ಆ್ಯಪ್ನಗರ

ಸೂಪರ್ ಸ್ಟಾರ್ ರಜನಿಕಾಂತ್ ಮನೆಗೆ ಬಾಂಬ್ ಬೆದರಿಕೆ! ಪೊಲೀಸರಿಂದ ತನಿಖೆ

ಕನ್ನಡ ಮೂಲದ ನಟ, ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರ ಮನೆಯಲ್ಲಿ ಬಾಂಬ್ ಇಡಲಾಗಿದೆ ಎಂದು ಅನಾಮಿಕರೊಬ್ಬರು ರಜನಿ ಮನೆಗೆ ಕಾಲ್ ಮಾಡಿ ತಿಳಿಸಿದ್ದಾರೆ. ಹೀಗಾಗಿ ಪೊಲೀಸರು ರಜನಿಕಾಂತ್ ಮನೆಯನ್ನು ಶೋಧಿಸಿದ್ದಾರೆ. ನಿಜಕ್ಕೂ ಏನು ನಡೆದಿದೆ?

Vijaya Karnataka Web 18 Jun 2020, 7:40 pm
ಅನಾಮಿಕನೊಬ್ಬ ಸೂಪರ್ ಸ್ಟಾರ್ ರಜನಿಕಾಂತ್ ಅವರ ಮನೆಗೆ ಕಾಲ್ ಮಾಡಿ ಬಾಂಬ್ ಇಟ್ಟಿರುವುದಾಗಿ ಹೇಳಿದ್ದಾನೆ, ಹೀಗಾಗಿ ಪೊಲೀಸರು ಗ್ರೇಮ್ಸ್ ರಸ್ತೆಯಲ್ಲಿರುವ ರಜನಿಕಾಂತ್ ಮನೆಯನ್ನು ಶೋಧಿಸಿದ್ದಾರೆ ಎಂದು ವರದಿ ಹೇಳಿವೆ.
Vijaya Karnataka Web 123


ಬಾಂಬ್ ಬೆದರಿಕೆ ಹಾಕಿದವರಾರು?
ಶ್ವಾನಗಳನ್ನು ಕರೆದುಕೊಂಡು ಬಂದು ಪೊಲೀಸರು ರಜನಿ ಮನೆ ಪೂರ್ತಿ ಶೋಧ ಮಾಡಿದ್ದಾರೆ. ಆ ಅನಾಮಿಕ್ ಕಾಲ್ ತಮಾಷೆಯಾಗಿರಬಹುದು ಅಥವಾ ಕೇವಲ ಬೆದರಿಕೆ ಕಾಲ್ ಆಗಿರಬಹುದು ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರಂತೆ. ಅದರ ಜೊತೆಗೆ ಆ ಕಾಲ್ ಮಾಡಿದವರು ಯಾರು ಎಂದು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಈ ನಡುವೆ ಈ ಘಟನೆ ಬಗ್ಗೆ ರಜನಿ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಇಡೀ ವಿಶ್ವದಾದ್ಯಂತ ರಜನಿಕಾಂತ್ ಅವರಿಗೆ ಅಭಿಮಾನಿಗಳಿದ್ದಾರೆ. ಆ ಅನಾಮಿಕ ಯಾರು? ಯಾಕೆ ಹೀಗೆ ಮಾಡಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಪೊಲೀಸರು ಮಾಡುತ್ತಿದ್ದಾರೆ.

'ಅಣ್ಣಾತೆ' ಸಿನಿಮಾದಲ್ಲಿ ರಜನಿಕಾಂತ್
ರಜನಿಕಾಂತ್ ಅವರು 'ಅಣ್ಣಾತೆ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಫ್ಯಾಮಿಲಿ ಎಂಟರ್‌ಟೇನರ್ ಆಗಿರಲಿದೆಯಂತೆ. ಶಿವ ಈ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ಕೀರ್ತಿ ಸುರೇಶ್, ನಯನತಾರಾ, ಮೀನಾ, ಖುಷ್ಬೂ, ಸೂರಿ, ಪ್ರಕಾಶ್ ರಾಜ್, ಸಿದ್ದಾರ್ಥ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಇದರ 60 % ಶೂಟಿಂಗ್ ಮುಗಿದಿದೆಯಂತೆ. ನಟಿ ಕೀರ್ತಿ ಸುರೇಶ್ ಅವರು ರಜನಿ ಅವರ ದೊಡ್ಡ ಅಭಿಮಾನಿಯಂತೆ. ಈ ಚಿತ್ರದಲ್ಲಿ ನಟಿಸುತ್ತಿರೋದರಿಂದ ರಜನಿ ಜೊತೆ ನಟಿಸುವ ಅವರ ಕನಸು ಈಡೇರುತ್ತಿದೆಯಂತೆ.

Also read-ತಲೈವಾ ರಜನಿಕಾಂತ್ ಸಂಭಾವನೆ ಕುರಿತ 27 ವರ್ಷಗಳ ಹಳೇ ವಿಡಿಯೋ ವೈರಲ್

ಪೆಟ್ಟಾ 2 ಬರಲಿದೆಯಾ?
ರಜನಿಕಾಂತ್ ಮತ್ತು ಕಾರ್ತಿಕ್ ಸುಬ್ಬರಾಜ್ ಅವರ 'ಪೆಟ್ಟಾ' ಸಿನಿಮಾ ಯಶಸ್ವಿಯಾಗಿತ್ತು. ಈ ಚಿತ್ರದ ಸಿಕ್ವೇಲ್ ಮಾಡುವ ಯೋಚನೆ ಕಾರ್ತಿಕ್ ಅವರಿಗಿದೆಯಂತೆ. ಕಥೆ ಕೂಡ ರೆಡಿಯಾಗಿದೆ. ಮುಂದಿನ ದಿನಗಳಲ್ಲಿ 'ಪೆಟ್ಟಾ 2' ಬರಬಹುದು ಎಂದು ಕಾರ್ತಿಕ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
Also read-'ಬೆಂಗಳೂರಿನ ತನ್ನ ಮಾಜಿ ಪ್ರಿಯತಮೆಯನ್ನು ನೆನೆದು ಕಣ್ಣೀರಿಟ್ಟ ರಜನಿಕಾಂತ್'

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌