ಆ್ಯಪ್ನಗರ

ರಜನಿ, ವಿಜಯ್ ಮೇಲಿನ ಸಿಟ್ಟಿಗೆ ತಮಿಳುನಾಡು ಹಾಳುಮಾಡುವ ಬಗ್ಗೆ ಮಾತನಾಡಿದ ನಟಿ ಮೀರಾ ಮಿಥುನ್!

ಬಿಗ್ ಬಾಸ್ ತಮಿಳು ಸ್ಪರ್ಧಿಯೋರ್ವರು ಕೆಲ ದಿನಗಳಿಂದ ಒಂದಾದಮೇಲೆ ಒಂದರಂತೆ ಕಾಂಟ್ರವರ್ಸಿ ಮಾತನಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ದಳಪತಿ ವಿಜಯ್, ರಜನಿಕಾಂತ್ ಅವರ ಮೇಲೆ ಇವರು ಆರೋಪ ಕೂಡ ಹೊರಿಸಿದ್ದಾರೆ.

Vijaya Karnataka Web 13 Jul 2020, 9:14 pm
ನಟಿ ಮೀರಾ ಮಿಥುನ್ ಪ್ರತಿನಿತ್ಯ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಾರೆ ಎನ್ನುವುದಕ್ಕಿಂತ ಸುದ್ದಿ ಮಾಡುವಂತೆ ಮಾಡುತ್ತಾರೆ. ಸೆಲೆಬ್ರಿಟಿಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ಏನಾದರೊಂದು ವಿಷಯವನ್ನಿಟ್ಟುಕೊಂಡು ದೂಷಿಸುತ್ತಲೇ ಇರುತ್ತಾರೆ. ಈಗ ಸೂಪರ್ ಸ್ಟಾರ್ ರಜನಿಕಾಂತ್, ದಳಪತಿ ವಿಜಯ್ ಬಗ್ಗೆ ಮೀರಾ ಮಾತನಾಡಿದ್ದಾರೆ.
Vijaya Karnataka Web bigg boss tamil season 3 fame meera mithun blames thalapathy vijay and rajinikanth
ರಜನಿ, ವಿಜಯ್ ಮೇಲಿನ ಸಿಟ್ಟಿಗೆ ತಮಿಳುನಾಡು ಹಾಳುಮಾಡುವ ಬಗ್ಗೆ ಮಾತನಾಡಿದ ನಟಿ ಮೀರಾ ಮಿಥುನ್!


ನಾನೀಗ ಹಾಲಿವುಡ್‌ನಲ್ಲಿದ್ದೇನೆ ಎಂದ ಮೀರಾ
ತಮಿಳುನಾಡು ತನ್ನನ್ನು ತಿರಸ್ಕಾರದಿಂದ ನೋಡುತ್ತಿದೆ ಎಂದು ಕಮಲ್ ಹಾಸನ್, ತ್ರಿಶಾ, ಸಿಎಂ ಪಳನಿಸ್ವಾಮಿ ಮುಂತಾದವರ ಬಗ್ಗೆ ಮೀರಾ ಮಿಥುನ್ ಆರೋಪ ಹೊರಿಸಿದ್ದರು. 'ನಾನೀಗ ಹಾಲಿವುಡ್‌ನಲ್ಲಿದ್ದೇನೆ, ನಾನೊಬ್ಬಳು ಸೂಪರ್ ಮಾಡೆಲ್. ರಜನಿಕಾಂತ್ ಮತ್ತು ದಳಪತಿ ವಿಜಯ್ ನನ್ನ ಹೆಸರು ಹಾಳು ಮಾಡಲು ನೋಡುತ್ತಿದ್ದಾರೆ. ಇವರ ವಿರುದ್ಧ ನಾನು ಕಾನೂನು ಕ್ರಮ ಕೈಗೊಳ್ಳುವೆ' ಎಂದು ಮೀರಾ ಹೇಳಿದ್ದಾರೆ.

ತಮಿಳು ಮಹಿಳೆಗೆ ಮೋಸ?
'ನಾನು ಈಗ ರಾಷ್ಟ್ರ, ಅಂತರ್‌ರಾಷ್ಟ್ರದಲ್ಲಿ ಖ್ಯಾತಿ ಪಡೆದಿದ್ದೇನೆ. ಕಾಲಿವುಡ್ ನನ್ನನ್ನು ತಿರಸ್ಕಾರದಿಂದ ನೋಡುತ್ತಿದೆ. ಹೀಗಾಗಿ ನಾನು ಹಾಲಿವುಡ್, ಬಾಲಿವುಡ್‌ನಲ್ಲಿದ್ದೇನೆ. ಆದರೂ ಕೂಡ ತಮಿಳುನಾಡು ನನ್ನ ಹಿಂದೆ ಬಿದ್ದಿದೆ ಎಂದು ಅರ್ಥವಾಗುತ್ತಿಲ್ಲ, ನನ್ನ ಬಗ್ಗೆ ಯಾಕೆ ಮಾತಾಡುವುದೇ ಅವರ ಕೆಲಸವೇ? ತಮಿಳುನಾಡಿನಲ್ಲಿ ತಮಿಳರು, ಹಿಂದೂಗಳು ಎಂದು ನಾನು ಅಂದುಕೊಳ್ತೀನಿ. ಆದರೆ ಮಲಯಾಳಿಗಳು, ಕ್ರಿಶ್ಚಿಯನ್ನರು ಇಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ತಮಿಳು ಮಹಿಳೆಗೆ ಮೋಸ ಮಾಡುತ್ತಿದ್ದಾರೆ. ಈ ಹಿಂದೆ ಕನ್ನಗಿ ಎಂಬುವವರು ಮಧುರೈ ಸುಟ್ಟಿದ ಹಾಗೆ ನಾನು ಕೂಡ ತಮಿಳುನಾಡು ಸುಡುತ್ತೇನೆ' ಎಂದು ಮೀರಾ ಹೇಳಿದ್ದಾರೆ.

Also Read-ನಟಿ ತ್ರಿಷಾ ಕೃಷ್ಣನ್‌ಗೆ ಸೋಶಿಯಲ್ ಮೀಡಿಯಾದಲ್ಲಿ ವಾರ್ನಿಂಗ್ ಮಾಡಿದ ಬಿಗ್ ಬಾಸ್ ಮೀರಾ ಮಿಥುನ್!

ನಾನು ದೂರು ದಾಖಲಿಸಲು ಹಿಂಜರಿಯಲ್ಲ ಎಂದ ಮೀರಾ!

'ತಮಿಳುನಾಡು ಸಾಯುತ್ತಿದೆ. ನಿಮ್ಮವರನ್ನು ಉಳಿಸಿಕೊಳ್ಳಿ. ನಾನು ನನ್ನ ಜೀವನವನ್ನು ತುಂಬ ವೈಭೋಗದಿಂದ ಬದುಕುತ್ತಿದ್ದೇನೆ. ದಳಪತಿ ವಿಜಯ್ ಮತ್ತು ರಜನಿಕಾಂತ್ ಅವರು ನನ್ನ ಹೆಸರು ಹಾಳುಮಾಡಲು ನೋಡುತ್ತಿದ್ದಾರೆ. ಹೀಗಾಗಿ ಮಹಿಳಾ ದೌರ್ಜನ್ಯ ಕಾಯಿದೆ ಪ್ರಕಾರ ದೂರು ದಾಖಲಿಸಲು ನಾನು ಹಿಂಜರಿಯುವುದಿಲ್ಲ. ದೇವರು ನೋಡುತ್ತಿದ್ದೇನೆ' ಎಂದು ಮೀರಾ ಮಿಥುನ್ ಹೇಳಿದ್ದಾರೆ.

Also Read-ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ ಈ ಬಿಗ್ ಬಾಸ್ ಸ್ಪರ್ಧಿ ಹುಡುಗನ ಬಗ್ಗೆ ಮುಚ್ಚಿಡುತ್ತಿರೋದೇಕೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌