ಆ್ಯಪ್ನಗರ

ಸಲ್ಮಾನ್ ಖಾನ್‌ ಜತೆಗೆ ರಾಮ್‌ ಚರಣ್-ಎನ್‌ಟಿಆರ್‌ಗೆ ಏನು ಕೆಲಸ?

ನಟ ಸಲ್ಮಾನ್‌ ಖಾನ್‌ ಅವರ ಗಮನವೆಲ್ಲ ಈಗ ದಕ್ಷಿಣ ಭಾರತದ ಮೇಲಿದೆ. ಯಾಕೆಂದರೆ, ಡಿ.20ರಂದು ಅವರ 'ದಬಾಂಗ್ 3' ಚಿತ್ರ ರಿಲೀಸ್ ಆಗುತ್ತಿದೆ. ಇದೀಗ ಅವರಿಗೆ ರಾಮ್ ಚರಣ್ ಮತ್ತು ಜೂ.ಎನ್‌ಟಿಆರ್ ಕೂಡ ಸಾಥ್‌ ನೀಡುತ್ತಿದ್ದಾರೆ. ಆದರೆ, ಯಾವ ವಿಚಾರಕ್ಕೆ? ಇಲ್ಲಿದೆ ಉತ್ತರ.

Vijaya Karnataka Web 21 Oct 2019, 2:34 pm
ನಟ ಸಲ್ಮಾನ್‌ ಖಾನ್‌ ಬಾಲಿವುಡ್‌ನ ಸೂಪರ್ ಸ್ಟಾರ್. ಜೂ. ಎನ್‌ಟಿಆರ್ ಮತ್ತು ರಾಮ್‌ ಚರಣ್ ತೇಜ ದಕ್ಷಿಣ ಭಾರತದಲ್ಲಿ ಸಖತ್ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಯಂಗ್ ಹೀರೋಗಳು. ಇದೀಗ ಅವರಿಬ್ಬರು ರಾಜಮೌಳಿ ನಿರ್ದೇಶನದ ಸಿನಿಮಾದಲ್ಲೂ ಜತೆಯಾಗಿಯೇ ನಟಿಸುತ್ತಿದ್ದಾರೆ. ಆದರೆ, ಈ ಇಬ್ಬರು ನಟರಿಗೂ ಸಲ್ಮಾನ್ ಜತೆಗೆ ಏನು ಕೆಲಸ? ಈ ಪ್ರಶ್ನೆ ಉದ್ಭವಿಸಲು ಇಲ್ಲೊಂದು ಕಾರಣವಿದೆ!
Vijaya Karnataka Web NTR Salman

'ದಬಾಂಗ್‌-3'ಗೆ ಕನ್ನಡ ಡೈಲಾಗ್‌ ಬರಿತಾ ಇದ್ದಾರೆ ಗುರುದತ್‌ ಗಾಣಿಗ
ಹೌದು, ಸಲ್ಮಾನ್‌ ಖಾನ್‌ ದೇಶ-ವಿದೇಶದಲ್ಲಿ 'ದ-ಬಾಂಗ್' ಟೂರ್ ಮಾಡುತ್ತಿದ್ದಾರೆ. ತಮ್ಮ ಆತ್ಮೀಯ ಕಲಾವಿದರ ಬಳಗವನ್ನು ತಮ್ಮೊಂದಿಗೆ ಜತೆಯಾಗಿಸಿಕೊಂಡು ಕಾರ್ಯಕ್ರಮ ನೀಡುತ್ತಿದ್ದಾರೆ. ಇದೀಗ ಅವರ ಗಮನ ಹೈದರಾಬಾದ್‌ ಮೇಲೆ ಬಿದ್ದಿದೆ. ನ.2ರಂದು ಅವರು ಹೈದರಾಬಾದ್‌ಗೆ ಅವರು ಭೇಟಿ ನೀಡಲಿದ್ದಾರಂತೆ. ಅವರ ಜತೆಗೆ ನಿರ್ದೇಶಕ ಪ್ರಭುದೇವ, ಜಾಕ್ವೇಲಿನ್‌ ಫರ್ನಾಂಡಿಸ್, ಸೋನಾಕ್ಷಿ ಸಿನ್ಹಾ, ಡೈಸಿ ಶಾ ಕೂಡ ಅಲ್ಲಿಗೆ ಬರಲಿದ್ದಾರೆ.
ಅಕ್ಟೋಬರ್ 23ರಂದು ಕನ್ನಡ ಮಾತನಾಡಲಿದ್ದಾರೆ ಸಲ್ಮಾನ್‌ ಖಾನ್! ಅವತ್ತು ಏನ್ ಸ್ಪೆಷಲ್?
ಹೈದರಾಬಾದ್‌ನಲ್ಲಿ ನಡೆಯಲಿರುವ ಈ ದ-ಬಾಂಗ್ ಡ್ಯಾನ್ಸ್ ಟೂರ್ ಕಾರ್ಯಕ್ರಮಕ್ಕೆ ಟಾಲಿವುಡ್‌ ನಟರಾದ ಜೂ.ಎನ್‌ಟಿಆರ್ ಮತ್ತು ರಾಮ್ ಚರಣ್ ಕೂಡ ಹಾಜರಿ ಹಾಕಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಸಲ್ಮಾನ್‌ ಥರದ ಸ್ಟಾರ್‌ ನಟರೊಂದಿಗೆ ಎನ್‌ಟಿಆರ್ ಮತ್ತು ರಾಮ್ ಚರಣ್ ಒಟ್ಟಿಗೆ ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡರೆ, ಅಭಿಮಾನಿಗಳಿಗೆ ಹಬ್ಬವೇ ಸರಿ. ಇನ್ನು, ಆ ಕಾರ್ಯಕ್ರಮದಲ್ಲಿ ಕೆಲವು ತೆಲುಗಿನ ಹಿಟ್ ಹಾಡುಗಳಿಗೆ ಸಲ್ಮಾನ್ ನೃತ್ಯ ಮಾಡಲಿದ್ದಾರೆ ಎಂಬ ಮಾಹಿತಿ ಇದೆ.
ಸಲ್ಮಾನ್‌ ಖಾನ್‌ಗೆ ದಿಶಾ ಪಟಾನಿ ನಾಯಕಿ
ಡಿ.20ರಂದು ಸಲ್ಮಾನ್‌ ನಟಿಸಿ, ನಿರ್ಮಿಸಿರುವ 'ದಬಾಂಗ್ 3' ಚಿತ್ರವು ತೆರೆಗೆ ಬರಲಿದೆ. ಈ ಬಾರಿ ಅವರು ಹಿಂದಿ ಮಾತ್ರವಲ್ಲದೆ, ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲೂ ಡಬ್‌ ಮಾಡಿ ತೆರೆಗೆ ತರುತ್ತಿದ್ದಾರೆ. ಅದ್ದರಿಂದ ಈ ಕಾರ್ಯಕ್ರಮದ ಮೂಲಕ ಅವರ ಸಿನಿಮಾಕ್ಕೆ ದೊಡ್ಡಮಟ್ಟದ ಪ್ರಚಾರವೇ ಸಿಗಲಿದೆ ಎನ್ನಲಾಗುತ್ತಿದೆ. ಕನ್ನಡದ ಸುದೀಪ್‌ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದರೆ, ಮತ್ತೋರ್ವ ಕನ್ನಡಿಗ ಪ್ರಭುದೇವ ಇದಕ್ಕೆ ನಿರ್ದೇಶನ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌