ಆ್ಯಪ್ನಗರ

ಮೇಜರ್‌ ಅಭಿನಂದನ್‌ ಪಾತ್ರದಲ್ಲಿ 'ಚಾಲೆಂಜಿಂಗ್‌ ಸ್ಟಾರ್‌' ದರ್ಶನ್‌! 'ಡಿ ಬಾಸ್‌' ಅಭಿಮಾನಿಗಳಿಗೆ ಭರ್ಜರಿ ಸುದ್ದಿ!

ಮೇಜರ್‌ ಅಭಿನಂದನ್‌ ಅವರ ಜೀವನ ಆಧರಿಸಿ ಒಂದು ಚಿತ್ರ ಮಾಡಲು ಮುನಿರತ್ನ ಪ್ಲ್ಯಾನ್‌ ಮಾಡಿಕೊಂಡಿದ್ದು, ಅದರಲ್ಲಿ ಅಭಿನಂದನ್‌ ಪಾತ್ರವನ್ನು ದರ್ಶನ್‌ ಮಾಡಲಿದ್ದಾರಂತೆ!

Vijaya Karnataka Web 22 Feb 2020, 12:41 pm
ಕುರುಕ್ಷೇತ್ರ ಸಿನಿಮಾದಲ್ಲಿ ನಿರ್ಮಾಪಕ ಮುನಿರತ್ನ ಮತ್ತು ದರ್ಶನ್‌ ಜೊತೆಯಾಗಿ ಕೆಲಸ ಮಾಡಿದರು. ಆ ಚಿತ್ರ 100 ದಿನ ಯಶಸ್ವಿ ಪ್ರದರ್ಶನ ಕಂಡಿತು. ಮೊದಲ 3D ಪೌರಾಣಿಕ ಸಿನಿಮಾ ಎಂಬ ಖ್ಯಾತಿಗೂ ಒಳಗಾಯಿತು. ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಅದರ ಶತದಿನೋತ್ಸವ ಆಚರಿಸಲಾಯಿತು. ಇದೇ ವೇದಿಕೆಯಲ್ಲಿ ನಿರ್ಮಾಪಕ ಮುನಿರತ್ನ ಒಂದು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಮೇಜರ್‌ ಅಭಿನಂದನ್‌ ಅವರ ಜೀವನ ಆಧರಿಸಿ ಒಂದು ಚಿತ್ರ ಮಾಡಲು ಮುನಿರತ್ನ ಪ್ಲ್ಯಾನ್‌ ಮಾಡಿಕೊಂಡಿದ್ದು, ಅದರಲ್ಲಿ ಅಭಿನಂದನ್‌ ಪಾತ್ರವನ್ನು ದರ್ಶನ್‌ ಮಾಡಲಿದ್ದಾರಂತೆ!
Vijaya Karnataka Web challenging star darshan to play major abhinandan role
ಮೇಜರ್‌ ಅಭಿನಂದನ್‌ ಪಾತ್ರದಲ್ಲಿ 'ಚಾಲೆಂಜಿಂಗ್‌ ಸ್ಟಾರ್‌' ದರ್ಶನ್‌! 'ಡಿ ಬಾಸ್‌' ಅಭಿಮಾನಿಗಳಿಗೆ ಭರ್ಜರಿ ಸುದ್ದಿ!


​ಕುರುಕ್ಷೇತ್ರದ ವೇದಿಕೆಯಲ್ಲಿ ಬ್ರೇಕಿಂಗ್‌ ನ್ಯೂಸ್‌

ಅಂಬರೀಷ್‌ ಪುತ್ರ ಅಭಿಷೇಕ್‌ ಅಂಬರೀಷ್‌ ಅವರು 'ಕುರುಕ್ಷೇತ್ರ' ಚಿತ್ರದ ಶತದಿನೋತ್ಸವ ವೇದಿಕೆಯಲ್ಲಿ ಒಂದು ಆಸೆ ತೋಡಿಕೊಂಡರು. ದರ್ಶನ್‌ ಜೊತೆ ತಾವೊಂದು ಸಿನಿಮಾ ಮಾಡಬೇಕು ಎಂಬ ಹಂಬಲವನ್ನು ವ್ಯಕ್ತ ಪಡಿಸಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ನಿರ್ಮಾಪಕ ಮುನಿರತ್ನ ಭರ್ಜರಿ ಸುದ್ದಿ ಬಹಿರಂಗ ಪಡಿಸಿದರು. 'ಅಭಿಷೇಕ್‌ ಅವರ ಕೋರಿಕೆಯನ್ನು ಖಂಡಿತಾ ಈಡೇರಿಸುತ್ತೇನೆ. ಇದೇ ವರ್ಷದಲ್ಲಿ ಚಿತ್ರ ಪ್ರಾರಂಭಿಸುತ್ತೇನೆ. ದರ್ಶನ್‌ ಜೊತೆ ಈಗ ತಾನೆ ಮಾತಾಡಿದ್ದೇನೆ. ಅವರು ಎಲ್ಲ ಬಗೆಯ ಪಾತ್ರಗಳನ್ನೂ ಮಾಡಿದ್ದಾರೆ. ಸಾಮಾಜಿಕ, ಪೌರಾಣಿಕ, ಐತಿಹಾಸಿಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅವರನ್ನು ಒಬ್ಬ ಮೇಜರ್‌ ಪಾತ್ರದಲ್ಲಿ ನೋಡಬೇಕು ಎಂಬುದು ನನ್ನ ಆಸೆ. ಯುದ್ಧ ಭೂಮಿಯಲ್ಲಿ ಒಬ್ಬ ಸೈನಿಕನಾಗಿ ಅವರನ್ನು ನೋಡಬೇಕು ಎನಿಸುತ್ತಿದೆ. ಆ ಸೈನಿಕನ ಪಾತ್ರ ಯಾವುದು ಎಂದರೆ, ಕಳೆದ ವರ್ಷ ಪಾಕ್‌ ಉಗ್ರರ ಪುಲ್ವಾಮಾ ದಾಳಿಗೆ ತಕ್ಕ ಉತ್ತರ ನೀಡಿದ ಮೇಜರ್‌ ಅಭಿನಂದನ್‌ ಪಾತ್ರ. ದರ್ಶನ್‌ ಜೊತೆ ಅಭಿಷೇಕ್‌ ಕೂಡ ಇರುತ್ತಾರೆ' ಎನ್ನುವ ಮೂಲಕ ನಿರ್ಮಾಪಕ ಮುನಿರತ್ನ ಬ್ರೇಕಿಂಗ್‌ ನ್ಯೂಸ್‌ ನೀಡಿದ್ದಾರೆ.


ನಟ ದರ್ಶನ್‌ ಮನೆ ಮುಂದೆ ಹುಟ್ಟುಹಬ್ಬ ಆಚರಣೆಗೆ ಪೊಲೀಸರ ಕಡಿವಾಣ

​ಅಭಿಷೇಕ್‌ಗೆ ಯಾವ ಪಾತ್ರ?

ಕಲರ್‌ಫುಲ್‌ ವೇದಿಕೆಯಲ್ಲಿ ಈ ಸುದ್ದಿ ಹೊರಬೀಳುತ್ತಿದ್ದಂತೆಯೇ ನೆರೆದಿದ್ದ ಸಾವಿರಾರು ಅಭಿಮಾನಿಗಳು ಜೋರಾಗಿ ಕೂಗುತ್ತ, ಡಿ ಬಾಸ್‌ಗೆ ಜೈಕಾರ ಹಾಕಿದರು. ಅಭಿನಂದನ್‌ ಪಾತ್ರದಲ್ಲಿ ದರ್ಶನ್‌ ಹೇಗೆ ಕಾಣಿಸಿಕೊಳ್ಳಬಹುದು ಎಂಬ ಬಗೆಬಗೆಯ ಕಲ್ಪನೆ ಈಗ ಅಭಿಮಾನಿಗಳ ಮನದಲ್ಲಿ ಮೂಡಿದೆ. ಯಾವಾಗ ಈ ಸಿನಿಮಾ ಶುರುವಾಗಬಹುದು ಎಂಬ ಕಾತರವೂ ಎಲ್ಲರಲ್ಲಿ ಹೆಚ್ಚಿದೆ. 'ಇಡೀ ಭಾರತದಾದ್ಯಂತ ನೋಡುವಂತಹ ಸಿನಿಮಾವಾಗಿ ಇದೇ ವರ್ಷದಲ್ಲಿ 'ಮೇಜರ್‌ ಅಭಿನಂದನ್‌' ಚಿತ್ರ ನಿರ್ಮಿಸುತ್ತೇನೆ. ಅದರಲ್ಲಿ ದರ್ಶನ್‌ ಜೊತೆಗೆ ಅಭಿಷೇಕ್‌ ಕೂಡ ಒಂದು ಮುಖ್ಯ ಪಾತ್ರ ಮಾಡುತ್ತಾರೆ' ಎಂದು ಮುನಿರತ್ನ ಹೇಳಿರುವುದು ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ. ದರ್ಶನ್‌ಗೆ ಅಭಿನಂದನ್‌ ಪಾತ್ರವಾದರೆ, ಅಭಿಷೇಕ್‌ಗೆ ಯಾವ ಪಾತ್ರ ಸಿಗಬಹುದು ಎಂಬುದು ಸದ್ಯ ಮೂಡಿರುವ ಕೌತುಕದ ಪ್ರಶ್ನೆ.


ದರ್ಶನ್‌ ಅಭಿಮಾನಿಗಳಿಂದ ಪೊಲೀಸ್‌ ಪೇದೆ ಮೇಲೆ ಹಲ್ಲೆ? 'ಡಿ ಬಾಸ್‌' ಹುಟ್ಟುಹಬ್ಬದ ಸಂದರ್ಭದಲ್ಲಿ ಕಹಿ ಘಟನೆ!

​ಈ ಬಗ್ಗೆ ದರ್ಶನ್‌ ಏನೂ ಮಾತಾಡಲಿಲ್ಲ!

ವೇದಿಕೆಯಲ್ಲಿ ಮುನಿರತ್ನ ಮಾತನಾಡಿದ ಬಳಿಕ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಮಾತನಾಡಿದರು. ಆದರೆ ಅವರು ಒಂದೇ ಒಂದು ಮಾತನ್ನೂ 'ಮೇಜರ್‌ ಅಭಿನಂದನ್‌' ಸಿನಿಮಾ ಬಗ್ಗೆ ಹೇಳಲೇ ಇಲ್ಲ! ಸಾಮಾನ್ಯವಾಗಿ ಒಂದು ಸಿನಿಮಾ ಕಾರ್ಯಕ್ರಮದ ವೇದಿಕೆಯಲ್ಲಿ ಅವರು ಬೇರೆ ಚಿತ್ರದ ವಿಷಯವನ್ನು ಮಾತನಾಡುವುದಿಲ್ಲ. ಆ ಕಾರಣಕ್ಕಾಗಿಯೇ 'ಮೇಜರ್‌ ಅಭಿನಂದನ್‌' ಸಿನಿಮಾ ಬಗ್ಗೆ ಅವರು ಮಾತನಾಡಲಿಲ್ಲವೋ ಅಥವಾ ಈ ಪ್ರಾಜೆಕ್ಟ್‌ ಬಗ್ಗೆ ಅವರ ನಿರ್ಧಾರ ಸ್ಪಷ್ಟವಾಗಿದೆಯೋ ಇಲ್ಲವೋ ಎಂಬ ಸಣ್ಣ ಅನುಮಾನ ಮೂಡುವುದು ಸಹಜ. ಇದಕ್ಕೆ ಮುಂದಿನ ದಿನಗಳಲ್ಲಿ ಅವರೇ ಉತ್ತರ ನೀಡಬೇಕು. ಇನ್ನು, ಈ ಸಿನಿಮಾಕ್ಕೆ ಯಾರು ನಿರ್ದೇಶನ ಮಾಡಲಿದ್ದಾರೆ? ಬೇರೆ ಕಲಾವಿದರು ಯಾರೆಲ್ಲ ಇರಲಿದ್ದಾರೆ? ಇತ್ಯಾದಿ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ. ಈ ಹಿಂದೆ 'ಯೋಧ' ಸಿನಿಮಾದಲ್ಲಿ ದರ್ಶನ್‌ ಸೈನಿಕನ ಪಾತ್ರ ಮಾಡಿದ್ದರು.


'ರಾಬರ್ಟ್‌' ದರ್ಶನ್‌ ಸಿನಿಮಾ ಅಲ್ಲ! ಯಾಕೆ ಹೀಗಂದ್ರು ಡಿ ಬಾಸ್‌?

​'ಚಾಣಾಕ್ಯ ಚಂದ್ರಗುಪ್ತ' ಸೆಟ್ಟೇರಲೇ ಇಲ್ಲ!

ಅದ್ದೂರಿ ಸಿನಿಮಾಗಳನ್ನು ನಿರ್ಮಿಸುವಲ್ಲಿ ಮುನಿರತ್ನ ಫೇಮಸ್‌. ಆದರೆ ಈ ಹಿಂದೆ ಅವರು ಅನೌನ್ಸ್‌ ಮಾಡಿದ ಒಂದು ಸಿನಿಮಾ ಸೆಟ್ಟೇರಲೇ ಇಲ್ಲ. ಯಾವುದು ಅದು? ಬಹುತಾರಾಗಣದ 'ಚಾಣಾಕ್ಯ ಚಂದ್ರಗುಪ್ತ'! ಹೌದು, 'ಕುರುಕ್ಷೇತ್ರ' ಸಿನಿಮಾದ ಚಿತ್ರೀಕರಣ ಹೈದರಾಬಾದ್‌ನ ರಾಮೋಜಿ ಫಿಲ್ಮ್‌ ಸಿಟಿಯಲ್ಲಿ ನಡೆಯುತ್ತಿರುವಾಗಲೇ ಮುನಿರತ್ನ ಅವರು 'ಚಾಣಾಕ್ಯ ಚಂದ್ರಗುಪ್ತ' ಚಿತ್ರವನ್ನು ಘೋಷಿಸಿದರು. ಅದರಲ್ಲಿ ಸುದೀಪ್‌, ಉಪೇಂದ್ರ ಮತ್ತು ಪುನೀತ್‌ ನಟಿಸುತ್ತಾರೆ ಎಂಬುದಾಗಿಯೂ ಅವರು ಹೇಳಿಕೊಂಡರು. ಆದರೆ ಆ ಸುದ್ದಿ ಬಹಿರಂಗವಾಗಿ ಎರಡು ವರ್ಷ ಕಳೆದರೂ 'ಚಾಣಾಕ್ಯ ಚಂದ್ರಗುಪ್ತ' ಇನ್ನೂ ಸೆಟ್ಟೇರಿಲ್ಲ. ಆ ಸಿನಿಮಾ ಬಗ್ಗೆಯೂ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದರು. ಈಗ ಅಂಥದ್ದೇ ಮತ್ತೊಂದು ಹೈವೋಲ್ಟೇಜ್‌ ಚಿತ್ರವನ್ನು ಮುನಿರತ್ನ ಘೋಷಣೆ ಮಾಡಿದ್ದಾರೆ.


ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಮೊಲ, ಬಾತುಕೋಳಿ ಗಿಫ್ಟ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌