ಆ್ಯಪ್ನಗರ

Oscars 2023: ರಾಜಮೌಳಿ 'RRR' ತಂಡಕ್ಕೆ ಸೆಲೆಬ್ರಿಟಿಗಳು, ರಾಜಕಾರಣಿಗಳಿಂದ ಶುಭಾಶಯ

ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆದ 95ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ವೇಳೆ ಎಸ್ ಎಸ್ ರಾಜಮೌಳಿ ನಿರ್ದೇಶನದ 'RRR' ಸಿನಿಮಾದ 'ನಾಟು ನಾಟು' ಹಾಡಿಗೆ ಬೆಸ್ಟ್ ಒರಿಜಿನಲ್ ಸಾಂಗ್ ಎಂಬ ವಿಭಾಗದಲ್ಲಿ ಪ್ರಶಸ್ತಿ ಸಿಕ್ಕಿದೆ. ಈ ಹಾಡನ್ನು ಎಂ ಎಂ ಕೀರವಾಣಿ ಅವರು ಸಂಗೀತ ನಿರ್ದೇಶನ ಮಾಡಿದ್ದರು. ಚಂದ್ರಬೋಸ್ ಅವರು ಸಾಹಿತ್ಯ ಬರೆದಿದ್ದರು. ಅಷ್ಟೇ ಅಲ್ಲದೆ ಈ ಚಿತ್ರದಲ್ಲಿ ಜ್ಯೂನಿಯರ್ ಎನ್‌ಟಿಆರ್, ರಾಮ್ ಚರಣ್ ತೇಜ ಅವರು ಡ್ಯಾನ್ಸ್ ಮಾಡಿದ್ದರು.

Authored byಪದ್ಮಶ್ರೀ ಭಟ್ | TIMESOFINDIA.COM 13 Mar 2023, 10:50 am
'RRR' ಸಿನಿಮಾ 'ನಾಟು ನಾಟು' ಹಾಡಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿದೆ. 95ನೇ ಅಕಾಡೆಮಿ ಪ್ರಶಸ್ತಿ ವೇಳೆ ರಾಜಮೌಳಿ ನಿರ್ದೇಶನದ ಚಿತ್ರ ಆಸ್ಕರ್ ಮುಡಿಗೇರಿಸಿಕೊಂಡಿದೆ. ಚಂದ್ರಬೋಸ್ ಸಾಹಿತ್ಯವಿರುವ ಈ ಹಾಡಿಗೆ ಎಂ ಎಂ ಕೀರವಾಣಿ ಸಂಗೀತ ನಿರ್ದೇಶನ ಮಾಡಿದ್ದರು. ಸಿನಿಮಾದಲ್ಲಿ ರಾಮ್ ಚರಣ್ ತೇಜ, ಜ್ಯೂನಿಯರ್ ಎನ್‌ಟಿಆರ್ ಭರ್ಜರಿ ನೃತ್ಯ ಮಾಡಿದ್ದರು. ಆಸ್ಕರ್ ಪಡೆದಿರೋದಿಕ್ಕೆ ಭಾರತೀಯ ಚಿತ್ರರಂಗದ ಕಲಾವಿದರು, ರಾಜಕೀಯ ವ್ಯಕ್ತಿಗಳು ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ತಿಳಿಸಿದ್ದಾರೆ.
Vijaya Karnataka Web RRR Movie


ಪ್ರಧಾನಿ ನರೇಂದ್ರ ಮೋದಿ
ಅಸಾಧಾರಣ
'ನಾಟು ನಾಟು' ಹಾಡಿನ ಜನಪ್ರಿಯತೆ ಜಾಗತಿಕ ಮಟ್ಟದ್ದಾಗಿದೆ. ಇನ್ನೂ ಒಂದಷ್ಟು ವರ್ಷಗಳ ಕಾಲ ಈ ಹಾಡು ನೆನಪಿನಲ್ಲಿ ಉಳಿಯುತ್ತದೆ. ಎಂ ಎಂ ಕೀರವಾಣಿ ಅವರಿಗೆ ಅಭಿನಂದನೆಗಳು

ಸಚಿವ ಕೆ ಸುಧಾಕರ್

ಇತಿಹಾಸ ಸೃಷ್ಟಿಸಿದ RRR ಸಿನಿಮಾ. ಭಾರತೀಯ ಚಲನಚಿತ್ರ ಒಂದಕ್ಕೆ ಮೊದಲ ಆಸ್ಕರ್ ಪ್ರಶಸ್ತಿಯ ಗೌರವ ತಂದ ಇಡೀ RRR ಚಲನಚಿತ್ರ ತಂಡಕ್ಕೆ ಹೃದಯಪೂರ್ವಕ ಅಭಿನಂದನೆಗಳು. ಎಸ್ ಎಸ್ ರಾಜಮೌಳಿ, ಜ್ಯೂನಿಯರ್ ಎನ್‌ಟಿಆರ್, ರಾಮ್ ಚರಣ್ ತೇಜ, ಎಂ ಎಂ ಕೀರವಾಣಿ ನೀವು ಭಾರತದ ಹೆಮ್ಮೆ.

Oscar 2023: ಆಸ್ಕರ್ ಪ್ರಶಸ್ತಿ ವಿಜೇತರ ಲಿಸ್ಟ್‌ ಇಲ್ಲಿದೆ; ಅಮೆರಿಕದಲ್ಲಿ ನಡೆಯುತ್ತಿರುವ ಸಮಾರಂಭ

ವಿಜಯ್ ದೇವರಕೊಂಡ

ಸುಂದರ RRR ಸಿನಿಮಾ, ನಾಟು ನಾಟು ಹಾಡು
ಭಾರತ, ಭಾರತೀಯ ಚಿತ್ರರಂಗಕ್ಕೆ ಇನ್ನೊಂದು ದೊಡ್ಡ ಹೆಜ್ಜೆ
ನೀವೆಲ್ಲರೂ ನಾವು ಹೆಮ್ಮೆ ಪಡುವಂತೆ, ಇನ್ನೂ ದೊಡ್ಡ ಕನಸು ಕಾಣುವಂತೆ ಮಾಡಿದಿರಿ

ಜಿವಿ ಪ್ರಕಾಶ್

RRR ಸಿನಿಮಾ ತಂಡ ಭಾರತೀಯರೆಲ್ಲರೂ ಹೆಮ್ಮೆ ಪಡುವಂತೆ ಮಾಡಿದ್ದೀರಿ. ರಾಜಮೌಳಿ, ಕೀರವಾಣಿವರಿಗೆ ಧನ್ಯವಾದಗಳು

ನಾಗಾರ್ಜುನ

ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ. ಭಾರತೀಯ ಸಿನಿಮಾರಂಗಕ್ಕೆ ಐತಿಹಾಸಿಕ ದಿನ. ಇಡೀ ತಂಡಕ್ಕೆ ಶುಭಾಶಯ

ರವಿತೇಜ

ಪ್ರಬಲ ದೃಷ್ಟಿಯುಳ್ಳ ಮಾಸ್ಟರ್ ಮೈಂಡ್ ರಾಮ್ ಚರಣ್ ತೇಜ, ಜ್ಯೂನಿಯರ್ ಎನ್‌ಟಿಆರ್‌ನಂತಹ ಡ್ಯಾನ್ಸಿಂಗ್ ಡೈನಾಮಿಟಿಸ್ ಇಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ.

95th Academy Awards: ಭಾರತದ 'ದಿ ಎಲಿಫೆಂಟ್ ವಿಸ್ಪರರ್ಸ್' ಡಾಕ್ಯುಮೆಂಟರಿಗೆ ಆಸ್ಕರ್ ಪ್ರಶಸ್ತಿ

ನಿರ್ದೇಶಕ ಸುಕುಮಾರ್

ಪ್ರಪಂಚು ನಾಟುಮಯವಾಗಿದೆ. ಹೇಳಲು ಪದಗಳಿಲ್ಲ. ನಮ್ಮೆಲ್ಲರಿಗೂ ಹೆಮ್ಮೆ ತಂದಿದ್ದಕ್ಕೆ ಧನ್ಯವಾದಗಳು

ಮೆಗಾಸ್ಟಾರ್ ಚಿರಂಜೀವಿ

ಆಸ್ಕರ್ ಪ್ರಶಸ್ತಿ ಭಾರಕ್ಕೆ ಕನಸಾಗಿರುತ್ತಿತ್ತು. ಆದರೆ ಓರ್ವ ವ್ಯಕ್ತಿಯ ದೂರದೃಷ್ಟಿ, ಧೈರ್ಯದಿಂದ ಇದು ಸಾಧ್ಯವಾಗಿದೆ. ಎಸ್ ಎಸ್ ರಾಜಮೌಳಿ ಅವರಿಂದ ಹೆಮ್ಮೆ, ಕೃತಜ್ಞತೆ ತುಂಬಿದೆ.

Oscars 2023: ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಂಗೊಳಿಸಿದ ನಟಿ ದೀಪಿಕಾ ಪಡುಕೋಣೆ; ಇಲ್ಲಿವೆ ನೋಡಿ ಫೋಟೋಗಳು

ಎಂ ವೆಂಕಯ್ಯ ನಾಯ್ಡು

ಕೀರವಾಣಿ, ಚಂದ್ರಬೋಸ್, ರಾಜಮೌಳಿ ಸೇರಿ ಇಡೀ ಆರ್‌ಆರ್‌ಆರ್ ತಂಡಕ್ಕೆ ಅಭಿನಂದನೆಗಳು.

ಚಂದ್ರಬಾಬು ನಾಯ್ಡು

ಆಸ್ಕರ್ ಪ್ರಶಸ್ತಿ ಪಡೆಯುವ ಮೂಲಕ ನಾಟು ನಾಟು ಹಾಡು ಇತಿಹಾಸದಲ್ಲಿ ಜಾಗ ಪಡೆದಿದೆ. ಭಾರತೀಯ ಚಿತ್ರರಂಗ, ತೆಲುಗು ಚಿತ್ರರಂಗಕ್ಕೆ ಇದು ಅತ್ಯುತ್ತಮವಾದ ಕ್ಷಣ

ಲೇಖಕರ ಬಗ್ಗೆ
ಪದ್ಮಶ್ರೀ ಭಟ್
ವಿಜಯ ಕರ್ನಾಟಕ' ವೆಬ್‌ನಲ್ಲಿ ಸಿನಿಮಾ ಪತ್ರಕರ್ತೆಯಾಗಿ 2019ರಿಂದ ಪದ್ಮಶ್ರೀ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯಮಟ್ಟದಲ್ಲಿ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. 'ವಿಜಯ ಕರ್ನಾಟಕ' ವೆಬ್‌ನಲ್ಲಿ ಲೇಖನಗಳನ್ನು ಬರೆಯುವುದರ ಜೊತೆಗೆ ಸೆಲೆಬ್ರಿಟಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಪುಸ್ತಕ ಓದುವುದು, ಪ್ರವಾಸ ಪದ್ಮಶ್ರೀ ಅವರ ಇಷ್ಟದ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌