ಆ್ಯಪ್ನಗರ

ಸಂಜನಾ-ರಾಗಿಣಿ ಜಾಮೀನಿಗಾಗಿ ಬಾಂಬ್‌ ಬೆದರಿಕೆ ಪತ್ರ! ಕೃತ್ಯದ ಹಿಂದೆ ಉಗ್ರ ಸಂಘಟನೆ ಕೈವಾಡ?

ಮಾದಕ ವಸ್ತು ಜಾಲದ ಜೊತೆ ನಂಟು ಹೊಂದಿರುವ ಆರೋಪದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಸಿನಿಮಾ ನಟಿಯರಿಗೆ ಜಾಮೀನು ಕೊಡಿಸುವ ಸಲುವಾಗಿ ಬಾಂಬ್‌ ಇಡಲು ಕೂಡ ಸಿದ್ಧ ಎಂಬ ಬೆದರಿಕೆ ಪತ್ರವೊಂದು ಈಗ ಸಂಚಲನ ಸೃಷ್ಟಿಸಿದೆ.

Vijaya Karnataka Web 20 Oct 2020, 9:08 am
ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಈಗ ನಿಜಕ್ಕೂ ಸಂಕಷ್ಟ ಕಾಲದಲ್ಲಿದ್ದಾರೆ. ತಿಂಗಳ ಹಿಂದೆಯೇ ಪೊಲೀಸರ ಅಥಿತಿಯಾದ ಅವರಿಗೆ ಇನ್ನೂ ಜಾಮೀನು ಸಿಕ್ಕಿಲ್ಲ. ಅಚ್ಚರಿ ಎಂದರೆ, ಅವರಿಗೆ ಜಾಮೀನು ನೀಡದಿದ್ದರೆ ಬಾಂಬ್‌ ಸ್ಫೋಟಿಸುವುದಾಗಿ ಬೆದರಿಕೆ ಪತ್ರವೊಂದು ಬಂದಿದೆ!
Vijaya Karnataka Web ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ


ಸಿಟಿ ಸಿವಿಲ್ ಸೆಷನ್‌ ಕೋರ್ಟ್‌ನ ಜಡ್ಜ್‌ಗೆ ಈ ಪತ್ರ ಬರೆಯಲಾಗಿದೆ. 'ಸಂಜನಾ ರಾಗಿಣಿ ಸೇರಿದಂತೆ ಡ್ರಗ್ಸ್‌ ಕೇಸ್‌ನಲ್ಲಿ ಭಾಗಿ ಆಗಿರುವ ಎಲ್ಲರಿಗೂ ಜಾಮೀನು ನೀಡಬೇಕು. ಕೇಸ್‌ನಲ್ಲಿ ಇರುವ ಎಲ್ಲರನ್ನೂ ವಜಾ ಮಾಡಬೇಕು' ಎಂದು ಪತ್ರದಲ್ಲಿ ಹೇಳಲಾಗಿದೆ. ಒಂದು ವೇಳೆ ಹಾಗೆ ಮಾಡದಿದ್ದರೆ ಕಾರಿನಲ್ಲಿ ಬಾಂಬ್‌ ಇಡುತ್ತೇವೆ ಎಂಬುದಾಗಿಯೂ ಬೆದರಿಕೆ ಹಾಕಲಾಗಿದೆ.

ಸೋಮವಾರ (ಅ.19) ಸಂಜೆ ಈ ಪತ್ರ ಬಂದಿದೆ. ಡ್ರಗ್ಸ್‌ ಕೇಸ್‌ ಮಾತ್ರವಲ್ಲದೆ ಡಿಜೆ ಹಳ್ಳಿ ಪ್ರಕರಣದ ತನಿಖೆಯನ್ನು ನಿಲ್ಲಿಸಿ ಎಂಬುದಾಗಿಯೂ ಮತ್ತೊಂದು ಪತ್ರದಲ್ಲಿ ಒತ್ತಾಯಿಸಲಾಗಿದೆ. 'ಸಿಸಿಬಿ ಜಂಟಿ ಆಯುಕ್ತ ಸಂದೀಪ್‌ ಪಾಟೀಲ್‌ ಸುಮ್ಮನಿರಬೇಕು. ಇಲ್ಲದಿದ್ದರೆ ಕಮಿಷನರ್‌ ಕಚೇರಿ ಸ್ಫೋಟ ಮಾಡುತ್ತೇವೆ' ಎಂದು ಬೆದರಿಕೆ ಹಾಕಲಾಗಿದೆ. ಈ ಸಂಬಂಧ ಹಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

also read: ಅರೆಸ್ಟ್‌ ಆಗುವ ಕೆಲವೇ ದಿನಗಳ ಮುನ್ನ ಗೂಗಲ್‌ನಲ್ಲಿ ಸಂಜನಾ ಗಲ್ರಾನಿ ಸರ್ಚ್‌ ಮಾಡಿದ್ದು ಏನು?

ಮೊಹಮ್ಮದ್‌ ಜೈಷ್‌ ಉಗ್ರ ಸಂಘಟನೆ ಹೆಸರಿನಲ್ಲಿ ಪತ್ರ ಬಂದಿದ್ದು, ಅವರು ಯಾಕೆ ರಾಗಿಣಿ ಮತ್ತು ಸಂಜನಾರ ಜಾಮೀನಿಗಾಗಿ ಬೇಡಿಕೆ ಇಡುತ್ತಾರೆ ಎಂಬ ಪ್ರಶ್ನೆ ಮೂಡಿದೆ. ನಿಜಕ್ಕೂ ಇದು ಉಗ್ರ ಸಂಘಟನೆಯ ಪತ್ರವೇ ಅಥವಾ ಯಾರೋ ಮಾನಸಿಕ ಅಸ್ವಸ್ಥರು ಈ ರೀತಿ ಮಾಡಿರಬಹುದೇ ಎಂಬ ಅನುಮಾನ ಕೂಡ ಸೃಷ್ಟಿಯಾಗಿದೆ. ತುಮಕೂರಿನ ಗುಬ್ಬಿ ತಾಲೂಕಿನಿಂದ ಈ ಪತ್ರಗಳು ಬಂದಿವೆ ಎನ್ನಲಾಗಿದೆ.

also read: ಅಂದು ರಾಜಕೀಯ, ನೆಪೋಟಿಸಂ, ಚಿತ್ರರಂಗದ ಬಗ್ಗೆ ಏನ್‌ ಹೇಳಿದ್ರು ರಾಗಿಣಿ? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌