ಆ್ಯಪ್ನಗರ

ಅಂಥ ಫ್ರೆಂಡ್ಲಿ ಮನುಷ್ಯನೇ ಹೋಗಿಬಿಟ್ರು, ನೀವ್ ನಾವೆಲ್ಲಾ ಯಾವ್‌ ಲೆಕ್ಕ?- ರಾಕ್‌ಲೈನ್‌ ಸುಧಾಕರ್‌ ಬಗ್ಗೆ ಪ್ರಥಮ್‌ ಮಾತು

'ಪಂಚರಂಗಿ', 'ಡ್ರಾಮಾ', 'ಟಗರು' ಸೇರಿದಂತೆ 200 ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ಪೋಷಕ ನಟ ರಾಕ್‌ಲೈನ್‌ ಸುಧಾಕರ್ ಗುರುವಾರ (ಸೆ.24) ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಟ ಪ್ರಥಮ್‌ ಹಂಚಿಕೊಂಡ ನೆನಪು ಇಲ್ಲಿದೆ.

Vijaya Karnataka Web 24 Sep 2020, 6:14 pm
ಕನ್ನಡ ಚಿತ್ರರಂಗದಲ್ಲಿ ಪೋಷಕ ಕಲಾವಿದರಾಗಿ ಅಪಾರ ಜನಮನ್ನಣೆ ಪಡೆದ ಕಲಾವಿದ ರಾಕ್‌ಲೈನ್‌ ಸುಧಾಕರ್. ಇಂದು (ಸೆ.24) ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ. 'ಶುಗರ್‌ಲೆಸ್‌' ಸಿನಿಮಾ ಸೆಟ್‌ನಲ್ಲಿ ಚಿತ್ರೀಕರಣಕ್ಕೆ ಮೇಕಪ್‌ ಹಾಕಿಕೊಂಡು ಅವರು ರೆಡಿ ಆಗುತ್ತಿದ್ದರು. ಅಷ್ಟರಲ್ಲೇ ಕಾಲನ ಕರೆಗೆ ಓಗೊಟ್ಟಿದ್ದಾರೆ. ಅಂದಹಾಗೆ, ನಟ/ ನಿರ್ದೇಶಕ ಪ್ರಥಮ್ ಜೊತೆಗೆ ಅವರು 4 ಸಿನಿಮಾಗಳಲ್ಲಿ ಅಪ್ಪನಾಗಿ ಕಾಣಿಸಿಕೊಂಡಿದ್ದರು. ಸುಧಾಕರ್ ನಿಧನರಾದ ಹಿನ್ನೆಲೆಯಲ್ಲಿ ಪ್ರಥಮ್ ಈಚೆಗೆ ನಡೆದ ಘಟನೆಯೊಂದನ್ನು ನೆನಪು ಮಾಡಿಕೊಂಡಿದ್ದಾರೆ.
Vijaya Karnataka Web ಅಂಥ ಫ್ರೆಂಡ್ಲಿ ಮನುಷ್ಯನೇ ಹೋಗಿಬಿಟ್ರು, ನೀವ್ ನಾವೆಲ್ಲಾ ಯಾವ್‌ ಲೆಕ್ಕ?- ರಾಕ್‌ಲೈನ್‌ ಸುಧಾಕರ್‌ ಬಗ್ಗೆ ಪ್ರಥಮ್‌ ಮಾತು


'ಸ್ವಲ್ಪ ದಿನದ ಹಿಂದೆ ಫೋನ್ ಮಾಡಿ, 'ಮೈ ಸನ್... ಎಲ್ಲಿದಿಯಾ ದೇವ್ರು..' ಅಂದ್ರು... 'ಸಿನಿಮಾ ನೋಡ್ತಾ ಇದೀನಿ' ಅಂದೆ...! 'ನಾಳೆ ಬೆಳಿಗ್ಗೆ ಬಸವೇಶ್ವರ ನಗರಕ್ಕೆ 10.30ಕ್ಕೆ ಬಂದುಬಿಡು ದೇವ್ರು‌... ಟಿಫಿನ್‌ ‌ಮಾಡಬೇಡಪ್ಪ' ಅಂತ ಹೇಳಿದ್ರು. ಹಾಗೆ ಹೋದೆ, 'ಹತ್ತು ಸ್ಕೂಟ್ರು' ಅಂತ ಹತ್ತಿಸಿಕೊಂಡು ಸಣ್ಣ ಗಲ್ಲಿಗಳ ಮೂಲಕ ಒಂದು ರೋಡ್‌ ಸೈಡ್ ಇಡ್ಲಿ, ದೋಸೆ ಹೋಟೆಲ್‌ಗೆ ಕರೆದುಕೊಂಡು ಹೋಗಿ ಟಿಫಿನ್ ಮಾಡಿಸಿದ್ರು. ಅಲ್ಲಿದ್ದ ಹೆಂಗಸನ್ನ ತೋರಿಸಿ, 'ಇವ್ಳು ನಮ್ಮಕ್ಕನ ಮಗಳು.. ಸ್ವಾವಲಂಬಿಯಾಗಿ ಹೋಟೆಲ್ ನಡೆಸ್ತಾ ಇದಾಳೆ. ಮೂರು ಸಿನಿಮಾದಲ್ಲಿ ಊಟ ಕೊಟಿದ್ಯಾ ಮೈ ಸನ್... ಒಂದು ಹೊತ್ತು ನಿನಗೆ ಇಲ್ಲಿ ಕೊಡ್ಸೋಣ ಅಂತ..' ಹಾಗೆ ಹೇಳಿ ಅಲ್ಲಿಂದ ಅವ್ರ ಸ್ಕೂಟರ್‌ನಲ್ಲೇ 'ನಟ ಭಯಂಕರ' ಡಬ್ಬಿಂಗ್‌ಗೆ ಹೋದ್ವಿ...' ಎಂದು ಕೆಲ ದಿನಗಳ ಹಿಂದೆ ನಡೆದ ಘಟನೆಯನ್ನು ಬರೆದುಕೊಂಡಿದ್ದಾರೆ ಪ್ರಥಮ್.

'ನೀನು, ನಾನು ಇಬ್ರು ಸಿಂಪಲ್.. ಅದಕ್ಕೆ ಇಲ್ಲೇ ರೋಡ್ ಸೈಡ್‌ ತಿಂದು ಕೆಲಸ ಮಾಡೋಣ ನಡಿ' ಅಂತ ಹತ್ತಿಸಿಕೊಂಡು ಹೊರಟೇ ಹೋದ್ರು...! 'ಪ್ರಥಮು, ಸಿಕ್ಕವರೆಲ್ಲಾ ಕೇಳ್ತಾರಪ್ಪ, ಪ್ರಥಮ್ ನಿಮಗೆ ಏನಾಗ್ಬೇಕು' ಅಂತ.. ಹೀಗೆ ಹೇಳಿ ಬಸವೇಶ್ವರ ನಗರದ ಎಲ್ಲರಿಗೂ ಪರಿಚಯ ಮಾಡಿಸಿಬಿಟ್ರು.. ಸರಳತೆ ರಕ್ತದಲ್ಲೇ ಇತ್ತು. ಹೆಚ್ಚು ಕಮ್ಮಿ ‌4-5 ವರ್ಷದ ಸ್ನೇಹ. ನನ್ನ ನಾಲ್ಕು ಸಿನಿಮಾಗಳಲ್ಲೂ ಅಪ್ಪ. ಇವತ್ ಇಲ್ಲ ಅನ್ನೋ ವಿಷಯ ನನ್ನನ್ನೇ ಕುಗ್ಗಿಸಿಬಿಡ್ತು. ಅಲ್ಲೇ ಇದ್ದು ಭಾರವಾದ ಹೃದಯದಿಂದ ಬೀಳ್ಕೊಟ್ಟೆ..' ಎಂದಿದ್ದಾರೆ ಪ್ರಥಮ್‌.

ಶೂಟಿಂಗ್ ಸ್ಥಳದಲ್ಲಿ ರಾಕ್‌ಲೈನ್ ಸುಧಾಕರ್ ನಿಧನ: ನಡೆದ ಘಟನೆ ವಿವರಿಸಿದ ನಟ ಪೃಥ್ವಿ ಅಂಬರ್!

'ಇದೆಲ್ಲಾ ಯಾಕೆ ಹೇಳ್ತಾ ಇದೀನಿ ಅಂದ್ರೆ ಇಂಥ ಸರಳ, ಕನ್ನಡ ಚಿತ್ರರಂಗದ ಫ್ರೆಂಡ್ಲಿ ಮನುಷ್ಯನೇ ಹೊರಟುಹೋದ್ರು... ಇನ್ನು ನೀವು ನಾವೆಲ್ಲಾ ಯಾವ ಲೆಕ್ಕ? ಇದ್ದಷ್ಟು ದಿನ ತಗ್ಗಿಬಗ್ಗಿ ನಡೀರಿ. ಒಂದು ದಿನ ಭೂಮಿ ಋಣ ಮುಗ್ಸಿ ಹೋಗ್ತಾ ಇರಿ...! ತಲೆಲೇ ಮೆರೀತಿನಿ ಅಂದವರು ಹಾಳಾಗೋಗೌರೆ...! ಸಹಜವಾಗಿ ಬದುಕು ಬದುಕಿ..! ಓಂ ಶಾಂತಿ' ಎಂದು ಮಾತು ಮುಗಿಸುತ್ತಾರೆ ಪ್ರಥಮ್‌. (ಫೋಟೋ: ಪ್ರಥಮ್ ಫೇಸ್‌ಬುಕ್‌ ಪೇಜ್‌)

ರಾಕ್‌ಲೈನ್ ಸುಧಾಕರ್‌ ನಿಧನಕ್ಕೆ ಕಂಬನಿ ಮಿಡಿದ ಡಾಲಿ, ದರ್ಶನ್, ರಕ್ಷಿತ್ ಶೆಟ್ಟಿ!

View this post on Instagram ಸ್ವಲ್ಪ ದಿನದ ಹಿಂದೆ phone ಮಾಡಿ my son... ಎಲ್ಲಿದ್ಯಾ ದೇವ್ರು ಅಂದ್ರು... ಸಿನಿಮಾ ನೋಡ್ತಾ ಇದೀನಿ ಅಂದೆ...! ನಾಳೆ ಬೆಳಿಗ್ಗೆ ಬಸವೇಶ್ವರ ನಗರಕ್ಕೆ 10:30 ಬಂದುಬಿಡು ದೇವ್ರು‌...tiffin‌ಮಾಡ್ಬೇಡಪ್ಪ ಅಂತ ಹೇಳಿದ್ರು... ಹಾಗೆ ಹೋದೆ... ಹತ್ತು ಸ್ಕೂಟ್ರು ಅಂತ ಹತ್ತಿಸಿಕೊಂಡು ಸಣ್ಣ ಗಲ್ಲಿಗಳ ಮೂಲಕ ಒಂದು road side ಇಡ್ಲಿ,ದೋಸೆ ಹೋಟಲ್ ಗೆ ಕರೆದುಕೊಂಡು ಹೋಗಿ tiffin ಮಾಡ್ಸಿದ್ರು... ಅಲ್ಲಿದ್ದ ಹೆಂಗಸನ್ನ ತೋರಿಸಿ ...ಇವ್ಳು ನಮಕ್ಕನ ಮಗಳು...ಸ್ವಾವಲಂಬಿಯಾಗಿ ಹೋಟಲ್ ನಡೆಸ್ತಾ ಇದಾಳೆ... ಮೂರು ಸಿನಿಮಾದಲ್ಲಿ ಊಟ ಕೊಟಿದ್ಯಾ my son...ಒಂದು ಹೊತ್ತು ನಿನಗೆ ಇಲ್ಲಿ ಕೊಡ್ಸೋಣ ಅಂತ... ಹಾಗೆ ಹೇಳಿ ಅಲ್ಲಿಂದ ಅವ್ರ scooter ಲೇ #ನಟಭಯಂಕರ ಡಬ್ಬಿಂಗ್ ಗೆ ಹೋದ್ವಿ...! ನೀನು ನಾನು ಇಬ್ರು simple... ಅದಕ್ಕೆ ಇಲ್ಲೇ road side ತಿಂದು ಕೆಲಸ ಮಾಡೋಣ ನಡಿ ಅಂತ ಹತ್ತಿಸಿಕೊಂಡು ಹೊರಟೇ ಹೋದ್ರು...! ಪ್ರಥಮು ಸಿಕ್ಕವರೆಲ್ಲಾ ಕೇಳ್ತಾರಪ್ಪ ಪ್ರಥಮ್ ನಿಮ್ಗೇ ಏನಾಗ್ಬೇಕು ಅಂತ...ಹೀಗೆ ಹೇಳಿ ಬಸವೇಶ್ವರ ನಗರದ ಎಲ್ಲರಿಗೂ ಪರಿಚಯ ಮಾಡಿಸಿಬಿಟ್ಟು... ಸರಳತೆ ರಕ್ತದಲ್ಲೇ ಇತ್ತು...!🙏 ಹೆಚ್ಚು ಕಮ್ಮಿ‌4-5 ವರ್ಷದ ಸ್ನೇಹ... ನನ್ನ ನಾಲ್ಕು ಸಿನಿಮಾದಲ್ಲೂ ಅಪ್ಪ...! ಇವತ್ ಇಲ್ಲ ಅನ್ನೋ ವಿಷಯ ನನ್ನನ್ನೇ ಕುಗ್ಗಿಸಿಬಿಡ್ತು...ಇಷ್ಟೋತ್ತನಕ ಅಲ್ಲೇ ಇದ್ದು ಭಾರವಾದ ಹೃದಯದಿಂದ ಬೀಳ್ಕೊಟ್ಟ್ಟೆ!! ಇದೆಲ್ಲಾ ಯಾಕೆ ಹೇಳ್ತಾ ಇದೀನಿ ಅಂದ್ರೆ ಇಂತ simple,Kannada industry friendly ಮನುಷ್ಯನೇ ಹೊರಟುಹೋದ್ರು....!ಇನ್ನು ನೀವು ನಾವೆಲ್ಲಾ ಯಾವ ಲೆಕ್ಕ? ಇದ್ದಷ್ಟು ದಿನ ತಗ್ಗಿಬಗ್ಗಿ ನಡೀರಿ...! ಒಂದು ದಿನ ಭೂಮಿ ಋಣ ಮುಗ್ಸಿ ಹೋಗ್ತಾ ಇರಿ...! ತಲೆಲೇ ಮೆರೀತಿನಿ ಅಂದವರು ಹಾಳಾಗೋಗೌರೆ...! ಸಹಜವಾಗ ಬದುಕು ಬದುಕಿ..! ಓಂ ಶಾಂತಿ!! A post shared by Olle Hudga Pratham (@olle_hudga_prathama) on Sep 24, 2020 at 3:29am PDT

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌