ಆ್ಯಪ್ನಗರ

ರಜನಿ, ಕಮಲ್, ವಿಜಯ್ ನಂತರ ರಾಜಕೀಯ ಪಡಸಾಲೆಯಲ್ಲಿ ಸಂತಾನಂ ಹೆಸರು! ಆದ್ರೆ, ಈ 'ನಟ' ಹೇಳುವುದೇ ಬೇರೆ!

ಜನಪ್ರಿಯ ಹಾಸ್ಯ ನಟರಾಗಿ ಗುರುತಿಸಿಕೊಂಡಿರುವ ನಟ ಸಂತಾನಂ ಈಗ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂಬ ಬಗ್ಗೆ ದೊಡ್ಡ ಚರ್ಚೆ ಶುರುವಾಗಿದೆ. ಇದೀಗ ಆ ಬಗ್ಗೆ ಸ್ವತಃ ಸಂತಾನಂ ಪ್ರತಿಕ್ರಿಯೆ ನೀಡಿದ್ದಾರೆ. ಆ ಕುರಿತ ಮಾಹಿತಿ ಇಲ್ಲಿದೆ.

Vijaya Karnataka Web 16 Nov 2020, 4:28 pm
ತಮಿಳುನಾಡಿನ ರಾಜಕಾರಣಕ್ಕೆ ಸಿನಿಮಾ ಕಲಾವಿದರು ಎಂಟ್ರಿ ನೀಡುವುದು ಹೊಸ ವಿಚಾರವೇನಲ್ಲ. ಅಲ್ಲಿ ರಾಜಕೀಯ ಮತ್ತು ಸಿನಿಮಾ ಒಂದಕ್ಕೊಂದು ಮಿಳಿತಗೊಂಡಿವೆ. ಈಗಾಗಲೇ ರಜನಿಕಾಂತ್ ರಾಜಕೀಯ ಪ್ರವೇಶದ ಕುರಿತು ಮಾತನಾಡಿದ್ದರೆ, ಕಮಲ್ ಹಾಸನ್‌ ಆಗಲೇ ಹೊಸ ಪಕ್ಷವನ್ನೇ ಶುರು ಮಾಡಿದ್ದಾರೆ. ನಟ ವಿಜಯ್ ಅವರ ತಂದೆ ಕೂಡ ಹೊಸ ಪಕ್ಷವನ್ನು ನೋಂದಣಿ ಮಾಡಿಸಿದ್ದು, ಆ ಕುರಿತು ಒಂದಷ್ಟು ಚರ್ಚೆಗಳು ಶುರುವಾಗಿವೆ. ಈ ಮಧ್ಯೆ ಹಾಸ್ಯ ನಟ ಸಂತಾನಂ ಕೂಡ ರಾಜಕೀಯ ರಂಗ ಪ್ರವೇಶ ಮಾಡ್ತಾರೆ ಅನ್ನೋ ಸುದ್ದಿ ಜೋರಾಗಿ ಕೇಳಿಬಂದಿದೆ. ಆದರೆ, ಈ ಬಗ್ಗೆ ಸ್ವತಃ ಸಂತಾನಂ ಸ್ಪಷ್ಟನೆ ನೀಡಿದ್ದಾರೆ . ಅವರೇನು ಹೇಳಿದ್ದಾರೆ? ಇಲ್ಲಿದೆ ಮಾಹಿತಿ!
Vijaya Karnataka Web Santhanam


ಹಬ್ಬಿದ್ದ ಸುದ್ದಿ ಏನು?

ಕಾಲಿವುಡ್‌ನ ಜನಪ್ರಿಯ ಹಾಸ್ಯ ನಟ ಸಂತಾನಂ ರಾಷ್ಟ್ರೀಯ ಪಕ್ಷವೊಂದರ ಮೂಲಕ ರಾಜಕೀಯಕ್ಕೆ ಎಂಟ್ರಿ ನೀಡಲಿದ್ದಾರೆ ಎಂಬ ಬಗ್ಗೆ ವದಂತಿ ಹಬ್ಬಿತ್ತು. ಈ ಬಗ್ಗೆ ಸ್ವತಃ ಸಂತಾನಂ ಮಾತನಾಡಿದ್ದಾರೆ. 'ನಾನು ರಾಜಕೀಯಕ್ಕೆ ಬರುತ್ತೇನೆ ಎಂಬುದು ವದಂತಿ ಅಷ್ಟೇ. ಇದನ್ನು ಕೇಳಲು ಎಷ್ಟು ಮಜಾವಾಗಿದೆ ಎಂದರೆ, ನನ್ನ ಇತ್ತೀಚಿನ ಸಿನಿಮಾ 'ಬಿಸ್ಕತ್'ಗಿಂತಲೂ ಇದೇ ಮಜಾವಾಗಿದೆ' ಎಂದು ವದಂತಿ ಹಬ್ಬಿಸಿದವರ ಕಾಲೆಳೆದಿದ್ದಾರೆ ಸಂತಾನಂ. 'ಬಿಸ್ಕತ್' ಸಿನಿಮಾ ಪ್ರಚಾರದ ವೇಳೆ ಈ ಬಗ್ಗೆ ಅವರಿಗೆ ಪ್ರಶ್ನೆ ಕೇಳಲಾಗಿತ್ತು. ಆಗ ಅವರು ಪ್ರತಿಕ್ರಿಯೆ ನೀಡಿದರು.

ಇನ್ನು, ಈಚೆಗೆ ರಾಜಕೀಯ ಪ್ರವೇಶ ಮಾಡುತ್ತಿರುವ ತಮಿಳು ಕಲಾವಿದರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈಚೆಗಷ್ಟೇ ನಟಿ ಖುಷ್ಬೂ ಸುಂದರ್ ಕಾಂಗ್ರೆಸ್ ಪಕ್ಷ ತ್ಯಜಿಸಿ, ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಮೋಹನ್‌ ವೈದ್ಯ, ರಾಧ ರವಿ, ಆರ್‌ಕೆ ಸುರೇಶ್ ಮುಂತಾದವರು ಈಗಾಗಲೇ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ಆ ಸಾಲಿಗೆ ಸಂತಾನಂ ಕೂಡ ಸೇರಿಕೊಳ್ಳಲಿದ್ದಾರೆ ಎಂದು ಅಂದಾಜಿಸಿದ್ದವರಿಗೆ ಈಗ ನಿರಾಸೆ ಆಗಿದೆ ಎಂಬುದಂತೂ ಸತ್ಯ.

ರಾಜಕೀಯ ಪಕ್ಷ ಸ್ಥಾಪಿಸಿದ್ದಕ್ಕಾಗಿ ಅಪ್ಪನೊಂದಿಗೆ ಮಾತು ಬಿಟ್ಟ 'ದಳಪತಿ' ವಿಜಯ್! ತಾಯಿ ಶೋಭಾ ಹೇಳಿದ್ದೇನು?

ಇನ್ನು, ಒಂದು ಕಾಲಕ್ಕೆ ತಮಿಳು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆಯ ಹಾಸ್ಯ ನಟರಾಗಿ ಗುರುತಿಸಿಕೊಂಡಿದ್ದ ಸಂತಾನಂ, ಆ ಬಳಿಕ ಹೀರೋ ಆಗಿ ಬಡ್ತಿ ಪಡೆದುಕೊಂಡರು. ಸದ್ಯ ಅವರ ಕೈಯಲ್ಲಿ ಸಿಕ್ಕಾಪಟ್ಟೆ ಸಿನಿಮಾಗಳಿವೆ. ಈಚೆಗೆ ಅವರ ನಟನೆಯ 'ಬಿಸ್ಕತ್' ಸಿನಿಮಾ ತೆರೆಕಂಡಿತ್ತು. ವಿಶೇಷವೆಂದರೆ, ಲಾಕ್‌ಡೌನ್ ತೆರವುಗೊಳಿಸಿದ ಮೇಲೆ ಚಿತ್ರಮಂದಿರಗಳಲ್ಲಿ ತೆರೆಕಂಡ ಮೊದಲ ತಮಿಳು ಸಿನಿಮಾ ಎಂಬ ಖ್ಯಾತಿ 'ಬಿಸ್ಕತ್‌'ಗೆ ಇದೆ. ಆರ್. ಕಣ್ಣನ್ ನಿರ್ದೇಶನದ ಈ ಸಿನಿಮಾದಲ್ಲಿ ತಾರಾ ಅಲಿಶಾ ನಾಯಕಿಯಾಗಿದ್ದರೆ, ಸಾಹುಕಾರ್ ಜಾನಕಿ, ಆನಂದ್‌ರಾಜ್‌, ಆಡುಕಾಲಂ ನರೇನ್ ಮುಂತಾದವರು ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌