ಪನ್ನಗ ಸೋಮಶೇಖರ್ ನಿರ್ದೇಶನದಲ್ಲಿ ವರುಣ್ ರಾಜು ಪಟೇಲ್ ಹಾಗೂ ಭರತ್ ಗೌಡ ನಾಯಕರಾಗಿ ನಟಿಸಿರುವ 'ಕಡಲ ತೀರದ ಭಾರ್ಗವ' ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಚಿತ್ರದ ಟೀಸರ್ ಸಾಕಷ್ಟು ಕುತೂಹಲ ಮೂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. 'ಬಿಗ್ ಬಾಸ್' ಖ್ಯಾತಿಯ ಶ್ರುತಿ ಪ್ರಕಾಶ್ ಈ ಸಿನಿಮಾದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ಪನ್ನಗ ಸೋಮಶೇಖರ್, 'ನಮ್ಮ ಚಿತ್ರ ಹಿರಿಯ ಸಾಹಿತಿ ಶಿವರಾಮ ಕಾರಂತರ ಕುರಿತಾದುದ್ದಲ್ಲ . ಇದರಲ್ಲಿ ನಾಯಕನ ಹೆಸರು ಭಾರ್ಗವ. ಆತ ಕಡಲತೀರದವನು. ಇನ್ನೊಂದು ರೀತಿಯಲ್ಲಿ ವಿಷ್ಣುವಿನ ಆರನೇ ಅವತಾರ ಪರಶುರಾಮ. ಆತನನ್ನು ಭಾರ್ಗವ ರಾಮ ಎಂತಲೂ ಕರೆಯುತ್ತಾರೆ. ಭಾರ್ಗವ ರಾಮ ಸಾವಿಲ್ಲದವ. ನಮ್ಮ ನಾಯಕನ ಪಾತ್ರದಲ್ಲೂ ಈ ಗುಣಗಳಿವೆ. ಹಾಗಾಗೂ ಈ ಶೀರ್ಷಿಕೆ ಸೂಕ್ತ ಎನಿಸಿತು. ಸದ್ಯ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದೇವೆ. ನವೆಂಬರ್ ಮೊದಲ ವಾರದಲ್ಲಿ ಟ್ರೈಲರ್ ಬರಲಿದೆ. ನವೆಂಬರ್ ಅಂತ್ಯ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಚಿತ್ರವನ್ನು ತೆರೆಗೆ ತರುವ ತಯಾರಿ ನಡೆಯುತ್ತಿದೆ' ಎನ್ನುತ್ತಾರೆ.
'ನಾನು, ನಿರ್ದೇಶಕರು ಹಾಗೂ ಚಿತ್ರದ ಮತ್ತೊಬ್ಬ ನಾಯಕ ಭರತ್ ಗೌಡ ಹತ್ತು ವರ್ಷಗಳ ಸ್ನೇಹಿತರು. ಹಿಂದೆ ಅಪಘಾತದಲ್ಲಿ ಕಾಲು ಮುರಿದುಕೊಂಡಿದ್ದೆ. ಆ ಸಮಯದಲ್ಲಿ ಈ ಕಥೆ ಕೇಳಿದೆ. ಹಾಗೆ ಚಿತ್ರ ಆರಂಭವಾಯಿತು. ಭಾರ್ಗವನ ಪಾತ್ರದಲ್ಲಿ ನಾನು ನಟಿಸುತ್ತಿದ್ದೇನೆ. ಒಬ್ಬ ವ್ಯಕ್ತಿಯಲ್ಲಿ ಹೀರೋ ಹಾಗೂ ವಿಲನ್ನ ಎರಡೂ ಗುಣಗಳಿರುತ್ತವೆ. ನನ್ನದು ಇದೇ ರೀತಿ ಪಾತ್ರ' ಎಂದರು ನಾಯಕ ವರುಣ್ ರಾಜು ಪಟೇಲ್.
'ನಿರ್ದೇಶಕರು ಹೇಳಿದ ಮನ ತಟ್ಟಿತು. ಆನಂತರ ನಿರ್ಮಾಪಕರ ಹುಡುಕಾಟ. ಕೊನೆಗೆ ವರುಣ್, ನಾನು ಸೇರಿ ನಿರ್ಮಾಣ ಆರಂಭಿಸಿದ್ದೆವು. ನನ್ನ ಸ್ನೇಹಿರೊಬ್ಬರು ಬಳಿ ನಿರ್ಮಾಣ ಮಾಡುತ್ತಿದ್ದೇನೆ ಎಂದು ಹೇಳಿದಾಗ, ಇದೊಂದು ತಪಸ್ಸಿನ ತರಹ ಎಂದರು. ಆಮೇಲೆ ಆ ಮಾತಿನ ಅರ್ಥವಾಯಿತು. ಎರಡು ವರ್ಷಗಳ ಹಿಂದೆ ಚಿತ್ರೀಕರಣ ಆರಂಭಿಸಿದಾಗ ಕಡಲತೀರದ ಕಡೆ ಎಂದು ಕೇಳರಿಯದ ಮಳೆ. ಡಿಸೆಂಬರ್ ತನಕ ಎಲ್ಲೋ ಅಲರ್ಟ್ ಘೋಷಣೆ. ಆನಂತರ ಋಷಿಗಳ ತಪಸ್ಸಿಗೆ ರಾಕ್ಷಸರು ಅಡ್ಡಿಪಡಿಸಿದಂತೆ, ನಮಗೆ ತೊಂದರೆ ಕೊಡಲು ಕೊರೊನಾ ಬಂತು. ಈಗ ನಮ್ಮ ಚಿತ್ರ ಎಲ್ಲಾ ಅಡ್ಡಿ ಆತಂಕಗಳನ್ನು ದಾಟಿ ಬಿಡುಗಡೆ ಹಂತ ತಲುಪಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ' ಎಂದರು ಚಿತ್ರದ ಮತ್ತೊಬ್ಬ ನಾಯಕ ಭರತ್ ಗೌಡ. ನಾಯಕರಾದ ವರುಣ್ ರಾಜು ಪಟೇಲ್ ಹಾಗೂ ಭರತ್ ಗೌಡ 'ಕಡಲ ತೀರದ ಭಾರ್ಗವ' ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳವ ಶ್ರುತಿ ಪ್ರಕಾಶ್, 'ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಇಂಪನಾ. ಸದಾ ಕೆಲಸದ ಒತ್ತಡದಲ್ಲಿರುವ ಅಪ್ಪ. ಎಲ್ಲದಕ್ಕೂ ಕಂಟ್ರೋಲ್ ಮಾಡುವ ಅಮ್ಮ. ಅದರಿಂದ ಆಕೆಗೆ ಚಿಕ್ಕಂದಿನಿಂದಲೂ ಕುಟುಂಬದ ಪ್ರೀತಿ ಸಿಕ್ಕಿರುವುದಿಲ್ಲ. ಆದರೆ ಅವಳ ಭಾವನೆ ಹೇಳಿಕೊಳ್ಳಲು ಒಬ್ಬರು ಆಂಟಿ ಇರುತ್ತಾರೆ. ನಂತರ ಅವರು ಅಸುನೀಗುತ್ತಾರೆ. ಆನಂತರ ಇಂಪನಾಗೆ ನಾಯಕ ಭರತ್ ಸಿಗುತ್ತಾನೆ. ಮುಂದಿನದು ಚಿತ್ರದಲ್ಲಿ ನೋಡಬೇಕು' ಎನ್ನುತ್ತಾರೆ. 'ಚಿತ್ರದ ಶೀರ್ಷಿಕೆ ನನಗೆ ಬಹಳ ಹಿಡಿಸಿತು . ನಿರ್ದೇಶಕರು ಮೂಲತಃ ಗಿಟಾರ್ ಪ್ಲೇಯರ್. ಅವರಿಗೆ ಸಂಗೀತ ಜ್ಞಾನವಿರುವುದರಿಂದ ಉತ್ತಮ ಹಾಡುಗಳು ಮೂಡಿಬರಲು ಸಹಕಾರಿಯಾಯಿತು. ಒಂದು ಬಿಟ್ ಸಾಂಗ್ ಸೇರಿದಂತೆ 9 ಹಾಡುಗಳಿವೆ. ಖ್ಯಾತ ಗೀತರಚನೆಕಾರರು ಬರೆದಿರುವ ಈ ಚಿತ್ರದ ಹಾಡುಗಳನ್ನು ಪ್ರಸಿದ್ಧ ಗಾಯಕರು ಹಾಡಿದ್ದಾರೆ' ಎಂದು ಚಿತ್ರದ ಸಂಗೀತದ ಬಗ್ಗೆ ಮಾಹಿತಿ ನೀಡಿದರು ಸಂಗೀತ ನಿರ್ದೇಶಕ ಅನಿಲ್ ಸಿ.ಜೆ.
ಶ್ರುತಿ ಪ್ರಕಾಶ್ ಕಂಠಸಿರಿಯಲ್ಲಿ ಲಂಡನ್ನಲ್ಲಿ ಲಂಬೋದರ
ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ಪನ್ನಗ ಸೋಮಶೇಖರ್ ನಿರ್ದೇಶಿಸಿರುವ ಈ ಚಿತ್ರಕ್ಕೆ ಕೀರ್ತನ್ ಪೂಜಾರ್ ಛಾಯಾಗ್ರಹಣ ಮಾಡಿದ್ದಾರೆ. ಆಶಿಕ್ ಕುಸುಗೊಳ್ಳಿ , ಉಮೇಶ್ ಭೋಸಗಿ ಅವರ ಸಂಕಲನವಿದೆ. ವರುಣ್ ರಾಜು ಪಟೇಲ್, ಭರತ್ ಗೌಡ, ಶ್ರುತಿ ಪ್ರಕಾಶ್ ಜೊತೆಗೆ 'ಸಿದ್ಲಿಂಗು' ಶ್ರೀಧರ್, ರಾಘವ್ ನಾಗ್, ಅಶ್ವಿನ್ ಹಾಸನ್ ಮುಂತಾದವರು ನಟಿಸಿದ್ದಾರೆ.
ಲಂಡನ್ನಲ್ಲಿ ಲಂಬೋದರ ನನಗೆ ಡಬಲ್ ಡೆಬ್ಯೂ ಎಂದ ಶ್ರುತಿ ಪ್ರಕಾಶ್
'ನಾನು, ನಿರ್ದೇಶಕರು ಹಾಗೂ ಚಿತ್ರದ ಮತ್ತೊಬ್ಬ ನಾಯಕ ಭರತ್ ಗೌಡ ಹತ್ತು ವರ್ಷಗಳ ಸ್ನೇಹಿತರು. ಹಿಂದೆ ಅಪಘಾತದಲ್ಲಿ ಕಾಲು ಮುರಿದುಕೊಂಡಿದ್ದೆ. ಆ ಸಮಯದಲ್ಲಿ ಈ ಕಥೆ ಕೇಳಿದೆ. ಹಾಗೆ ಚಿತ್ರ ಆರಂಭವಾಯಿತು. ಭಾರ್ಗವನ ಪಾತ್ರದಲ್ಲಿ ನಾನು ನಟಿಸುತ್ತಿದ್ದೇನೆ. ಒಬ್ಬ ವ್ಯಕ್ತಿಯಲ್ಲಿ ಹೀರೋ ಹಾಗೂ ವಿಲನ್ನ ಎರಡೂ ಗುಣಗಳಿರುತ್ತವೆ. ನನ್ನದು ಇದೇ ರೀತಿ ಪಾತ್ರ' ಎಂದರು ನಾಯಕ ವರುಣ್ ರಾಜು ಪಟೇಲ್.
'ನಿರ್ದೇಶಕರು ಹೇಳಿದ ಮನ ತಟ್ಟಿತು. ಆನಂತರ ನಿರ್ಮಾಪಕರ ಹುಡುಕಾಟ. ಕೊನೆಗೆ ವರುಣ್, ನಾನು ಸೇರಿ ನಿರ್ಮಾಣ ಆರಂಭಿಸಿದ್ದೆವು. ನನ್ನ ಸ್ನೇಹಿರೊಬ್ಬರು ಬಳಿ ನಿರ್ಮಾಣ ಮಾಡುತ್ತಿದ್ದೇನೆ ಎಂದು ಹೇಳಿದಾಗ, ಇದೊಂದು ತಪಸ್ಸಿನ ತರಹ ಎಂದರು. ಆಮೇಲೆ ಆ ಮಾತಿನ ಅರ್ಥವಾಯಿತು. ಎರಡು ವರ್ಷಗಳ ಹಿಂದೆ ಚಿತ್ರೀಕರಣ ಆರಂಭಿಸಿದಾಗ ಕಡಲತೀರದ ಕಡೆ ಎಂದು ಕೇಳರಿಯದ ಮಳೆ. ಡಿಸೆಂಬರ್ ತನಕ ಎಲ್ಲೋ ಅಲರ್ಟ್ ಘೋಷಣೆ. ಆನಂತರ ಋಷಿಗಳ ತಪಸ್ಸಿಗೆ ರಾಕ್ಷಸರು ಅಡ್ಡಿಪಡಿಸಿದಂತೆ, ನಮಗೆ ತೊಂದರೆ ಕೊಡಲು ಕೊರೊನಾ ಬಂತು. ಈಗ ನಮ್ಮ ಚಿತ್ರ ಎಲ್ಲಾ ಅಡ್ಡಿ ಆತಂಕಗಳನ್ನು ದಾಟಿ ಬಿಡುಗಡೆ ಹಂತ ತಲುಪಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ' ಎಂದರು ಚಿತ್ರದ ಮತ್ತೊಬ್ಬ ನಾಯಕ ಭರತ್ ಗೌಡ. ನಾಯಕರಾದ ವರುಣ್ ರಾಜು ಪಟೇಲ್ ಹಾಗೂ ಭರತ್ ಗೌಡ 'ಕಡಲ ತೀರದ ಭಾರ್ಗವ' ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳವ ಶ್ರುತಿ ಪ್ರಕಾಶ್, 'ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಇಂಪನಾ. ಸದಾ ಕೆಲಸದ ಒತ್ತಡದಲ್ಲಿರುವ ಅಪ್ಪ. ಎಲ್ಲದಕ್ಕೂ ಕಂಟ್ರೋಲ್ ಮಾಡುವ ಅಮ್ಮ. ಅದರಿಂದ ಆಕೆಗೆ ಚಿಕ್ಕಂದಿನಿಂದಲೂ ಕುಟುಂಬದ ಪ್ರೀತಿ ಸಿಕ್ಕಿರುವುದಿಲ್ಲ. ಆದರೆ ಅವಳ ಭಾವನೆ ಹೇಳಿಕೊಳ್ಳಲು ಒಬ್ಬರು ಆಂಟಿ ಇರುತ್ತಾರೆ. ನಂತರ ಅವರು ಅಸುನೀಗುತ್ತಾರೆ. ಆನಂತರ ಇಂಪನಾಗೆ ನಾಯಕ ಭರತ್ ಸಿಗುತ್ತಾನೆ. ಮುಂದಿನದು ಚಿತ್ರದಲ್ಲಿ ನೋಡಬೇಕು' ಎನ್ನುತ್ತಾರೆ. 'ಚಿತ್ರದ ಶೀರ್ಷಿಕೆ ನನಗೆ ಬಹಳ ಹಿಡಿಸಿತು . ನಿರ್ದೇಶಕರು ಮೂಲತಃ ಗಿಟಾರ್ ಪ್ಲೇಯರ್. ಅವರಿಗೆ ಸಂಗೀತ ಜ್ಞಾನವಿರುವುದರಿಂದ ಉತ್ತಮ ಹಾಡುಗಳು ಮೂಡಿಬರಲು ಸಹಕಾರಿಯಾಯಿತು. ಒಂದು ಬಿಟ್ ಸಾಂಗ್ ಸೇರಿದಂತೆ 9 ಹಾಡುಗಳಿವೆ. ಖ್ಯಾತ ಗೀತರಚನೆಕಾರರು ಬರೆದಿರುವ ಈ ಚಿತ್ರದ ಹಾಡುಗಳನ್ನು ಪ್ರಸಿದ್ಧ ಗಾಯಕರು ಹಾಡಿದ್ದಾರೆ' ಎಂದು ಚಿತ್ರದ ಸಂಗೀತದ ಬಗ್ಗೆ ಮಾಹಿತಿ ನೀಡಿದರು ಸಂಗೀತ ನಿರ್ದೇಶಕ ಅನಿಲ್ ಸಿ.ಜೆ.
ಶ್ರುತಿ ಪ್ರಕಾಶ್ ಕಂಠಸಿರಿಯಲ್ಲಿ ಲಂಡನ್ನಲ್ಲಿ ಲಂಬೋದರ
ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ಪನ್ನಗ ಸೋಮಶೇಖರ್ ನಿರ್ದೇಶಿಸಿರುವ ಈ ಚಿತ್ರಕ್ಕೆ ಕೀರ್ತನ್ ಪೂಜಾರ್ ಛಾಯಾಗ್ರಹಣ ಮಾಡಿದ್ದಾರೆ. ಆಶಿಕ್ ಕುಸುಗೊಳ್ಳಿ , ಉಮೇಶ್ ಭೋಸಗಿ ಅವರ ಸಂಕಲನವಿದೆ. ವರುಣ್ ರಾಜು ಪಟೇಲ್, ಭರತ್ ಗೌಡ, ಶ್ರುತಿ ಪ್ರಕಾಶ್ ಜೊತೆಗೆ 'ಸಿದ್ಲಿಂಗು' ಶ್ರೀಧರ್, ರಾಘವ್ ನಾಗ್, ಅಶ್ವಿನ್ ಹಾಸನ್ ಮುಂತಾದವರು ನಟಿಸಿದ್ದಾರೆ.
ಲಂಡನ್ನಲ್ಲಿ ಲಂಬೋದರ ನನಗೆ ಡಬಲ್ ಡೆಬ್ಯೂ ಎಂದ ಶ್ರುತಿ ಪ್ರಕಾಶ್