ಆ್ಯಪ್ನಗರ

ಉಮಾಪತಿ ಶ್ರೀನಿವಾಸ್ ದೊಡ್ಮನೆ ಆಸ್ತಿ ವಿಷಯ ತೆಗೆಯದೆ ಇದ್ದಿದ್ದರೆ ಇನ್ನೂ ಕೂಲ್ ಆಗಿರ್ತಿದ್ದೆ: ದರ್ಶನ್!

'ಚಾಲೆಂಜಿಂಗ್ ಸ್ಟಾರ್' ನಟ ದರ್ಶನ್ ಅವರು ನನ್ನ ಬಳಿ ಪುನೀತ್ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್‌ ಅವರ ಆಸ್ತಿ ಕೊಡ್ತೀರಾ ಅಂತ ಕೇಳಿದ್ದರು ಎಂದು ಉಮಾಪತಿ ಶ್ರೀನಿವಾಸ್‌ ಹೇಳಿದ್ದರು. ಅದಕ್ಕೆ ದರ್ಶನ್ ಉತ್ತರ ನೀಡಿದ್ದಾರೆ.

Vijaya Karnataka Web 17 Jul 2021, 6:42 pm

ಹೈಲೈಟ್ಸ್‌:

  • ಉಮಾಪತಿ ಬಳಿ ದೊಡ್ಮನೆ ಆಸ್ತಿ ಕೊಡುವಂತೆ ಕೇಳಿದ್ದ ದರ್ಶನ್
  • ಉಮಾಪತಿ ಶ್ರೀನಿವಾಸ್ ಹೇಳಿಕೆಗೆ ಸ್ಪಷ್ಟನೆ ನೀಡಿದ 'ಚಾಲೆಂಜಿಂಗ್ ಸ್ಟಾರ್'
  • ನಾನು ಹಾಗೂ ನನ್ನ ತಂದೆ ದೊಡ್ಮನೆ ಅನ್ನ ತಿಂದು ಬಂದಿದ್ದೇವೆ ಎಂದ ದರ್ಶನ್
  • ಆಸ್ತಿಗೂ ಹಾಗೂ ಪುನೀತ್, ರಾಘಣ್ಣಗೂ ಸಂಬಂಧವಿಲ್ಲ ಎಂದ ದಾಸ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web challenging star darshan reaction on puneeth rajkumar umapathy srinivas property
ಉಮಾಪತಿ ಶ್ರೀನಿವಾಸ್ ದೊಡ್ಮನೆ ಆಸ್ತಿ ವಿಷಯ ತೆಗೆಯದೆ ಇದ್ದಿದ್ದರೆ ಇನ್ನೂ ಕೂಲ್ ಆಗಿರ್ತಿದ್ದೆ: ದರ್ಶನ್!
ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ಗೆ ದೊಡ್ಮನೆಯ ಪುನೀತ್ ರಾಜ್‌ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಅವರ ಆಸ್ತಿಯನ್ನು ಕೊಡ್ತೀರಾ ಅಂತ ದರ್ಶನ್ ಕೇಳಿದ್ದರಂತೆ. ಅದಕ್ಕೆ ಉಮಾಪತಿ ಇಲ್ಲ ಅಂತ ಹೇಳಿದ್ದರಂತೆ. ಈ ಕುರಿತು ನಟ ದರ್ಶನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.

ದರ್ಶನ್ ಹೇಳಿದ್ದಿಷ್ಟು

ದೊಡ್ಮನೆ ಪುನೀತ್ ಆಸ್ತಿಯನ್ನು ನಾನು ಕೇಳಿದ್ದೆ ಎನ್ನುವ ವಿಷಯ ಕೇಳಿಬರ್ತಿದೆ. ಹೀಗಾಗಿ ನಾನು ಇವತ್ತು ಮಾತನಾಡಿದೆ. 2016ರಿಂದ ನಿರ್ದೇಶಕ ಜೋಗಿ ಪ್ರೇಮ್ ಮೂಲಕ ನನಗೆ ಉಮಾಪತಿ ಶ್ರೀನಿವಾಸ್‌ ಪರಿಚಯ ಆದರು. ಸಿನಿಮಾ ಮಾಡೋಣ ಅಂತ ಪ್ರೇಮ್ ಹಾಗೂ ನಾನು, ಉಮಾಪತಿ ಮಾತನಾಡಿದೆವು. 'ತಾರಕ್' ಸಿನಿಮಾ ಸುದ್ದಿಗೋಷ್ಠಿಯಲ್ಲಿ 70 ದಿನದ ನಂತರ ನಾನು ಡೇಟ್ ಕೊಡಲ್ಲ ಅಂತ ಮೊದಲೇ ಹೇಳಿದ್ದೆ. ಆಮೇಲೆ ದರ್ಶನ್ ಅವರು ಪ್ರೇಮ್‌ಗೆ 100 ದಿನ ಕೊಡ್ತಾರೆ ಅಂತ ವಿಷಯ ಬಂತು. ಈ ವಿಷಯ ಹೊರಗಡೆ ಬಿಟ್ಟಿದ್ದು ಯಾರು ಅನ್ನುವ ಪ್ರಶ್ನೆ ಬಂತು. ಪ್ರೇಮ್‌ಗೆ ಎರಡು ಕೊಂಬು ಇದೆಯೇ? 'ಕರಿಯ' ಸಿನಿಮಾದಲ್ಲಿ ಪ್ರೇಮ್ ಏನು ಅಂತ ನಾವು ನೋಡಿದ್ದೇವೆ.

ನಟ ದರ್ಶನ್ ಮೈಸೂರು ಹೋಟೆಲ್ ಗಲಾಟೆ, ಅರುಣಾ ಕುಮಾರಿ ಕೇಸ್ ಕುರಿತಂತೆ ಮೌನ ಮುರಿದ ಹರ್ಷ ಮೇಲಂಟ
2018ರಲ್ಲಿ ಪುನೀತ್ ರಾಜ್‌ಕುಮಾರ್ ಆಸ್ತಿ ಖರೀದಿ ಮಾಡಿದ್ದೇವೆ ಅಂತ ಉಮಾಪತಿ ಹೇಳಿದ್ದಾರೆ. ಈ ವಿಚಾರ ಪುನೀತ್, ರಾಘಣ್ಣಗೆ ಸಂಬಂಧ ಇಲ್ಲ. ಕನ್ನಿಂಗ್‌ಹ್ಯಾಮ್‌ನಲ್ಲಿ ಆಸ್ತಿಯನ್ನು ಖರೀದಿ ಮಾಡಿರುವುದಾಗಿ ಉಮಾಪತಿ ಹೇಳಿದ್ದರು. ಆಗ ನಾನು ಈ ಪ್ರಾಪರ್ಟಿ ಕೊಡುವ ಐಡಿಯಾ ಇದೆಯಾ ಅಂತ ನಾನು ಪ್ರಶ್ನೆ ಮಾಡಿದೆ. ನನ್ನ ದುಡ್ಡು ನಿಮ್ಮ ಹತ್ತಿರ ಇದೆ, ಆ ದುಡ್ಡಿನಲ್ಲಿ ಆಸ್ತಿ ಕೊಡಿ ಅಂತ ಹೇಳಿದೆ. ಇವತ್ತು ಉಮಾಪತಿ ಅವರು ಬಂದು ದರ್ಶನ್ ಆಸ್ತಿ ಕೊಡ್ತೀರಾ ಅಂತ ಕೇಳಿದ್ರು, ನಾನು ಇಲ್ಲ ಅಂದೆ ಅಂತ ಉಮಾಪತಿ ಹೇಳಿದ್ದಾರೆ. ಹೀಗಂದಮೇಲೆ ನನಗೆ ಯಾಕೆ ಉಮಾಪತಿ ಒಂದೂವರೆ ವರ್ಷಗಳ ಕಾಲ ಬಾಡಿಗೆ ತಂದುಕೊಡ್ತಾ ಇದ್ರು?

ದೊಡ್ಮನೆಯ ಪುನೀತ್‌-ರಾಘಣ್ಣನ ಆಸ್ತಿ ಕೊಡಿ ಎಂದು ನಟ ದರ್ಶನ್ ಕೇಳಿದ್ದು ಸತ್ಯ: ಉಮಾಪತಿ ಶ್ರೀನಿವಾಸ್

ರಾಜ್‌ಕುಮಾರ್ ಕಂಪೆನಿಯಿಂದ ನಮ್ಮ ತಂದೆ ಬಂದವರು. ನಾನು ಕೂಡ ಲೈಟ್‌ ಬಾಯ್ ಆಗಿ ಪೂರ್ಣಿಮಾ ಎಂಟರ್‌ಪ್ರೈಸಸ್ ಬಳಿ 'ಜನುಮದ ಜೋಡಿ' ಸಿನಿಮಾದಿಂದ ಸೇರಿಕೊಂಡಿದ್ದೇನೆ. ಆರಂಭದಲ್ಲಿ 170 ರೂ ಸಂಬಳ ಇತ್ತು. ದೊಡ್ಮನೆ ಮೇಲೆ ತುಂಬ ಗೌರವವಿದೆ, ಆ ಮನೆಯ ಬೇರಿಗೂ ನಾನು ಸಮ ಇಲ್ಲ. ನಾನು ಹಾಗೂ ನನ್ನ ತಂದೆ ದೊಡ್ಮನೆ ಅನ್ನ ತಿಂದವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌