ನಟ 'ದಳಪತಿ' ವಿಜಯ್ ಅವರಿಗೆ ತಮಿಳುನಾಡು ಮಾತ್ರವಲ್ಲದೆ, ಬೇರೆ ಬೇರೆ ರಾಜ್ಯಗಳಲ್ಲೂ ದೊಡ್ಡ ಅಭಿಮಾನಿ ಬಳಗ ಇದೆ. ವಿಜಯ್ ಸಿನಿಮಾ ವಿಚಾರಕ್ಕೆ ಮಾತ್ರ ಹೆಚ್ಚು ಸುದ್ದಿ ಆಗುತ್ತಾರೆ. ಖಾಸಗಿ ವಿಚಾರಗಳಿಂದ ಅವರು ಸುದ್ದಿಯಾಗಿದ್ದು ಕಡಿಮೆ. ಆದರೆ, ಈಗ ಅವರ ಕುಟುಂಬ ಕಲಹ ಜೋರಾಗುತ್ತಿದೆ. ತಮ್ಮ ತಂದೆ-ತಾಯಿ ವಿರುದ್ಧವೇ ವಿಜಯ್ ಕೇಸ್ ದಾಖಲು ಮಾಡಿದ್ದಾರೆ. ತಂದೆ ಎಸ್.ಎ. ಚಂದ್ರಶೇಖರ್ ಸೇರಿದಂತೆ ಒಟ್ಟು 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಅಷ್ಟಕ್ಕೂ ನಡೆದಿದ್ದೇನು? ಇಲ್ಲಿದೆ ಮಾಹಿತಿ. ತಮ್ಮ ಹೆಸರು ಬಳಸದಂತೆ ತಡೆಯಾಜ್ಞೆ ತಂದ ನಟ
2020ರ ನವೆಂಬರ್ನಲ್ಲಿ 'ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕ್ಕಂ' ಹೆಸರಿನಲ್ಲಿ ರಾಜಕೀಯ ಪಕ್ಷವೊಂದನ್ನು ನೋಂದಣಿ ಮಾಡಿಸಿದ್ದರು ವಿಜಯ್ ತಂದೆ. ಇದು ವಿಜಯ್ಗೆ ಇಷ್ಟವಿರಲಿಲ್ಲ. ತಕ್ಷಣವೇ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದ ವಿಜಯ್, 'ನನ್ನ ತಂದೆಯ ಪಕ್ಷ ಎಂದು ಸಪೋರ್ಟ್ ಮಾಡಬೇಡಿ. ಆ ಪಕ್ಷದ ಜೊತೆಗೆ ನೇರವಾಗಿ, ಪರೋಕ್ಷವಾಗಿ ಯಾವುದೇ ಸಂಬಂಧವಿಲ್ಲ. 'ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕ್ಕಂ' ಪಾರ್ಟಿ ಜೊತೆಗೆ ನನ್ನ ಹೆಸರು ಸೇರಿಸಿದರೆ, ಫೋಟೋ ಬಳಸಿಕೊಂಡರೆ ಕ್ರಮ ಕೈಗೊಳ್ಳಲಾಗುವುದು' ಎಂದಿದ್ದರು. ಇದು ದೊಡ್ಡಮಟ್ಟದ ಸುದ್ದಿಯಾಗಿತ್ತು. ಇದೀಗ ಆ ಬಗ್ಗೆಯೇ ಪ್ರಕರಣ ದಾಖಲು ಮಾಡಲಾಗಿದೆ. ವಿಜಯ್ ಹೆಸರು, ಅಭಿಮಾನಿಗಳ ಸಂಘಗಳ ಹೆಸರನ್ನು ಎಲ್ಲಿಯೂ ಬಳಸದಂತೆ ತಡೆಯಾಜ್ಞೆ ತರಲಾಗಿದೆ.
ಈ ಸಂಬಂಧ ವಿಜಯ್ ತಂದೆ ಎಸ್.ಎ. ಚಂದ್ರಶೇಖರ್, ತಾಯಿ ಶೋಭಾ ಚಂದ್ರಶೇಖರ್, ಪಾರ್ಟಿ ಲೀಡರ್ ಪದ್ಮನಾಭನ್ ಸೇರಿದಂತೆ 11 ಜನರ ವಿರುದ್ಧ ಪ್ರಕರಣದ ದಾಖಲಾಗಿದೆ. 'ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕ್ಕಂ' ಪಾರ್ಟಿಗೆ ಎಸ್.ಎ. ಚಂದ್ರಶೇಖರ್ ಅವರು ಪ್ರಧಾನ ಕಾರ್ಯದರ್ಶಿ ಆಗಿದ್ದರೆ, ತಾಯಿ ಶೋಭಾ ಚಂದ್ರಶೇಖರ್ ಅವರು ಖಜಾಂಚಿ ಆಗಿದ್ದಾರೆ.
Vijay: ಒಟ್ಟಿಗೆ ಕಾಣಿಸಿಕೊಂಡ ಎಂ.ಎಸ್. ಧೋನಿ & 'ದಳಪತಿ' ವಿಜಯ್; ಈ ಭೇಟಿಗೆ ಕಾರಣವೇನು?
ಪಕ್ಷದ ಖಜಾಂಚಿ ಆಗಿದ್ದರೂ, ಶೋಭಾ ಈ ಹಿಂದೆ ನೀಡಿದ್ದ ಹೇಳಿಕೆ ಅಚ್ಚರಿ ಹುಟ್ಟಿಸಿತ್ತು. 'ಕೆಲ ದಿನಗಳ ಹಿಂದೆ ಪತಿ ಚಂದ್ರಶೇಖರ್ ಕೆಲ ಪತ್ರಗಳಿಗೆ ಸಹಿ ಹಾಕಿಸಿಕೊಂಡರು. ಅದು ಯಾವುದೋ ಅಭಿಮಾನಿ ಸಂಘ ಸ್ಥಾಪನೆಗೆ ಇರಬೇಕು ಎಂದುಕೊಂಡು ಸಹಿ ಹಾಕಿದ್ದೆ. ಇದು ಪಕ್ಷ ಸ್ಥಾಪನೆಗೆ ಎಂಬುದು ಗೊತ್ತಿರಲಿಲ್ಲ' ಎಂದು ಶೋಭಾ ಹಿಂದೊಮ್ಮೆ ಹೇಳಿಕೊಂಡಿದ್ದರು. ಅಲ್ಲದೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಚಂದ್ರಶೇಖರ್, 'ಇದು ವಿಜಯ್ ಅವರ ರಾಜಕೀಯ ಪಕ್ಷವಲ್ಲ. ಈ ಪಕ್ಷದೊಂದಿಗೆ ಅವರಿಗೆ ಯಾವುದೇ ಸಂಬಂಧವಿಲ್ಲ. ಅಂದು ವಿಜಯ್ಗೆ ಅಭಿಮಾನಿ ಸಂಘ ಕಟ್ಟಲು ಅವರ ಯಾವುದೇ ಅನುಮತಿ ಪಡೆಯಲಿಲ್ಲ. ಅದೇ ರೀತಿ ಈಗಲೂ ರಾಜಕೀಯ ಪಕ್ಷ ಸ್ಥಾಪನೆಗೆ ವಿಜಯ್ ಅನುಮತಿ ಬೇಕಿಲ್ಲ' ಎಂದು ಚಂದ್ರಶೇಖರ್ ವಾದ ಮಾಡಿದ್ದರು ಎಂಬ ಮಾತು ಕೇಳಿಬಂದಿತ್ತು.
Vijay Birthday: ಮೃಗವಾಗಿ ಅಬ್ಬರಿಸಲಿದ್ದಾರೆ 'ದಳಪತಿ' ವಿಜಯ್! ಫ್ಯಾನ್ಸ್ಗೆ ಭರ್ಜರಿ ಬರ್ತ್ಡೇ ಗಿಫ್ಟ್
ಈ ಎಲ್ಲ ಬೆಳವಣಿಗೆಗಳಿಂದ ಬೇಸತ್ತ ವಿಜಯ್ ತಂದೆಯೊಂದಿಗೆ ಮಾತನಾಡುವುದನ್ನೇ ಬಿಟ್ಟಿದ್ದರು ಎಂಬ ಮಾಹಿತಿ ಸಿಕ್ಕಿತ್ತು. ಆದರೆ, ಅಂದು ಹೊಸ ಪಕ್ಷವನ್ನು ಘೋಷಣೆ ಮಾಡಿ, ತಿಂಗಳು ಆಗುವುದರೊಳಗೆ ಚಂದ್ರಶೇಖರ್, ತಮ್ಮ ಪಕ್ಷವನ್ನು ನೋಂದಣಿ ಮಾಡದಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು.
2020ರ ನವೆಂಬರ್ನಲ್ಲಿ 'ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕ್ಕಂ' ಹೆಸರಿನಲ್ಲಿ ರಾಜಕೀಯ ಪಕ್ಷವೊಂದನ್ನು ನೋಂದಣಿ ಮಾಡಿಸಿದ್ದರು ವಿಜಯ್ ತಂದೆ. ಇದು ವಿಜಯ್ಗೆ ಇಷ್ಟವಿರಲಿಲ್ಲ. ತಕ್ಷಣವೇ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದ ವಿಜಯ್, 'ನನ್ನ ತಂದೆಯ ಪಕ್ಷ ಎಂದು ಸಪೋರ್ಟ್ ಮಾಡಬೇಡಿ. ಆ ಪಕ್ಷದ ಜೊತೆಗೆ ನೇರವಾಗಿ, ಪರೋಕ್ಷವಾಗಿ ಯಾವುದೇ ಸಂಬಂಧವಿಲ್ಲ. 'ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕ್ಕಂ' ಪಾರ್ಟಿ ಜೊತೆಗೆ ನನ್ನ ಹೆಸರು ಸೇರಿಸಿದರೆ, ಫೋಟೋ ಬಳಸಿಕೊಂಡರೆ ಕ್ರಮ ಕೈಗೊಳ್ಳಲಾಗುವುದು' ಎಂದಿದ್ದರು. ಇದು ದೊಡ್ಡಮಟ್ಟದ ಸುದ್ದಿಯಾಗಿತ್ತು. ಇದೀಗ ಆ ಬಗ್ಗೆಯೇ ಪ್ರಕರಣ ದಾಖಲು ಮಾಡಲಾಗಿದೆ. ವಿಜಯ್ ಹೆಸರು, ಅಭಿಮಾನಿಗಳ ಸಂಘಗಳ ಹೆಸರನ್ನು ಎಲ್ಲಿಯೂ ಬಳಸದಂತೆ ತಡೆಯಾಜ್ಞೆ ತರಲಾಗಿದೆ.
ಈ ಸಂಬಂಧ ವಿಜಯ್ ತಂದೆ ಎಸ್.ಎ. ಚಂದ್ರಶೇಖರ್, ತಾಯಿ ಶೋಭಾ ಚಂದ್ರಶೇಖರ್, ಪಾರ್ಟಿ ಲೀಡರ್ ಪದ್ಮನಾಭನ್ ಸೇರಿದಂತೆ 11 ಜನರ ವಿರುದ್ಧ ಪ್ರಕರಣದ ದಾಖಲಾಗಿದೆ. 'ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕ್ಕಂ' ಪಾರ್ಟಿಗೆ ಎಸ್.ಎ. ಚಂದ್ರಶೇಖರ್ ಅವರು ಪ್ರಧಾನ ಕಾರ್ಯದರ್ಶಿ ಆಗಿದ್ದರೆ, ತಾಯಿ ಶೋಭಾ ಚಂದ್ರಶೇಖರ್ ಅವರು ಖಜಾಂಚಿ ಆಗಿದ್ದಾರೆ.
Vijay: ಒಟ್ಟಿಗೆ ಕಾಣಿಸಿಕೊಂಡ ಎಂ.ಎಸ್. ಧೋನಿ & 'ದಳಪತಿ' ವಿಜಯ್; ಈ ಭೇಟಿಗೆ ಕಾರಣವೇನು?
ಪಕ್ಷದ ಖಜಾಂಚಿ ಆಗಿದ್ದರೂ, ಶೋಭಾ ಈ ಹಿಂದೆ ನೀಡಿದ್ದ ಹೇಳಿಕೆ ಅಚ್ಚರಿ ಹುಟ್ಟಿಸಿತ್ತು. 'ಕೆಲ ದಿನಗಳ ಹಿಂದೆ ಪತಿ ಚಂದ್ರಶೇಖರ್ ಕೆಲ ಪತ್ರಗಳಿಗೆ ಸಹಿ ಹಾಕಿಸಿಕೊಂಡರು. ಅದು ಯಾವುದೋ ಅಭಿಮಾನಿ ಸಂಘ ಸ್ಥಾಪನೆಗೆ ಇರಬೇಕು ಎಂದುಕೊಂಡು ಸಹಿ ಹಾಕಿದ್ದೆ. ಇದು ಪಕ್ಷ ಸ್ಥಾಪನೆಗೆ ಎಂಬುದು ಗೊತ್ತಿರಲಿಲ್ಲ' ಎಂದು ಶೋಭಾ ಹಿಂದೊಮ್ಮೆ ಹೇಳಿಕೊಂಡಿದ್ದರು. ಅಲ್ಲದೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಚಂದ್ರಶೇಖರ್, 'ಇದು ವಿಜಯ್ ಅವರ ರಾಜಕೀಯ ಪಕ್ಷವಲ್ಲ. ಈ ಪಕ್ಷದೊಂದಿಗೆ ಅವರಿಗೆ ಯಾವುದೇ ಸಂಬಂಧವಿಲ್ಲ. ಅಂದು ವಿಜಯ್ಗೆ ಅಭಿಮಾನಿ ಸಂಘ ಕಟ್ಟಲು ಅವರ ಯಾವುದೇ ಅನುಮತಿ ಪಡೆಯಲಿಲ್ಲ. ಅದೇ ರೀತಿ ಈಗಲೂ ರಾಜಕೀಯ ಪಕ್ಷ ಸ್ಥಾಪನೆಗೆ ವಿಜಯ್ ಅನುಮತಿ ಬೇಕಿಲ್ಲ' ಎಂದು ಚಂದ್ರಶೇಖರ್ ವಾದ ಮಾಡಿದ್ದರು ಎಂಬ ಮಾತು ಕೇಳಿಬಂದಿತ್ತು.
Vijay Birthday: ಮೃಗವಾಗಿ ಅಬ್ಬರಿಸಲಿದ್ದಾರೆ 'ದಳಪತಿ' ವಿಜಯ್! ಫ್ಯಾನ್ಸ್ಗೆ ಭರ್ಜರಿ ಬರ್ತ್ಡೇ ಗಿಫ್ಟ್
ಈ ಎಲ್ಲ ಬೆಳವಣಿಗೆಗಳಿಂದ ಬೇಸತ್ತ ವಿಜಯ್ ತಂದೆಯೊಂದಿಗೆ ಮಾತನಾಡುವುದನ್ನೇ ಬಿಟ್ಟಿದ್ದರು ಎಂಬ ಮಾಹಿತಿ ಸಿಕ್ಕಿತ್ತು. ಆದರೆ, ಅಂದು ಹೊಸ ಪಕ್ಷವನ್ನು ಘೋಷಣೆ ಮಾಡಿ, ತಿಂಗಳು ಆಗುವುದರೊಳಗೆ ಚಂದ್ರಶೇಖರ್, ತಮ್ಮ ಪಕ್ಷವನ್ನು ನೋಂದಣಿ ಮಾಡದಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು.