ಆ್ಯಪ್ನಗರ

ಪ್ರಶಸ್ತಿ ಬಂದಾಗ ನಂಬೋಕೆ ಆಗಲಿಲ್ಲ: ರಾಘಣ್ಣ

ಬಹಳ ವರ್ಷಗಳ ಬಳಿಕ ಚಿತ್ರರಂಗಕ್ಕೆ ಮರಳಿದ ನಟ ರಾಘವೇಂದ್ರ ರಾಜ್‌ಕುಮಾರ್‌ 'ಅಮ್ಮನ ಮನೆ' ಸಿನಿಮಾದ ಅಭಿನಯಕ್ಕಾಗಿ 'ಅತ್ಯುತ್ತಮ ನಟ' ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡ ಅವರಿಗೆ ಈ ಪ್ರಶಸ್ತಿ ಮೂಲಕ ಸೂಕ್ತ ಗೌರವ ಸಿಕ್ಕಂತಾಗಿದೆ. ಈ ಸಂದರ್ಭದಲ್ಲಿ ವಿಜಯ ಕರ್ನಾಟಕ ನಡೆಸಿದ ಸಂದರ್ಶನದಲ್ಲಿ ಅವರು ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ.

Vijaya Karnataka Web 11 Jan 2020, 11:30 am
(ಸಂದರ್ಶನ: ಹರೀಶ್‌ ಬಸವರಾಜ್‌)
Vijaya Karnataka Web best actor state award winner raghavendra rajkumar interview
ಪ್ರಶಸ್ತಿ ಬಂದಾಗ ನಂಬೋಕೆ ಆಗಲಿಲ್ಲ: ರಾಘಣ್ಣ

ಇದೇ ಮೊದಲ ಬಾರಿಗೆ ರಾಜ್ಯ ಪ್ರಶಸ್ತಿ ಪಡೆದಿದ್ದೀರಾ?
ಹೌದು. ನನ್ನ ಕರಿಯರ್‌ನಲ್ಲಿವೈಯಕ್ತಿಕ ಪ್ರಶಸ್ತಿಯನ್ನು ತೆಗೆದುಕೊಂಡಿರಲಿಲ್ಲ. ಹಾಗೆ ನೋಡಿದರೆ ಇದೇ ನನ್ನ ಮೊದಲ ಪ್ರಶಸ್ತಿ. ಹಾಗಾಗಿ ಇದು ನನಗೆ ಬಹಳ ವಿಶೇಷವಾದ ಪ್ರಶಸ್ತಿ ಕೂಡ.

ನೀವು ಕಮ್‌ ಬ್ಯಾಕ್‌ ಮಾಡಿದ ಸಿನಿಮಾ ಇದಲ್ಲವೆ?
ಹೌದು. ನಾನು ಮತ್ತೆ ನಟನೆ ಆರಂಭಿಸಿದ ಸಿನಿಮಾಗೆ ಪ್ರಶಸ್ತಿ ಬಂದಿರುವುದು ನನ್ನ ಬದುಕಿನ ಪುಣ್ಯ. ಇದರಿಂದ ನನ್ನ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ. ಕರಿಯರ್‌ ಇನ್ನಷ್ಟು ದೊಡ್ಡದಿದೆ, ಮುಗಿದಿಲ್ಲಎಂಬುದು ನನಗೆ ಗೊತ್ತಾಗುತ್ತಿದೆ.

'ಅಮ್ಮನ ಮನೆ'ಯಲ್ಲಿ ಬೇರೆ ರೀತಿಯ ಪಾತ್ರವಿತ್ತಲ್ಲ?
ಆ ಪಾತ್ರವನ್ನು ನಿಖಿಲ್‌ ಮಂಜು ಹೇಳಿದಾಗ ಇದನ್ನು ನಾನು ಹೇಗೆ ಮಾಡ್ತೇನೆ, ನನ್ನ ಕೈಲಿ ಸಾಧ್ಯವಾ ಎಂಬ ಅನುಮಾನವಿತ್ತು. ನಾನು ನಟಿಸಿದೆ ಎಂದು ಹೇಳುವುದಕ್ಕಿಂತ, ಅವರೇ ನನ್ನ ಬಳಿ ಇಂತಹ ಪಾತ್ರ ಮಾಡಿಸಿದರು.

ಪ್ರಶಸ್ತಿ ಅನೌನ್ಸ್‌ ಆದಾಗ ನಿಮ್ಮ ಮತ್ತು ಕುಟುಂಬದ ರಿಯಾಕ್ಷನ್‌?
ನನಗೆ ಇನ್ನೂ ನಂಬಲು ಆಗುತ್ತಿಲ್ಲ, ಆಶ್ಚರ್ಯ ಏಕೆಂದರೆ ಸಿನಿಮಾ ಮಾಡಿದ್ದೇ ದೊಡ್ಡ ವಿಷಯ. ಅಂತದ್ದರಲ್ಲಿ ಪ್ರಶಸ್ತಿಯೂ ಬಂದಾಗ ನನಗೆ ಯಾವ ರೀತಿ ರಿಯಾಕ್ಟ್ ಮಾಡಬೇಕೊ ಗೊತ್ತಾಗುತ್ತಿಲ್ಲ. ನನ್ನ ಪತ್ನಿ ಮಂಗಳಾ ನಂಜನಗೂಡಿನ ದೇವಸ್ಥಾನದಲ್ಲಿದ್ದರು. ಆಕೆ ದೇವರ ದರ್ಶನಕ್ಕೆ ಬಂದಾಗ ಸಂತೋಷದ ಸುದ್ದಿ ಬರ್ತಾ ಇದೆ ಎಂದು ಖುಷಿಪಟ್ಟರು.

ಈ ಸಂದರ್ಭದಲ್ಲಿಅಭಿಮಾನಿಗಳಿಗೆ ಏನು ಹೇಳುತ್ತೀರಾ?
ನೀವೆಲ್ಲ ಸೇರಿ ರಾಘವೇಂದ್ರ ರಾಜ್‌ಕುಮಾರ್‌ ಅವರನ್ನು ಆಸ್ಪತ್ರೆಯಿಂದ ನೇರವಾಗಿ ಬೆಳ್ಳಿತೆರೆಗೆ ಕರೆ ತಂದಿದ್ದೀರ. ಈ ಪ್ರಶಸ್ತಿ ಎಲ್ಲವೂ ಅಭಿಮಾನಿಗಳಿಗೆ ಸೇರುತ್ತದೆ. ಅವರಿಗೆ ಸೇರಿದ್ರೆ ಅಪ್ಪಾಜಿ-ಅಮ್ಮನಿಗೆ ಸೇರುತ್ತದೆ. ಬಹಳ ವರ್ಷಗಳ ಗ್ಯಾಪ್‌ ನಂತರ ನಟನೆಗೆ ಮರಳಿದಾಗ ಅದನ್ನು ಪ್ರಶಸ್ತಿ ಪುರಸ್ಕಾರ ನೀಡುವುದರ ಮೂಲಕ ಜನರು ಪ್ರೋತ್ಸಾಹಿಸಿದ್ದಾರೆ. ಇದರ ಅರ್ಥ ಇನ್ನೂ ಮುಂದೆ ಮಾಡಬೇಕಾಗಿರುವ ಕೆಲಸಗಳು ಬಹಳಷ್ಟಿದೆ. ಹಾಗಾಗಿ ನಾನು ಇನ್ನಷ್ಟು ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತೇನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌