ಆ್ಯಪ್ನಗರ

'ಒಡೆಯ'ನ ಕ್ಯೂಟ್ ಪೋಸ್ಟರ್‌ಗೆ 'ಚಾಲೆಂಜಿಂಗ್ ಸ್ಟಾರ್' ದರ್ಶನ್ ಅಭಿಮಾನಿಗಳು ಫಿದಾ!!

ನಟ ದರ್ಶನ್ ಈಗಾಗಲೇ 'ಒಡೆಯ' ಚಿತ್ರದ ಶೂಟಿಂಗ್ ಮುಗಿಸಿದ್ದಾರೆ. ಅದರ ಪೋಸ್ಟ್‌ ಪ್ರೊಡಕ್ಷನ್ ಕೆಲಸಗಳಲ್ಲಿ ಚಿತ್ರತಂಡ ಬಿಜಿ ಆಗಿದೆ. ಸದ್ಯ ಒಂದೊಂದೇ ಪೋಸ್ಟರ್ ಲಾಂಚ್ ಮಾಡುವ ಮೂಲಕ ಸಿನಿಪ್ರಿಯರ ಗಮನಸೆಳೆಯಲಾಗುತ್ತಿದೆ. ಈಗ ದಸರಾ ಹಬ್ಬದ ಪ್ರಯುಕ್ತವೂ ಒಂದು ವಿಶೇಷ ಪೋಸ್ಟರ್ ಲಾಂಚ್ ಆಗಿದೆ.

Vijaya Karnataka Web 6 Oct 2019, 12:16 pm
ದಸರಾ ಹಬ್ಬದ ಪ್ರಯುಕ್ತ ನಟ ದರ್ಶನ್ ಅಭಿನಯದ 'ಒಡೆಯ' ಚಿತ್ರತಂಡ ವಿಶೇಷ ಉಡುಗೊರೆಯೊಂದನ್ನು ಅಭಿಮಾನಿಗಳಿಗೆ ನೀಡಿದೆ. ಹೌದು, 'ಒಡೆಯ' ಚಿತ್ರದ ಹೊಸ ಪೋಸ್ಟರ್ ವೊಂದು ರಿಲೀಸ್ ಆಗಿದ್ದು, ತುಂಬ ವೈರಲ್ ಆಗಿದೆ. ದರ್ಶನ್ ಸಿನಿಮಾಗಳ ಪೋಸ್ಟರ್‌ಗಳೆಂದರೆ, ಅಲ್ಲಿ ಮಾಸ್ ಅಂಶಗಳಿಗೆ ಹೆಚ್ಚಿನ ಆದ್ಯತೆ. ಆದರೆ, ಈ ಬಾರಿ ಸಖತ್‌ ಕ್ಲಾಸ್‌ ಆಗಿ ದರ್ಶನ್ ಕಾಣಿಸಿಕೊಂಡಿರುವ ಪೋಸ್ಟರ್ ರಿಲೀಸ್ ಮಾಡಲಾಗಿದೆ.
Vijaya Karnataka Web Darshan

ಕರುನಾಡ ಜನತೆಗೆ ಧನ್ಯವಾದ ತಿಳಿಸಿದ ದರ್ಶನ್! ಇದರ ಹಿಂದಿದೆ ಒಂದು ವಿಶೇಷ ಕಾರಣ

ತಮಿಳಿನ 'ವೀರಂ' ಚಿತ್ರದ ರಿಮೇಕ್ ಆಗಿರುವ 'ಒಡೆಯ' ಚಿತ್ರದಲ್ಲಿ ಸಾಹಸದ ಜತೆಗೆ ಫ್ಯಾಮಿಲಿ ಸೆಂಟಿಮೆಂಟ್ಗೂ ಜಾಸ್ತಿ ಅವಕಾಶ ಇದೆ. ಸದ್ಯ ರಿಲೀಸ್ ಮಾಡಿರುವ ಪೋಸ್ಟರ್ನಲ್ಲಿ ದರ್ಶನ್ ಮಗುವೊಂದನ್ನು ಪ್ರೀತಿಯಿಂದ ಮುದ್ದು ಮಾಡುತ್ತಿದ್ದಾರೆ. ಎಂ.ಡಿ. ಶ್ರೀಧರ್ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ದರ್ಶನ್ ಜತೆ ನಾಯಕಿಯಾಗಿ ರಾಘವಿ ತಿಮ್ಮಯ್ಯ ಕಾಣಿಸಿಕೊಂಡಿದ್ದಾರೆ. ಇದು ಅವರ ಚೊಚ್ಚಲ ಸಿನಿಮಾವಾಗಿದೆ. ಜತೆಗೆ ಪಂಕಜ್ ನಾರಾಯಣ್, ಯಶಸ್ ಸೂರ್ಯ, ಚಿಕ್ಕಣ್ಣ ಮುಂತಾದವರು ನಟಿಸಿದ್ದಾರೆ.
"ನನ್ನ ಅನ್ನದಾತರನ್ನು ಕೆಣಕದಿರಿ" ಎಂದು ದರ್ಶನ್ ವಾರ್ನ್ ಮಾಡಿದ್ದು ಯಾರಿಗೆ?

ಸಂದೇಶ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ 'ಒಡೆಯ' ಸಿದ್ಧಗೊಂಡಿದ್ದು, ಎನ್. ಸಂದೇಶ್ ಬಂಡವಾಳ ಹಾಕಿದ್ದಾರೆ. ಆದಷ್ಟು ಬೇಗ ಚಿತ್ರ ತೆರೆಗೆ ಬರಲಿದ್ದು, ಕೃಷ್ಣಕುಮಾರ್ ಛಾಯಾಗ್ರಹಣ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಹೊಣೆ ಹೊತ್ತುಕೊಂಡಿದ್ದಾರೆ. ಸಂಭಾಷಣೆ ಬರೆದಿರುವುದು ಪ್ರಶಾಂತ್ ರಾಜಪ್ಪ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌