥೆರೋ ( Sonal Monteiro ) ನಟನೆಯ ಬನಾರಸ್ ಸಿನಿಮಾ ನವೆಂಬರ್ 4ರಂದು ದೇಶಾದ್ಯಂತ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗಿದೆ. ಈ ಚಿತ್ರಕ್ಕೆ ಜಯತೀರ್ಥ ನಿರ್ದೇಶನ ಮಾಡಿದ್ದರು.
ನಮ್ಮ ಮುಸ್ಲಿಂ ಸಮಾಜದವರು ಕನ್ನಡ ಚಿತ್ರಗಳನ್ನು ನೋಡುವುದು ಕಮ್ಮಿ. ನೀವು ಹಿಂದಿ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳನ್ನು ನೋಡಿ, ನಾನು ಅವುಗಳನ್ನು ನೋಡುವುದು ಬೇಡ ಎಂದು ಹೇಳೋದಿಲ್ಲ. ಆದರೆ ಮೊದಲ ಆದ್ಯತೆ ಕನ್ನಡಕ್ಕೆ ಕೊಡಿ.
ನಾವು ಮೊದಲು ಭಾರತೀಯರು, ಆಮೇಲೆ ಕನ್ನಡಿಗ, ಆಮೇಲೆ ಮುಸ್ಲಿಂ ಸಮಾಜದವರು. ಯಾರೂ ಅವರ ಭಾಷೆಯನ್ನು ಬಿಟ್ಟುಕೊಡೋದಿಲ್ಲ. ಆಂಧ್ರ, ತಮಿಳುನಾಡಿನವರು ಅವರ ಭಾಷೆಯನ್ನು ಬಿಟ್ಟುಕೊಡೋದಿಲ್ಲ. ಹಾಗಾಗಿ ನಾವು ನಮ್ಮ ಭಾಷೆಯನ್ನು ಬಿಟ್ಟುಕೊಡಬಾರದು
ಕೆಜಿಎಫ್ ಒಂದೇ ಸಿನಿಮಾವನ್ನು ಎಲ್ಲರೂ ಇವತ್ತು ಇಡೀ ಪ್ರಪಂಚ ಸುಮ್ಮನೆ ನೋಡುತ್ತಿಲ್ಲ, ತಿರುಗಿ ನೋಡಿ ಚಪ್ಪಾಳೆ ಹೊಡೆಯುತ್ತಿದೆ. ಕನ್ನಡ ಚಿತ್ರಗಳನ್ನು ನೋಡಿ, ಕನ್ನಡ ಭಾಷೆ ಬಳಸಿ ಎಂದು ಮನವಿ ಮಾಡುತ್ತೇನೆ. ನೀವು ನಮಗೆ ಧೈರ್ಯ ನೀಡಿದರೆ ನಾವು ಹಿಂದಿ ರೀತಿ ಬಿಗ್ ಬಜೆಟ್ ಸಿನಿಮಾ ಮಾಡಬಹುದು.
'ಕೆಜಿಎಫ್, ಕಾಂತಾರ ನಂತರ ಬನಾರಸ್ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ..'- ನಟ ಯಶಸ್ ಸೂರ್ಯ
ರಿಲೀಸ್ಗೂ ಮುನ್ನವೇ ಬಾಯ್ಕಾಟ್ ಕೂಗು
ಈ ಚಿತ್ರ ರಿಲೀಸ್ ಆಗುವ ಮುನ್ನವೇ ಬಾಯ್ಕಾಟ್ ಬನಾರಸ್ ಎಂಬ ಕೂಗು ಕೇಳಿಬಂದಿತ್ತು. ಆಗ ಪ್ರತಿಕ್ರಿಯೆ ನೀಡಿದ್ದ ಝೈದ್, "ನಾನು ಯಾವುದೇ ತಪ್ಪು ಮಾಡಿಲ್ಲ. ಜಾತಿ ಧರ್ಮ ಅಂತ ಈ ರೀತಿ ಮಾಡೋದು ತಪ್ಪು. ನಾನು ಕಷ್ಟಪಟ್ಟು ಸಿನಿಮಾ ಮಾಡಿದ್ದೇನೆ, ಜನರು ನಮ್ಮ ಸಿನಿಮಾವನ್ನು ನೋಡುತ್ತಾರೆ ಎಂಬ ನಂಬಿಕೆಯಿದೆ. ನಾನು ಬಾಯ್ಕಾಟ್ ಅಭಿಯಾನಕ್ಕೆಲ್ಲ ತಲೆ ಕೆಡಿಸಿಕೊಳ್ಳೋದಿಲ್ಲ. ಝೈದ್ ಖಾನ್ ಎಂದಕೂಡಲೇ ಒಂದಷ್ಟು ಜನರಿಂದ ನೆಗೆಟಿವ್ ಅಭಿಪ್ರಾಯ ವ್ಯಕ್ತವಾಗುತ್ತದೆ. ನಾನೊಬ್ಬ ಮುಸ್ಲಿಂ ಅಂತ ಈ ರೀತಿ ಹೇಳುತ್ತಾರೆ. ಇದನ್ನು ನಾನು ಸ್ವೀಕರಿಸಿದ್ದೇನೆ" ಎಂದು ಹೇಳಿದ್ದರು.
ಸಿಎಂ ಬಳಿ ಮನವಿ ಮಾಡಿದ್ದ ಝೈದ್ ಖಾನ್
ಇನ್ನು ಸಿನಿಮಾದಲ್ಲಿರುವುದು ಹಿಂದೂ ಪಾತ್ರ ಆಗಿರೋದರಿಂದ ಮುಸ್ಲಿಂ ಸ್ಲಾಂಗ್ ಬರಬಾರದು ಎನ್ನುವ ಕಾರಣಕ್ಕೆ ಝೈದ್ ಅವರು ಬೇರೆಯವರ ಬಳಿ ತಮ್ಮ ಪಾತ್ರಕ್ಕೆ ಡಬ್ ಮಾಡಿಸಿದ್ದರು. ಥಿಯೇಟರ್ನಲ್ಲಿ ನಾಡಗೀತೆ ಪ್ರದರ್ಶನವಾಗಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಬಳಿ ಝೈದ್ ಖಾನ್ ಮನವಿ ಮಾಡಿದ್ದರು. ಹಿಂದೂ ಶಾಲೆಯಲ್ಲಿ ಓದಿದ್ದ ಝೈದ್ ಖಾನ್ ಅವರಿಗೆ ಧರ್ಮ, ಜಾತಿ ಅಂತ ಯಾವುದೇ ಭೇದಭಾವವಿಲ್ಲವಂತೆ.
'ಟೈಮ್ ಟ್ರಾವೆಲ್ ಅನ್ನೋದು ಕ್ಲಿಷ್ಟಕರ ವಿಚಾರ.. ಅದನ್ನು ಸರಳವಾಗಿ ಹೇಳಿದ್ದಾರೆ..'- 777 ಚಾರ್ಲಿ ನಿರ್ದೇಶಕ ಕಿರಣ್ರಾಜ್
ಝೈದ್ ಖಾನ್, ಸೋನಲ್ ಮೊಂಥೆರೋ ( Sonal Monteiro ) ನಟನೆಯ ಬನಾರಸ್ ಸಿನಿಮಾ ನವೆಂಬರ್ 4ರಂದು ದೇಶಾದ್ಯಂತ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗಿದೆ. ಈ ಚಿತ್ರಕ್ಕೆ ಜಯತೀರ್ಥ ನಿರ್ದೇಶನ ಮಾಡಿದ್ದರು.