ಆ್ಯಪ್ನಗರ

ಅಣ್ಣಾವ್ರನ್ನು ಸ್ಮರಿಸಿದ ಬಿಗ್ ಬಿ ಅಮಿತಾಭ್‌ ಬಚ್ಚನ್

ಅಪ್ಪನಂತೆಯೇ ಮಕ್ಕಳು ಕೂಡ ಉತ್ತಮ ಗುಣಗಳನ್ನು ಬೆಳೆಸಿಕೊಂಡಿದ್ದಾರೆ. ಇದು ನನ್ನ ಜೀವನದ ಐತಿಹಾಸಿಕ ಕ್ಷಣ. ಭಾರತೀಯ ಸಿನಿಮಾರಂಗ ಕಂಡ ಈ ಅಪ್ರತಿಮ ಕಲಾವಿದರು ಎಂದೆಂದಿಗೂ ನನ್ನ ಹೃದಯದಲ್ಲಿಯೇ ಇರುತ್ತಾರೆ ಎಂದಿದ್ದಾರೆ ಬಿಗ್ ಬಿ.

Vijaya Karnataka 25 Jan 2020, 12:06 pm
ಬಾಲಿವುಡ್‌ನ ಬಿಗ್‌ಬಿ ಅಮಿತಾಭ್‌ ಬಚ್ಚನ್‌ ದಕ್ಷಿಣದ ಖ್ಯಾತ ತಾರೆಯರನ್ನು ಸ್ಮರಿಸಿದ್ದಾರೆ. ಕನ್ನಡದ ಮೇರುನಟ ಡಾ.ರಾಜ್‌, ತೆಲುಗಿನ ಖ್ಯಾತ ನಟ ಅಕ್ಕಿನೇನಿ ನಾಗೇಶ್ವರ ರಾವ್‌, ತಮಿಳಿನ ಹೆಸರಾಂತ ನಟ ಶಿವಾಜಿ ಗಣೇಶನ್‌ ಪುತ್ರರ ಜತೆ ತಾವು ಕೆಲಸ ಮಾಡಿದ್ದು ಹೆಮ್ಮೆಯ ಸಂಗತಿ ಎಂದು ಅವರು ಟ್ವೀಟ್‌ ಮಾಡಿದ್ದಾರೆ.
Vijaya Karnataka Web ಅಮಿತಾಭ್ ಬಚ್ಚನ್


'ಜಾಹಿರಾತು ಒಂದರಲ್ಲಿಈ ಮೂವರು ಲೆಜಂಡರಿ ನಟರ ಮಕ್ಕಳಾದ ಶಿವರಾಜ್‌ ಕುಮಾರ್‌, ಅಕ್ಕಿನೇನಿ ನಾಗಾರ್ಜುನ ಮತ್ತು ಪ್ರಭು ಅವರ ಜತೆ ನಟಿಸಿದ್ದೇನೆ. ಅಪ್ಪನಂತೆಯೇ ಮಕ್ಕಳು ಕೂಡ ಉತ್ತಮ ಗುಣಗಳನ್ನು ಬೆಳೆಸಿಕೊಂಡಿದ್ದಾರೆ. ಇದು ನನ್ನ ಜೀವನದ ಐತಿಹಾಸಿಕ ಕ್ಷಣ. ಭಾರತೀಯ ಸಿನಿಮಾರಂಗ ಕಂಡ ಈ ಅಪ್ರತಿಮ ಕಲಾವಿದರು ಎಂದೆಂದಿಗೂ ನನ್ನ ಹೃದಯದಲ್ಲಿಯೇ ಇರುತ್ತಾರೆ' ಎಂದಿದ್ದಾರೆ ಅಮಿತಾಭ್‌.

ಅಮಿತಾಭ್‌ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಶಿವರಾಜ್‌ ಕುಮಾರ್‌ ಅವರು, 'ಭಾರತೀಯ ಸಿನಿಮಾರಂಗ ಕಂಡ ಶ್ರೇಷ್ಠ ಕಲಾವಿದರು ನೀವು. ನಿಮ್ಮಂಥ ಲೆಜಂಡರಿ ನಟರ ಜತೆ ಕೆಲಸ ಮಾಡಿದ್ದು ನಮ್ಮ ಸೌಭಾಗ್ಯ. ನಿಮ್ಮ ನಟನೆ, ನಿಮ್ಮೊಳಗಿನ ಶಕ್ತಿ ಸದಾ ನಮ್ಮನ್ನು ಅಚ್ಚರಿಗೊಳಿಸಿದೆ. ನಿಮ್ಮನ್ನು ಭೇಟಿ ಆದಾಗ ಪ್ರತಿ ಕ್ಷಣವನ್ನೂ ನಾನು ಎಂಜಾಯ್‌ ಮಾಡಿದ್ದೇನೆ. ಮತ್ತೆ ಮತ್ತೆ ತಮ್ಮನ್ನು ಭೇಟಿ ಆಗುವ ಸಮಯ ಕೂಡಿ ಬರಲಿ ಎಂದು ಬೇಡಿಕೊಳ್ಳುತ್ತೇನೆ' ಎಂದಿದ್ದಾರೆ.
'ಭಜರಂಗಿ 2' ಚಿತ್ರತಂಡಕ್ಕೆ ಎದುರಾಯ್ತು ಮೂರನೇ ಅವಘಡ!!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌