ಆ್ಯಪ್ನಗರ

'ಹೇ ರಾಮ್‌' ಎಂದ 'ಬಿಗ್ ಬಾಸ್' ಖ್ಯಾತಿಯ ಚೈತ್ರಾ ಕೋಟೂರು! ಸೈಬರ್‌ ಕ್ರೈಮ್‌ ತನಿಖೆಗಿಳಿದ ಧರ್ಮ!

ಕೊರೊನಾ ವೈರಸ್‌ ಸಂಕಷ್ಟದಿಂದಾಗಿ ಸಿನಿಮಾಗಳ ಚಿತ್ರೀಕರಣ ನಿಂತುಹೋಗಿದ್ದು ಮಾತ್ರವಲ್ಲದೆ, ಹೊಸ ಸಿನಿಮಾಗಳ್ಯಾವುವು ಲಾಂಚ್ ಆಗಿರಲಿಲ್ಲ. ಈಗ ಸ್ಯಾಂಡಲ್‌ವುಡ್‌ನಲ್ಲಿ ಸಿನಿ ಚಟುವಟಿಕೆಗಳು ಆರಂಭವಾಗಿದೆ. ಚೈತ್ರಾ ಕೋಟೂರು ನಟನೆಯ ಹೊಸ ಸಿನಿಮಾ ಶುರುವಾಗಿದೆ.

Vijaya Karnataka Web 9 Aug 2020, 4:02 pm
ಲಾಕ್‌ಡೌನ್‌ನಿಂದಾಗಿ ಚಿತ್ರರಂಗದ ಚಟುವಟಿಕೆಗಳೆಲ್ಲ ಸಂಪೂರ್ಣವಾಗಿ ನಿಂತುಹೋಗಿದ್ದವು. ಸ್ಥಗಿತಗೊಂಡಿದ್ದ ಸಿನಿಮಾ ಚಿತ್ರೀಕರಣವೆಲ್ಲ ಈಗ ನಿಧಾನಕ್ಕೆ ಪ್ರಾರಂಭವಾಗುತ್ತಿವೆ. ಇನ್ನು, ಕಳೆದ ಐದಾರು ತಿಂಗಳಿನಿಂದ ಹೊಸ ಸಿನಿಮಾಗಳ್ಯಾವುದು ಲಾಂಚ್ ಆಗಿರಲೇ ಇಲ್ಲ. ಇದೀಗ 'ಹೇ ರಾಮ್‌' ಸಿನಿಮಾ ಶುರುವಾಗಿದೆ. ಆ ಮೂಲಕ ಸಿನಿಮಾ ಚಟುವಟಿಕೆಗಳಿಗೆ ನಿಧಾನಕ್ಕೆ ಚಾಲನೆ ಸಿಕ್ಕಂತಾಗಿದೆ. ಅಂದಹಾಗೆ, ಈ ಸಿನಿಮಾದಲ್ಲಿ 'ಬಿಗ್ ಬಾಸ್' ಖ್ಯಾತಿಯ ಚೈತ್ರಾ ಕೋಟೂರು ಪ್ರಧಾನ ಪಾತ್ರ ಮಾಡುತ್ತಿದ್ದಾರೆ. ಜೊತೆಗೆ ತನಿಖಾಧಿಕಾರಿ ಪಾತ್ರದಲ್ಲಿ ನಟ ಧರ್ಮ ಕಾಣಿಸಿಕೊಂಡರೆ, 'ಪಾಪ್‌ಕಾರ್ನ್‌ ಮಂಕಿ ಟೈಗರ್‌' ಸಿನಿಮಾದಲ್ಲಿ ನಟಿಸಿ ಗಮನಸೆಳೆದ ಸಪ್ತಮಿ ಗೌಡ ಕೂಡ ಇಲ್ಲಿ ಬಣ್ಣ ಹಚ್ಚಲಿದ್ದಾರೆ.
Vijaya Karnataka Web bigg boss fame chaithra kotoor plays lead role in hey ram movie
'ಹೇ ರಾಮ್‌' ಎಂದ 'ಬಿಗ್ ಬಾಸ್' ಖ್ಯಾತಿಯ ಚೈತ್ರಾ ಕೋಟೂರು! ಸೈಬರ್‌ ಕ್ರೈಮ್‌ ತನಿಖೆಗಿಳಿದ ಧರ್ಮ!


ಚಿತ್ರದ ಕುರಿತು ಮಾತನಾಡುವ ನಟಿ ಚೈತ್ರಾ, 'ನಾನು ಬಿಗ್ ಬಾಸ್‌ನಿಂದ ಬಂದಮೇಲೆ, ಲಾಕ್‌ಡೌನ್‌ ಮುಗಿದ ಮೇಲೆ ಮಾಡುತ್ತಿರುವ ಮೊದಲ ಸಿನಿಮಾ ಇದು. ತುಂಬ ಒಳ್ಳೆಯ ಸ್ಕ್ರಿಪ್ಟ್ ಇದು. ಕ್ರೈಮ್‌ ವಿಷಯಗಳ ಮೇಲೆ ಸಿನಿಮಾ ಸಾಗಲಿದೆ. ಸೈಬರ್‌ ಕ್ರೈಮ್‌ಗೆ ಸಂಬಂಧಪಟ್ಟಂತೆ ಸಾಕಷ್ಟು ವಿಷಯಗಳು ಇದರಲ್ಲಿವೆ. ನನ್ನ ಪಾತ್ರದ ಬಗ್ಗೆ ಏನೂ ಹೇಳುವಂತೆ ಇಲ್ಲ. ನಾನಂತೂ ಶೂಟಿಂಗ್ ಶುರುವಾಗುವುದನ್ನೇ ಕಾಯುತ್ತಿದ್ದೇನೆ' ಎನ್ನುತ್ತಾರೆ. ಈ ಹಿಂದೆ ಅವರು 'ಸೂಜಿದಾರ' ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದರು.

ಮಾಜಿ ಪೊಲೀಸ್ ಅಧಿಕಾರಿ ಎಸ್‌.ಕೆ. ಉಮೇಶ್‌ ಈ ಸಿನಿಮಾಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವುದು ವಿಶೇಷ. ತಮ್ಮ ವೃತ್ತಿ ಜೀವನದಲ್ಲಿ ಕಂಡ ಸಾಕಷ್ಟು ನೈಜ ಘಟನೆಗಳಿಗೆ ಕಥೆಯ ರೂಪ ನೀಡಿದ್ದಾರಂತೆ ಅವರು. ಈ ಹಿಂದೆ 'ಕಾವೇರಿ ತೀರದ ಚರಿತ್ರೆ' ಸಿನಿಮಾ ನಿರ್ದೇಶನ ಮಾಡಿದ್ದ ಪ್ರವೀಣ್ ಬೇಲೂರು ಈ ಸಿನಿಮಾಕ್ಕೆ ಬಂಡವಾಳ ಹೂಡುವುದರ ಜೊತೆಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಚಿತ್ರೀಕರಣ ಆರಂಭಗೊಳ್ಳಲಿದೆ.

ಬಿಗ್‌ ಬಾಸ್‌ ಖ್ಯಾತಿಯ ಚೈತ್ರಾ ಕೋಟೂರ್‌ ಲವ್‌ ಸ್ಟೋರಿ ಬಹಿರಂಗ! ಹುಡುಗ ಯಾರು ಗೊತ್ತಾ?

ಬೆಂಗಳೂರಿನ ಜೆ.ಪಿ. ನಗರದ ಸಾಯಿಬಾಬಾ ದೇವಸ್ಥಾನದಲ್ಲಿ ಈಚೆಗೆ ಮುಹೂರ್ತ ಸಮಾರಂಭ ನಡೆದಿದ್ದು, ನಟ 'ಡಾಲಿ' ಧನಂಜಯ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿ ಶುಭ ಹಾರೈಸಿದ್ದಾರೆ. ವಿ. ನಾಗೇಂದ್ರ ಪ್ರಸಾದ್ ಹಾಡುಗಳಿಗೆ ಸಾಹಿತ್ಯ ಬರೆದು, ಸಂಗೀತವನ್ನೂ ಸಂಯೋಜಿಸಲಿದ್ದಾರೆ. ಈ ಸಿನಿಮಾದಲ್ಲಿ ಹೀರೋ, ಹೀರೋಯಿನ್ ಎನ್ನುವುದಕ್ಕಿಂತ ಎಲ್ಲ ಪಾತ್ರಗಳು ಪ್ರಧಾನವಾಗಿರಲಿದ್ದು, ಕಥೆಯೇ ಹೀರೋ ಎಂಬುದು ನಿರ್ದೇಶಕರ ಅಭಿಪ್ರಾಯ.

ಗಂಡ ತನ್ನನ್ನು ಹೇಗೆ ಮುದ್ದು ಮಾಡಬೇಕೆಂಬುದನ್ನು ಬಿಗ್ ಬಾಸ್ ಮನೆಯಲ್ಲಿ ವಿವರಿಸಿದ ಚೈತ್ರಾ ಕೋಟೂರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌